Latest Updates
-
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ನವರಾತ್ರಿಯಲ್ಲಿ ಕಳಸ ಸ್ಥಾಪನೆ: ದಿನಾಂಕ, ಶುಭ ಮುಹೂರ್ತ ಹಾಗೂ ಮಹತ್ವ
ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆ ನವರಾತ್ರಿಯ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇದನ್ನು ಶಾರದಿಯ ನವರಾತ್ರಿ ಎಂದು ಕೂಡ ಕರೆಯಲಾಗುವುದು. ಈ ದಿನದಿಂದ ದುರ್ಗೆಯ ಒಂಭತ್ತು ಅವತರಗಳನ್ನು ಪೂಜಿಸಲಾಗುವುದು. ಈ ಕಳಶ ಸ್ಥಾಪನೆಗೆ ಕೆಲವೊಂದು ವಿಧಿ-ವಿಧಾನಗಳಿವೆ. ಆ ನಿಯಮಗಳಿಗೆ ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಮಾಡಬೇಕು. ಇಲ್ಲದಿದ್ದರೆ ದುರ್ಗೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಲಾಗುವುದು.
ಘಟಸ್ಥಾಪನೆ ಮಾಡಿ ತಾಯಿ ದುರ್ಗೆಯನ್ನು ಆಹ್ವಾನಿಸಬೇಕು. ಕಲಶ ಸ್ಥಾಪನೆಗೆ ಒಂದು ನಿರ್ದಿಷ್ಟ ಸಮಯದಲ್ಲಿ ಮಾಡಬೇಕು. ಯಾವ್ಯಾವುದೋ ಸಮಯದಲ್ಲಿ ಕಳಶ ಸ್ಥಾಪನೆ ಮಾಡಲಾಗುವುದಿಲ್ಲ, ಅಲ್ಲದೆ ಅಮವಾಸ್ಯೆಗೆ ಮಾಡಲಾಗುವುದಿಲ್ಲ. ದುರ್ಗಾ ಶಕ್ತಿಯ ಆಶೀರ್ವಾದ ಪಡೆಯಲು, ಅವಳ ಅನುಗ್ರಹ ಸದಾ ನಮ್ಮ ಮೇಲಿರಲು ಅಭಿಜಿತ್ ಮುಹೂರ್ತದಲ್ಲಿ ಘಟಸ್ಥಾಪನೆ ಮಾಡಲಾಗುವುದು. 2021ರಲ್ಲಿ ಘಟಸ್ಥಾಪನೆಯ ದಿನಾಂಕ ಶುಭ ಮುಹೂರ್ತ ಹಾಗೂ ಪೂಜೆಯ ವಿಧಿ-ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...

ಘಟಸ್ಥಾಪನೆ ದಿನಾಂಕ ಹಾಗೂ ಪೂಜಾ ಮುಹೂರ್ತ
ಶಾರದಿಯ ನವರಾತ್ರಿ ಆರಂಭ: ಅಕ್ಟೋಬರ್ 7
ಘಟಸ್ಥಾಪನೆಗೆ ಶುಭ ಮುಹೂರ್ತ: ಬೆಳಗ್ಗೆ 6.17 ರಿಂದ 7.07 ರವರೆಗೆ. ಈ ಸಮಯದಲ್ಲಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.
ಅಭಿಜಿತ್ ಮುಹೂರ್ತ ಕಳಶ ಸ್ಥಾಪಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಕಲಶ ಸ್ಥಾಪನೆಗೆ ಬೇಕಾಗುವ ಸಾಮಗ್ರಿ
7 ಬಗೆಯ ಧಾನ್ಯಗಳು, ಅಗಲವಾದ ಬಾಯಿಯ ಮಣ್ಣಿನ ಮಡಿಕೆ, ಪವಿತ್ರ ಸ್ಥಳದಿಂದ ತಂದ ಮಣ್ಣು, ಕಳಶ, ಗಂಗಾಜಲ, ಪವಿತ್ರದಾರ, ಅಕ್ಷತೆ, ಮಾವು ಅಥವಾ ಅಶೋಕ ಎಲೆಗಳು, ವೀಳ್ಯದೆಲೆ, ಅಡಿಕೆ ತೆಂಗಿನಕಾಯಿ, ನಾಣ್ಯಗಳು, ಕೆಂಪು ಬಟ್ಟೆ ಮತ್ತು ಹೂವುಗಳು, ಗರಿಕೆ ಹುಲ್ಲು ಬೇಕಾಗುತ್ತವೆ.

ಘಟಸ್ಥಾಪನೆಯ ಮಹತ್ವ
ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆಯನ್ನು ಪ್ರತಿಪಾದ ತಿಥಿ, ಚೈತ್ರಾ ನಕ್ಷತ್ರ, ಶುಕ್ಲ ಪಕ್ಷದಲ್ಲಿ ಮಾಡಲಾಗುವುದು. ಇಲ್ಲಿಂದ ನವರಾತ್ರಿ ಪ್ರಾರಂಭ. ಮೊದಲ ದಿನ ನವದುರ್ಗೆಯ ಮೊದಲ ರೂಪವಾದ ಶೈಲಪುತ್ರಿ ಅವತಾರವನ್ನು ಆರಾಧಿಸಲಾಗುವುದು. ಇದನ್ನು ಆಚರಣೆ ಮಾಡುವುದರಿಂದ ನವದುರ್ಗೆಯರ ಆಶೀರ್ವಾದ ನಮ್ಮ ಮೇಲಿರುವುದು. ಕಳಸ ಸ್ಥಾಪನೆ ಮಾಡದೆ ನವರಾತ್ರಿ ಆಚರಣೆ ಸಂಪೂರ್ಣವಾಗುವುದಿಲ್ಲ.
ಕಳಸ ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಆಹ್ವಾನಿಸಲಾಗುವುದು. ನಂತರವಷ್ಟೇ ನವರಾತ್ರಿಯ ಆಚರಣೆ ಆರಂಭವಾಗುವುದು.



Click it and Unblock the Notifications