Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಗಣೇಶ ಚತುರ್ಥಿ: ಪೂಜಾ ಸಾಮಗ್ರಿ, ಪೂಜಾ ವಿಧಿ ಹಾಗೂ ಮಂತ್ರಗಳು
ಗಣೇಶ ಹಬ್ಬ ಎಂದರೆ ತುಂಬಾನೇ ಸಡಗರ-ಸಂಭ್ರಮದ ಹಬ್ಬ. ದೇಶದೆಲ್ಲಡೆ ಊರಿಗೇ ಊರೇ ಸೇರಿ ಸಂಭ್ರಮಿಸುವ ಹಬ್ಬ ಇದಾಗಿದೆ. ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ತುಂಬಾ ಅದ್ಧೂರಿಯಿಂದ ಆಚರಿಸಲಾಗುವುದು.
ಗಣೇಶನನ್ನು ಆರಾಧಿಸಲು ತುಂಬಾ ಕಟ್ಟುಪಾಡಿಲ್ಲ. ಭಕ್ತಿಯಿಂದ ಆರಾಧನೆ ಮಾಡಿದರೆ ಸಾಕು ಗಣೇಶ ತೃಪ್ತಿನಾಗುತ್ತಾನೆ. ಈ ವರ್ಷ ಕೊರೊನಾ ಕಾರಣದಿಂದ ತುಂಬಾ ಜನ ಸೇರಿ ಮಾಡುವುದಕ್ಕಿಂತ ಮನೆಯವರಷ್ಟೇ ಸೇರಿ ಆಚರಿಸಿ.
2021ರಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ ಹಾಗೂ ಪೂಜಾ ವಿಧಾನ, ಪೂಜಾ ಸಾಮಗ್ರಿ ಹಾಗೂ ಮಂತ್ರಗಳ ಬಗ್ಗೆ ಹೇಳಲಾಗಿದೆ.

ಗಣಪ ಪೂಜೆಗೆ ಶುಭ ಸಮಯ
ಗಣಪನ ಮೂರ್ತಿಯನ್ನು ಶುಭ ಸಮಯದಲ್ಲಿ ಕೂರಿಸಲಾಗುವುದು. 2021ರಲ್ಲಿ ಗಣಪನನ್ನು ಕೂರಿಸಲು ಶುಭ ಸಮಯ ಹೀಗಿದೆ: (bold)
ಪೂಜೆಗೆ ಮುಹೂರ್ತ: ಬೆಳಗ್ಗೆ 11.03 ರಿಂದ ಮಧ್ಯಾಹ್ನ 1.33 ರವರೆಗೆ
ಸೆಪ್ಟೆಂಬರ್ 10 ಶುಕ್ರವಾರ ಚತುರ್ಥಿ ತಿಥಿ ಆರಂಭ: 12.18 ರಿಂದ
ಚತುರ್ಥಿ ತಿಥಿ ಅಂತ್ಯ ಸಮಯ: ರಾತ್ರಿ 9.57ರವರೆಗೆ

ಗಣೇಶನ ಪೂಜೆಗೆ ಬೇಕಾಗುವ ಸಾಮಗ್ರಿಗಳು
ಪೂಜೆಗೆ ಬೇಕಾಗುವ ಸಾಮಗ್ರಿಗಳು
* ಗಣಪನ ಮೂರ್ತಿ
* ಮರದ ಪೀಠ
* ಅದನ್ನು ಮುಚ್ಚಲು ಹೊಸ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆ
* ಕೆಂಪು ದಾಸವಾಳ ಹೂಗಳು (ಸೇವಂತಿಗೆ, ಸುಗಂಧರಾಜ ಮುಂತಾದ ಹೂವುಗಳನ್ನು ಬಳಸಬಹುದು)
* ಗಣೇಶನ ಪೂಜೆಗೆ ಗರಿಕೆ ಕಡ್ಡಾಯವಾಗಿ ಇರಲೇಬೇಕು.
* 11 ಮೋದಕ ಮತ್ತು 11 ಲಡ್ಡುಗಳು
* ನೈವೇದ್ಯ
* ಪಂಚಾಮೃತ
* ಜನಿವಾರ
* ಅಕ್ಷತೆ
* ಕುಂಕುಮ
* ಅರಿಶಿಣ
* ಚಂದನ
* ಧೂಪ ಮತ್ತು ಅಗರಬತ್ತಿ
* ದೀಪ, ಬತ್ತಿ ಎಣ್ಣೆ
*ತಾಮ್ರದ ಕಲಶ
* ತಾಂಬೂಲ
* 5 ಬಗೆಯ ಹಣ್ಣುಗಳು
* ಕಳಶ
* ಘಂಟೆ
* ಈ ಎಲ್ಲಾ ಸಾಮಗ್ರಿ ಇಡಲು ದೊಡ್ಡ ತಟ್ಟೆ

ಗಣೇಶನ ಮೂರ್ತಿ ಸ್ಥಾಪನೆ ಹಾಗೂ ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ತೊಟ್ಟು ಪೂಜಾ ಸ್ಥಳವನ್ನು ಶುದ್ಧ ಮಾಡಬೇಕು. ದೇವರ ಮಂಟಪ ಅಥವಾ ಮರದ ಪೀಠ, ಮೇಜು ಹೀಗೆ ನೀವು ಯಾವುದರ ಮೇಲೆ ಕೂರಿಸುತ್ತೀರೋ ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಸಬೇಕು. ಮಧ್ಯ ಭಾಗದಲ್ಲಿ ಒಂದು ತಟ್ಟೆಯಷ್ಟು ಅಕ್ಕಿ ಹಾಕಿ ಅದನ್ನು ಸ್ವಲ್ಪ ಹರಡಿ ಅದರ ಮೇಲೆ ಗಣೇಶನ ಮೂರ್ತಿಯನ್ನು ಕೂರಿಸಬೇಕು.
* ನಂತರ ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ ಗರಿಕೆ ಗುಲ್ಲು ಮತ್ತು ವೀಳ್ಯೆದೆಲೆಯನ್ನು ಬಳಸಿ ಶೋಡಶೋಪಚಾರ ಪೂಜೆ ಮಾಡಿ ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಸುತ್ತಿ ಅಲಂಕಾರ ಮಾಡಬೇಕು. ಹೂಗಳನ್ನು ಹಾಕಿ ಅಲಂಕಾರ ಮಾಡಿ.
* ಈಗ ಗಣಪನಿಗೆ ಪ್ರಿಯವಾದ ಮೋದಕ ಹಾಗೂ ಹಣ್ಣುಗಳನ್ನು ಅರ್ಪಿಸಬೇಕು, ಪಂಚಾಮೃತ ಮಾಡಿ ಅರ್ಪಿಸಿ.
* ನಂತರ ದೀಪವನ್ನು ಹಚ್ಚಿ, ಆರತಿಯನ್ನು ಬೆಳಗಿ ಕುಂಕುಮದಿಂದ ತಿಲಕವನ್ನು ಇಟ್ಟು ಗಣಪತಿಗೆ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸಿ.

ಗಣೇಶನ ಮೂರ್ತಿ ಕೂರಿಸುವಾಗ ಕಲಶ ಸ್ಥಾಪನೆ ಮಾಡುವ ವಿಧಾನ
ತಾಮ್ರದ ಕಲಶದಲ್ಲಿ ನೀರನ್ನು ತುಂಬಿ ಅದನ್ನು ಕೆಂಪು ಬಟ್ಟೆಯಿಂದ ಸುತ್ತಿ, ಕೆಂಪು ದಾರದಿಂದ ಕಟ್ಟಿ ವಾಯುವ್ಯ ದಿಕ್ಕಿನಲ್ಲಿ ಅಥವಾ ಗಣೇಶನ ಕೂರಿಸಿದ ಎಡಭಾಗದಲ್ಲಿ ಇರಿಸಬೇಕು.

ಉಪವಾಸವಿದ್ದು ಗಣೇಶನ ಆರಾಧನೆ ಮಾಡಿ
ಭಕ್ತರನ್ನು ಬೇಡಿದ್ದನ್ನು ಗಣಪ ಕರುಣಿಸುತ್ತಾನೆ. ಈ ಗಣಪನ ಒಲಿಸಿಕೊಳ್ಳಲು ಭಕ್ತಿಯೊಂದಿದ್ದರೆ ಸಾಕು. ಭಕ್ತಿಯಿಂದ ಉಪವಾಸವಿದ್ದು ಗಣೇಶನ ಪೂಜೆ ಮಾಡಿದ ನಂತರ ಎಲ್ಲಾ ದೇವರುಗಳನ್ನು ಮನಸ್ಸಿನಲ್ಲಿ ಧ್ಯಾನಿಸಿ ನಂತರ ಪ್ರಸಾದವನ್ನು ಹಂಚಬೇಕು.

ಗಣಪತಿ ಪೂಜೆಯಲ್ಲಿ ಈ ಮಂತ್ರಗಳನ್ನು ಹೇಳಿ
"ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ, ಸರ್ವಕಾರ್ಯೇಷು ಸರ್ವದಾ"
" ಓಂ ಗಣೇಶಾಯ ನಮಃ"



Click it and Unblock the Notifications