Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಬ್ರಹ್ಮಚಾರಿ ಹನುಮಂತನನ್ನು ಪೂಜಿಸಲು ಮಹಿಳೆಯರು ಈ ನಿಯಮಗಳನ್ನು ಪಾಲಿಸಲೇಬೇಕು
ಶ್ರೀರಾಮ ಭಂಟ, ರಾಮನ ಆತ್ಮೀಯ ಹನುಮಾನ್ ಶಕ್ತಿ, ಧೈರ್ಯಕ್ಕೆ ಹೆಸರುವಾಸಿ. ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ನಾಶಮಾಡುವವನಾಗಿ ಸನಾತನ ಧರ್ಮದಲ್ಲಿ ಪ್ರಸಿದ್ಧನಾಗಿದ್ದಾನೆ. ಅಷ್ಟ ಸಿದ್ಧಿದಾತ ಹನುಮಂತ ಒಂಬತ್ತು ನಿಧಿಗಳ ಕೊಡುವವರು ಎಂದು ಪರಿಗಣಿಸಲಾಗುತ್ತದೆ.
ಯಾವ ವ್ಯಕ್ತಿಯು ಹನುಮಾನ್ ಭಗವಂತನಿಂದ ಆಶೀರ್ವದಿಸಲ್ಪಟ್ಟಿದ್ದರೆ ಅವರಿಗೆ ಸಣ್ಣದೊಂದು ತೊಂದರೆಗಳನ್ನು ಸಹ ಉಂಟುಮಾಡುವುದಿಲ್ಲ. ಯಾರ ಜಾತಕದಲ್ಲಿ ಶನಿ ಸಾಡೆ ಸಾತ್ ನಡೆಯುತ್ತಿರುತ್ತದೆ ಅವರು ವಿಶೇಷವಾಗಿ ಹನುಮಾನ್ ದೇವರನ್ನು ಪೂಜಿಸಲು ಸೂಚಿಸಲಾಗುತ್ತದೆ. ಏಕೆಂದರೆ ಆಂಜನೇಯ ಅಂಥಾ ಮಹಾನ್ ಶಕ್ತಿವಂತನಾಗಿದ್ದಾನೆ.

ಹನುಮನ ಆರಾಧನೆ ಹೇಗೆ ಮಾಡಬೇಕು?
ಇತರ ದೇವತೆಗಳ ಪೂಜೆಯಂತೆ ಭಗವಾನ್ ಹನುಮನ ಆರಾಧನೆಯ ಸಮಯದಲ್ಲೂ ಒಂದೇ ರೀತಿಯ ನಿಯಮಗಳು ಅನ್ವಯವಾಗಿದ್ದರೂ, ಮಹಿಳೆಯರಿಗೆ ಕೆಲವು ನಿರ್ದಿಷ್ಟ ಆಚರಣೆಗಳಿವೆ, ಅದನ್ನು ಸರಿಯಾಗಿ ಪಾಲಿಸದಿದ್ದರೆ ಹನುಮಾನ್ ಭಗವಂತನು ಕೋಪಗೊಳ್ಳುವನು ಎನ್ನಲಾಗುತ್ತದೆ. ಯಾಕೆಂದರೆ, ಹನುಮಾನ್ ಭಗವಾನ್ ಬ್ರಹ್ಮಚಾರಿ ಮತ್ತು ಅವನು ಜಗತ್ತಿನ ಎಲ್ಲ ಮಹಿಳೆಯರನ್ನು ತನ್ನ ತಾಯಿಯಂತೆ ಪರಿಗಣಿಸುತ್ತಾನೆ.
ಹನುಮಂತನನ್ನು ಪೂಜೆ ಮಾಡುವಾಗ ಸಾಕಷ್ಟು ಶಿಷ್ಠಾಚಾರ, ಸಂಸ್ಕಾರವನ್ನು ಆಚರಿಸಲೇಬೇಕು, ಇದನ್ನು ಹನುಮಂತ ಬಯಸುತ್ತಾನೆ. ಅದರಲ್ಲೂ ಬ್ರಹ್ಮಚಾರಿ ಹನುಮಂತನ್ನು ಹೆಣ್ಣುಮಕ್ಕಳು ಪೂಜಿಸುವಾಗ ವಿಶೇಷ ಪೂಜಾ ವಿಧಾನಗಳಿವೆ, ಹೀಗೆ ಮಾಡಿದರೆ ಮಾತ್ರ ನೀವು ಆಂಜನೇಯ ಕೃಪೆಗೆ ಪಾತ್ರರಾಗಬಹುದು ಎನ್ನಲಾಗುತ್ತದೆ. ಈ ಹಿನ್ನೆಲೆ ಹನುಮಂತನ ಆರಾಧನೆಯ ಸಮಯದಲ್ಲಿ ಮಹಿಳೆಯರು ಯಾವೆಲ್ಲಾ ವಿಶೇಷ ಕಾಳಜಿ ವಹಿಸಬೇಕು ನಾವು ನಿಮಗೆ ಹೇಳಲಿದ್ದೇವೆ.

ಮೊದಲು ಹನುಮಂತನ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ತಿಳಿಯಿರಿ:
* ಭಗವಾನ್ ಹನುಮಾನ್ ಶಿವನ ಅವತಾರ.
* ಅವನು ಭಕ್ತಿ, ಶಕ್ತಿ ಮತ್ತು ಆದ್ಯತೆಯ ಸಂಕೇತ.
* ಹನುಮಾನ್ ಬ್ರಹ್ಮಚಾರಿ, ಆದರೆ ಅವನಿಗೆ ಮಕರ್ಧ್ವಾಜಾ ಎಂಬ ಮಗನಿದ್ದನು.
* ಹನುಮಂತನಿಗೆ ಒಮ್ಮೆ ರಾಮನಿಂದ ಮರಣದಂಡನೆ ಶಿಕ್ಷೆ ವಿಧಿಸಲಾಯಿತು.
* ಭಗವಾನ್ ಹನುಮಾನ್ ರಚಿಸಿದ ರಾಮಾಯಣದ ಒಂದು ಆವೃತ್ತಿಯಿತ್ತು, ಅದು ವಾಲ್ಮೀಕಿಯ ರಾಮಾಯಣದ ಆವೃತ್ತಿಗೆ ಉತ್ತಮವೆಂದು ಪರಿಗಣಿಸಲಾಗಿದೆ.
* ಭಗವಾನ್ ಹನುಮಾನ್ ಭೀಮ ಸಹೋದರರಾಗಿದ್ದರು.
* ಹನುಮಾನ್ ಭಗವಂತನಿಗೆ ಸಂಸ್ಕೃತ ಭಾಷೆಯಲ್ಲಿ 108 ಹೆಸರುಗಳಿವೆ.
* ಹನುಮಂತನಿಗೆ ಒಮ್ಮೆ ಸೀತಾ ದೇವಿ ನೀಡಿದ ಉಡುಗೊರೆಯನ್ನು ತಿರಸ್ಕರಿಸಿದ್ದರು.

ಭಗವಾನ್ ಹನುಮನನ್ನು ಆರಾಧಿಸುವಾಗ ಮಹಿಳೆಯರು ಮಾಡಬಾರದ ವಿಷಯಗಳಿವು
* ಮಹಿಳೆಯರು ಎಂದಿಗೂ ಹನುಮನನ್ನು ಮುಟ್ಟಿ ಪೂಜಿಸಬಾರದು, ಹನುಮನ ಮೂರ್ತಿಯನ್ನು ಸ್ಪರ್ಶಿಬಾರದು. ಇದು ಭಗವಾನ್ ಹನುಮನನ್ನು ಕೋಪಗೊಳಿಸುತ್ತದೆ.
* ಹನುಮಾನ್ ಭಗವಂತನಿಗೆ ಮಹಿಳೆಯರು ಪಂಚಾಮೃತ ಅಭಿಷೇಕ ಮಾಡುವುದು ಇಷ್ಟವಿಲ್ಲ ಮತ್ತು ಮಾಡಬಾರದು.
* ಮಹಿಳೆಯರು ಹನುಮಂತನ ಪಾದಗಳನ್ನು ಮುಟ್ಟಬಾರದು. ಹನುಮಾನ್ ಭಗವಾನ್ ಜಗತ್ತಿನ ಪ್ರತಿಯೊಬ್ಬ ಮಹಿಳೆಯನ್ನು ತನ್ನ ತಾಯಿಯೆಂದು ಪರಿಗಣಿಸುವುದೇ ಇದಕ್ಕೆ ಕಾರಣ.
* ಆಂಜನೇಯನಿಗೆ ಮಹಿಳೆಯರು ವಸ್ತ್ರ ಮತ್ತು ಯಜ್ಞೋಪವೀತ್ಗಳನ್ನು ನೀಡಬಾರದು.
* ಮಹಿಳೆಯರು ಎಂದಿಗೂ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಬಾರದು. ಇದರಿಂದ ಭಗವಾನ್ ಹನುಮಾನ್ ಕೋಪಗೊಳ್ಳುತ್ತಾನೆ.
* ಮಹಿಳೆಯರು ಭಜರಂಗ್ ಬಾನ್ ಪಠಿಸಬಾರದು ಮತ್ತು ಮಹಿಳೆಯರು ಹನುಮಂತನಿಗೆ ಹೊದಿಸುವ "ಚೋಳ"ವನ್ನು ಸಹ ಅರ್ಪಿಸಬಾರದು.

ಭಗವಾನ್ ಹನುಮಂತನ ಆರಾಧನೆಯ ಸಮಯದಲ್ಲಿ ಮಹಿಳೆಯರು ಮಾಡಬಹುದಾದ ಕೆಲಸಗಳು
* ಮಹಿಳೆಯರು ಮಂಗಳವಾರ ಉಪವಾಸ ಆಚರಿಸಬಹುದು. ಈ ಬಗ್ಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ನೀವು ಉಪವಾಸ ಮಾಡಿದರೆ, ಉಪ್ಪು ಸೇವಿಸಬೇಡಿ ಅಥವಾ ಧಾನ್ಯಗಳನ್ನು ಸೇವಿಸಬೇಡಿ.
* ಮಹಿಳೆಯರು ತಮ್ಮ ಕೈಯಿಂದ ಭಗವಾನ್ ಹನುಮನಿಗೆ ಪ್ರಸಾದವನ್ನು ಸಿದ್ಧಪಡಿಸಬಹುದು.
* ಮಹಿಳೆಯರು ಹನುಮಾನ್ ಚಾಲೀಸಾ, ಹನುಮಾಷ್ಟಕ, ಸುಂದರಕಾಂಡ ಇತರೆ ಭಜನೆಗಳನ್ನು ಪಠಿಸಬಹುದು.
* ಮಹಿಳೆಯರು ಹನುಮಾನ್ ದೇವರಿಗೆ ಧೂಪ, ದೀಪ, ಹೂಗಳನ್ನು ಅರ್ಪಿಸಬಹುದು.

ಭಗವಾನ್ ಹನುಮಂತನು ಕೇಸರಿ ಸಿಂಧೂರವನ್ನು ಏಕೆ ಇಷ್ಟಪಡುತ್ತಾನೆ ಗೊತ್ತಾ?
ಒಂದು ದಿನ ಹನುಮಾನ್ ಭಗವಾನ್ ಸೀತಾ ದೇವಿಯನ್ನು ಹಣೆಯ ಮೇಲೆ ಸಿಂಧೂರ ಧರಿಸಿರುವುದನ್ನು ನೋಡಿದನು. ಹನುಮಾನ್ ಕುತೂಹಲಗೊಂಡು ಸಿಂಧೂರನ್ನು ಹಚ್ಚುವ ಕಾರಣವನ್ನು ಸೀತಾ ದೇವಿಯ ಬಳಿ ಕೇಳಿದನು, ಅದಕ್ಕೆ ಸೀತಾಮಾತೆ ಭಗವಾನ್ ರಾಮನ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಅನ್ವಯಿಸುವುದಾಗಿ ಹೇಳಿದಳು. ಆಗ ಹನುಮಾನ್ ಭಗವಾನ್ ಸಿಂಧೂರವನ್ನು ತೆಗೆದುಕೊಂಡು ಅದೇ ಕಾರಣಕ್ಕಾಗಿ ಅವನ ದೇಹದಾದ್ಯಂತ ಹಚ್ಚಿಕೊಂಡನು. ಇದಕ್ಕಾಗಿಯೇ, ನೀವು ಸಿಂಧೂರನ್ನು ಭಗವಾನ್ ಹನುಮನಿಗೆ ಅರ್ಪಿಸಿದರೆ, ಅವನು ನಿಮ್ಮೆಲ್ಲ ಆಸೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ.



Click it and Unblock the Notifications











