Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಇಂದು ದೇವ್ ದೀಪಾವಳಿ: ಏನಿದರ ಮಹತ್ವ?
ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯಂದು ದೇವ್ ದೀಪಾವಳಿಯನ್ನು ಆಚರಿಸಲಾಗುವುದು. ದೇವ್ ದೀಪಾವಳಿಯನ್ನು ವಾರಾಣಸಿಯಲ್ಲಿ ಆಚರಿಸಲಾಗುವುದು. ಶಿವನು ಈ ದಿನ ಅಸುರ ತ್ರಿಪುರಾಸುರನನ್ನು ವಧಿಸಿದನು ಎಂದು ಹೇಳಲಾಗುವುದು. ಆದ್ದರಿಂದ ಈ ದಿನವನ್ನು ತ್ರಿಪುರಾರಿ ಪೂರ್ಣಿಮಾ ಎಂದು ಕರೆಯಲಾಗುವುದು.

ಈ ದಿನ ಶಿವ ಭಕ್ತರು ಪವಿತ್ರ ಗಂಗೆಯಲ್ಲಿ ಮಿಂದು ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಗಂಗೆಯ ತೀರದಲ್ಲಿ ದೀಪಗಳನ್ನು ಹಚ್ಚಲಾಗುವುದು. ಈ ದಿನ ಮನೆಗಳಿಗೂ ಲೈಟಿಂಗ್ಸ್ ಹಾಕಿ ಅಲಂಕರಿಸಲಾಗುವುದು.
ಸಂಜೆ ಹೊತ್ತಿಗೆ ಗಂಗೆಗೆ ಆರತಿಯನ್ನು ಮಾಡಲಾಗುವುದು.
ದೇವ್ ದೀಪಾವಳಿ ದಿನಾಂಕ ಮತ್ತು ಸಮಯ
ದೇವ್ ದೀಪಾವಳಿ ದಿನಾಂಕ: ನವೆಂಬರ್ 26
ದೇವ್ ದೀಪಾವಳಿ ಆಚರಣೆಯ ಮಹತ್ವ
ಅಸುರ ತ್ರಿಪುರಾನನ್ನು ಶಿವನು ಸೋಲಿಸಿದ ದಿನವನ್ನು ದೇವ್ ದೀಪಾವಳಿ ಎಮದು ಆಚರಿಸಲಾಗುವುದು. ಈ ದಿನ ನೂರಾರು ಮಣ್ಣಿನ ಹಣತೆಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುವುದು. ಈ ಆಚರಣೆ 1985ರಿಂದ ಪ್ರಾರಂಭವಾಗಿದೆ. ರಾತ್ರಿ ಪೂರ್ತಿ ಶಿವನ ಕೀರ್ತನೆಗಳನ್ನು ಹಾಡುತ್ತಾ ವಾರಾಣಸಿ ಬೀದಿಗಳಲ್ಲಿ ಮೆರವಣಿಗೆ ಕೂಡ ಇಡುತ್ತದೆ.
ಈ ದಿನ 21 ಬ್ರಾಹ್ಮಣರು ಹಾಗೂ 24 ಮಹಿಳೆಯರು ಗಂಗೆಗೆ ಆರತಿ ಎತ್ತುತ್ತಾರೆ. ಗಂಗೆಗೆ ನೂರಾರು ಮಣ್ಣಿನ ಹಣತೆಗಳನ್ನು ತೇಲಿ ಬಿಡಲಾಗುವುದು, ಇದನ್ನು ಅಲ್ಲಿ ನೆರೆದ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಈ ಇನ ಗುರುನಾನಕ್ ಜಯಂತಿಯನ್ನು ಕೂಡ ಆಚರಿಸಲಾಗುವುದು.



Click it and Unblock the Notifications