Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇಂದು ದೇವ್ ದೀಪಾವಳಿ: ಏನಿದರ ಮಹತ್ವ?
ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯಂದು ದೇವ್ ದೀಪಾವಳಿಯನ್ನು ಆಚರಿಸಲಾಗುವುದು. ದೇವ್ ದೀಪಾವಳಿಯನ್ನು ವಾರಾಣಸಿಯಲ್ಲಿ ಆಚರಿಸಲಾಗುವುದು. ಶಿವನು ಈ ದಿನ ಅಸುರ ತ್ರಿಪುರಾಸುರನನ್ನು ವಧಿಸಿದನು ಎಂದು ಹೇಳಲಾಗುವುದು. ಆದ್ದರಿಂದ ಈ ದಿನವನ್ನು ತ್ರಿಪುರಾರಿ ಪೂರ್ಣಿಮಾ ಎಂದು ಕರೆಯಲಾಗುವುದು.

ಈ ದಿನ ಶಿವ ಭಕ್ತರು ಪವಿತ್ರ ಗಂಗೆಯಲ್ಲಿ ಮಿಂದು ಪೂಜೆಯನ್ನು ಸಲ್ಲಿಸುತ್ತಾರೆ. ಈ ದಿನ ಗಂಗೆಯ ತೀರದಲ್ಲಿ ದೀಪಗಳನ್ನು ಹಚ್ಚಲಾಗುವುದು. ಈ ದಿನ ಮನೆಗಳಿಗೂ ಲೈಟಿಂಗ್ಸ್ ಹಾಕಿ ಅಲಂಕರಿಸಲಾಗುವುದು.
ಸಂಜೆ ಹೊತ್ತಿಗೆ ಗಂಗೆಗೆ ಆರತಿಯನ್ನು ಮಾಡಲಾಗುವುದು.
ದೇವ್ ದೀಪಾವಳಿ ದಿನಾಂಕ ಮತ್ತು ಸಮಯ
ದೇವ್ ದೀಪಾವಳಿ ದಿನಾಂಕ: ನವೆಂಬರ್ 26
ದೇವ್ ದೀಪಾವಳಿ ಆಚರಣೆಯ ಮಹತ್ವ
ಅಸುರ ತ್ರಿಪುರಾನನ್ನು ಶಿವನು ಸೋಲಿಸಿದ ದಿನವನ್ನು ದೇವ್ ದೀಪಾವಳಿ ಎಮದು ಆಚರಿಸಲಾಗುವುದು. ಈ ದಿನ ನೂರಾರು ಮಣ್ಣಿನ ಹಣತೆಗಳನ್ನು ಗಂಗಾ ನದಿಯಲ್ಲಿ ತೇಲಿ ಬಿಡಲಾಗುವುದು. ಈ ಆಚರಣೆ 1985ರಿಂದ ಪ್ರಾರಂಭವಾಗಿದೆ. ರಾತ್ರಿ ಪೂರ್ತಿ ಶಿವನ ಕೀರ್ತನೆಗಳನ್ನು ಹಾಡುತ್ತಾ ವಾರಾಣಸಿ ಬೀದಿಗಳಲ್ಲಿ ಮೆರವಣಿಗೆ ಕೂಡ ಇಡುತ್ತದೆ.
ಈ ದಿನ 21 ಬ್ರಾಹ್ಮಣರು ಹಾಗೂ 24 ಮಹಿಳೆಯರು ಗಂಗೆಗೆ ಆರತಿ ಎತ್ತುತ್ತಾರೆ. ಗಂಗೆಗೆ ನೂರಾರು ಮಣ್ಣಿನ ಹಣತೆಗಳನ್ನು ತೇಲಿ ಬಿಡಲಾಗುವುದು, ಇದನ್ನು ಅಲ್ಲಿ ನೆರೆದ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಾರೆ. ಈ ಇನ ಗುರುನಾನಕ್ ಜಯಂತಿಯನ್ನು ಕೂಡ ಆಚರಿಸಲಾಗುವುದು.



Click it and Unblock the Notifications