Latest Updates
-
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ
ಅನ್ನಪ್ರಾಶನಕ್ಕೆ 2023ರಲ್ಲಿ ಇರುವ ಶುಭದಿನಗಳು ಹಾಗೂ ಇದರ ಮಹತ್ವ
ಅನ್ನಪ್ರಾಶನ ಎಂಬುದು ಹಿಂದೂ ಸಂಸ್ಕೃತಿಯ ಒಂದು ಮಹತ್ವದ ವಿಧಿವತ್ತಾದ ಪದ್ಧತಿಯಾಗಿದೆ. ಮಗು ಹಾಲಿನ ಜೊತೆಗೇ ಇತರ ಘನ ಆಹಾರಗಳನ್ನು ಪ್ರಥಮ ಬಾರಿಗೆ ಸ್ವೀಕರಿಸುವ ಶುಭ ಸಮಯವನ್ನು ಹಿಂದೂ ಸಂಸ್ಕೃತಿಯಲ್ಲಿ ಅನ್ನಪ್ರಾಶನ ಎಂದು ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಇದುವರೆಗೆ ತಾಯಿಹಾಲನ್ನೇ ಸೇವಿಸುತ್ತಿದ್ದ ಮಗು ಘನ ಆಹಾರ ಸ್ವೀಕರಿಸುವ ಮೂಲಕ ನಮ್ಮ ನಿತ್ಯದ ಆಹಾರ ಪದ್ಧತಿಗೆ ಮಗುವನ್ನು ಅನುವು ಮಾಡಿಕೊಡುವ ಸಾಂಸ್ಕೃತಿಕ ವಿಧಿಯೇ ಅನ್ನಪ್ರಾಶನ ಸಮಾರಂಭ:

ಅನ್ನಪ್ರಾಶನ ಎಂದರೇನು?
ಸಂಸ್ಕೃತ ಪದ "ಅನ್ನಪ್ರಾಶನ" ನೇರವಾಗಿ "ಧಾನ್ಯ ದೀಕ್ಷೆ" ಎಂದರ್ಥ. ಅನ್ನಪ್ರಾಶನದ ಹಿಂದೂ ಸಂಪ್ರದಾಯವು ಮಗುವಿನ ಮೊದಲ ಊಟದ ಪ್ರಾರಂಭವನ್ನು ಸೂಚಿಸುತ್ತದೆ. ಅಂದರೆ, ಮಗುವು ತಾಯಿಯ ಹಾಲನ್ನು ಹೊರತುಪಡಿಸಿ ಆಹಾರವನ್ನು ಸೇವಿಸಲು ಪ್ರಾರಂಭಿಸಿದಾಗ ಅನ್ನಪ್ರಾಶನ ಸಂಸ್ಕಾರ ಆಚರಣೆಯನ್ನು ನಡೆಸಲಾಗುತ್ತದೆ.
ಮಗುವಿಗೆ ಆರು ತಿಂಗಳ ನಂತರ ಈ ಅನ್ನಪ್ರಾಶನ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.
ಜ್ಯೋತಿಷ್ಯಾಸ್ತ್ರದ ಪ್ರಕಾರ ಅನ್ನಪ್ರಾಶನ ಎಂದರೇನು?
ಜೀವನದ ಮೂಲ ಅಂಶವೆಂದರೆ ಆಹಾರ. ಶುದ್ಧ ಆಹಾರ ಸೇವನೆಯಿಂದ ದೇಹ ಮತ್ತು ಒಳ ಮನಸ್ಸು ಶುದ್ಧಿಯಾಗುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಅನ್ನಪ್ರಾಶನ ಸಮಾರಂಭದಲ್ಲಿ ಆಹಾರದ ದೇವತೆ ಅನ್ನಪೂರ್ಣಳನ್ನು ಪೂಜಿಸಲಾಗುತ್ತದೆ ಮತ್ತು ಪೋಷಕರು ತಮ್ಮ ಮಗುವಿನ ಆರೋಗ್ಯ ಮತ್ತು ಸಮೃದ್ಧಿಗಾಗಿ ಮೊದಲ ತುತ್ತು ತಿನ್ನಿಸಿ ಹಾರೈಸುತ್ತಾರೆ. ಹಾಲಿನ ಜೊತೆಗೆ ಆಹಾರ ನೀಡಿದರೆ ಮಗುವಿನ ದೇಹ ಮತ್ತು ಬುದ್ಧಿ ಪೂರ್ಣವಾಗಿ ಅಭಿವೃದ್ಧಿ ಹೊಂದುತ್ತದೆ.
ಅನ್ನಪ್ರಾಶನ ಆಚರಣೆ ಹೇಗೆ ಮಾಡಬೇಕು?
ಅನ್ನಪ್ರಾಶನ ಸಮಾರಂಭಕ್ಕೆ, ಪುರೋಹಿತರು ವೈದಿಕ ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ದಿನ ಮತ್ತು ಮುಹೂರ್ತ ನೋಡಲಾಗುತ್ತದೆ. ಈ ವಿಶೇಷ ದಿನ ಸ್ನೇಹಿತರು, ಕುಟುಂಬ ಮತ್ತು ಪರಿಚಯಸ್ಥರನ್ನು ಆಹ್ವಾನಿಸಲಾಗುತ್ತದೆ.
ಅನ್ನಪ್ರಾಶನ ಮುಹೂರ್ತದಲ್ಲಿ, ಶಿಶುವನ್ನು ಹಿರಿಯರ ಮಡಿಲಲ್ಲಿ ಕೂರಿಸಲಾಗುತ್ತದೆ. ಸಮಾರಂಭದ ಮೊದಲು ಪೂಜೆಯನ್ನು ನಡೆಸಲಾಗುತ್ತದೆ. ಧೂಪ ಮತ್ತು ಎಣ್ಣೆ ದೀಪಗಳನ್ನು ಬೆಳಗಿಸಿ, ದೇವರ ಪ್ರಾರ್ಥನೆ ಮಾಡಲಾಗುತ್ತದೆ. ಮೊದಲ ಭೋಜನವನ್ನು ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ. ಅದರ ನಂತರ, ಹಿರಿಯರೊಬ್ಬರು ಮಗುವಿಗೆ ಅದರ ಮೊದಲ ವಿಧ್ಯುಕ್ತವಾದ ಘನ ಆಹಾರವನ್ನು ನೀಡುತ್ತಾರೆ, ಇದನ್ನು ಪ್ರಸಾದ ಎಂದು ಕರೆಯಲಾಗುತ್ತದೆ.
ಅನ್ನಪ್ರಾಶನಲ್ಲಿ ಪಾಯಸ, ಬೇಯಿಸಿದ ತರಕಾರಿಗಳು, ಬೇಯಿಸಿದ ಬೇಳೆಗಳು, ಚೆನ್ನಾಗಿ ಬೇಯಿಸಿ ಅನ್ನ ತುಪ್ಪದಂತಹ ಆಹಾರವನ್ನು ನೀಡಲಾಗುತ್ತದೆ.



Click it and Unblock the Notifications


