Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಅನ್ನಪ್ರಾಶನಕ್ಕೆ 2023ರಲ್ಲಿ ಇರುವ ಶುಭದಿನಗಳು ಹಾಗೂ ಇದರ ಮಹತ್ವ
ಅನ್ನಪ್ರಾಶನ ಎಂಬುದು ಹಿಂದೂ ಸಂಸ್ಕೃತಿಯ ಒಂದು ಮಹತ್ವದ ವಿಧಿವತ್ತಾದ ಪದ್ಧತಿಯಾಗಿದೆ. ಮಗು ಹಾಲಿನ ಜೊತೆಗೇ ಇತರ ಘನ ಆಹಾರಗಳನ್ನು ಪ್ರಥಮ ಬಾರಿಗೆ ಸ್ವೀಕರಿಸುವ ಶುಭ ಸಮಯವನ್ನು ಹಿಂದೂ ಸಂಸ್ಕೃತಿಯಲ್ಲಿ ಅನ್ನಪ್ರಾಶನ ಎಂದು ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಇದುವರೆಗೆ ತಾಯಿಹಾಲನ್ನೇ ಸೇವಿಸುತ್ತಿದ್ದ ಮಗು ಘನ ಆಹಾರ ಸ್ವೀಕರಿಸುವ ಮೂಲಕ ನಮ್ಮ ನಿತ್ಯದ ಆಹಾರ ಪದ್ಧತಿಗೆ ಮಗುವನ್ನು ಅನುವು ಮಾಡಿಕೊಡುವ ಸಾಂಸ್ಕೃತಿಕ ವಿಧಿಯೇ ಅನ್ನಪ್ರಾಶನ ಸಮಾರಂಭ:

ಅನ್ನಪ್ರಾಶನ ಎಂದರೇನು?
ಸಂಸ್ಕೃತ ಪದ "ಅನ್ನಪ್ರಾಶನ" ನೇರವಾಗಿ "ಧಾನ್ಯ ದೀಕ್ಷೆ" ಎಂದರ್ಥ. ಅನ್ನಪ್ರಾಶನದ ಹಿಂದೂ ಸಂಪ್ರದಾಯವು ಮಗುವಿನ ಮೊದಲ ಊಟದ ಪ್ರಾರಂಭವನ್ನು ಸೂಚಿಸುತ್ತದೆ. ಅಂದರೆ, ಮಗುವು ತಾಯಿಯ ಹಾಲನ್ನು ಹೊರತುಪಡಿಸಿ ಆಹಾರವನ್ನು ಸೇವಿಸಲು ಪ್ರಾರಂಭಿಸಿದಾಗ ಅನ್ನಪ್ರಾಶನ ಸಂಸ್ಕಾರ ಆಚರಣೆಯನ್ನು ನಡೆಸಲಾಗುತ್ತದೆ.
ಮಗುವಿಗೆ ಆರು ತಿಂಗಳ ನಂತರ ಈ ಅನ್ನಪ್ರಾಶನ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.
ಜ್ಯೋತಿಷ್ಯಾಸ್ತ್ರದ ಪ್ರಕಾರ ಅನ್ನಪ್ರಾಶನ ಎಂದರೇನು?
ಜೀವನದ ಮೂಲ ಅಂಶವೆಂದರೆ ಆಹಾರ. ಶುದ್ಧ ಆಹಾರ ಸೇವನೆಯಿಂದ ದೇಹ ಮತ್ತು ಒಳ ಮನಸ್ಸು ಶುದ್ಧಿಯಾಗುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಅನ್ನಪ್ರಾಶನ ಸಮಾರಂಭದಲ್ಲಿ ಆಹಾರದ ದೇವತೆ ಅನ್ನಪೂರ್ಣಳನ್ನು ಪೂಜಿಸಲಾಗುತ್ತದೆ ಮತ್ತು ಪೋಷಕರು ತಮ್ಮ ಮಗುವಿನ ಆರೋಗ್ಯ ಮತ್ತು ಸಮೃದ್ಧಿಗಾಗಿ ಮೊದಲ ತುತ್ತು ತಿನ್ನಿಸಿ ಹಾರೈಸುತ್ತಾರೆ. ಹಾಲಿನ ಜೊತೆಗೆ ಆಹಾರ ನೀಡಿದರೆ ಮಗುವಿನ ದೇಹ ಮತ್ತು ಬುದ್ಧಿ ಪೂರ್ಣವಾಗಿ ಅಭಿವೃದ್ಧಿ ಹೊಂದುತ್ತದೆ.
ಅನ್ನಪ್ರಾಶನ ಆಚರಣೆ ಹೇಗೆ ಮಾಡಬೇಕು?
ಅನ್ನಪ್ರಾಶನ ಸಮಾರಂಭಕ್ಕೆ, ಪುರೋಹಿತರು ವೈದಿಕ ಜ್ಯೋತಿಷ್ಯದ ಪ್ರಕಾರ ನಿರ್ದಿಷ್ಟ ದಿನ ಮತ್ತು ಮುಹೂರ್ತ ನೋಡಲಾಗುತ್ತದೆ. ಈ ವಿಶೇಷ ದಿನ ಸ್ನೇಹಿತರು, ಕುಟುಂಬ ಮತ್ತು ಪರಿಚಯಸ್ಥರನ್ನು ಆಹ್ವಾನಿಸಲಾಗುತ್ತದೆ.
ಅನ್ನಪ್ರಾಶನ ಮುಹೂರ್ತದಲ್ಲಿ, ಶಿಶುವನ್ನು ಹಿರಿಯರ ಮಡಿಲಲ್ಲಿ ಕೂರಿಸಲಾಗುತ್ತದೆ. ಸಮಾರಂಭದ ಮೊದಲು ಪೂಜೆಯನ್ನು ನಡೆಸಲಾಗುತ್ತದೆ. ಧೂಪ ಮತ್ತು ಎಣ್ಣೆ ದೀಪಗಳನ್ನು ಬೆಳಗಿಸಿ, ದೇವರ ಪ್ರಾರ್ಥನೆ ಮಾಡಲಾಗುತ್ತದೆ. ಮೊದಲ ಭೋಜನವನ್ನು ದೇವಾನುದೇವತೆಗಳಿಗೆ ಅರ್ಪಿಸಲಾಗುತ್ತದೆ. ಅದರ ನಂತರ, ಹಿರಿಯರೊಬ್ಬರು ಮಗುವಿಗೆ ಅದರ ಮೊದಲ ವಿಧ್ಯುಕ್ತವಾದ ಘನ ಆಹಾರವನ್ನು ನೀಡುತ್ತಾರೆ, ಇದನ್ನು ಪ್ರಸಾದ ಎಂದು ಕರೆಯಲಾಗುತ್ತದೆ.
ಅನ್ನಪ್ರಾಶನಲ್ಲಿ ಪಾಯಸ, ಬೇಯಿಸಿದ ತರಕಾರಿಗಳು, ಬೇಯಿಸಿದ ಬೇಳೆಗಳು, ಚೆನ್ನಾಗಿ ಬೇಯಿಸಿ ಅನ್ನ ತುಪ್ಪದಂತಹ ಆಹಾರವನ್ನು ನೀಡಲಾಗುತ್ತದೆ.



Click it and Unblock the Notifications














