Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅನಂತ ಚತುರ್ದಶಿ 2021: ವಿಷ್ಣುವಿನ ಆರಾಧನೆಗೆ ಶುಭ ಸಮಯ ಹಾಗೂ ಮಹತ್ವ
ಅನಂತ ಚತುರ್ದಶಿ ಹಿಂದೂಗಳಿಗೆ ತುಂಬಾ ಮಹತ್ವವಾದ ದಿನವಾಗಿದೆ. ಅನಂತ ಚತುರ್ದಶಿಯು ಗಣೇಶ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವಾಗಿದೆ. ಅಲ್ಲದೆ ಈ ದಿನ ಅನಂತನ ಅಂದರೆ ಶ್ರೀ ವಿಷ್ಣುವಿನ ಪೂಜೆಗೆ ಶ್ರೇಷ್ಠವಾದ ದಿನವಾಗಿದೆ. ಈ ವರ್ಷ ಅನಂತ ಚತುರ್ದಶಿ ಸೆಪ್ಟೆಂಬರ್ 19ರಂದು ಆಚರಿಸಲಾಗುವುದು.
ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನದಂದು ಅನಂತ ಚತುರ್ದಶಿ ಆಚರಿಸಲಾಗುವುದು. ಈ ದಿನದಂದು ವಿಷ್ಣುವಿಗೆ ಪೂಜೆ ಸಲ್ಲಿಸಿದ ಬಳಿಕ ರೇಷ್ಮೆ ನೂಲಿನಲ್ಲಿ ತಯಾರಿಸಿದ ದಾರಕ್ಕೆ 14 ಗಂಟುಗಳನ್ನು ಹಾಕಿ, ವಿಷ್ಣುವಿನ ಬಳಿ ಪೂಜಿಸಿ ಕೈಗೆ ಕಟ್ಟಬೇಕು.

ಅನಂತ ಚತುರ್ದಶಿಯ ವಿಶೇಷ
* ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಉಪವಾಸವಿದ್ದು ಅನಂತ ಚತುರ್ದಶಿ ಆಚರಿಸಲಾಗುವುದು.
* ಭಗವಾನ್ ವಿಷ್ಣುವಿನ ಅನಂತ ರೂಪವನ್ನು ಈ ದಿನ ಪೂಜಿಸಲಾಗುತ್ತದೆ.
* ಭಗವಾನ್ ವಿಷ್ಣುವು ಭು, ಭುವಸ್, ಸ್ವರ್, ಮಹಾಸ್, ಜನಸ್, ತಪಸ್, ಮತ್ತು ಸತ್ಯ ಮತ್ತು ಮೇಲಿನ ಮತ್ತು ಅಟಲ, ವಿಟಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಳ ಈ ಎಲ್ಲಾ ಲೋಕವನ್ನು ವಿವಿಧ ಅವತಾರಗಳನ್ನು ಎತ್ತಿ ರಕ್ಷಣೆ ಮಾಡಿದನು ಎಂದು ಹೇಳಲಾಗುವುದು. ವಿಷ್ಣುವಿನ ಈ ಅವತಾರವನ್ನು ಅನಂತನ ಅವತಾರವೆಂದು ಹೇಳಲಾಗುವುದು. ಅನಂತ ಚತುರ್ದಶಿಯಂದು ಉಪವಾಸವಿದ್ದು ಪೂಜೆ ಮಾಡಿ ಆಚರಿಸಲಾಗುವುದು.
* ಯಾರು ಈ ಅನಂತ ಚತುರ್ದಶಿಯನ್ನು ಆಚರಿಸುತ್ತಾರೆ ಅವರ ಸಂಕಷ್ಟಗಳು ದೂರವಾಗುವುದು.

ಅನಂತ ಚತುರ್ದಶಿ ಹೇಗೆ ಆಚರಿಸಬೇಕು?
* ಬೆಳಗ್ಗೆ ಎದ್ದು ಸ್ನಾನ ಮಾಡಿ ಕಲಶ ತಯಾರಿಸಬೇಕು. ಕಲಶವನ್ನು ಕಮಲದ ಹೂವಿನಿಂದ ಅಲಂಕರಿಸಬೇಕು. ವಿಷ್ಣುವಿನ ಮೂರ್ತಿಯನ್ನು ಅಲಂಕರಿಸಿಬೇಕು.
* ಈಗ ಕುಂಕುಮ, ಕೇಸರಿ,ಅರಿಶಿಣ ಹಾಕಿದ ತಟ್ಟೆಯಲ್ಲಿ ರೇಷ್ಮೆ ನೂಲು ಮಿಶ್ರ ಮಾಡಿ 14 ಗಂಟುಗಳನ್ನು ಹಾಕಿ ಮಹಾವಿಷ್ಣುವಿನ ಬಳಿ ಇಡಬೇಕು. ನಂತರ ಮಹಾ ವಿಷ್ಣು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡಬೇಕು.
* ನಂತರ ಆ ಪವಿತ್ರ ನೂಲನ್ನು ತೆಗೆದುಕೊಂಡು ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು.
* ಪುರುಷರು ಈ ನೂಲನ್ನು ಎಡಗೈಗೆ ಕಟ್ಟಿದರೆ, ಮಹಿಳೆಯರು ಈ ನೂಲನ್ನು ಬಲಗೈಗೆ ಕಟ್ಟಿಕೊಳ್ಳಬೇಕು. ನಂತರ ಪ್ರಸಾದವನ್ನು ಸ್ವೀಕರಿಸಬೇಕು.

ಅನಂತ ಚತುರ್ದಶಿ ಪೂಜೆಗೆ ಶುಭ ಮುಹೂರ್ತ
ಅನಂತ ಚತುರ್ದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 19, ಬೆಳಗ್ಗೆ 6:07ಕ್ಕೆ
ಅನಂತ ಚತುರ್ದಶಿ ತಿಥಿ ಅಂತ್ಯ: ಸೆಪ್ಟೆಂಬರ್ 20 ಬೆಳಗ್ಗೆ 5:30ಕ್ಕೆ

ಅನಂತ ಚತುರ್ದಶಿ ಆಚರಣೆಯ ಪ್ರಯೋಜನವೇನು?
ಪುರಾಣದ ಪ್ರಕಾರ, ಅನಂತ ಚತುರ್ದಶಿ ಉಪವಾಸವನ್ನು ಸತತ 14 ವರ್ಷಗಳ ಕಾಲ ಆಚರಿಸಿದರೆ ಆ ವ್ಯಕ್ತಿ ವಿಷ್ಣುವಿನ ಲೋಕದಲ್ಲಿ ಸ್ಥಾನ ಪಡೆಯುತ್ತಾನೆ. ವಿಷ್ಣುವಿನ ಕೃಪೆ ಅವನ ಮೇಲಿರುತ್ತದೆ. ಈ ದಿನ ಉಪವಾಸವಿದ್ದು ವಿಷ್ಣುವಿನ ಸಹಸ್ರನಾಮ ಪಠಿಸಿದರೆ ಮನೋಕಾಮನೆಗಳು ಈಡೇರುವುದು. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೊಂದುತ್ತಾರೆ ಎಂದು ನಂಬಲಾಗಿದೆ. ಅನಂತ ಚತುರ್ದಶಿ ಉಪವಾಸವನ್ನು ಮೊದಲು ಆರಂಭಿಸಿದ್ದು ಮಹಾಭಾರತದ ಕಾಲದಿಂದ ಎಂದು ಹೇಳಲಾಗುವುದು.
ಪಾಂಡವರು ಕೌರವರ ಜೊತೆ ಸೋತು ಅಜ್ಞಾತವಾಸದಲ್ಲಿರುತ್ತಾರೆ. ಆಗ ಅಲ್ಲಿಗೆ ಬಂದ ಶ್ರೀಕೃಷ್ಣನನ್ನು ಪಾಂಡವರು ಸ್ವಾಗತಿಸುತ್ತಾರೆ. ಶ್ರೀಕೃಷ್ಣನ ಬಳಿಕ ತಾವು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಏನು ಮಾಡಬೇಕು ಎಂದು ಕೇಳುತ್ತಾರೆ, ಆಗ ಶ್ರೀ ಕೃಷ್ಣ ಅನಂತ ಚತುರ್ದಶಿ ಕುರಿತು ವಿವರಿಸುತ್ತಾನೆ. ಅದರಂತೆ ಯುಧಿಷ್ಠರ ತನ್ನ ಪರಿವಾರದ ಜೊತೆ ಅನಂತ ಚತುರ್ದಶಿ ವ್ರತವನ್ನು ಆಚರಿಸುತ್ತಾನೆ. ನಂತರ ಕಳೆದು ಸಾಮ್ರಾಜ್ಯ ಮರಳಿ ಸಿಗುವಂತಾಗುವುದು ಎಂಬ ಪೌರಾಣಿಕ ಕತೆ ಇದೆ.



Click it and Unblock the Notifications











