Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಭಾರತದಲ್ಲಿರುವ 6 ಶ್ರೀ ಕೃಷ್ಣನ ದೇವಾಲಯಗಳು
ಪುರಾಣದಲ್ಲಿ ದುಷ್ಟರ ಸಂಹಾರಕ್ಕಾಗಿ ಮಹಾವಿಷ್ಣು ತುಂಬಾ ಅವತಾರಗಳನ್ನು ತಾಳಿದನು ಎಂದು ಕೇಳಿದ್ದೇವೆ. ಅಂತಹ ಅವತಾರಗಳಲ್ಲಿ ಒಂದು ಶ್ರೀ ಕೃಷ್ಣನ ಅವತಾರ. ವ್ಯಾಸ' ಮಹರ್ಷಿಯ ತಂದೆಯಾದ ಪರಾಶರ ಮಹರ್ಷಿಯು ವಿಷ್ಣು ಪುರಾಣದಲ್ಲಿ ಶ್ರೀ ಕೃಷ್ಣನ ಅವತಾರವು ಪರಿಪೂರ್ಣ ಅವತಾರ ಎಂದಿದ್ದಾರೆ.
ಕಲಿಯುಗದಲ್ಲಿ ಶ್ರೀ ಕೃಷ್ಣನಿಗಾಗಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಶ್ರೀ ಕೃಷ್ಣನ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಕೃಷ್ಣನ ಅನುಗ್ರಹವನ್ನು ಪಡೆಯಲು ಬರುತ್ತಾ ಇರುತ್ತಾರೆ.
ಇಲ್ಲಿ ನಾವು ಭಾರತದಲ್ಲಿರುವ ಪ್ರಸಿದ್ಧ 6 ಶ್ರೀ ಕೃಷ್ಣನ ದೇಗುಲಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

1. ಇಸ್ಕಾನ್
ಇಸ್ಕಾನ್ ದೇವಾಲಯವು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಂತಹ ಶ್ರೀ ಕೃಷ್ಣನ ಮಂದಿರವಾಗಿದೆ. ಜಾತಿ ಮತ್ತು ಧರ್ಮದ ಬೇಧವಿಲ್ಲದೆ ಎಲ್ಲರೂ ಈ ದೇವಾಲಯಕ್ಕೆ ಭೇಟಿಕೊಡಬಹುದಾಗಿದೆ. ಇಸ್ಕಾನ್ ದೇವಾಲಯವು ದೆಹಲಿ, ವೃಂಧಾವನ, ಬೆಂಗಳೂರು, ಕಲ್ಕತಾ ಹೀಗೆ ಹಲವು ಕಡೆಗಳಲ್ಲಿ ಇದೆ.

2. ದ್ವಾರಕ
ದ್ವಾರಕ ಶ್ರೀಕೃಷ್ಣ ನ ದೇವಾಲಯವು ಗುಜರಾತ್ ನಲ್ಲಿದೆ. ಈ ದ್ವಾರಕ ವಿಷ್ಣು ದೇವಾಲಯವನ್ನು ಜಗತ್ ಮಂದಿರಾ ಎಂದು ಕೂಡ ಕರೆಯಲಾಗುತ್ತದೆ. ಇದನ್ನು 2500 ವರ್ಷಗಳ ಹಿಂದೆ ಕಟ್ಟಲಾಯಿತು.

3. ವೃಂದಾವನ
ಶ್ರೀ ಕೃಷ್ಣನು ತನ್ನ ಬಾಲ್ಯವನ್ನು ಇಲ್ಲಿ ಕಳೆದನು ಎಂಬ ಪ್ರತೀತಿ ಇದೆ. ರಾಜ ಅಕ್ಬರ್ ಈ ಪ್ರದೇಶಕ್ಕೆ ಭೇಟಿ ಕೊಟ್ಟು ಇಲ್ಲಿ ಶ್ರೀ ಕೃಷ್ಣನ 4 ದೇವಾಲಯಗಳನ್ನು ನಿರ್ಮಿಸಲು ಆಜ್ಞೆ ನೀಡಿದನು. ಆ ದೇವಾಲಯಗಳನ್ನು ಮದನ್ ಮೋಹನಾ, ಗೋಪಿನಾಥ್, ಗೋವಿಂದ, ಜುಗಲ್ ಅಥಾವ ಕಿಸೋರ್ ಎಂದು ಹೆಸರಿಸಲಾಗಿದೆ.

4. ಜುಗಲ್ ಕಿಸೋರ್
ಈ ದೇವಾಲಯವು ಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲಿದೆ. ಇದು ತುಂಬಾ ಹಳೆಯದಾದ ಹಾಗೂ ಪ್ರಸಿದ್ಧಿಯನ್ನು ಪಡೆದಂತಹ ದೇವಾಲಯವಾಗಿದೆ. ಇಲ್ಲಿ ಯಮುನಾ ದೇವಿಗೆ ಪ್ರತಿದಿನ ಆರತಿಯನ್ನು ಮಾಡಲಾಗುತ್ತದೆ.

5.ಗುರುವಾಯರ್
ಈ ದೇವಾಲಯವು ಕೇರಳದಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾ ಇರುತ್ತಾರೆ. ಅಲ್ಲದೆ ಇಲ್ಲಿ 36 ಆನೆಗಳು ಹಾಗೂ ಪಕ್ಷಿಗಳಿವೆ. ಕೇರಳದಲ್ಲಿ ಹೊಸದಾಗಿ ಮದುವೆಯಾದವರು ನಮ್ಮ ಮದುವೆ ಜೀವನ ಸುಗಮವಾಗಿರಲಿ ಎಂದು ಬೇಡಿಕೊಳ್ಳಲು ಈ ದೇವಾಲಯಕ್ಕೆ ಕೊಡುತ್ತಾರೆ. ಚಿಕ್ಕ ಮಕ್ಕಳಿಗೆ ಇಲ್ಲಿ ಅಕ್ಕಿಯಲ್ಲಿ ಅಕ್ಷರಗಳನ್ನು ಬರಿಸುವ ಪದ್ಧತಿ ಕೂಡ ಇದೆ. ಹೀಗೆ ಮಾಡಿದರೆ ಮಕ್ಕಳು ವಿಧ್ಯಾಭ್ಯಾಸದಲ್ಲಿ ಚುರುಕಾಗಿ ಇರುತ್ತಾರೆ ಎಂಬ ನಂಬಿಕೆ ಇದೆ.

6. ಜಗನ್ನಾಥ್
ಈ ದೇವಾಲಯವು ಒರಿಸ್ಸಾದಲ್ಲಿದೆ. ಇಲ್ಲಿಗೆ ಭಗವಂತನ ಅನುಗ್ರಹ ಪಡೆಯಲು ಸಾಕಷ್ಟು ಭಕ್ತಾದಿಗಳು ಭೇಟಿ ನೀಡುತ್ತಾರೆ.

7. ಉಡುಪಿ ಕೃಷ್ಣ ಮಂದಿರ
ವಿಶ್ವ ವಿಖ್ಯಾತ ಕೃಷ್ಣ ಮಂದಿರ ದಕ್ಷಿಣ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿರುವ ಕನಕನ ಕಿಂಡಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.



Click it and Unblock the Notifications