Latest Updates
-
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ!
ಭಾರತದಲ್ಲಿರುವ 6 ಶ್ರೀ ಕೃಷ್ಣನ ದೇವಾಲಯಗಳು
ಪುರಾಣದಲ್ಲಿ ದುಷ್ಟರ ಸಂಹಾರಕ್ಕಾಗಿ ಮಹಾವಿಷ್ಣು ತುಂಬಾ ಅವತಾರಗಳನ್ನು ತಾಳಿದನು ಎಂದು ಕೇಳಿದ್ದೇವೆ. ಅಂತಹ ಅವತಾರಗಳಲ್ಲಿ ಒಂದು ಶ್ರೀ ಕೃಷ್ಣನ ಅವತಾರ. ವ್ಯಾಸ' ಮಹರ್ಷಿಯ ತಂದೆಯಾದ ಪರಾಶರ ಮಹರ್ಷಿಯು ವಿಷ್ಣು ಪುರಾಣದಲ್ಲಿ ಶ್ರೀ ಕೃಷ್ಣನ ಅವತಾರವು ಪರಿಪೂರ್ಣ ಅವತಾರ ಎಂದಿದ್ದಾರೆ.
ಕಲಿಯುಗದಲ್ಲಿ ಶ್ರೀ ಕೃಷ್ಣನಿಗಾಗಿ ಅನೇಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಶ್ರೀ ಕೃಷ್ಣನ ದೇವಾಲಯವು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಕೃಷ್ಣನ ಅನುಗ್ರಹವನ್ನು ಪಡೆಯಲು ಬರುತ್ತಾ ಇರುತ್ತಾರೆ.
ಇಲ್ಲಿ ನಾವು ಭಾರತದಲ್ಲಿರುವ ಪ್ರಸಿದ್ಧ 6 ಶ್ರೀ ಕೃಷ್ಣನ ದೇಗುಲಗಳ ಬಗ್ಗೆ ಚಿತ್ರ ಮಾಹಿತಿ ನೀಡಲಾಗಿದೆ ನೋಡಿ:

1. ಇಸ್ಕಾನ್
ಇಸ್ಕಾನ್ ದೇವಾಲಯವು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಂತಹ ಶ್ರೀ ಕೃಷ್ಣನ ಮಂದಿರವಾಗಿದೆ. ಜಾತಿ ಮತ್ತು ಧರ್ಮದ ಬೇಧವಿಲ್ಲದೆ ಎಲ್ಲರೂ ಈ ದೇವಾಲಯಕ್ಕೆ ಭೇಟಿಕೊಡಬಹುದಾಗಿದೆ. ಇಸ್ಕಾನ್ ದೇವಾಲಯವು ದೆಹಲಿ, ವೃಂಧಾವನ, ಬೆಂಗಳೂರು, ಕಲ್ಕತಾ ಹೀಗೆ ಹಲವು ಕಡೆಗಳಲ್ಲಿ ಇದೆ.

2. ದ್ವಾರಕ
ದ್ವಾರಕ ಶ್ರೀಕೃಷ್ಣ ನ ದೇವಾಲಯವು ಗುಜರಾತ್ ನಲ್ಲಿದೆ. ಈ ದ್ವಾರಕ ವಿಷ್ಣು ದೇವಾಲಯವನ್ನು ಜಗತ್ ಮಂದಿರಾ ಎಂದು ಕೂಡ ಕರೆಯಲಾಗುತ್ತದೆ. ಇದನ್ನು 2500 ವರ್ಷಗಳ ಹಿಂದೆ ಕಟ್ಟಲಾಯಿತು.

3. ವೃಂದಾವನ
ಶ್ರೀ ಕೃಷ್ಣನು ತನ್ನ ಬಾಲ್ಯವನ್ನು ಇಲ್ಲಿ ಕಳೆದನು ಎಂಬ ಪ್ರತೀತಿ ಇದೆ. ರಾಜ ಅಕ್ಬರ್ ಈ ಪ್ರದೇಶಕ್ಕೆ ಭೇಟಿ ಕೊಟ್ಟು ಇಲ್ಲಿ ಶ್ರೀ ಕೃಷ್ಣನ 4 ದೇವಾಲಯಗಳನ್ನು ನಿರ್ಮಿಸಲು ಆಜ್ಞೆ ನೀಡಿದನು. ಆ ದೇವಾಲಯಗಳನ್ನು ಮದನ್ ಮೋಹನಾ, ಗೋಪಿನಾಥ್, ಗೋವಿಂದ, ಜುಗಲ್ ಅಥಾವ ಕಿಸೋರ್ ಎಂದು ಹೆಸರಿಸಲಾಗಿದೆ.

4. ಜುಗಲ್ ಕಿಸೋರ್
ಈ ದೇವಾಲಯವು ಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲಿದೆ. ಇದು ತುಂಬಾ ಹಳೆಯದಾದ ಹಾಗೂ ಪ್ರಸಿದ್ಧಿಯನ್ನು ಪಡೆದಂತಹ ದೇವಾಲಯವಾಗಿದೆ. ಇಲ್ಲಿ ಯಮುನಾ ದೇವಿಗೆ ಪ್ರತಿದಿನ ಆರತಿಯನ್ನು ಮಾಡಲಾಗುತ್ತದೆ.

5.ಗುರುವಾಯರ್
ಈ ದೇವಾಲಯವು ಕೇರಳದಲ್ಲಿದೆ. ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಇಲ್ಲಿ ಭೇಟಿ ನೀಡುತ್ತಾ ಇರುತ್ತಾರೆ. ಅಲ್ಲದೆ ಇಲ್ಲಿ 36 ಆನೆಗಳು ಹಾಗೂ ಪಕ್ಷಿಗಳಿವೆ. ಕೇರಳದಲ್ಲಿ ಹೊಸದಾಗಿ ಮದುವೆಯಾದವರು ನಮ್ಮ ಮದುವೆ ಜೀವನ ಸುಗಮವಾಗಿರಲಿ ಎಂದು ಬೇಡಿಕೊಳ್ಳಲು ಈ ದೇವಾಲಯಕ್ಕೆ ಕೊಡುತ್ತಾರೆ. ಚಿಕ್ಕ ಮಕ್ಕಳಿಗೆ ಇಲ್ಲಿ ಅಕ್ಕಿಯಲ್ಲಿ ಅಕ್ಷರಗಳನ್ನು ಬರಿಸುವ ಪದ್ಧತಿ ಕೂಡ ಇದೆ. ಹೀಗೆ ಮಾಡಿದರೆ ಮಕ್ಕಳು ವಿಧ್ಯಾಭ್ಯಾಸದಲ್ಲಿ ಚುರುಕಾಗಿ ಇರುತ್ತಾರೆ ಎಂಬ ನಂಬಿಕೆ ಇದೆ.

6. ಜಗನ್ನಾಥ್
ಈ ದೇವಾಲಯವು ಒರಿಸ್ಸಾದಲ್ಲಿದೆ. ಇಲ್ಲಿಗೆ ಭಗವಂತನ ಅನುಗ್ರಹ ಪಡೆಯಲು ಸಾಕಷ್ಟು ಭಕ್ತಾದಿಗಳು ಭೇಟಿ ನೀಡುತ್ತಾರೆ.

7. ಉಡುಪಿ ಕೃಷ್ಣ ಮಂದಿರ
ವಿಶ್ವ ವಿಖ್ಯಾತ ಕೃಷ್ಣ ಮಂದಿರ ದಕ್ಷಿಣ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ. ಇಲ್ಲಿರುವ ಕನಕನ ಕಿಂಡಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.



Click it and Unblock the Notifications