Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಷೋಡೋಪಚಾರ ಪೂಜೆ: ಗಣೇಶ ಪ್ರತಿಷ್ಠಾಪನೆ ಮಾಡುವಾಗ ಈ 16 ಪೂಜಾವಿಧಿಗಳನ್ನು ಅನುಸರಿಸಿ
ಸೆಪ್ಟೆಂಬರ್ 18-19ಕ್ಕೆ ಗಣೇಶ ಚತುರ್ಥಿ. ಸೆಪ್ಟೆಂಬರ್ 19ಕ್ಕೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ 10 ದಿನಗಳ ಗಣೇಶನ ಆರಾಧಿಸಿ ನಂತರ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಪ್ರತಿಷ್ಠಾಪನೆ ಮಾಡುವಾಗ ಷೋಡಶೋಪಚಾರ ಪೂಜೆ ಮಾಡಬೇಕು. ನೀವು ಗಣೇಶನ ಪ್ರತಿಷ್ಠಾಪನೆ ಮಾಡಲು ಈ 16 ಸ್ಟೆಪ್ ಪೂಜಾ ವಿಧಾನಗಳನ್ನು ಅನುಸರಿಸಿ:

1. ಆವಾಹನೆ
ಗಣೇಶನ ಮಂತ್ರವನ್ನು ಹೇಳುವ ಮೂಲಕ ಗಣೇಶನ ಆವಾಹನೆ ಮಾಡಬೇಕು. ಆವಾಹನೆ ಮುದ್ರೆ ಅಂದರೆ ಎರಡು ಕೈಗಳನ್ನು ಜೋಡಿಸಿ ನಮಸ್ಕರಿಸಿ, ಮೂರ್ತಿಯನ್ನು ಸ್ವಾಗತಿಸಬೇಕು.
2. ಪ್ರತಿಷ್ಠಾಪನೆ
ಗಣೇಶನನ್ನು ಆವಾಹನೆ ಮಾಡಿದ ಬಳಿಕ ಗಣೇಶನ ಪಾದಗಳಿಗೆ 5 ಎಲೆಗಳನ್ನು ಇಡಿ, ನಂತರ ಆ ಎಲೆಗಳ ಮೇಲೆ ಅಡಿಕೆ ಹಾಕಿ, ನಂತರ ಅರಿಶಿಣ ಪುಡಿ, ಕುಂಕುಮವನ್ನು ವೀಳ್ಯೆದೆಲೆ ಮೇಲೆ ಹಾಕಿ.
3. ಆಸನ ಸಮಪರ್ಪಣೆ
ನಂತರ 5 ಹೂವುಗಳನ್ನು ತೆಗೆದುಕೊಂಡು ಎರಡು ಕೈಗಳನ್ನು ಸೇರಿಸಿ (ಅಂಗೈಗಳನ್ನು ಸೇರಿಸಿ) ಹೂವುಗಳನ್ನು ಗಣೇಶನ ಕೂರಿಸಿರುವ
ಪೀಠಕ್ಕೆ ಅರ್ಪಿಸಿ.
4. ಪಾಡ್ಯಾ ಸಮರ್ಪಣೆ ಮಾಡಿ
ಗಣೇಶನ ಪಾದಗಳನ್ನು ನೀರು ಹಾಕಿ ತೊಳೆಯಿರಿ
5. ಆರ್ಘ್ಯ ಸಮರ್ಪಣೆ
ಪಾಡ್ಯಾ ಮಾಡಿದ ಬಳಿಕ ಪನ್ನೀರ್(ಸುಗಂಧಭರಿತ) ನೀರನ್ನು ಶ್ರೀ ಗಣೇಶನಿಗೆ ಅರ್ಪಿಸಿ.
5. ಅಚಮನ
ಆರ್ಘ್ಯವನ್ನು ಸಮರ್ಪಿಸಿದ ಬಳಿಕ ಅಚಮನಗೆ ದೇವರಿಗೆ ನೀರನ್ನು ಅರ್ಪಿಸಿ.
6. ಸ್ನಾನ
* ಸ್ನಾನ: ಗಣೇಶನಿಗೆ ನೀರಿನ ಅಭಿಷೇಕ ಮಾಡಿ
* ಪಂಚಾಮೃತ ಸ್ನಾನ: ನೀರಿನ ಸ್ನಾನದ ಬಳಿಕ ಪಂಚಾಮೃತದ ಸ್ನಾನ ಮಾಡಿ
* ದುಗ್ಧ ಸ್ನಾನ: ನಂತರ ಗಣೇಶನಿಗೆ ಹಾಲಿನ ಅಭಿಷೇಕ ಮಾಡಿ
* ದಹಿ ಸ್ನಾನ: ಶ್ರೀ ಗಣೇಶನಿಗೆ ಮೊಸರಿನ ಅಭಿಷೇಕ ಮಾಡಿ
* ಘೃತ ಸ್ನಾನ: ದಹಿ ಸ್ನಾನ ನಂತರ ಶ್ರೀ ಗಣೇಶನಿಗೆ ಸ್ನಾನ ಮಾಡಿ
* ಮಧು ಸ್ನಾನ: ಶ್ರೀ ಗಣೇಶನಿಗೆ ಜೇನಿನಿಂದ ಸ್ನಾನ ಮಾಡಿ
* ಶರ್ಕರ ಸ್ನಾನ: ನಂತರ ಗಣೇಶನಿಗೆ ಸಕ್ಕರೆಯಿಂದ ಸ್ನಾನ ಮಾಡಿ
* ಸುವಿಷ್ಠ ಸ್ನಾನ: ಸುವಾಸನೆ ಎಣ್ಣೆಯಿಂದ ಸ್ನಾನ ಮಾಡಿ
* ಶುದ್ಧೋಡ್ಕಾ ಸ್ನಾನ: ನಂತರ ಗಣೇಶನಿಗೆ ಶುದ್ಧವಾದ ನೀರಿನಿಂದ ಸ್ನಾನ ಮಾಡಿ
7. ವಸ್ತ್ರ ಸಮರ್ಪಣೆ ಮತ್ತು ಉತ್ತೇರಿಯಾ ಸಮರ್ಪಣೆ
ಗಣೇಶನಿಗೆ ವಸ್ತ್ರ ಸಮರ್ಪಿಸಿ
ನಂತರ ಗಣೇಶನ ಮೇಲ್ಭಾಗಕ್ಕೆ ವಸ್ತ್ರವನ್ನು ಹಾಕಿ.
ಯಜ್ಞೋಪವಿತ ಸಮರ್ಪಣೆ
ನಂತರ ಗಣೇಶನಿಗೆ ಯಜ್ಞೋಪವಿತವನ್ನು ಅರ್ಪಿಸಿ
9. ಗಂಧ
ನಂತರ ಸುಗಂಧದ್ರವ್ಯವನ್ನು ಗಣೇಶನಿಗೆ ಅರ್ಪಿಸಿ
10. ಅಕ್ಷತೆ
ನಂತರ ಗಣೇಶನಿಗೆ ಅಕ್ಷತೆಯನ್ನು ಅರ್ಪಿಸಿ.
11. ಪುಷ್ಪಮಾಲೆಯನ್ನು ಅರ್ಪಿಸಿ
ಗಣೇಶನಿಗೆ ಹೂವಿನಿಂದ ಅಲಂಕರಿಸಿ, ಹೂವಿನ ಮಾಲೆ ಅರ್ಪಿಸಿ. ಗರಿಕೆಯನ್ನು ಅರ್ಪಿಸಿ. ದೇವರಿಗೆ ಕುಂಕುಮ ಅರ್ಪಿಸಿ.
12. ಧೂಪವನ್ನು ಅರ್ಪಿಸಿ
13. ದೀಪವನ್ನು ಸಮರ್ಪಿಸಿ
14.ನೈವೇದ್ಯ ಅರ್ಪಿಸಿ
15. ತಾಂಬೂಲ, ದಕ್ಷಿಣೆ ಅರ್ಪಿಸಿ
16. ಆರತಿ ಬೆಳಗಿ, ಪುಷ್ಪಾಂಜಲಿ ಅರ್ಪಿಸಿ.
ಈ ಮಂತ್ರಗಳನ್ನು ಪಠಿಸಿ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಓಂ ಏಕದಂತಾಯ ವಿಧ್ಮಹೆ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಮೂಷಿಕ ವಾಹನ ಮೋದಕ ಹಸ್ತ
ಚಾಮರ ಕರ್ಣ ವಿಳಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಅಗಜಾನನ ಪದ್ಮಾರ್ಕಂ ಗಜಾನನ ಮಹಾರ್ನಿಶಂ
ಅನೇಕದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆಯ್
ಗಜಾನನಂ ಭೂತ ಗಾಣಧಿ ಸೇವಿತಂ
ಕಪಿಥ ಜಂಬೋ ಫಲ ಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ ಪಾದ ಪಂಕಜಂ.
ಗಣಾನಾಂ ತ್ವಂ ಗಣಪತಿ ಗಂ ಹವಾಮಹೇ
ಕವಿಂ ಕವೀನಾಂ ಉಪಮಸ್ರ ವಸ್ತಮಂ
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಶ್ರುನ್ವನ್ನ ಊತಿಭಿ ಸೀದ ಸಾದನಂ
ಶ್ರೀಕಂಠೋ ಮಾತುಲೋ ಯಸ್ಯ, ಜನನೀ ಸರ್ವ ಮಂಗಳಾ
ಜನಕ: ಶಂಕರೋ ದೇವಃ, ತಮ್ ವಂದೇ ಕುಂಜರಾನನಂ
ಗಜವಕ್ತ್ರಂ ಸುರ-ಶ್ರೇಷ್ಟಂ
ಕರ್ಣ ಚಾಮರ ಭೂಷಿತಾಂ
ಪಾಶಾಂಕುಶ ಧರಂ ದೇವಂ
ವಂದೆಹಂ ಗಣನಾಯಕಂ
ಏಕದಂತಂ ಮಹಾಕಾಯಂ ತಪ್ತಕಾಜ್ಞ್ಚಂಸಂನಿಭಮ್
ಲಂಬೋದರಂ ವಿಶಾಲಾಕ್ಷಂ ವಂದೆಹಂ ಗಣನಾಯಕಂ
ಏಕದಂತಂ ಮಹಕಾಯಂ
ಲಂಬೋದರ ಗಜಾನನಂ
ವಿಘ್ನ ನಾಶಕರ್ಮ ದೇವಂ
ಹೇರಮ್ಬಂ ಪ್ರಾಣ ಮಾಮ್ಯಹಂ
ಪ್ರಸನ್ನ ವಿನಾಯಕಂ ದೇವಂ ಪೆರಿವನ-ಪುರ ಸಂಸ್ತಿತಂ
ಸರ್ವ ವಿಘ್ನ ಹರಂ ನಿತ್ಯಂ ವಂದೇ ಶ್ರೀ ಕುಂಜರಾನನಂ
ವಿಘ್ನೇಶ್ವರಾಯ ವರದಾಯ ಸುರಪ್ರಿಯಯಾ
ಲಂಬೋದರಾಯ ಸಕಲಾಯ ಜಗದ್ವಿತಾಯ
ನಾಗಾನನ್ಯಾಯ ಶ್ರುತಿಯಗ್ನ ವಿಭೂಶಿತಾಯ
ಗೌರಿ-ಸುತಾಯ ಗಣನಾಥ ನಮೋ ನಮಸ್ತೆ



Click it and Unblock the Notifications











