Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಗಸ್ಟ್ 5ಕ್ಕೆ ಸಂಪತ್ತು ಶನಿವಾರ: ಶನಿದೋಷದಿಂದ ಪಾರಾಗಲು ಶ್ರಾವಣ ಶನಿವಾರ ಏನು ಮಾಡಬೇಕು?
ಶ್ರಾವಣ ತಿಂಗಳು ಹಿಂದೂಗಳಿಗೆ ಪವಿತ್ರವಾದ ತಿಂಗಳು, ಅದರಲ್ಲೂ ಈ ವರ್ಷ ಅಧಿಕ ಮಾಸ ಬಂದಿರುವುದರಿಂದ ಎರಡು ತಿಂಗಳು ಶ್ರಾವಣ ಮಾಸವಿದೆ. ಶ್ರಾವಣ ಸೋಮವಾರ ಶಿವನ ಆರಾಧನೆಗೆ ತುಂಬಾನೇ ಶ್ರೇಷ್ಠವಾದ ದಿನವೆಂದು ಹೇಳಲಾಗುವುದು, ಶ್ರಾವಣ ಸೋಮವಾರದಂತೆ ಶ್ರಾವಣ ಶನಿವಾರ ಕೂಡ ತುಂಬಾನೇ ಮುಖ್ಯ. ಶ್ರಾವಣ ಶನಿವಾರವನ್ನು ಸಂಪತ್ತು ಶನಿವಾರ ಎಂದು ಕರೆಯಲಾಗುವುದು.
ಶನಿವಾರದಂದು ಶನಿದೇವನ ಪೂಜಿಸಲಾಗುವುದು, ಶ್ರಾವಣ ಶನಿವಾರದಲ್ಲಿ ಶಿವನ ಪೂಜೆ ಮಾಡಿ ಶನಿಯ ಆರಾಧನೆ ಮಾಡುವುದರಿಂದ ಶನಿದೋಷವಿರುವವರಿಗೆ ಉತ್ತಮ ಪರಿಹಾರ ಸಿಗಲಿದೆ.

ಸಂಪತ್ತು ಶನಿವಾರದ ಮಹತ್ವ
ಶ್ರಾವಣ ಶನಿವಾರದಂದುಶಿವನ ಆರಾಧನೆ ಮಾಡುವುದರಿಂದ ಕಷ್ಟಗಳೆಲ್ಲಾ ದೂರಾಗಿ ಸಂಪತ್ತು ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ, ಈ ಕಾರಣಕ್ಕೆ ಶ್ರಾವಣ ಶನಿವಾರವನ್ನು ಸಂಪತ್ತು ಶನಿವಾರ ಎಂದು ಕರೆಯಲಾಗುವುದು. ಶ್ರಾವಣ ಶನಿವಾರದಂದು ಸಂಪತ್ತು ವೃದ್ಧಿಗಾಗಿ ಶಿವನಿಗೆ ಅಭಿಷೇಕ ಮಾಡಿಸಬೇಕು.
ಶನಿ ದೋಷ ನಿವಾರಣೆಗೆ
ರಾಶಿಯಲ್ಲಿ ಶನಿದೋಷವಿದ್ದರೆ ತುಂಬಾನೇ ಕಷ್ಟಗಳನ್ನು ಎದುರಿಸಬೇಕಾಗುವುದು, ವೃತ್ತಿ ಜೀವನ, ವೈಯಕ್ತಿಕ ಬದುಕು, ಸಾಮಜಿಕ ಜೀವನ ಎಲ್ಲದರ ಮೇಲೂ ಕೆಟ್ಟ ಪ್ರಭಾವ ಬೀರುವುದು, ಈ ಕಾರಣಕ್ಕೆ ಶನಿದೋಷಕ್ಕೆ ಜನ ಭಯಪಡುತ್ತಾರೆ. ಶನಿ ಸಾಡೇಸಾತಿ ಅಥವಾ ಶನಿ ಧೈಯ್ಯ ಇರುವವರು ದೀರ್ಘ ಸಮಯದವರೆಗೆ ತುಂಬಾನೇ ಕಷ್ಟಪಡಬೇಕಾಗುತ್ತದೆ. ಶನಿಯ ಕೆಟ್ಟ ಪ್ರಭಾವ ಕಡಿಮೆ ಮಾಡಲು ಶನಿವಾರ ಶನಿ ದೇವಾಲಯಕ್ಕೆ ಹೋಗಿ ಪೂಜೆ ಮಾಡುವುದು ಒಳ್ಳೆಯದು.
ಶನಿ ದೋಷ ನಿವಾರಣೆಗೆ ಸಂಪತ್ತು ಶನಿವಾರ ಪೂಜೆ ಹೇಗೆ ಮಾಡಬೇಕು?
* ಈ ದಿನ ಕಪ್ಪು ಬಟ್ಟೆಗಳನ್ನು ಧರಿಸಬೇಕು
* ದೇವರಿಗೆ ಕಪ್ಪು ಎಳ್ಳು, ಕಪ್ಪು ಉದ್ದಿನ ಬೇಳೆ ಅರ್ಪಿಸಬೇಕು
* ಈ ದಿನ ಪೂರ್ತಿ ಉಪವಾಸವಿದ್ದು ಶನಿ ದೇವನಿಗೆ ಪೂಜೆ ಮಾಡಿದ ಬಳಿಕ ನಂತರ ಉಪವಾಸ ಮುರಿಯಬೇಕು.
* ಕೆಲವರು ಈ ದಿನ ಒಂದು ಹೊತ್ತಿನ ಊಟವನ್ನಷ್ಟೇ ಮಾಡುತ್ತಾರೆ, ಕೆಲವರು ಏನೂ ತಿನ್ನದೆ ಉಪವಾಸ ಮಾಡುತ್ತಾರೆ.
ಶನಿದೋಷವಿರುವವರು ಸಂಪತ್ತು ಶನಿವಾರ ಈ ಪರಿಹಾರವನ್ನು ಮಾಡಿ
* ಹನುಮಂತನ ದೇವಾಲಯಕ್ಕೆ ಹೋಗಿ ವೀಳ್ಯೆದೆಲೆ ಹಾಗೂ ಅಡಿಕೆಯನ್ನು ಅರ್ಪಿಸಿ, ಸಿಹಿ ಪಾನ್ ಕೂಡ ಅರ್ಪಿಸಬಹುದು, ಹೀಗೆ ಮಾಡುವುದರಿಂದ ನೀವು ಮಂಗಳಕರ ಫಲಿತಾಂಶವನ್ನು ಪಡೆಯಬಹುದು.
* ಹನುಮಂತನಿಗೆ ಸಿಂಧೂರ ಅರ್ಪಿಸಿ: ಶನಿವಾರ ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಹನುಮಂತನ ಕೃಪೆಯಿಂದಾಗಿ ಶನಿಯ ಕೆಟ್ಟ ಪ್ರಭಾವ ಕಡಿಮೆಯಾಗಲಿದೆ.
* ಹನುಮಂತನಿಗೆ ಧ್ವಜನಿಗೆ ಅರ್ಪಿಸಿ
ಶನಿ ಸಾಡೇಸಾತಿಯಿಂದಾಗಿ ತುಂಬಾನೇ ಕಷ್ಟಗಳನ್ನು ಎದುರಿಸುತ್ತಿದ್ದರು ಹನುಮಂತನಿಗೆ ಧ್ವಜವನ್ನು ಅರ್ಪಿಸಿ
ಹನುಮಾನ್ ಚಾಲೀಸ ಪಠಿಸಿ: ಈ ದಿನ ನೀವು ಹನುಮಾನ್ ಚಾಲೀಸ ಪಠಿಸಿ.
ಈ ಶನಿ ಮಂತ್ರಗಳನ್ನು ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ"
"ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ"
"ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ
ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications