Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಕ್ಕಳು ರುದ್ರಾಕ್ಷಿ ಧರಿಸಿದರೆ ಈ ಪ್ರಯೋಜನಗಳಿವೆ, ಈ ನಿಯಮಗಳೂ ತಿಳಿದಿರಲಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ಇದರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುವುದು ಬಲವಾದ ನಂಬಿಕೆ. ರುದ್ರಾಕ್ಷಿಗೆ ಅಂಥ ಶಕ್ತಿ ಇದೆ. ರುದ್ರಾಕ್ಷಿಯನ್ನು ಶಿವನ ಪ್ರತಿರೂಪವೆಂದೇ ಹೇಳಲಾಗುವುದು.

ರುದ್ರಾಕ್ಷಿ ಧರಿಸಿದರೆ ಮನಸ್ಸಿಗೆ ಶಾಂತಿ ಸಿಗುವುದು, ದೇಹದ ಆರೋಗ್ಯ ಉತ್ತಮವಾಗುವುದು, ಜೀವನದಲ್ಲಿ ಖುಷಿ ಇರುತ್ತದೆ. ಆದರೆ ಈ ರುದ್ರಾಕ್ಷಿಯನ್ನು ಯಾರು, ಯಾವಾಗ ಬೇಕಾದರೂ ಧರಿಸಲು ಸಾಧ್ಯವಿಲ್ಲ. ಈ ರುದ್ರಾಕ್ಷಿಯನ್ನು ಧರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು. ಅವುಗಳ ಕುರಿತ ಹೆಚ್ಚಿನ ಮಾಹಿತಿ ತಿಳಿಯುವುದಾದರೆ :
ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿಯೇ ಧರಿಸಬೇಕು
ರುದ್ರಾಕ್ಷಿಯನ್ನು ಯಾವುದೋ ಹೊತ್ತಿನಲ್ಲಿ ಧರಿಸುವಂತಿಲ್ಲ, ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿ ಶುಭ ಸಮಯದಲ್ಲಿಯೇ ಧರಿಸಬೇಕು. ಅಲ್ಲದೆ ಮಲಗುವ ಮುನ್ನ ರುದ್ರಾಕ್ಷಿ ಬಿಚ್ಚಿ ದೇವರ ಮುಂದೆ ಇಡಬೇಕು. ಹೀಗೆ ಇಡುವಾಗ ರುದ್ರಾಕ್ಷಿ ಮಂತ್ರವನ್ನು 9 ಬಾರಿ ಪಠಿಸಬೇಕು.
ರುದ್ರಾಕ್ಷಿಯನ್ನು ಮಡಿಯಿಂದಲೇ ಧರಿಸಬೇಕು
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ದೇಹ ಹಾಗೂ ಮನಸ್ಸಿನಲ್ಲಿ ಮಡಿಯಿಂದಿರಬೇಕು. ಸ್ನಾನ ಮಾಡಿದ ಬಳಿಕ ರುದ್ರಾಕ್ಷಿ ಧರಿಸಬೇಕು. ರುದ್ರಾಕ್ಷಿ ಧರಿಸಿದವರು ಸುಳ್ಳು ಹೇಳಬಾರದು. ಮತ್ತೊಬ್ಬರಿಗೆ ವಂಚನೆ ಮಾಡಬಾರದು.
ಇನ್ನು ರುದ್ರಾಕ್ಷಿ ಮಾಲೆಯನ್ನು ಮಕ್ಕಳಿಗೆ ಧರಿಸುವುದರಿಂದ ಈ ಪ್ರಯೋಜನಗಳಿವೆ
* ಮಕ್ಕಳನ್ನು ಋಣಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ರುದ್ರಾಕ್ಷಿಯನ್ನು ಧರಿಸಿದಾಗ ಓಂ ನಮ ಶಿವಾಯ ಮಂತ್ರ ಪಠಿಸಲು ಮಕ್ಕಳಿಗೆ ಹೇಳಬೇಕು.
* ವಿದ್ಯಾರ್ಥಿಗಳಿಗೆ ತುಂಬಾ ಒಳ್ಲೆಯದು
ಓದುವ ವಿದ್ಯಾರ್ಥಿಗಳು 4 ಮುಖಿ ಅಥವಾ 6 ಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಮಕ್ಕಳಿಗೆ ಏಕಮುಖಿ ರುದ್ರಾಕ್ಷಿ ಧರಿಸಲೇಬಾರದು, ಈ ರುದ್ರಾಕ್ಷಿಯನ್ನು ತಪಸ್ವಿಗಳಷ್ಟೇ ಧರಿಸುತ್ತಾರೆ.
* ರುದ್ರಾಕ್ಷಿ ಧರಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
* ರುದ್ರಾಕ್ಷಿಯನ್ನು ಬೇರೆಯವರಿಂದ ಪಡೆದಿರಬಾರದು ಅಥವಾ ಸಾಲ ಮಾಡಿ ತೆಗೆದಿರಬಾರದು.
ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು
ಕೆಲವರು ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸುತ್ತಾರೆ. ಆದರೆ ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು. ರುದ್ರಾಕ್ಷಿಯನ್ನು ಕೆಂಪು ಅಥವಾ ಅರಿಶಿಣ ದಾರದಲ್ಲಿ ಧರಿಸಬೇಕು.
* ಒಡೆದ ರುದ್ರಾಕ್ಷಿ ಧರಿಸಬಾರದು
ರುದ್ರಾಕ್ಷಿ ಒಡೆದು ಹೋಗಿದ್ದರೆ ಅದನ್ನು ಬದಲಾಯಿಸಬೇಕು.
ಮನೆಯಲ್ಲಿ ಈ ರೀತಿಯಾದಾಗ ಧರಿಸಬಾರದು
* ಮನೆಯಲ್ಲಿ ಮಗುವಿನ ಜನನವಾದರೆ ಧರಿಸಬಾರದು
* ಮನೆಯಲ್ಲಿ ಸಾವಾದರೆ ಅಥವಾ ಸಾವಿಗೆ ಹೋಗುವಾಗ ಧರಿಸಬಾರದು
* ರುದ್ರಾಕ್ಷಿ ಧರಿಸಿ ಮಾಂಸಾಹಾರ ಸೇವಿಸಬಾರದು.
ತುಂಬಾ ಚಿಕ್ಕ ಮಕ್ಕಳಿಗೆ ಧರಿಸಬೇಡಿ
ರುದ್ರಾಕ್ಷಿಯನ್ನು ಸ್ವಲ್ಪ ತಿಳುವಳಿಕೆ ಬಂದ ಮೇಲೆ ಮಕ್ಕಲಿಗೆ ಧರಿಸಬೇಕು, ಆವಾಗ ಅವರು ರುದ್ರಾಕ್ಷಿ ನಿಯಮಗಳನ್ನು ಚೆನ್ನಾಗಿ ಅನುಸರಿಸುತ್ತಾರೆ.



Click it and Unblock the Notifications