Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳು ರುದ್ರಾಕ್ಷಿ ಧರಿಸಿದರೆ ಈ ಪ್ರಯೋಜನಗಳಿವೆ, ಈ ನಿಯಮಗಳೂ ತಿಳಿದಿರಲಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ಇದರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುವುದು ಬಲವಾದ ನಂಬಿಕೆ. ರುದ್ರಾಕ್ಷಿಗೆ ಅಂಥ ಶಕ್ತಿ ಇದೆ. ರುದ್ರಾಕ್ಷಿಯನ್ನು ಶಿವನ ಪ್ರತಿರೂಪವೆಂದೇ ಹೇಳಲಾಗುವುದು.

ರುದ್ರಾಕ್ಷಿ ಧರಿಸಿದರೆ ಮನಸ್ಸಿಗೆ ಶಾಂತಿ ಸಿಗುವುದು, ದೇಹದ ಆರೋಗ್ಯ ಉತ್ತಮವಾಗುವುದು, ಜೀವನದಲ್ಲಿ ಖುಷಿ ಇರುತ್ತದೆ. ಆದರೆ ಈ ರುದ್ರಾಕ್ಷಿಯನ್ನು ಯಾರು, ಯಾವಾಗ ಬೇಕಾದರೂ ಧರಿಸಲು ಸಾಧ್ಯವಿಲ್ಲ. ಈ ರುದ್ರಾಕ್ಷಿಯನ್ನು ಧರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು. ಅವುಗಳ ಕುರಿತ ಹೆಚ್ಚಿನ ಮಾಹಿತಿ ತಿಳಿಯುವುದಾದರೆ :
ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿಯೇ ಧರಿಸಬೇಕು
ರುದ್ರಾಕ್ಷಿಯನ್ನು ಯಾವುದೋ ಹೊತ್ತಿನಲ್ಲಿ ಧರಿಸುವಂತಿಲ್ಲ, ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿ ಶುಭ ಸಮಯದಲ್ಲಿಯೇ ಧರಿಸಬೇಕು. ಅಲ್ಲದೆ ಮಲಗುವ ಮುನ್ನ ರುದ್ರಾಕ್ಷಿ ಬಿಚ್ಚಿ ದೇವರ ಮುಂದೆ ಇಡಬೇಕು. ಹೀಗೆ ಇಡುವಾಗ ರುದ್ರಾಕ್ಷಿ ಮಂತ್ರವನ್ನು 9 ಬಾರಿ ಪಠಿಸಬೇಕು.
ರುದ್ರಾಕ್ಷಿಯನ್ನು ಮಡಿಯಿಂದಲೇ ಧರಿಸಬೇಕು
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ದೇಹ ಹಾಗೂ ಮನಸ್ಸಿನಲ್ಲಿ ಮಡಿಯಿಂದಿರಬೇಕು. ಸ್ನಾನ ಮಾಡಿದ ಬಳಿಕ ರುದ್ರಾಕ್ಷಿ ಧರಿಸಬೇಕು. ರುದ್ರಾಕ್ಷಿ ಧರಿಸಿದವರು ಸುಳ್ಳು ಹೇಳಬಾರದು. ಮತ್ತೊಬ್ಬರಿಗೆ ವಂಚನೆ ಮಾಡಬಾರದು.
ಇನ್ನು ರುದ್ರಾಕ್ಷಿ ಮಾಲೆಯನ್ನು ಮಕ್ಕಳಿಗೆ ಧರಿಸುವುದರಿಂದ ಈ ಪ್ರಯೋಜನಗಳಿವೆ
* ಮಕ್ಕಳನ್ನು ಋಣಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ರುದ್ರಾಕ್ಷಿಯನ್ನು ಧರಿಸಿದಾಗ ಓಂ ನಮ ಶಿವಾಯ ಮಂತ್ರ ಪಠಿಸಲು ಮಕ್ಕಳಿಗೆ ಹೇಳಬೇಕು.
* ವಿದ್ಯಾರ್ಥಿಗಳಿಗೆ ತುಂಬಾ ಒಳ್ಲೆಯದು
ಓದುವ ವಿದ್ಯಾರ್ಥಿಗಳು 4 ಮುಖಿ ಅಥವಾ 6 ಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಮಕ್ಕಳಿಗೆ ಏಕಮುಖಿ ರುದ್ರಾಕ್ಷಿ ಧರಿಸಲೇಬಾರದು, ಈ ರುದ್ರಾಕ್ಷಿಯನ್ನು ತಪಸ್ವಿಗಳಷ್ಟೇ ಧರಿಸುತ್ತಾರೆ.
* ರುದ್ರಾಕ್ಷಿ ಧರಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
* ರುದ್ರಾಕ್ಷಿಯನ್ನು ಬೇರೆಯವರಿಂದ ಪಡೆದಿರಬಾರದು ಅಥವಾ ಸಾಲ ಮಾಡಿ ತೆಗೆದಿರಬಾರದು.
ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು
ಕೆಲವರು ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸುತ್ತಾರೆ. ಆದರೆ ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು. ರುದ್ರಾಕ್ಷಿಯನ್ನು ಕೆಂಪು ಅಥವಾ ಅರಿಶಿಣ ದಾರದಲ್ಲಿ ಧರಿಸಬೇಕು.
* ಒಡೆದ ರುದ್ರಾಕ್ಷಿ ಧರಿಸಬಾರದು
ರುದ್ರಾಕ್ಷಿ ಒಡೆದು ಹೋಗಿದ್ದರೆ ಅದನ್ನು ಬದಲಾಯಿಸಬೇಕು.
ಮನೆಯಲ್ಲಿ ಈ ರೀತಿಯಾದಾಗ ಧರಿಸಬಾರದು
* ಮನೆಯಲ್ಲಿ ಮಗುವಿನ ಜನನವಾದರೆ ಧರಿಸಬಾರದು
* ಮನೆಯಲ್ಲಿ ಸಾವಾದರೆ ಅಥವಾ ಸಾವಿಗೆ ಹೋಗುವಾಗ ಧರಿಸಬಾರದು
* ರುದ್ರಾಕ್ಷಿ ಧರಿಸಿ ಮಾಂಸಾಹಾರ ಸೇವಿಸಬಾರದು.
ತುಂಬಾ ಚಿಕ್ಕ ಮಕ್ಕಳಿಗೆ ಧರಿಸಬೇಡಿ
ರುದ್ರಾಕ್ಷಿಯನ್ನು ಸ್ವಲ್ಪ ತಿಳುವಳಿಕೆ ಬಂದ ಮೇಲೆ ಮಕ್ಕಲಿಗೆ ಧರಿಸಬೇಕು, ಆವಾಗ ಅವರು ರುದ್ರಾಕ್ಷಿ ನಿಯಮಗಳನ್ನು ಚೆನ್ನಾಗಿ ಅನುಸರಿಸುತ್ತಾರೆ.



Click it and Unblock the Notifications
