Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಕ್ಕಳು ರುದ್ರಾಕ್ಷಿ ಧರಿಸಿದರೆ ಈ ಪ್ರಯೋಜನಗಳಿವೆ, ಈ ನಿಯಮಗಳೂ ತಿಳಿದಿರಲಿ
ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ತುಂಬಾನೇ ಪ್ರಾಮುಖ್ಯತೆ ಇದೆ. ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ಇದರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುವುದು ಬಲವಾದ ನಂಬಿಕೆ. ರುದ್ರಾಕ್ಷಿಗೆ ಅಂಥ ಶಕ್ತಿ ಇದೆ. ರುದ್ರಾಕ್ಷಿಯನ್ನು ಶಿವನ ಪ್ರತಿರೂಪವೆಂದೇ ಹೇಳಲಾಗುವುದು.

ರುದ್ರಾಕ್ಷಿ ಧರಿಸಿದರೆ ಮನಸ್ಸಿಗೆ ಶಾಂತಿ ಸಿಗುವುದು, ದೇಹದ ಆರೋಗ್ಯ ಉತ್ತಮವಾಗುವುದು, ಜೀವನದಲ್ಲಿ ಖುಷಿ ಇರುತ್ತದೆ. ಆದರೆ ಈ ರುದ್ರಾಕ್ಷಿಯನ್ನು ಯಾರು, ಯಾವಾಗ ಬೇಕಾದರೂ ಧರಿಸಲು ಸಾಧ್ಯವಿಲ್ಲ. ಈ ರುದ್ರಾಕ್ಷಿಯನ್ನು ಧರಿಸಲು ಕೆಲವೊಂದು ನಿಯಮಗಳಿವೆ, ಅವುಗಳನ್ನು ಪಾಲಿಸಿದರೆ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಬಹುದು. ಅವುಗಳ ಕುರಿತ ಹೆಚ್ಚಿನ ಮಾಹಿತಿ ತಿಳಿಯುವುದಾದರೆ :
ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿಯೇ ಧರಿಸಬೇಕು
ರುದ್ರಾಕ್ಷಿಯನ್ನು ಯಾವುದೋ ಹೊತ್ತಿನಲ್ಲಿ ಧರಿಸುವಂತಿಲ್ಲ, ರುದ್ರಾಕ್ಷಿಯನ್ನು ಬೆಳಗ್ಗೆ ಹೊತ್ತಿನಲ್ಲಿ ಶುಭ ಸಮಯದಲ್ಲಿಯೇ ಧರಿಸಬೇಕು. ಅಲ್ಲದೆ ಮಲಗುವ ಮುನ್ನ ರುದ್ರಾಕ್ಷಿ ಬಿಚ್ಚಿ ದೇವರ ಮುಂದೆ ಇಡಬೇಕು. ಹೀಗೆ ಇಡುವಾಗ ರುದ್ರಾಕ್ಷಿ ಮಂತ್ರವನ್ನು 9 ಬಾರಿ ಪಠಿಸಬೇಕು.
ರುದ್ರಾಕ್ಷಿಯನ್ನು ಮಡಿಯಿಂದಲೇ ಧರಿಸಬೇಕು
ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರು ದೇಹ ಹಾಗೂ ಮನಸ್ಸಿನಲ್ಲಿ ಮಡಿಯಿಂದಿರಬೇಕು. ಸ್ನಾನ ಮಾಡಿದ ಬಳಿಕ ರುದ್ರಾಕ್ಷಿ ಧರಿಸಬೇಕು. ರುದ್ರಾಕ್ಷಿ ಧರಿಸಿದವರು ಸುಳ್ಳು ಹೇಳಬಾರದು. ಮತ್ತೊಬ್ಬರಿಗೆ ವಂಚನೆ ಮಾಡಬಾರದು.
ಇನ್ನು ರುದ್ರಾಕ್ಷಿ ಮಾಲೆಯನ್ನು ಮಕ್ಕಳಿಗೆ ಧರಿಸುವುದರಿಂದ ಈ ಪ್ರಯೋಜನಗಳಿವೆ
* ಮಕ್ಕಳನ್ನು ಋಣಾತ್ಮಕ ಶಕ್ತಿಯಿಂದ ರಕ್ಷಿಸುತ್ತದೆ. ಮಕ್ಕಳಲ್ಲಿ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ರುದ್ರಾಕ್ಷಿಯನ್ನು ಧರಿಸಿದಾಗ ಓಂ ನಮ ಶಿವಾಯ ಮಂತ್ರ ಪಠಿಸಲು ಮಕ್ಕಳಿಗೆ ಹೇಳಬೇಕು.
* ವಿದ್ಯಾರ್ಥಿಗಳಿಗೆ ತುಂಬಾ ಒಳ್ಲೆಯದು
ಓದುವ ವಿದ್ಯಾರ್ಥಿಗಳು 4 ಮುಖಿ ಅಥವಾ 6 ಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಮಕ್ಕಳಿಗೆ ಏಕಮುಖಿ ರುದ್ರಾಕ್ಷಿ ಧರಿಸಲೇಬಾರದು, ಈ ರುದ್ರಾಕ್ಷಿಯನ್ನು ತಪಸ್ವಿಗಳಷ್ಟೇ ಧರಿಸುತ್ತಾರೆ.
* ರುದ್ರಾಕ್ಷಿ ಧರಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿ.
* ರುದ್ರಾಕ್ಷಿಯನ್ನು ಬೇರೆಯವರಿಂದ ಪಡೆದಿರಬಾರದು ಅಥವಾ ಸಾಲ ಮಾಡಿ ತೆಗೆದಿರಬಾರದು.
ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು
ಕೆಲವರು ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸುತ್ತಾರೆ. ಆದರೆ ರುದ್ರಾಕ್ಷಿಯನ್ನು ಕಪ್ಪು ದಾರದಲ್ಲಿ ಧರಿಸಬಾರದು. ರುದ್ರಾಕ್ಷಿಯನ್ನು ಕೆಂಪು ಅಥವಾ ಅರಿಶಿಣ ದಾರದಲ್ಲಿ ಧರಿಸಬೇಕು.
* ಒಡೆದ ರುದ್ರಾಕ್ಷಿ ಧರಿಸಬಾರದು
ರುದ್ರಾಕ್ಷಿ ಒಡೆದು ಹೋಗಿದ್ದರೆ ಅದನ್ನು ಬದಲಾಯಿಸಬೇಕು.
ಮನೆಯಲ್ಲಿ ಈ ರೀತಿಯಾದಾಗ ಧರಿಸಬಾರದು
* ಮನೆಯಲ್ಲಿ ಮಗುವಿನ ಜನನವಾದರೆ ಧರಿಸಬಾರದು
* ಮನೆಯಲ್ಲಿ ಸಾವಾದರೆ ಅಥವಾ ಸಾವಿಗೆ ಹೋಗುವಾಗ ಧರಿಸಬಾರದು
* ರುದ್ರಾಕ್ಷಿ ಧರಿಸಿ ಮಾಂಸಾಹಾರ ಸೇವಿಸಬಾರದು.
ತುಂಬಾ ಚಿಕ್ಕ ಮಕ್ಕಳಿಗೆ ಧರಿಸಬೇಡಿ
ರುದ್ರಾಕ್ಷಿಯನ್ನು ಸ್ವಲ್ಪ ತಿಳುವಳಿಕೆ ಬಂದ ಮೇಲೆ ಮಕ್ಕಲಿಗೆ ಧರಿಸಬೇಕು, ಆವಾಗ ಅವರು ರುದ್ರಾಕ್ಷಿ ನಿಯಮಗಳನ್ನು ಚೆನ್ನಾಗಿ ಅನುಸರಿಸುತ್ತಾರೆ.



Click it and Unblock the Notifications