Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಮೇ.31 ನಿರ್ಜಲ ಏಕಾದಶಿಯಂದು ಈ ಪರಿಹಾರ ಮಾಡಿದರೆ ಸಂಪತ್ತು ವೃದ್ಧಿಸುವುದು
24 ಏಕಾದಶಿಗಳಲ್ಲಿ ನಿರ್ಜಲ ಏಕಾದಶಿ ಅತ್ಯಂತ ಮಹತ್ವದ ಏಕಾದಶಿ ಎಂದು ಪರಿಗಣಿಸಲಾಗಿದೆ. ಉಳಿದ 23 ಏಕಾದಶಿಗಳ ಫಲವನ್ನು ಈ ಒಂದು ಏಕಾದಶಿ ಆಚರಿಸುವುದರಿಂದ ಪಡೆಯಬಹುದು. ನಿರ್ಜಲ ಏಕಾದಶಿ ಅತ್ಯಂತ ಕಠಿಣವಾದ ಏಕಾದಶಿ ವ್ರತವಾಗಿದೆ. ಒಂದು ತೊಟ್ಟು ನೀರು ಕೂಡ ಸೇವಿಸಿದೆ ಈ ಏಕಾದಶಿ ವ್ರತವನ್ನು ಆಚರಿಸಲಾಗುವುದು. ಈ ವರ್ಷ ನಿರ್ಜಲ ಏಕಾದಶಿಯನ್ನು ಮೇ 31ಕ್ಕೆ ಆಚರಿಸಲಾಗುವುದು.
ನಿರ್ಜಲ ಏಕಾದಶಿಯಂದು ವ್ರತ ನಿಯಮಗಳನ್ನು ಪಾಲಿಸಿ ಶ್ರೀವಿಷ್ಣುವಿನ ಆರಾಧನೆ ಮಾಡುವುದರ ಜೊತೆಗೆ ಈ ದಿನ ಕೆಲವು ಕಾರ್ಯಗಳನ್ನು ಮಾಡಿದರೆ ಲಕ್ಷ್ಮಿ ಒಲಿಯುತ್ತಾಳೆ, ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗುವಿರಿ. ಈ ದಿನ ಮಾಡುವ ದಾನಕ್ಕೂ ತುಂಬಾನೇ ಮಹತ್ವವಿದೆ.ಆದ್ದರಿಂದ ಈ ಪವಿತ್ರವಾದ ದಿನ ಭಕ್ತರು ಈ ಕಾರ್ಯಗಳನ್ನು ಮಾಡಿದರೆ ಹೆಚ್ಚಿನ ಫಲ ಪಡೆಯಬಹುದು:

ಆಲದ ಮರವನ್ನು ಪೂಜಿಸಿ
ನಿರ್ಜಲ ಏಕಾದಶಿಯಂದು ಆಲದ ಮರವನ್ನು ಪೂಜಿಸುವುದರಿಂದ ಲಕ್ಷ್ಮಿ ಕೃಪೆಗ ಪಾತ್ರರಾಗಬಹುದು. ಈ ದಿನ ಆಲದ ಮರದ ಬುಡಕ್ಕೆ ಹಾಲು ಬೆರೆಸಿದ ನೀರನ್ನು ಹಾಕಿ, ದೀಪವನ್ನು ಹಚ್ಚಿ ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ, ನಿಮ್ಮ ಮನೆಯಲ್ಲಿ ಲಕ್ಷ್ಮಿಯೂ ನೆಲೆಸುತ್ತಾಳೆ.
ಗೋ ಪೂಜೆ
ನಿರ್ಜಲ ಏಕಾದಶಿಯ ಸಂ ದಿನದಂದು ಗೋ ಪೂಜೆ ಮಾಡಲಾಗುವುದು. ಲಕ್ಷ್ಮಿ ದೇವಿಯನ್ನು ಪೂಜಿಸಿ ನಂತರ ಗೋ ಪೂಜೆ ಮಾಡಿದರೆ ತುಂಬಾನೇ ಶುಭ ಫಲ ದೊರೆಯಲಿದೆ. ಈ ದಿನ ಏಳು ನಾಣ್ಯಗಳನ್ನು ಹಳದಿ ಬಟ್ಟೆಯಲ್ಲಿ ಏಳು ಗಂಟುಗಳ ಅರಿಶಿನದೊಂದಿಗೆ ಸುತ್ತಿ ಮಾತೆ ಲಕ್ಷ್ಮಿಯನ್ನು ಪೂಜಿಸಿ, ಪೂಜೆಯ ನಂತರ ಹಳದಿ ಬಟ್ಟೆಯನ್ನು ನಿಮ್ಮ ಕಪಾಟಿನಲ್ಲಿ ಇಡುವುದರಿಂದ ಆರ್ಥಿಕ ಸಂಕಷ್ಟ ದೂರಾಗಿ ಸಂಪತ್ತು ವೃದ್ಧಿಸುವುದು.
ಈ ಮಂತ್ರ 5 ಬಾರಿ ಪಠಿಸಿ
ನಿರ್ಜಲ ಏಕಾದಶಿಯ ದಿನದಂದು, ಬೆಳಿಗ್ಗೆ ಮೊದಲು ಎದ್ದು ಈ ಮಂತ್ರವನ್ನು ನಿಮ್ಮ ಎರಡೂ ಕೈಗಳನ್ನು ಜೋಡಿಸಿ ಅಂಗೈಗಳನ್ನು ನೋಡುತ್ತಾ 5 ಬಾರಿ ಜಪಿಸಿ.
ಮಂತ್ರ
ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ; ಕರಮೂಲೇತು ಗೋವಿಂದ ಪ್ರಭಾತೇ ಕರದರ್ಶನಂ
ಅರ್ಥ
ನಮ್ಮ ಕೈಯಿನ ಅಗ್ರಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ, ಮಧ್ಯದಲ್ಲಿ ಸರಸ್ವತಿ ವಾಸಿಸುತ್ತಾಳೆ ಹಾಗೂ ಮೂಲಭಾಗದಲ್ಲಿ ಗೋವಿಂದ ವಾಸಿಸುತ್ತಾನೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೇ ಅಂಗೈ ನೋಡಿ ಈ ಮಂತ್ರಗಳನ್ನು ಹೇಳುವುದರಿಂದ ಈ ಮೂರು ದೇವರುಗಳ ಆಶೀರ್ವಾದ ಸಿಗುವುದು.
ಲಕ್ಷ್ಮಿ: ನಮಗೆ ಸಂಪತ್ತನ್ನು ನೀಡುತ್ತಾಳೆ
ಸರಸ್ವತಿ: ಜ್ಞಾನವನ್ನು ನೀಡುತ್ತಾಳೆ
ಗೋವಿಂದ: ಈ ಸೃಷ್ಟಿಯನ್ನು ನಡೆಸುವ ಶಕ್ತಿಗೆ ನಮಸ್ಕರಿಸಿದರೆ ನಮಗೆ ಒಳಿತಾಗುವುದು.
ಶ್ರೀ ವಿಷ್ಣುವಿಗೆ ತುಳಸಿ ಅರ್ಪಿಸಿ
ತುಳಸಿಯು ಭಗವಾನ್ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಮತ್ತು ಈ ದಿನದಂದು ತುಳಸಿಯನ್ನು ಪೂಜಿಸುವುದರಿಂದ ತಾಯಿ ಲಕ್ಷ್ಮಿ ಕೂಡ ಸಂತೋಷಪಡುತ್ತಾರೆ. ನಿರ್ಜಲ ಏಕಾದಶಿಯಂದು ಬೆಳಿಗ್ಗೆ ಸ್ನಾನ ಮಾಡಿದ ನಂತರ, ತುಳಸಿ ಬೇರಿಗೆ ಹಸಿ ಹಾಲನ್ನು ಹಾಕಬೇಕು. ಹೀಗೆ ತುಳಸಿಗೆ ಪೂಜೆ ಮಾಡಿದರೆ ಶ್ರೀ ವಿಷ್ಣು ಹಾಗೂ ಲಕ್ಷ್ಮಿ ಕೃಪೆಗೆ ಪಾತ್ರರಾಗುವಿರಿ, ಇದರಿಂದ ಸಂಕಷ್ಟಗಳು ದೂರಾಗುವುದು. ನಿಮ್ಮ ಸಂಪತ್ತು ವೃದ್ಧಿಸುವುದು
ದಾನದ ಮಹತ್ವ
* ನಿರ್ಜಲ ಏಕಾದಶಿಯಂದು ಜಲದಾನ ಮಾಡುವುದನ್ನು ಮಹಾದಾನವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಲವರು ಪಾನೀಯ ತಯಾರಿಸಿ ದಾನ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಚಂದ್ರದೋಷವಿದ್ದರೆ ದೂರಾಗುವುದು.
* ನಿಮ್ಮ ಶಕ್ತಿಗೆ ತಕ್ಕಂತೆ ದಾನ ಮಾಡಿ: ಈ ದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಹೆಚ್ಚಿನ ಫಲ ಪಡೆಯುವಿರಿ.
* ಬ್ರಾಹ್ಮಣರಿಗೆ ಹಣ್ಣು, ಹಂಪಲು, ವಸ್ತ್ರ ದಾನ ಮಾಡಿ.
ಈ ದಿನ ಮಾಡುವ ದಾನದಿಂದ ನಿಮ್ಮ ಪುಣ್ಯಫಲ ಹೆಚ್ಚಾಗುವುದು.



Click it and Unblock the Notifications