ಮಂಗಳಗೌರಿ ವ್ರತ: ಮದುವೆ ವಿಳಂಬ, ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ ಈ ಪರಿಹಾರ ಮಾಡಿ

ಶ್ರಾವಣ ಮಾಸದ ಮಂಗಳವಾರ ಮಂಗಳ ಗೌರಿ ವ್ರತವನ್ನು ಮಾಡಿ ತಾಯಿ ಪಾರ್ವತಿಯನ್ನು ಆರಾಧಿಸಲಾಗುವುದು, ಈ ದಿನ ವಿವಾಹಿತ ಮಹಿಳೆಯರು ಮುತ್ತೈದೆ ಭಾಗ್ಯಕ್ಕಾಗಿ ಪೂಜೆ ಮಾಡಿದರೆ ಮದುವೆ ವಿಳಂಬವಾಗುತ್ತಿರುವವರು ಮಂಗಳ ದೋಷ ನಿವಾರಣೆಗೆ ಪೂಜೆಯನ್ನು ಮಾಡಲಾಗುವುದು, ಕುಂಡಲಿಯಲ್ಲಿ ಮಂಗಳ ದೋಷ ಹೇಗೆ ಉಂಟಾಗುತ್ತದೆ, ಮಂಗಳ ದೋಷದ ಪ್ರಭಾವವೇನು? ಶ್ರಾವಣ ಮಂಗಳವಾರ ಯಾವೆಲ್ಲಾ ಪರಿಹಾರ ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

Mangala Gauri Vrat

ಕುಂಡಲಿಯಲ್ಲಿ ಮಂಗಳ ದೋಷ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಜಾತಕದ ಮೊದಲ, ನಾಲ್ಕನೇ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಸ್ಥಿತಗೊಂಡಾಗ ಮಂಗಳ ದೋಷ ಉಂಟಾಗುವುದು. ಇದರಿಂದ ವೈವಾಹಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ತರುತ್ತದೆ, ಮಂಗಳವು ದುರ್ಬಲ ಸ್ಥಾನದಲ್ಲಿದ್ದರೆ ವಿವಾಹ ಯೋಗ ಕೂಡಿ ಬರುವುದಿಲ್ಲ, ಬರುವ ಸಂಬಂಧಗಳು ಒಂದೆಲ್ಲಾ ಒಂದು ಕಾರಣದಿಂದ ತಪ್ಪಿ ಹೋಗುವುದು.

ಮಂಗಳ ದೋಷದ ಪ್ರಭಾವ
ಮಂಗಳ ದೋಷವಿದ್ದರೆ ಮದುವೆ ವಿಳಂಬವಾಗುವುದು, . ಮದುವೆ ಮುರಿದು ಬೀಳುತ್ತದೆ, ಮದುವೆಯಾದರೂ ಜೀವನ ಸಂಗಾತಿಯೊಂದಿಗೆ ಹೊಂದಾಣಿಕೆ ಇರುವುದಿಲ್ಲ. ಜಾತಕದ ಏಳನೇ ಮನೆಯನ್ನು ಮದುವೆ ಅಥವಾ ವೈವಾಹಿಕ ಜೀವನವೆಂದು ಪರಿಗಣಿಸುವುದು, ಇದರಲ್ಲಿ ಮಂಗಳವಿದ್ದರೆ ಈ ಬಗೆಯ ಸಮಸ್ಯೆಗಳು ಉಂಟಾಗುವುದು. ಮಂಗಳನ ಈ ಸ್ಥಾನವು ಗಂಡ ಮತ್ತು ಹೆಂಡತಿಯ ನಡುವೆ ಘರ್ಷಣೆ, ಉದ್ವೇಗ, ಜಗಳ ಮತ್ತು ವಿಚ್ಛೇದನ ಇತ್ಯಾದಿಗಳನ್ನು ಉಂಟುಮಾಡುತ್ತದೆ. ಇದಲ್ಲದೆ, ವ್ಯಕ್ತಿಯ ಮೇಲೆ ಸಾಲದ ಹೊರೆ ಹೆಚ್ಚಾಗುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುವುದು.

ಮಂಗಳ ಗೌರಿ ವ್ರತದ ಸಮಯದಲ್ಲಿ ಯಾವ ಪರಿಹಾರ ಮಾಡಿದರೆ ಒಳ್ಳೆಯದು
ಮಂಗಳಗೌರಿ ವ್ರತದ ದಿನದಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಗೌರಿಯನ್ನು ಪೂಜಿಸಬೇಕು. ಅವರಿಗೆ 16 ಅಲಂಕಾರಿಕ ವಸ್ತುಗಳನ್ನು ದೇವಿಗೆ ಅರ್ಪಿಸಿ ಪೂಜಿಸಬೇಕು, ನಂತರ ಮುತ್ತೈದೆಯರಿಗೆ ತಾಂಬೂಲ ನೀಡಬೇಕು. ಈ ದಿನ ಮಂಗಳ ಗೌರಿ ವ್ರತವನ್ನು ಕೇಳಬೇಕು. ಹೀಗೆ ಮಾಡುವುದರಿಂದ ಮಂಗಳಗೌರಿಯ ಆಶೀರ್ವಾದ ಸಿಗುವುದು, ವಿವಾಹ ಭಾಗ್ಯ, ವೈವಾಹಿಕ ಜೀವನದಲ್ಲಿ ನೆಮ್ಮದಿ ಎಲ್ಲವೂ ಸಿಗಲಿದೆ.

ಶ್ರೀ ಮಂಗಳ ಗೌರಿ ಮಂತ್ರ "ಓಂ ಗೌರಿ ಶಂಕರಾಯ ನಮಃ" 108 ಬಾರಿ ಪಠಿಸಿ. ಇದರಿಂದ ಮಂಗಳಗೌರಿಯ ಆಶೀರ್ವಾದ ದೊರೆಯುತ್ತದೆ ಹಾಗೂ ಮದುವೆಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

ಶ್ರಾವಣ ಮಾಸದ ಮಂಗಳವಾರದಂದು ರಾಮಚರಿತಮಾನಸದ ಸುಂದರಕಾಂಡವನ್ನು ಪಠಿಸಿ. ಹನುಮಾನ್ ಜಿಯವರ ಆಶೀರ್ವಾದದಿಂದ, ಮಂಗಳ ದೋಷವು ನಿವಾರಣೆಯಾಗುತ್ತದೆ , ಇದರಿಂದಾಗಿ ವಿವಾಹ ಭಾಗ್ಯ ಕೂಡಿ ಬರಲಿದೆ.

ಅಶುಭ ಮಂಗಳ ಸ್ಥಾನವು ನಿಮ್ಮನ್ನು ತೊಂದರೆಗೊಳಿಸುತ್ತಿದ್ದರೆ ಶ್ರಾವಣ ಮಾಸದ ಮಂಗಳವಾರ ಮಂಗಳಗೌರಿ ಮತ್ತು ಹನುಮಂತನ್ನು ಪೂಜಿಸಿ. ಹನುಮಂತನಿಗೆ ಸಿಂಧೂರ ಅರ್ಪಿಸಿ, ನಂತರ ಆ ಸಿಂಧೂರವನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮಂಗಳದೋಷದಿಂದ ಮುಕ್ತಿ ಪಡೆಯಬಹುದು.

English summary

Remedies For Mangala Dosha On Shravan Mangalvar In Kannada

Mangala Gauri Vrat: If you have mangala dosha do these remedies on Shravan Mangalavar, read on
X
Desktop Bottom Promotion