Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
24 ಏಕಾದಶಿಗಳಲ್ಲಿಯೇ ನಿರ್ಜಲ ಏಕಾದಶಿ ತುಂಬಾನೇ ಮಹತ್ವವಾದದ್ದು, ಏಕೆ? ಇದನ್ನು ಮೇ 30ಕ್ಕೆ ಆಚರಿಸುವುದಾ ಅಥವಾ 31ಕ್ಕಾ?
ಸನಾತನ ಧರ್ಮದಲ್ಲಿ ಏಕಾದಶಿ ಆಚರಣೆಗೆ ತುಂಬಾನೇ ಮಹತ್ವವಿದೆ. ವರ್ಷದಲ್ಲಿ 24 ಏಕಾದಶಿ ಬರುತ್ತದೆ. ತಿಂಗಳಿನಲ್ಲಿ ಎರಡು ಏಕಾದಶಿ ಬರುವುದು, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಜ್ಯೇಷ್ಠ ಮಾಸದ ಶುಕ್ಲ ಏಕಾದಶಿಯಂದು ನಿರ್ಜಲ ಏಕಾದಶಿಯನ್ನು ಆಚರಿಸಲಾಗುವುದು.
ಏಕಾದಶಿ ತಿಥಿ ಮೇ 30ಕ್ಕೆ ಪ್ರಾರಂಭವಾಗುವುದು. ಆದ್ದರಿಂದ ಏಕಾದಶಿ ಯಾವಾಗ ಆಚರಿಸಲಾಗುವುದು? ಪೂಜಾ ಮುಹೂರ್ತ, ಪಾರಣ ಸಮಯ, ಪೂಜಾ ವಿಧಿ ಮುಂತಾದ ಮಾಹಿತಿ ತಿಳಿಯೋಣ:

ಮೊದಲಿಗೆ ನಿರ್ಲಜ ಏಕಾದಶಿ ಮಹತ್ವ ನೋಡುವುದಾದರೆ
ಈ ದಿನ ಒಂದು ತೊಟ್ಟು ನೀರು ಕೂಡ ಸೇವಿಸದೆ ಉಪವಾಸವಿದ್ದು ಏಕಾದಶಿಯನ್ನು ಆಚರಿಸಲಾಗುವುದು. ಯಾರು ಈ ಏಕಾದಶಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೋ ಅವರು ಸಕಲ ಪಾಪಗಳಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು. ಈ ದಿನ ಶ್ರೀವಿಷ್ಣುವಿನ ಆರಾಧನೆ ಮಾಡುವುದರಿಂದ ಜೀವನದಲ್ಲಿರುವ ಕಷ್ಟಗಳು ದೂರಾಗುವುದು. ವೃತ್ತಿ ಬದುಕು, ಕೌಟುಂಬಿಕ ಬದುಕು, ವ್ಯವಹಾರದಲ್ಲಿರುವ ಸಮಸ್ಯೆಗಳು ದೂರಾಗುವುದು ಎಂಬುವುದು ವಿಷ್ಣುವಿನ ಭಕ್ತರ ಅಚಲ ನಂಬಿಕೆ. ಯಾರು ಏಕಾದಶಿ ವ್ರತವನ್ನು ಆಚರಿಸುತ್ತಾರೋ ಅವರಿಗೆ ಬದುಕಿನಲ್ಲಿ ತುಂಬಾ ಒಳಿತಾಗುವುದು.
ಈ ಸಾಲಿನಲ್ಲಿ ನಿರ್ಜಲ ಏಕಾದಶಿ ಯಾವಾಗ ಆಚರಿಸಲಾಗುವುದು?
2023 ರಲ್ಲಿ ನಿರ್ಜಲ ಏಕಾದಶಿಯನ್ನು ಮೇ 31ಕ್ಕೆ ಆಚರಿಸಲಾಗುವುದು.
ಏಕಾದಶಿ ತಿಥಿ ಪ್ರಾರಂಭ: ಮೇ 30ಕ್ಕೆ ಮಧ್ಯಾಹ್ನ 01.07ರಿಂದ
ಏಕಾದಶಿ ತಿಥಿ ಮುಕ್ತಾ : ಮೇ 31 ಮಧ್ಯಾಹ್ನ 01:45ಕ್ಕೆ
ಪಾರಣ ಸಮಯ: ಜುಲೈ 1 ಬೆಳಗ್ಗೆ 05:24ರಿಂದ 08:10ರವರೆಗೆ
24 ಏಕಾದಶಿಯ ಫಲ ಇದೊಂದು ಏಕಾದಶಿ ವ್ರತದಿಂದ ಸಿಗಲಿದೆ
* ನಿರ್ಜಲ ಏಕಾದಶಿಯನ್ನು ಅತ್ಯಂತ ಪವರ್ಫುಲ್ ಏಕಾದಶಿಯೆಂದು ಪರಿಗಣಿಸಲಾಗಿದೆ.
* ಯಾರು ಈ ದಿನ ಒಂದು ಹನಿ ನೀರು ಸೇವಿಸದೆ ಉಪವಾಸವಿದ್ದು ಶ್ರೀ ವಿಷ್ಣುವಿನ ಪೂಜೆ ಮಾಡುತ್ತಾರೋ ಅವರಿಗೆ ಉಳಿದೆಲ್ಲಾ ಏಕಾದಶಿ ಆಚರಣೆ ಮಾಡಿದಷ್ಟು ಫಲ ಸಿಗಲಿದೆ.
* ಈ ಏಕಾದಶಿಯನ್ನು ಅತ್ಯಂತ ಕಠಿಣ ಏಕಾದಶಿಯಂದು ಪರಿಗಣಿಸಲಾಗಿದೆ.
* ಯಾರು ದೀರ್ಘಾವಧಿ ಉಪವಾಸ ಮಾಡುವ ಸಾಮರ್ಥ್ಯ ಹೊಂದಿರುತ್ತಾರೋ ಅವರಷ್ಟೇ ಈ ಏಕಾದಶಿ ಆಚರಿಸಬಹುದು.
ನಿರ್ಜಲ ಏಕಾದಶಿಯನ್ನು ಆಚರಿಸುವುದರಿಂದ ದೊರೆಯುವ ಪ್ರಯೋಜನಗಳು
* ಈ ಏಕಾದಶಿ ಮಾಡುವುದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದಿಂದ ಕೂಡ ಮೋಕ್ಷ ಸಿಗುವುದು.
* ಯಾರು ಈ ಏಕಾದಶಿಯನ್ನು ಆಚರಿಸುತ್ತಾರೋ ಅವರಿಗೆ ಮೋಕ್ಷ ಸಿಗಲಿದೆ.
* ಶ್ರೀವಿಷ್ಣುವಿಗೆ ತುಪ್ಪದ ದೀಪವನ್ನು ಹಚ್ಚಿ ಈ ದಿನ ವ್ರತವನ್ನು ಮಾಡಲಾಗುವುದು.
* ಶ್ರೀವಿಷ್ಣುವಿಗೆ ಹೂ, ಹಣ್ಣುಗಳು, ಧೂಪದ್ರವ್ಯ, ನೈವೇದ್ಯ, ತುಳಸಿ, ವೀಳ್ಯೆದೆಲೆ ಅರ್ಪಿಸಿ ಪೂಜೆಯನ್ನು ಮಾಡಲಾಗುವುದು.
* ಈ ದಿನ ಮಾಡುವ ದಾನ ಧರ್ಮಕ್ಕೆ ತುಂಬಾನೇ ಮಹತ್ವವಿದೆ. ಈ ದಿನ ನೀವು ದಾನ ಧರ್ಮ ಮಾಡಿದರೆ ಅಧಿಕ ಪ್ರಯೊಜನ ಸಿಗಲಿದೆ.
ಪೌರಾಣಿಕ ಹಿನ್ನೆಲೆ
ದ್ವಾಪರ ಯುಗದಲ್ಲಿ ಮಹರ್ಷಿ ವ್ಯಾಸಜಿಯವರು ನಿರ್ಜಲ ಏಕಾದಶಿಯ ಮಹತ್ವವನ್ನು ಪಾಂಡವರಿಗೆ ವಿವರಿಸಿ ಈ ಏಕಾದಶಿಯ ಮಹತ್ವದ ಬಗ್ಗೆ ಹೇಳುತ್ತಾರೆ. ವೇದವ್ಯಾಸರು ಧರ್ಮ, ಅರ್ಥ, ಕೆಲಸ ಮತ್ತು ಮೋಕ್ಷವನ್ನು ನೀಡುವ ಏಕಾದಶಿ ಉಪವಾಸದ ಸಂಕಲ್ಪವನ್ನು ಮಾಡಿದಾಗ, ಕುಂತಿಯ ಮಗನಾದ ಭೀಮನು ಕೇಳಿದನು - 'ಓ ದೇವರೇ! ನನ್ನ ಹೊಟ್ಟೆಯಲ್ಲಿ ವೃಕ್ ಎಂಬ ಬೆಂಕಿ ಇದೆ, ಅದನ್ನು ಶಾಂತವಾಗಿಡಲು ನಾನು ದಿನಕ್ಕೆ ಹಲವಾರು ಬಾರಿ ತಿನ್ನಬೇಕು. ಹಾಗಾದರೆ ನನ್ನ ಹಸಿವಿನಿಂದ ನಾನು ಪವಿತ್ರ ಏಕಾದಶಿ ಉಪವಾಸದಿಂದ ವಂಚಿತನಾಗುತ್ತೇನೆಯೇ? ಎಂದು ಕೇಳುತ್ತಾನೆ.
ಆಗ ವ್ಯಾಸ ಜೀ ಹೇಳಿದರು - "ಓ ಕುಂತಿನಂದನ! ಇದು ಧರ್ಮದ ವಿಶೇಷತೆ ಎಂದರೆ ಅದು ಎಲ್ಲರನ್ನೂ ಒಳಗೊಳ್ಳುವುದು ಮಾತ್ರವಲ್ಲದೆ ಎಲ್ಲರಿಗೂ ಸೂಕ್ತವಾದ ಉಪವಾಸ ಮತ್ತು ನಿಯಮಗಳ ಸುಲಭ ಮತ್ತು ಹೊಂದಿಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತದೆ. ನೀವು ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ನಿರ್ಜಲ ಏಕಾದಶಿಯಂದು ಮಾತ್ರ ಉಪವಾಸ ಮಾಡಿದರೆ ಸಾಕು, ಇಡೀ 24 ಏಕಾದಶಿಯನ್ನು ಮಾಡಿದ ಫಲ ಸಿಗುವುದು ಎಂಬುವುದಾಗಿ ಹೇಳುತ್ತಾರೆ. ವರ್ಷದ ಇಪ್ಪತ್ತನಾಲ್ಕು ಏಕಾದಶಿಗಳ ಪುಣ್ಯಫಲಗಳನ್ನು ನೀಡುವ ಈ ಅತ್ಯುತ್ತಮ ನಿರ್ಜಲ ಏಕಾದಶಿಯನ್ನು ಭೀಮಸೇನಿ ಏಕಾದಶಿ ಅಥವಾ ಪಾಂಡವ ಏಕಾದಶಿ ಎಂದು ಹೆಸರಿಸಲಾಗಿದೆ. ಈ ದಿನದಂದು, "ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪಿಸುತ್ತಾ, ತೊಟ್ಟು ನೀರು ಸೇವಿಸದೆಇರುವ ವ್ಯಕ್ತಿಯು ಅನೇಕ ಜನ್ಮಗಳ ಪಾಪಗಳಿಂದ ಮುಕ್ತನಾಗುತ್ತಾನೆ.



Click it and Unblock the Notifications











