Latest Updates
-
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ?
ನವ ವಿವಾಹಿತರು ಮಂಗಳ ಗೌರಿ ವ್ರತ ಮಾಡಬೇಕು ಎಂದು ಹೇಳುವುದೇಕೆ?
ಶ್ರಾವಣ ಮಾಸದ ಸೋಮವಾರದಂತೆ ಪ್ರತಿ ಮಂಗಳವಾರ ಕೂಡ ತುಂಬಾನೇ ವಿಶೇಷವಾದದ್ದು, ಈ ದಿನ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಅದಿಕ ಮಾಸದಿಂದ ಮಂಗಳ ಗೌರಿ ವ್ರತ ಪ್ರಾರಂಭವಾಗಿದೆ. ನಿಜ ಶ್ರಾವಣ ಮಾಸದ ಮೊದಲ ಹಾಗೂ ಈ ವರ್ಷದ 6ನೇ ಮಂಗಳ ಗೌರಿ ವ್ರತವನ್ನು ಆಗಸ್ಟ್ 22ಕ್ಕೆ ಆಚರಿಸಲಾಗುವುದು.
ಮಂಗಳ ಗೌರಿ ವ್ರತವನ್ನು ಮದುವೆಯಾದ ಐದು ವರ್ಷದೊಳಗೆ ಆಚರಿಸಬೇಕು, ಮೊದಲ ಮಂಗಳ ಗೌರಿ ವ್ರತವನ್ನು ತಾಯಿ ಮನೆಯಲ್ಲಿ ನಂತರ ಗಂಡನ ಮನೆಯಲ್ಲಿ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಮದುವೆಯಾದ ಹೊಸತರಲ್ಲಿಯೇ ಮಂಗಳ ವ್ರತ ಮಾಡಬೇಕು ಏಕೆ ಎಂದು ನೋಡೋಣ ಬನ್ನಿ:

ಮಂಗಳ ಗೌರಿ ವ್ರತವನ್ನು ನವ ವಿವಾಹಿತರು ಆಚರಿಸುವುದರ ಹಿಂದಿರುವ ಕಾರಣವೇನು?
ನವ ವಿವಾಹಿತರು ತಾನು ಸೇರಿದ ಮನೆ ಚೆನ್ನಾಗಿರಬೇಕು, ಗಂಡನ ಆಯುಸ್ಸು ಹೆಚ್ಚಾಗ, ಸಂಪತ್ತು ವೃದ್ದಿಸಬೇಕು, ಸಂತಾನ ಭಾಗ್ಯ ದೊರೆಯಬೇಕೆಂದು ಮಂಗಳ ಗೌರಿ ವ್ರತವನ್ನು ಆಚರಿಸುತ್ತಾರೆ. ಇದರ ಮಹತ್ವವನ್ನು ಈ ಕತೆಯ ಮೂಲಕ ಹೇಳಲಾಗುವುದು:
ಮಹಿಷ್ಮತಿ ಎಂಬ ರಾಜ್ಯದಲ್ಲಿ ಜಯಪಾಲ ಎಂಬ ರಾಜನಿರುತ್ತಾರೆ. ಅವನಿಗೆ ಮಕ್ಕಳಿರುವುದಿಲ್ಲ, ಜಯಪಾಲ ಮತ್ತು ಆತನ ಪತ್ನಿ ಶಿವನನ್ನು ಪ್ರಾರ್ಥಿಸಿದಾಗ 16 ವರ್ಷ ಮಾತ್ರ ಆಯುಸ್ಸು ಇರುವ ಮಗನ ಜನನವಾಗುತ್ತದೆ ಅವನೇ ಶಿವಧರ್ಮ. ಅವನಿಗೆ ದೊಡ್ಡವನು ಆದಾಗ ತನ್ನಅಲ್ಪಾಯುಷ್ಯದ ಬಗ್ಗೆ ತಿಳಿಯುತ್ತದೆ, ಆತ ಕಾಶಿಯಾತ್ರೆ ಮಾಡಲು ತೀರ್ಮಾನಿಸಿ ತನ್ನ ಸೋದರ ಮಾವನ ಜೊತೆ ಕಾಶಿಯಾತ್ರೆಗೆ ಹೊರಡುತ್ತಾನೆ.
ಈತ ಹೀಗೆ ಹೋಗುವಾಗ ಪ್ರತಿಷ್ಠಾಪುರ ಎಂಬ ನಗರದ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಲ್ಲಿಯ ರಾಜನಿಗೆ ಅಶರೀರವಾಣಿಯೊಂದು ನಿನ್ನ ಮಗಳನ್ನು ಶಿವಧರ್ಮನಿಗೆ ಕೊಟ್ಟು ಮದುವೆ ಮಾಡುವಂತೆ ಸೂಚಿಸುತ್ತದೆ. ಆತನ ಮಗಳು ಸುಶೀಲೆ, ತುಂಬಾನೇ ದೈವ ಭಕ್ತೆ, ಆಕೆ ಶಿವಧರ್ಮನ ಪತ್ನಿಯಾಗುತ್ತಾಳೆ. ಹೀಗಿರುವಾಗ ಸುಶೀಲೆಗೆ ಕನಸ್ಸಿನಲ್ಲಿ ಮಂಗಳ ಗೌರಿ ಪ್ರತ್ಯಕ್ಷವಾಗಿ ನಿನ್ನ ಪತಿಗೆ ಅಲ್ಪಾಯುಷ್ಯ, ಕರಿ ನಾಗರ ಹಾವೊಂದು ಕಚ್ಚಿ ಸಾಯಿಸುತ್ತದೆ, ನೀನು ನಿನ್ನ ಗಂಡನ ಪ್ರಾಣ ಉಳಿಸಲು ಪ್ರಯತ್ನಿಸು . ಸರ್ಪ ಬಂದಾಗ ಹಾಲಿರುವ ಕಲಶವನ್ನು ಅದರ ಮುಂದೆ ಹಿಡಿ, ಅವು ಅದರೊಳಗೆ ಹೋದಾಗ ಅದರ ಬಾಯಿ ಮುಚ್ಚಿ, ನಂತರ ನಾಳೆ ಅದನ್ನು ನಿನ್ನ ತಾಯಿಗೆ ಬಾಗಿನವಾಗಿ ಕೊಡುವಂತೆ ಸೂಚಿಸುತ್ತಾಳೆ.
ದೇವಿ ಕನಸ್ಸಿನಲ್ಲಿ ಸೂಚಿಸಿದಂತೆಯೇ ಎಲ್ಲವೂ ನಡೆಯುತ್ತದೆ, ಮಾರನೇಯ ದಿನ ಆ ಕಲಶವನ್ನು ನೋಡಿದಾಗ ಅದರೊಳಗೆ ಚಿನ್ನದ ಹಾರವಿರುತ್ತೆ, ಶಿವಧರ್ಮ ತನ್ನ ಕಾಶಿಯಾತ್ರೆ ಮುಗುಸಿಕೊಂಡು ಬರಲು ಹೊರಡುತ್ತಾನೆ, ಹೀಗೆ ಹೊರಡುವ ಮುನ್ನ ಪತ್ನಿಗೆ ಉಂಗುರವನ್ನು ಬಿಚ್ಚು ಕೊಟ್ಟು ಹೊರಡುತ್ತಾನೆ.. ಇದಾಗಿ 5 ವರ್ಷಗಳ ಬಳಿಕ ಕಾಶಿಯಾತ್ರೆ ಮಗುಸಿ ಬರುತ್ತಾನೆ. ಅಲ್ಲಿಯವರೆಗೆ ಸುಶೀಲ ಮಂಗಳ ಗೌರಿ ವ್ರತ ಆಲಸಿಉತ್ತಾರೆ. ನಂತರ ಅವರಬ್ಬರು ಸುಖ ಜೀವನ ನಡೆಸುತ್ತಾರೆ. ಹೀಗಾಗಿ ಗಂಡ ಆಯುಸ್ಸು ಹೆಚ್ಚುವಂತೆ ಕೋರಿ ಮಂಗಳ ಗೌರಿ ವ್ರತ ಮಾಡಲಾಗುವುದು.
ನಿಜ ಶ್ರಾವಣದಲ್ಲಿ ಮಂಗಳ ಗೌರಿಯನ್ನು ಈ ದಿನಾಂಕಗಳಲ್ಲಿ ಆಚರಿಸಲಾಗುವುದು
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12
ಈ ಮಂತ್ರ ಪಠಿಸಿ
ಓಂ ಉಮಾಮಹೇಶ್ವರಾಭ್ಯಂ ನಮಃ'
' ''ಓಂ ಪಾರ್ವತ್ಯೈ ನಮಃ''
ಓಂ ಗೌರ್ಯೇ ನಮಃ''
''ಓ ಸಾಂಬ ಶಿವಾಯ ನಮಃ''
''ಹೇ ಗೌರೀ ಶಂಕರಾರ್ಧಾಂಗೀ ಯಥಾ ತ್ವಂ ಶಂಕರ ಪ್ರಿಯಾ''
''ತಥಾ ಮಾಂ ಕುರೂ ಕಲ್ಯಾಣೀ, ಕಾಂತ ಕಾಂತಾಂ ಸುದುರ್ಲಭಾಂ''
''ಓಂ ಹ್ಲೀಂ ವಾಗ್ವಾದಿನೀ ಭಗವತೀ ಮಮಂ ಕಾರ್ಯ ಸಿದ್ಧಿ ಕುರೂ ಕುರೂ ಫಟ್ ಸ್ವಾಹಾ''



Click it and Unblock the Notifications











