Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ರೈಲು ಹಳಿಗೆ ಬಿದ್ದ ಅಂಧ ತಾಯಿಯ ಕಂದಮ್ಮ, ಆಕೆ ಪಾಲಿಗೆ ದೇವರಾದ ಆ ವ್ಯಕ್ತಿ!
ಒಂದು ಕ್ಷಣ ತಡವಾಗಿದ್ದರೂ ಎಂಥ ಘನಘೋರ ಘಟನೆ ನಡೆಯುತ್ತಿತ್ತು ಎಂದು ಊಹಿಸಲೂ ಭಯವಾಗುತ್ತೆ. ಅಂಧ ತಾಯಿಯ ಕೈಹಿಡಿದು ಬರುತ್ತಿದ್ದ ಮಗು ರೈಲ್ವೆ ಹಳಿಗೆ ಬಿದ್ದು ಬಿಡುತ್ತೆ, ಅಲ್ಲಿಂದ ಟ್ರೈನ್ ಬರ್ತಾ ಇರುತ್ತದೆ, ಅಲ್ಲಿಗೆ ಮಿಂಚಿನ ವೇಗದಲ್ಲಿ ಓಡಿ ಬರುವ ರೈಲ್ವೆ ಸಿಬ್ಬಂದಿ ಆ ಮಗು-ತಾಯಿಯ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಆಕೆ ಅಂಧೆ, ಪುಟ್ಟ ಮಗನಿದ್ದಾನೆ, ಆ ಮಗನೇ ಆಕೆಯ ಬದುಕಿನ ಕಣ್ಣುಗಳು, ಪೆನ್ನು ಮಾರಿ ಬದುಕಿ ಜೀವನ ಸಾಗಿಸುವ ಜೀವಗಳು, ರೈಲ್ವೆ ಫ್ಲಾಟ್ಫಾರಂನ ಮಗನ ಕೈಹಿಡಿದು ನಡೆಯುತ್ತಿದ್ದಳು. ಮಗನಿಗೆ 4-5 ವರ್ಷವಿರಬಹುದು. ಅವನ ಕೈ ಹಿಡಿದು ಎಲ್ಲಾ ಕಡೆ ಸಾಗುತ್ತಿದ್ದಳು, ಮಗ ಸ್ವಲ್ಪ ದೊಡ್ಡವನಾದ ಮೇಲೆ ಎಲ್ಲಾ ಕಡೆ ಹೋಗುವಾಗ ಮಗನ ಕೈ ಹಿಡದೇ ಹೋಗುತ್ತಿದ್ದಳು. ಅವನು ನನ್ನ ನಡೆಸಿಕೊಂಡು ಹೋಗುತ್ತಾನೆ ಎಂಬ ಧೈರ್ಯದಲ್ಲಿ ಹೋಗುತ್ತಿದ್ದಳು.

ಹೀಗೆ ರೈಲ್ವೆಫ್ಲಾಟ್ಫಾರಂ ಬಳಿ ನಡೆಯುವಾಗ ಮಗ ಅಚಾನಕ್ಕಾಗಿ ಸ್ಲಿಪ್ ಆಗಿ ಕೆಳಗೆ ಬೀಳುತ್ತಾನೆ. ತಾಯಿ ಮಗನಿಗಾಗಿ ತಡಕಾಡುತ್ತಿರುತ್ತಾಳೆ, ಅತ್ತ ಕಡೆಯಿಂದ ವೇಗವಾಗಿ ಟ್ರೈನ್ ಬರ್ತಾ ಇದೆ, ಮಗು ಬಿದ್ದಿದ್ದನ್ನು ನೋಡಿದ ರೈಲ್ವೆ ಸಿಬ್ಬಂದಿ ಓಡೋಡಿ ಬಂದಿ ಆ ಮಗುವನ್ನು ಎತ್ತಿ ಫ್ಲಾಟ್ಫಾರಂ ಬಿಟ್ಟು ತಾವೂ ಹತ್ತುತ್ತಾರೆ, ಇವೆಲ್ಲಾ ಕ್ಷಣಾರ್ಧದಲ್ಲಿ ನಡೆಯುತ್ತದೆ. ಒಂದು ಕ್ಷಣ ತಡವಾಗಿದ್ದರೂ ಮಗುವಿನ ಪ್ರಾಣ ಹೋಗುತ್ತಿತ್ತು, ಜೊತೆಗೆ ಆ ವ್ಯಕ್ತಿಯ ಪ್ರಾಣವೂ ಹೋಗುತ್ತಿತ್ತು, ಆದರೆ ಕಣ್ಣಿಲ್ಲದ ಆ ತಾಯಿ ಪಾಲಿಗೆ ದೇವರಾಗಿ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ ಆ ವ್ಯಕ್ತಿ.
ಮಗುವಿನ ಪ್ರಾಣವನ್ನು ರಕ್ಷಿಸಿದ ಆ ವ್ಯಕ್ತಿ ಹೆಸರು ಮಯೂರ್ ಶೆಲ್ಕೆ. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಧೈರ್ಯ ಮಾಡಿ ಮಗುವಿನ ರಕ್ಷಣೆ ಮಾಡಿದ್ದಕ್ಕೆ ಸೆಂಟ್ರಲ್ ರೈಲ್ವೆ ಮಯೂರ್ ಶೆಲ್ಕೆಯವರಿಗ 50 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲಿಯೂ ಆ ವ್ಯಕ್ತಿ ದೊಡ್ಡ ಮನಸ್ಸು ಮಾಡಿದ್ದಾರೆ. ಆ 50 ಸಾವಿರ ರುಪಾಯಿಯನ್ನು ಕೂಡ ಆ ಗುವಿನ ಶಿಕ್ಷಣಕ್ಕೆ ಅಂತ ಆ ಅಂಧ ತಾಯಿಗೆ ನೀಡಿದ್ದಾರೆ. ದೇವರು ಯಾವುದೋ ಒಂದು ರೂಪದಲ್ಲಿ ಬರುತ್ತಾರೆ ಎಂದು ಹೇಳಲಾಗುವುದು. ಆ ಅಂಧ ಮಹಿಳೆಯ ಪಾಲಿಗೆ ಮಯೂರ್ ಶೆಲ್ಕೆ ದೇವರಾಗಿದ್ದಾರೆ.
ತಾನು ಇಷ್ಟೆಲ್ಲಾ ಸಾಹಸ ಮಾಡಿ ಮಗುವಿನ ಪ್ರಾಣ ಉಳಿಸಿ, ತನಗೆ ಬಂದ ರಿವಾರ್ಡ್ ಅನ್ನು ಕೂಡ ಆ ಮಗುವಿಗೆ ನೀಡಿದ ಮಯೂರ್ ಶೆಲ್ಕ್ ತಮ್ಮ ಪಾಡಿಗೆ ತಾವಿದ್ದರು. ಮನೆಗೆ ಹೋಗಿ ತಾನು ಮಾಡಿದ ಕೆಲಸವನ್ನು ಕೊಚ್ಚಿಕೊಳ್ಳಲಿಲ್ಲ, ಈ ವೀಡಿಯೋ ವೈರಲ್ ಆದ ಮೇಲಷ್ಟೇ ಅವರ ಕುಟುಂಬಕ್ಕೆ ಈ ವಿಷಯ ತಿಳಿಯಿತು. ಮಾನವೀಯತೆ ಗುಣದಿಂದಾಗಿ ಎಲ್ಲರ ಮನಗೆದ್ದಿದ್ದಾರೆ ಮಯೂರ್ ಶೆಲ್ಕ್.
ಇದು 2021ರಲ್ಲಿ ನಡೆದ ಘಟನೆ, ಈ ವೀಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.



Click it and Unblock the Notifications