Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೈಲು ಹಳಿಗೆ ಬಿದ್ದ ಅಂಧ ತಾಯಿಯ ಕಂದಮ್ಮ, ಆಕೆ ಪಾಲಿಗೆ ದೇವರಾದ ಆ ವ್ಯಕ್ತಿ!
ಒಂದು ಕ್ಷಣ ತಡವಾಗಿದ್ದರೂ ಎಂಥ ಘನಘೋರ ಘಟನೆ ನಡೆಯುತ್ತಿತ್ತು ಎಂದು ಊಹಿಸಲೂ ಭಯವಾಗುತ್ತೆ. ಅಂಧ ತಾಯಿಯ ಕೈಹಿಡಿದು ಬರುತ್ತಿದ್ದ ಮಗು ರೈಲ್ವೆ ಹಳಿಗೆ ಬಿದ್ದು ಬಿಡುತ್ತೆ, ಅಲ್ಲಿಂದ ಟ್ರೈನ್ ಬರ್ತಾ ಇರುತ್ತದೆ, ಅಲ್ಲಿಗೆ ಮಿಂಚಿನ ವೇಗದಲ್ಲಿ ಓಡಿ ಬರುವ ರೈಲ್ವೆ ಸಿಬ್ಬಂದಿ ಆ ಮಗು-ತಾಯಿಯ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಆಕೆ ಅಂಧೆ, ಪುಟ್ಟ ಮಗನಿದ್ದಾನೆ, ಆ ಮಗನೇ ಆಕೆಯ ಬದುಕಿನ ಕಣ್ಣುಗಳು, ಪೆನ್ನು ಮಾರಿ ಬದುಕಿ ಜೀವನ ಸಾಗಿಸುವ ಜೀವಗಳು, ರೈಲ್ವೆ ಫ್ಲಾಟ್ಫಾರಂನ ಮಗನ ಕೈಹಿಡಿದು ನಡೆಯುತ್ತಿದ್ದಳು. ಮಗನಿಗೆ 4-5 ವರ್ಷವಿರಬಹುದು. ಅವನ ಕೈ ಹಿಡಿದು ಎಲ್ಲಾ ಕಡೆ ಸಾಗುತ್ತಿದ್ದಳು, ಮಗ ಸ್ವಲ್ಪ ದೊಡ್ಡವನಾದ ಮೇಲೆ ಎಲ್ಲಾ ಕಡೆ ಹೋಗುವಾಗ ಮಗನ ಕೈ ಹಿಡದೇ ಹೋಗುತ್ತಿದ್ದಳು. ಅವನು ನನ್ನ ನಡೆಸಿಕೊಂಡು ಹೋಗುತ್ತಾನೆ ಎಂಬ ಧೈರ್ಯದಲ್ಲಿ ಹೋಗುತ್ತಿದ್ದಳು.

ಹೀಗೆ ರೈಲ್ವೆಫ್ಲಾಟ್ಫಾರಂ ಬಳಿ ನಡೆಯುವಾಗ ಮಗ ಅಚಾನಕ್ಕಾಗಿ ಸ್ಲಿಪ್ ಆಗಿ ಕೆಳಗೆ ಬೀಳುತ್ತಾನೆ. ತಾಯಿ ಮಗನಿಗಾಗಿ ತಡಕಾಡುತ್ತಿರುತ್ತಾಳೆ, ಅತ್ತ ಕಡೆಯಿಂದ ವೇಗವಾಗಿ ಟ್ರೈನ್ ಬರ್ತಾ ಇದೆ, ಮಗು ಬಿದ್ದಿದ್ದನ್ನು ನೋಡಿದ ರೈಲ್ವೆ ಸಿಬ್ಬಂದಿ ಓಡೋಡಿ ಬಂದಿ ಆ ಮಗುವನ್ನು ಎತ್ತಿ ಫ್ಲಾಟ್ಫಾರಂ ಬಿಟ್ಟು ತಾವೂ ಹತ್ತುತ್ತಾರೆ, ಇವೆಲ್ಲಾ ಕ್ಷಣಾರ್ಧದಲ್ಲಿ ನಡೆಯುತ್ತದೆ. ಒಂದು ಕ್ಷಣ ತಡವಾಗಿದ್ದರೂ ಮಗುವಿನ ಪ್ರಾಣ ಹೋಗುತ್ತಿತ್ತು, ಜೊತೆಗೆ ಆ ವ್ಯಕ್ತಿಯ ಪ್ರಾಣವೂ ಹೋಗುತ್ತಿತ್ತು, ಆದರೆ ಕಣ್ಣಿಲ್ಲದ ಆ ತಾಯಿ ಪಾಲಿಗೆ ದೇವರಾಗಿ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ ಆ ವ್ಯಕ್ತಿ.
ಮಗುವಿನ ಪ್ರಾಣವನ್ನು ರಕ್ಷಿಸಿದ ಆ ವ್ಯಕ್ತಿ ಹೆಸರು ಮಯೂರ್ ಶೆಲ್ಕೆ. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಧೈರ್ಯ ಮಾಡಿ ಮಗುವಿನ ರಕ್ಷಣೆ ಮಾಡಿದ್ದಕ್ಕೆ ಸೆಂಟ್ರಲ್ ರೈಲ್ವೆ ಮಯೂರ್ ಶೆಲ್ಕೆಯವರಿಗ 50 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲಿಯೂ ಆ ವ್ಯಕ್ತಿ ದೊಡ್ಡ ಮನಸ್ಸು ಮಾಡಿದ್ದಾರೆ. ಆ 50 ಸಾವಿರ ರುಪಾಯಿಯನ್ನು ಕೂಡ ಆ ಗುವಿನ ಶಿಕ್ಷಣಕ್ಕೆ ಅಂತ ಆ ಅಂಧ ತಾಯಿಗೆ ನೀಡಿದ್ದಾರೆ. ದೇವರು ಯಾವುದೋ ಒಂದು ರೂಪದಲ್ಲಿ ಬರುತ್ತಾರೆ ಎಂದು ಹೇಳಲಾಗುವುದು. ಆ ಅಂಧ ಮಹಿಳೆಯ ಪಾಲಿಗೆ ಮಯೂರ್ ಶೆಲ್ಕೆ ದೇವರಾಗಿದ್ದಾರೆ.
ತಾನು ಇಷ್ಟೆಲ್ಲಾ ಸಾಹಸ ಮಾಡಿ ಮಗುವಿನ ಪ್ರಾಣ ಉಳಿಸಿ, ತನಗೆ ಬಂದ ರಿವಾರ್ಡ್ ಅನ್ನು ಕೂಡ ಆ ಮಗುವಿಗೆ ನೀಡಿದ ಮಯೂರ್ ಶೆಲ್ಕ್ ತಮ್ಮ ಪಾಡಿಗೆ ತಾವಿದ್ದರು. ಮನೆಗೆ ಹೋಗಿ ತಾನು ಮಾಡಿದ ಕೆಲಸವನ್ನು ಕೊಚ್ಚಿಕೊಳ್ಳಲಿಲ್ಲ, ಈ ವೀಡಿಯೋ ವೈರಲ್ ಆದ ಮೇಲಷ್ಟೇ ಅವರ ಕುಟುಂಬಕ್ಕೆ ಈ ವಿಷಯ ತಿಳಿಯಿತು. ಮಾನವೀಯತೆ ಗುಣದಿಂದಾಗಿ ಎಲ್ಲರ ಮನಗೆದ್ದಿದ್ದಾರೆ ಮಯೂರ್ ಶೆಲ್ಕ್.
ಇದು 2021ರಲ್ಲಿ ನಡೆದ ಘಟನೆ, ಈ ವೀಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.



Click it and Unblock the Notifications
