Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ರೈಲು ಹಳಿಗೆ ಬಿದ್ದ ಅಂಧ ತಾಯಿಯ ಕಂದಮ್ಮ, ಆಕೆ ಪಾಲಿಗೆ ದೇವರಾದ ಆ ವ್ಯಕ್ತಿ!
ಒಂದು ಕ್ಷಣ ತಡವಾಗಿದ್ದರೂ ಎಂಥ ಘನಘೋರ ಘಟನೆ ನಡೆಯುತ್ತಿತ್ತು ಎಂದು ಊಹಿಸಲೂ ಭಯವಾಗುತ್ತೆ. ಅಂಧ ತಾಯಿಯ ಕೈಹಿಡಿದು ಬರುತ್ತಿದ್ದ ಮಗು ರೈಲ್ವೆ ಹಳಿಗೆ ಬಿದ್ದು ಬಿಡುತ್ತೆ, ಅಲ್ಲಿಂದ ಟ್ರೈನ್ ಬರ್ತಾ ಇರುತ್ತದೆ, ಅಲ್ಲಿಗೆ ಮಿಂಚಿನ ವೇಗದಲ್ಲಿ ಓಡಿ ಬರುವ ರೈಲ್ವೆ ಸಿಬ್ಬಂದಿ ಆ ಮಗು-ತಾಯಿಯ ಪಾಲಿಗೆ ಸಾಕ್ಷಾತ್ ದೇವರಾಗಿದ್ದಾರೆ.
ಆಕೆ ಅಂಧೆ, ಪುಟ್ಟ ಮಗನಿದ್ದಾನೆ, ಆ ಮಗನೇ ಆಕೆಯ ಬದುಕಿನ ಕಣ್ಣುಗಳು, ಪೆನ್ನು ಮಾರಿ ಬದುಕಿ ಜೀವನ ಸಾಗಿಸುವ ಜೀವಗಳು, ರೈಲ್ವೆ ಫ್ಲಾಟ್ಫಾರಂನ ಮಗನ ಕೈಹಿಡಿದು ನಡೆಯುತ್ತಿದ್ದಳು. ಮಗನಿಗೆ 4-5 ವರ್ಷವಿರಬಹುದು. ಅವನ ಕೈ ಹಿಡಿದು ಎಲ್ಲಾ ಕಡೆ ಸಾಗುತ್ತಿದ್ದಳು, ಮಗ ಸ್ವಲ್ಪ ದೊಡ್ಡವನಾದ ಮೇಲೆ ಎಲ್ಲಾ ಕಡೆ ಹೋಗುವಾಗ ಮಗನ ಕೈ ಹಿಡದೇ ಹೋಗುತ್ತಿದ್ದಳು. ಅವನು ನನ್ನ ನಡೆಸಿಕೊಂಡು ಹೋಗುತ್ತಾನೆ ಎಂಬ ಧೈರ್ಯದಲ್ಲಿ ಹೋಗುತ್ತಿದ್ದಳು.

ಹೀಗೆ ರೈಲ್ವೆಫ್ಲಾಟ್ಫಾರಂ ಬಳಿ ನಡೆಯುವಾಗ ಮಗ ಅಚಾನಕ್ಕಾಗಿ ಸ್ಲಿಪ್ ಆಗಿ ಕೆಳಗೆ ಬೀಳುತ್ತಾನೆ. ತಾಯಿ ಮಗನಿಗಾಗಿ ತಡಕಾಡುತ್ತಿರುತ್ತಾಳೆ, ಅತ್ತ ಕಡೆಯಿಂದ ವೇಗವಾಗಿ ಟ್ರೈನ್ ಬರ್ತಾ ಇದೆ, ಮಗು ಬಿದ್ದಿದ್ದನ್ನು ನೋಡಿದ ರೈಲ್ವೆ ಸಿಬ್ಬಂದಿ ಓಡೋಡಿ ಬಂದಿ ಆ ಮಗುವನ್ನು ಎತ್ತಿ ಫ್ಲಾಟ್ಫಾರಂ ಬಿಟ್ಟು ತಾವೂ ಹತ್ತುತ್ತಾರೆ, ಇವೆಲ್ಲಾ ಕ್ಷಣಾರ್ಧದಲ್ಲಿ ನಡೆಯುತ್ತದೆ. ಒಂದು ಕ್ಷಣ ತಡವಾಗಿದ್ದರೂ ಮಗುವಿನ ಪ್ರಾಣ ಹೋಗುತ್ತಿತ್ತು, ಜೊತೆಗೆ ಆ ವ್ಯಕ್ತಿಯ ಪ್ರಾಣವೂ ಹೋಗುತ್ತಿತ್ತು, ಆದರೆ ಕಣ್ಣಿಲ್ಲದ ಆ ತಾಯಿ ಪಾಲಿಗೆ ದೇವರಾಗಿ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ ಆ ವ್ಯಕ್ತಿ.
ಮಗುವಿನ ಪ್ರಾಣವನ್ನು ರಕ್ಷಿಸಿದ ಆ ವ್ಯಕ್ತಿ ಹೆಸರು ಮಯೂರ್ ಶೆಲ್ಕೆ. ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಧೈರ್ಯ ಮಾಡಿ ಮಗುವಿನ ರಕ್ಷಣೆ ಮಾಡಿದ್ದಕ್ಕೆ ಸೆಂಟ್ರಲ್ ರೈಲ್ವೆ ಮಯೂರ್ ಶೆಲ್ಕೆಯವರಿಗ 50 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲಿಯೂ ಆ ವ್ಯಕ್ತಿ ದೊಡ್ಡ ಮನಸ್ಸು ಮಾಡಿದ್ದಾರೆ. ಆ 50 ಸಾವಿರ ರುಪಾಯಿಯನ್ನು ಕೂಡ ಆ ಗುವಿನ ಶಿಕ್ಷಣಕ್ಕೆ ಅಂತ ಆ ಅಂಧ ತಾಯಿಗೆ ನೀಡಿದ್ದಾರೆ. ದೇವರು ಯಾವುದೋ ಒಂದು ರೂಪದಲ್ಲಿ ಬರುತ್ತಾರೆ ಎಂದು ಹೇಳಲಾಗುವುದು. ಆ ಅಂಧ ಮಹಿಳೆಯ ಪಾಲಿಗೆ ಮಯೂರ್ ಶೆಲ್ಕೆ ದೇವರಾಗಿದ್ದಾರೆ.
ತಾನು ಇಷ್ಟೆಲ್ಲಾ ಸಾಹಸ ಮಾಡಿ ಮಗುವಿನ ಪ್ರಾಣ ಉಳಿಸಿ, ತನಗೆ ಬಂದ ರಿವಾರ್ಡ್ ಅನ್ನು ಕೂಡ ಆ ಮಗುವಿಗೆ ನೀಡಿದ ಮಯೂರ್ ಶೆಲ್ಕ್ ತಮ್ಮ ಪಾಡಿಗೆ ತಾವಿದ್ದರು. ಮನೆಗೆ ಹೋಗಿ ತಾನು ಮಾಡಿದ ಕೆಲಸವನ್ನು ಕೊಚ್ಚಿಕೊಳ್ಳಲಿಲ್ಲ, ಈ ವೀಡಿಯೋ ವೈರಲ್ ಆದ ಮೇಲಷ್ಟೇ ಅವರ ಕುಟುಂಬಕ್ಕೆ ಈ ವಿಷಯ ತಿಳಿಯಿತು. ಮಾನವೀಯತೆ ಗುಣದಿಂದಾಗಿ ಎಲ್ಲರ ಮನಗೆದ್ದಿದ್ದಾರೆ ಮಯೂರ್ ಶೆಲ್ಕ್.
ಇದು 2021ರಲ್ಲಿ ನಡೆದ ಘಟನೆ, ಈ ವೀಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.



Click it and Unblock the Notifications