ರಾತ್ರಿ ಶ್ರೀ ಕೃಷ್ಣನ ಪೂಜೆಗೆ ಅಗತ್ಯವಾಗಿ ಬೇಕಾದ ವಸ್ತುಗಳಿವು!

ಈ ವರ್ಷ ಸೆಪ್ಟೆಂಬರ್ 6 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 6 ರಂದು ಆಚರಿಸಿದರೆ, ವೈಷ್ಣವ ಪಂಥವನ್ನು ಅನುಸರಿಸುವ ಜನರು ಸೆಪ್ಟೆಂಬರ್ 7 ರಂದು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ.

Krishna Janmashtami Puja Samagri List Or Janmashtami Puja Muhurat in Kannada.

ಈ ದಿನ ಶ್ರೀಕೃಷ್ಣನ ಜನ್ಮ ದಿನ ಆಗಿರೋದ್ರಿಂದ ಶ್ರೀ ಕೃಷ್ಣನನ್ನು ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಜೊತೆಗೆ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಗಂಗಾಜಲ ಇತ್ಯಾದಿಗಳಿಂದ ಚರಣಾಮೃತವನ್ನು ತಯಾರಿಸಿ ಮಧ್ಯರಾತ್ರಿಯಲ್ಲಿ ಅಭಿಷೇಕ ಮಾಡಲಾಗುತ್ತದೆ. ಹೆಚ್ಚಿನವರು ಶ್ರೀ ಕೃಷ್ಣನ ಪೂಜೆ ಮಾಡೋದಕ್ಕೆ ಇಷ್ಟ ಪಡುತ್ತಾರೆ.

ಆದರೆ ಅವರಿಗೆ ಪೂಜಾ ವಿಧಾನ ಹಾಗೂ ಅದಕ್ಕೆ ಯಾವೆಲ್ಲಾ ಸಾಮಾಗ್ರಿಗಳು ಬೇಕು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಅಷ್ಟಕ್ಕೂ ಶ್ರೀ ಕೃಷ್ಣನ ಪೂಜೆಗೆ ಯಾವೆಲ್ಲಾ ಸಾಮಾಗ್ರಿಗಳು ಮುಖ್ಯವಾಗಿಬೇಕು ಅನ್ನೋದನ್ನು ಒಂದೊಂದಾಗಿಯೇ ತಿಳಿಯೋಣ.

ಶ್ರೀ ಕೃಷ್ಣನ ಪೂಜೆಗೆ ಬೇಕಾದ ಸಾಮಾಗ್ರಿಗಳು!

ಶ್ರೀ ಕೃಷ್ಣನ ಪೂಜೆಗೆ ಮುಖ್ಯವಾಗಿ ಈ ವಸ್ತುಗಳು ಬೇಕಾಗುತ್ತದೆ. ಅವುಗಳು ಯಾವುದು ಅಂತ ನೊಡೋದಾದ್ರೆ ಅಗರಬತ್ತಿಗಳು, ಧೂಪದ್ರವ್ಯಗಳು, ಕುಂಕುಮ, ಕರ್ಪೂರ, ಸಿಂಧೂರ, ಶ್ರೀಗಂಧ, ಅಕ್ಷತೆ, ವೀಳ್ಯದೆಲೆಗಳು,
ಹೂವಿನ ಮಾಲೆ, ಅರಿಶಿನ, ಆಭರಣ, ಹತ್ತಿ, ತುಳಸಿ ಮಾಲೆ, ಗಂಗಾಜಲ, ಜೇನುತುಪ್ಪ, ತುಳಸಿ, ಗರಿಕೆ, ಐದು ತೆಂಗಿನ ಕಾಯಿಗಳು, ಸಕ್ಕರೆ, ಹಸುವಿನ ತುಪ್ಪ, ಹಸುವಿನ ಮೊಸರು, ಹಸುವಿನ ಹಾಲು, ಹಣ್ಣುಗಳು, ಸಣ್ಣ ಏಲಕ್ಕಿ, ಉಯ್ಯಾಲೆ, ಸಿಹಿತಿಂಡಿಗಳು, ಬಾಲ ಕೃಷ್ಣನ ವಿಗ್ರಹ, ದೇವರ ವಸ್ತ್ರ, ಬಾಳೆ ಎಲೆ, ಪಂಚಾಮೃತ, ದೀಪ, ತೆಂಗಿನಕಾಯಿ, ಹೂವು, ನವಿಲು ಗರಿಗಳು, ಕೊಳಲು, ಬೆಣ್ಣೆ, ಸಕ್ಕರೆ ಮಿಠಾಯಿ, ಸೌತೆಕಾಯಿ

ವೈಷ್ಣವ ಪಂಥದವರು ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ!
ಜನ್ಮಾಷ್ಟಮಿ ಹಬ್ಬವನ್ನು ಹೆಚ್ಚಾಗಿ 2 ದಿನಗಳ ಕಾಲ ಆಚರಿಸಲಾಗುತ್ತದೆ. ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7ರಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಎರಡು ದಿನಗಳ ಕಾಲ ವಿಶೇಷವಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ವೈಷ್ಣವ ಪಂಥದ ಪ್ರಕಾರ ಈ ಹಬ್ಬವನ್ನು ವೈಷ್ಣವರು ಆಚರಣೆಯನ್ನು ಮಾಡುತ್ತಾರೆ.

ವೈಷ್ಣವರು ಯಾರು?

ವೈಷ್ಣವ ಪಂಥದಲ್ಲಿ ನಂಬಿಕೆಯುಳ್ಳವರು ಭಗವಾನ್ ವಿಷ್ಣು ಮತ್ತು ಅವನ ಅವತಾರಗಳಾದ ಶ್ರೀರಾಮ ಮತ್ತು ಶ್ರೀಕೃಷ್ಣನನ್ನು ಮಾತ್ರ ಪೂಜಿಸುತ್ತಾರೆ. ಅಷ್ಟಮಿ ತಿಥಿ ಒಂದು ದಿನ ಬಂದರೆ ಒಂದು ದಿನ ಮಾತ್ರ ಹಬ್ಬ ಆಚರಣೆ ಮಾಡಲಾಗುತ್ತದೆ. ಎರಡು ದಿನ ಅಷ್ಟಮಿ ಬಂದರೆ ಎರಡು ದಿನ ಆಚರಿಸಲಾಗುತ್ತದೆ. ಮೊದಲ ದಿನ ಸಾಮಾನ್ಯ ಜನ ಮತ್ತು ಎರಡನೇ ದಿನ ವೈಷ್ಣವ ಸಮುದಾಯದವರು ಈ ಹಬ್ಬವನ್ನು ಆಚರಿಸುತ್ತಾರೆ.

ಕೃಷ್ಣನ ಜನ್ಮದಂತಹ ಕಾಕತಾಳೀಯ ಘಟನೆಗಳು!

ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯು ಸೆ.6ರಂದು ಮಧ್ಯಾಹ್ನ 3.37ಕ್ಕೆ ಆರಂಭವಾಗಿ ಸೆ.7ರಂದು ಸಂಜೆ 4.14ಕ್ಕೆ ಮುಕ್ತಾಯವಾಗಲಿದೆ. ಈ ಬಾರಿ ಎರಡು ದಿನಗಳ ಕಾಲ ಅಷ್ಟಮಿಯು ಇರೋದ್ರಿಂದ ಈ ಹಬ್ಬವು ಸೆಪ್ಟೆಂಬರ್ 6 ಮತ್ತು 7 ರಂದು ಇರುತ್ತದೆ. ಆದರೂ ಹೆಚ್ಚಿನ ಜನರು ಸೆಪ್ಟೆಂಬರ್ 7 ರಂದು ಮಾತ್ರ ಹಬ್ಬವನ್ನು ಆಚರಿಸುತ್ತಾರೆ. ಏಕೆಂದರೆ ದೇವಸ್ಥಾನಗಳಲ್ಲಿ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 7 ರಂದು ಮಾತ್ರ ಆಚರಿಸಲಾಗುತ್ತದೆ.

ಈ ಬಾರಿ ಸೆಪ್ಟೆಂಬರ್ 6 ಬುಧವಾರವೂ ಆಗಿದೆ. ಅಷ್ಟಮಿಯ ಜೊತೆಗೆ ರೋಹಿಣಿ ನಕ್ಷತ್ರವೂ ಇದೆ. ಈ ಕಾಕತಾಳೀಯವು ಶ್ರೀಕೃಷ್ಣನ ಕಾಲದಲ್ಲೂ ಆಗಿತ್ತು ಅಂತ ಹೇಳಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಈ ಕಾಕತಾಳೀಯ ಮತ್ತೆ ಸಂಭವಿಸುತ್ತಿದೆ.

English summary

Krishna Janmashtami Puja Samagri List Or Janmashtami Puja Muhurat in Kannada.

Krishna Janmashtami Puja Samagri List Or Janmashtami Puja Muhurat. Read more.
Story first published: Wednesday, September 6, 2023, 13:00 [IST]
X
Desktop Bottom Promotion