Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಾತ್ರಿ ಶ್ರೀ ಕೃಷ್ಣನ ಪೂಜೆಗೆ ಅಗತ್ಯವಾಗಿ ಬೇಕಾದ ವಸ್ತುಗಳಿವು!
ಈ ವರ್ಷ ಸೆಪ್ಟೆಂಬರ್ 6 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 6 ರಂದು ಆಚರಿಸಿದರೆ, ವೈಷ್ಣವ ಪಂಥವನ್ನು ಅನುಸರಿಸುವ ಜನರು ಸೆಪ್ಟೆಂಬರ್ 7 ರಂದು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ.

ಈ ದಿನ ಶ್ರೀಕೃಷ್ಣನ ಜನ್ಮ ದಿನ ಆಗಿರೋದ್ರಿಂದ ಶ್ರೀ ಕೃಷ್ಣನನ್ನು ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಜೊತೆಗೆ ಹಾಲು, ಮೊಸರು, ಜೇನುತುಪ್ಪ, ತುಪ್ಪ, ಗಂಗಾಜಲ ಇತ್ಯಾದಿಗಳಿಂದ ಚರಣಾಮೃತವನ್ನು ತಯಾರಿಸಿ ಮಧ್ಯರಾತ್ರಿಯಲ್ಲಿ ಅಭಿಷೇಕ ಮಾಡಲಾಗುತ್ತದೆ. ಹೆಚ್ಚಿನವರು ಶ್ರೀ ಕೃಷ್ಣನ ಪೂಜೆ ಮಾಡೋದಕ್ಕೆ ಇಷ್ಟ ಪಡುತ್ತಾರೆ.
ಆದರೆ ಅವರಿಗೆ ಪೂಜಾ ವಿಧಾನ ಹಾಗೂ ಅದಕ್ಕೆ ಯಾವೆಲ್ಲಾ ಸಾಮಾಗ್ರಿಗಳು ಬೇಕು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಅಷ್ಟಕ್ಕೂ ಶ್ರೀ ಕೃಷ್ಣನ ಪೂಜೆಗೆ ಯಾವೆಲ್ಲಾ ಸಾಮಾಗ್ರಿಗಳು ಮುಖ್ಯವಾಗಿಬೇಕು ಅನ್ನೋದನ್ನು ಒಂದೊಂದಾಗಿಯೇ ತಿಳಿಯೋಣ.
ಶ್ರೀ ಕೃಷ್ಣನ ಪೂಜೆಗೆ ಬೇಕಾದ ಸಾಮಾಗ್ರಿಗಳು!
ಶ್ರೀ ಕೃಷ್ಣನ ಪೂಜೆಗೆ ಮುಖ್ಯವಾಗಿ ಈ ವಸ್ತುಗಳು ಬೇಕಾಗುತ್ತದೆ. ಅವುಗಳು ಯಾವುದು ಅಂತ ನೊಡೋದಾದ್ರೆ ಅಗರಬತ್ತಿಗಳು, ಧೂಪದ್ರವ್ಯಗಳು, ಕುಂಕುಮ, ಕರ್ಪೂರ, ಸಿಂಧೂರ, ಶ್ರೀಗಂಧ, ಅಕ್ಷತೆ, ವೀಳ್ಯದೆಲೆಗಳು,
ಹೂವಿನ ಮಾಲೆ, ಅರಿಶಿನ, ಆಭರಣ, ಹತ್ತಿ, ತುಳಸಿ ಮಾಲೆ, ಗಂಗಾಜಲ, ಜೇನುತುಪ್ಪ, ತುಳಸಿ, ಗರಿಕೆ, ಐದು ತೆಂಗಿನ ಕಾಯಿಗಳು, ಸಕ್ಕರೆ, ಹಸುವಿನ ತುಪ್ಪ, ಹಸುವಿನ ಮೊಸರು, ಹಸುವಿನ ಹಾಲು, ಹಣ್ಣುಗಳು, ಸಣ್ಣ ಏಲಕ್ಕಿ, ಉಯ್ಯಾಲೆ, ಸಿಹಿತಿಂಡಿಗಳು, ಬಾಲ ಕೃಷ್ಣನ ವಿಗ್ರಹ, ದೇವರ ವಸ್ತ್ರ, ಬಾಳೆ ಎಲೆ, ಪಂಚಾಮೃತ, ದೀಪ, ತೆಂಗಿನಕಾಯಿ, ಹೂವು, ನವಿಲು ಗರಿಗಳು, ಕೊಳಲು, ಬೆಣ್ಣೆ, ಸಕ್ಕರೆ ಮಿಠಾಯಿ, ಸೌತೆಕಾಯಿ
ವೈಷ್ಣವ ಪಂಥದವರು ಸೆಪ್ಟೆಂಬರ್ 7 ರಂದು ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ!
ಜನ್ಮಾಷ್ಟಮಿ ಹಬ್ಬವನ್ನು ಹೆಚ್ಚಾಗಿ 2 ದಿನಗಳ ಕಾಲ ಆಚರಿಸಲಾಗುತ್ತದೆ. ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7ರಂದು ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಎರಡು ದಿನಗಳ ಕಾಲ ವಿಶೇಷವಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ವೈಷ್ಣವ ಪಂಥದ ಪ್ರಕಾರ ಈ ಹಬ್ಬವನ್ನು ವೈಷ್ಣವರು ಆಚರಣೆಯನ್ನು ಮಾಡುತ್ತಾರೆ.
ವೈಷ್ಣವರು ಯಾರು?
ವೈಷ್ಣವ ಪಂಥದಲ್ಲಿ ನಂಬಿಕೆಯುಳ್ಳವರು ಭಗವಾನ್ ವಿಷ್ಣು ಮತ್ತು ಅವನ ಅವತಾರಗಳಾದ ಶ್ರೀರಾಮ ಮತ್ತು ಶ್ರೀಕೃಷ್ಣನನ್ನು ಮಾತ್ರ ಪೂಜಿಸುತ್ತಾರೆ. ಅಷ್ಟಮಿ ತಿಥಿ ಒಂದು ದಿನ ಬಂದರೆ ಒಂದು ದಿನ ಮಾತ್ರ ಹಬ್ಬ ಆಚರಣೆ ಮಾಡಲಾಗುತ್ತದೆ. ಎರಡು ದಿನ ಅಷ್ಟಮಿ ಬಂದರೆ ಎರಡು ದಿನ ಆಚರಿಸಲಾಗುತ್ತದೆ. ಮೊದಲ ದಿನ ಸಾಮಾನ್ಯ ಜನ ಮತ್ತು ಎರಡನೇ ದಿನ ವೈಷ್ಣವ ಸಮುದಾಯದವರು ಈ ಹಬ್ಬವನ್ನು ಆಚರಿಸುತ್ತಾರೆ.
ಕೃಷ್ಣನ ಜನ್ಮದಂತಹ ಕಾಕತಾಳೀಯ ಘಟನೆಗಳು!
ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯು ಸೆ.6ರಂದು ಮಧ್ಯಾಹ್ನ 3.37ಕ್ಕೆ ಆರಂಭವಾಗಿ ಸೆ.7ರಂದು ಸಂಜೆ 4.14ಕ್ಕೆ ಮುಕ್ತಾಯವಾಗಲಿದೆ. ಈ ಬಾರಿ ಎರಡು ದಿನಗಳ ಕಾಲ ಅಷ್ಟಮಿಯು ಇರೋದ್ರಿಂದ ಈ ಹಬ್ಬವು ಸೆಪ್ಟೆಂಬರ್ 6 ಮತ್ತು 7 ರಂದು ಇರುತ್ತದೆ. ಆದರೂ ಹೆಚ್ಚಿನ ಜನರು ಸೆಪ್ಟೆಂಬರ್ 7 ರಂದು ಮಾತ್ರ ಹಬ್ಬವನ್ನು ಆಚರಿಸುತ್ತಾರೆ. ಏಕೆಂದರೆ ದೇವಸ್ಥಾನಗಳಲ್ಲಿ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 7 ರಂದು ಮಾತ್ರ ಆಚರಿಸಲಾಗುತ್ತದೆ.
ಈ ಬಾರಿ ಸೆಪ್ಟೆಂಬರ್ 6 ಬುಧವಾರವೂ ಆಗಿದೆ. ಅಷ್ಟಮಿಯ ಜೊತೆಗೆ ರೋಹಿಣಿ ನಕ್ಷತ್ರವೂ ಇದೆ. ಈ ಕಾಕತಾಳೀಯವು ಶ್ರೀಕೃಷ್ಣನ ಕಾಲದಲ್ಲೂ ಆಗಿತ್ತು ಅಂತ ಹೇಳಲಾಗುತ್ತದೆ. 30 ವರ್ಷಗಳ ನಂತರ ಈ ಬಾರಿ ಈ ಕಾಕತಾಳೀಯ ಮತ್ತೆ ಸಂಭವಿಸುತ್ತಿದೆ.



Click it and Unblock the Notifications