Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಕರ್ಕ ಸಂಕ್ರಾಂತಿ 2023: ಎಲ್ಲರೂ ಎದುರು ನೋಡುತ್ತಿರುವ ಈ ದಿನದ ಮಹತ್ವವೇನು?
ವೈದಿಕ ಶಾಸ್ತ್ರದಲ್ಲಿ ಕರ್ಕ ಸಂಕ್ರಾಂತಿಗೆ ತುಂಬಾನೇ ಮಹತ್ವವಿದೆ, ಏಕೆಂದರೆ ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನ ಪ್ರಾರಂಭ. ದಕ್ಷಿಣಾಯನದ ನಾಲ್ಕು ತಿಂಗಳು ಭಗವಾನ್ ಶ್ರೀ ವಿಷ್ಣು ಯೋಗ ನಿದ್ರೆಯಲ್ಲಿರುತ್ತಾನೆ. ವರ್ಷದಲ್ಲಿ ಎರಡು ಆಯನಗಳಿರುತ್ತದೆ, ಒಂದು ಉತ್ತರಾಯಣ, ಮತ್ತೊಂದು ದಕ್ಷಿಣಾಯನ. ಉತ್ತರಾಯಣದಲ್ಲಿ ಸೂರ್ಯ 6 ತಿಂಗಳಿದ್ದರೆ, ಇನ್ನು 6 ತಿಂಗಳು ದಕ್ಷಿಣಾಯಣದಲ್ಲಿ ಇರುತ್ತದೆ. ಕರ್ಕ ಸಂಕ್ರಾಂತಿಗಾಗಿ ಜನರು ಕಾಯುತ್ತಿರುತ್ತಾರೆ. ಕರ್ಕ ಸಂಕ್ರಾಂತಿಯಂದು ಪಿತೃ ತರ್ಪಣ ಮಾಡಲಾಗುವುದು, ಈ ದಿನ ಪಿತೃ ತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ಸಿಗಲಿದೆ.

ಕರ್ಕ ಸಂಕ್ರಾಂತಿ ಯಾವ, ಶುಭ ಮುಹೂರ್ತ ಹಾಗೂ ಕರ್ಕ ಸಂಕ್ರಾಂತಿಯ ಮಹತ್ವವೇನು ಎಂದು ನೋಡೋಣ:
ಕರ್ಕ ಸಂಕ್ರಾಂತಿ ದಿನಾಂಕ ಮತ್ತು ಮುಹೂರ್ತ
ಕರ್ಕ ಸಂಕ್ರಾಂತಿ ಪುಣ್ಯ ಕಾಲ -ಜುಲೈ 16, ಮಧ್ಯಾಹ್ನ 12:27ರಿಂದ -ಸಂಜೆ 07.21ರವರೆಗೆ
ಕರ್ಕ ಸಂಕ್ರಾಂತಿ ಮಹಾ ಪುಣ್ಯ ಕಾಲ -ಜುಲೈ16, ಸಂಜೆ 05.03 - ರಾತ್ರಿ 07.21ರವರೆಗೆ
ಕರ್ಕ ರಾಶಿಗೆ ಸೂರ್ಯ ಸಂಚಾರ: ಜುಲೈ 17, ಬೆಳಗ್ಗೆ 05:19ಕ್ಕೆ
ಕರ್ಕ ಸಂಕ್ರಾಂತಿಯಿಂದ ದಕ್ಷಿಣಾಯನದ ಆರಂಭ
ಕರ್ಕ ಸಂಕ್ರಾಂತಿಯಿಂದಲೇ ದಕ್ಷಿಣಾಯಣ ಆರಂಭವಾಗುತ್ತದೆ. ಕರ್ಕ ರಾಶಿಯಲ್ಲಿ ಒಂದು ತಿಂಗಳ ಅವಧಿಯವರೆಗೆ ಇರುವ ಸೂರ್ಯ ನಂತರ ಸಿಂಹ ರಾಶಿಗೆ ಸಂಚರಿಸಲಿದೆ, ಹೀಗೆ ಪ್ರತಿ ತಿಂಗಳು ರಾಶಿ ಬದಲಾಯಿಸುತ್ತಾ ಧನು ರಾಶಿ ಪ್ರವೇಶ ಮಾಡುವವರೆಗೆ ದಕ್ಷಿಣಾಯನ, ನಂತರ ಉತ್ತಾರಾಯಣ ಪುಣ್ಯ ಕಾಲ ಪ್ರಾರಂಭವಾಗುವುದು.
ಕರ್ಕ ಸಂಕ್ರಾಂತಿಯಂದು ಸ್ನಾನ, ದಾನದ ಮಹತ್ವ
ಕರ್ಕ ಸಂಕ್ರಾಂತಿಯ ದಿನದಂದು ಸೂರ್ಯೋದಯಕ್ಕೆ ಮುನ್ನ ಎದ್ದು ಪುಣ್ಯನದಿಯಲ್ಲಿ ಸ್ನಾನ ಮಾಡಿ ಆಯುರಾರೋಗ್ಯಕ್ಕಾಗಿ ಸೂರ್ಯ ದೇವರನ್ನು ಪ್ರಾರ್ಥಿಸಲಾಗುವುದು. ಕರ್ಕ ಸಂಕ್ರಾಂತಿಯ ದಿನದಂದು ಭಗವಾನ್ ಶಿವ, ವಿಷ್ಣು ಮತ್ತು ಸೂರ್ಯ ದೇವರ ಆರಾಧನೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ವಿಷ್ಣು ಸಹಸ್ತ್ರ ನಾಮ ಪಠಿಸಲಾಗುವುದು.
ಕರ್ಕ ಸಂಕ್ರಾಂತಿಯಿಂದ 4 ತಿಂಗಳವರೆಗೆ ಯಾವುದೇ ಶುಭ ಕಾರ್ಯವಾಗಲಿ, ಹೊಸ ಕೆಲಸವಾಗಲಿ ಪ್ರಾರಮಭ ಮಾಡುವುದಿಲ್ಲ. ಈ ಸಮಯದಲ್ಲಿ, ದಾನ, ಪೂಜೆ ಮತ್ತು ಪುಣ್ಯದ ಕಾರ್ಯಗಳನ್ನು ಮಾಡಲಾಗುವುದು.
ಕರ್ಕ ಸಂಕ್ರಾಂತಿಯ ಪೌರಾಣಿಕ ಕತೆ
ಭಗವಾನ್ ವಿಷ್ಣುವು ಸೃಷ್ಟಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಾಗ ತುಂಬಾ ದಣಿದಿರುತ್ತಾನೆ. ಆಗ ಮಾತೆ ಲಕ್ಷ್ಮಿಯು ಸ್ವಲ್ಪ ಸಮಯದವರೆಗೆ ಮಹಾದೇವನಿಗೆ ಸೃಷ್ಟಿಯ ಚಿಂತೆ ಮತ್ತು ಹೊರೆಯನ್ನು ನೀಡಬೇಕೆಂದು ವಿಷ್ಣುವಿನಲ್ಲಿ ವಿನಂತಿಸುತ್ತಾಳೆ. ನಂತರ ಮಹಾದೇವ ಜಿ ಹಿಮಾಲಯದಿಂದ ಭೂಮಿಗೆ ಬರುತ್ತಾನೆ. 4 ತಿಂಗಳವರೆಗೆ ಮಹಾದೇವನು ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ನಂತರ ಶ್ರೀವಿಷ್ಣು ಯೋಗ ನಿದ್ದೆಯಿಂದ ಎಚ್ಚರವಾದ ಮೇಲೆ ಮಹಾದೇವ ಕೈಲಾಸಕ್ಕೆ ಹಿಂತಿರುಗುತ್ತಾರೆ ಎಂಬ ಪೌರಾಣಿಕ ಕತೆಯಿದೆ.
ಈ ಸಮಯದಲ್ಲಿ ಶಿವನು ಜವಾಬ್ದಾರಿ ತೆಗೆದುಕೊಳ್ಳುವುದರಿಂದ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುವುದು. ಶ್ರಾವಣ ಮಾಸದಿಂದ ಹಬ್ಬಗಳು ಶುರುವಾಗುವುದು.
ಕರ್ಕ ಸಂಕ್ರಾಂತಿ ಪೂಜಾ ವಿಧಾನ
* ಕರ್ಕ ಸಂಕ್ರಾಂತಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಪುಣ್ಯ ಸ್ನಾನ ಮಾಡಿ. ನಂತರ ಸೂರ್ಯನಿಗೆ ಆರ್ಘ್ಯ ಅರ್ಪಿಸಿ.
* ಆರ್ಘ್ಯವನ್ನು ಅರ್ಪಿಸಿದ ನಂತರ ಸೂರ್ಯ ಮಂತ್ರವನ್ನು ಪಠಿಸಲಾಗುತ್ತದೆ.
* ನಂತರ ವಿಷ್ಣು ದೇವರನ್ನು ಪೂಜಿಸಲಾಗುತ್ತದೆ.
* ಪೂಜೆಯ ನಂತರ ಸಹಸ್ತ್ರನಾಮ ಪಠಿಸಿ
ಹೀಗೆ ಮಾಡುವುದರಿಂದ ಶಾಂತಿ ಮತ್ತು ಅದೃಷ್ಟವನ್ನು ಪಡೆಯಬಹುದು.



Click it and Unblock the Notifications