Latest Updates
-
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್!
ಜೂನ್ 17ಕ್ಕೆ ಶನಿ ಅಮವಾಸ್ಯೆ: ಶನಿಯ ಕೆಟ್ಟ ಪ್ರಭಾವ, ಪಿತೃದೋಷವಿದ್ದರೆ ಈ ಪರಿಹಾರ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಅದರದ್ದೇ ಆದ ಮಹತ್ವವಿದೆ, ಅದರಲ್ಲೂ ಅಮವಾಸ್ಯೆ ಶನಿವಾರ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ವರ್ಷದ ಮೊದಲ ಶನಿ ಅಮವಾಸ್ಯೆ ಜನವರಿ 21ಕ್ಕೆ ಏರ್ಪಡಲಿದೆ. ಇದೀಗ ಜೂನ್ 17ಕ್ಕೆ ಶನಿ ಅಮವಾಸ್ಯೆ ಉಂಟಾಗಲಿದೆ. ಶನಿವಾರ ಶನಿ ದೇವರಿಗೆ ಮೀಸಲಾದ ದಿನ. ಈ ದಿನದಂದೇ ಅಮವಾಸ್ಯೆ ಬಂದರೆ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು.
ಈ ಶನಿ ಅಮವಾಸ್ಯೆ ಮತ್ತೊಂದು ವಿಶೇಷವೆಂದರೆ ಬರೋಬರಿ 30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. ಶನಿ ಅಮವಾಸ್ಯೆಯಂದು ಶನಿ ದೋಷಕ್ಕೆ ಪರಿಹಾರ ಮಾಡಲು ಅತ್ಯಂತ ಸೂಕ್ತವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಶನಿ ದೋಷಕ್ಕೆ ಪರಿಹಾರ ಮಾಡಲು ಹಾಗೂ ಪಿತೃದೋಷಕ್ಕೆ ಪರಿಹಾರ ಮಾಡಲು ಶ್ರೇಷ್ಠವಾಗಿದೆ. ಶನಿಯ ಸಾಡೇಸತಿ, ಧೈಯ ಅಥವಾ ಶನಿಯ ಮಹಾದಶಾ ಇರುವವರು ಈ ಶನಿ ಅಮಾವಾಸ್ಯೆಯಂದು ಶನಿ ಪರಿಹಾರವನ್ನು ಮಾಡಬೇಕು.

ಶನಿ ಅಮಾವಾಸ್ಯೆಯ ದಿನದಂದು ಈ ಪರಿಹಾರ ಮಾಡಿ:
- ಶನಿ ಅಮವಾಸ್ಯೆಯಂದು ಹಾಲಿಗೆ ಕಪ್ಪು ಎಳ್ಳು ಬೆರೆಸಿ ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೋಷದ ಪ್ರಭಾವದಿಂದ ಸಂಸಾರದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಶನಿ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳು ಹಾಗೂ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಅರ್ಪಿಸಿ.
- ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಉಪ್ಪು, ಸಾಸಿವೆ, ಎಳ್ಳನ್ನು ದಾನ ಮಾಡಿ. ಉದ್ದು ಹಾಗೂ ಸಕ್ಕರೆ ಮಿಶ್ರ ಮಾಡಿ ಇರುವೆಗಳಿಗೆ ಹಾಕಿ.
- ಈ ದಿನ ಎಳ್ಳು ಹಾಗೂ ಉದ್ದು ಮಿಶ್ರ ಮಾಡಿ ಮೀನುಗಳಿಗೆ ಹಾಕಿ
- ಬೆಳಗ್ಗೆ ಆಹಾರ ಸೇವಿಸುವ ಮುನ್ನ ಕರಿಮೆಣಸು ಅಗೆದು ಸೇವಿಸಿ.
- ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.
- ಈ ದಿನದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು.
- ಶನಿ ಅಮವಾಸ್ಯೆಯಂದು ಕಪ್ಪು ಬಟ್ಟೆ ಧರಿಸಿ.
- ಬಡವರಿಗೆ ಕಪ್ಪು ರಗ್ ದಾನ ಮಾಡಿ.
ಪಿತೃದೋಷ ಪರಿಹಾರಕ್ಕೆ ಈ ದಿನ ಶ್ರೇಷ್ಠವಾಗಿದೆ
ಪಿತೃದೋಷವಿದ್ದರೆ ಅನೇಕ ಆರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಕುಟುಂಬದದಲ್ಲಿ ಸಮಸ್ಯೆ, ಸಂತಾನಹೀನತೆ ಮುಂತಾದ ಸಮಸ್ಯೆ ಕಂಡು ಬರುವುದು. ಪಿತೃದೋಷಕ್ಕೆ ಶನಿ ಅಮವಾಸ್ಯೆಯಂದು ಪರಿಹಾರ ಮಾಡಿ.
ಅಲ್ಲದೆ ಶನಿಯ ಹಿಮ್ಮುಖ ಚಲನೆ ಕೂಡ ಇರುವುದರಿಂದ ಇದು ಕೂಡ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಹಿಮ್ಮುಖ ಚಲನೆ ಕರ್ಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಉಳಿದ ರಾಶಿಯವರ ಮೇಲೆ ಶನಿಯ ಹಿಮ್ಮುಖ ಚಲನೆಯ ಪರಿಣಾಮವು ಸಾಮಾನ್ಯವಾಗಿರುತ್ತದೆ. ಶನಿಯ ಹಿಮ್ಮುಖ ಚಲನೆಯಿಂದ ಕೆಟ್ಟ ಪ್ರಭಾವ ಎದುರಿಸುವ ರಾಶಿಯವರೂ ಈ ಪರಿಹಾರ ಮಾಡುವುದು ಒಳ್ಳೆಯದು.
ಶನಿ ಅಮವಾಸ್ಯೆಯ ದಿನ ಶನಿ ದೇವಾಲಯಕ್ಕೆ ಹೋಗಿ ಈ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ
" "ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications