Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜೂನ್ 17ಕ್ಕೆ ಶನಿ ಅಮವಾಸ್ಯೆ: ಶನಿಯ ಕೆಟ್ಟ ಪ್ರಭಾವ, ಪಿತೃದೋಷವಿದ್ದರೆ ಈ ಪರಿಹಾರ ಮಾಡಿ
ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಅದರದ್ದೇ ಆದ ಮಹತ್ವವಿದೆ, ಅದರಲ್ಲೂ ಅಮವಾಸ್ಯೆ ಶನಿವಾರ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು. ಈ ವರ್ಷದ ಮೊದಲ ಶನಿ ಅಮವಾಸ್ಯೆ ಜನವರಿ 21ಕ್ಕೆ ಏರ್ಪಡಲಿದೆ. ಇದೀಗ ಜೂನ್ 17ಕ್ಕೆ ಶನಿ ಅಮವಾಸ್ಯೆ ಉಂಟಾಗಲಿದೆ. ಶನಿವಾರ ಶನಿ ದೇವರಿಗೆ ಮೀಸಲಾದ ದಿನ. ಈ ದಿನದಂದೇ ಅಮವಾಸ್ಯೆ ಬಂದರೆ ಅಮವಾಸ್ಯೆ ಬಂದರೆ ಶನಿ ಅಮವಾಸ್ಯೆ ಎಂದು ಕರೆಯಲಾಗುವುದು.
ಈ ಶನಿ ಅಮವಾಸ್ಯೆ ಮತ್ತೊಂದು ವಿಶೇಷವೆಂದರೆ ಬರೋಬರಿ 30 ವರ್ಷಗಳ ಬಳಿಕ ಶನಿಯು ಕುಂಭ ರಾಶಿಯಲ್ಲಿ ವಕ್ರೀಯವಾಗಿ ಚಲಿಸಲಿದೆ. ಶನಿ ಅಮವಾಸ್ಯೆಯಂದು ಶನಿ ದೋಷಕ್ಕೆ ಪರಿಹಾರ ಮಾಡಲು ಅತ್ಯಂತ ಸೂಕ್ತವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಶನಿ ದೋಷಕ್ಕೆ ಪರಿಹಾರ ಮಾಡಲು ಹಾಗೂ ಪಿತೃದೋಷಕ್ಕೆ ಪರಿಹಾರ ಮಾಡಲು ಶ್ರೇಷ್ಠವಾಗಿದೆ. ಶನಿಯ ಸಾಡೇಸತಿ, ಧೈಯ ಅಥವಾ ಶನಿಯ ಮಹಾದಶಾ ಇರುವವರು ಈ ಶನಿ ಅಮಾವಾಸ್ಯೆಯಂದು ಶನಿ ಪರಿಹಾರವನ್ನು ಮಾಡಬೇಕು.

ಶನಿ ಅಮಾವಾಸ್ಯೆಯ ದಿನದಂದು ಈ ಪರಿಹಾರ ಮಾಡಿ:
- ಶನಿ ಅಮವಾಸ್ಯೆಯಂದು ಹಾಲಿಗೆ ಕಪ್ಪು ಎಳ್ಳು ಬೆರೆಸಿ ಶಿವನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶನಿದೋಷದ ಪ್ರಭಾವದಿಂದ ಸಂಸಾರದಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಶನಿ ದೇವಾಲಯಕ್ಕೆ ಹೋಗಿ ಕಪ್ಪು ಎಳ್ಳು ಹಾಗೂ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಅರ್ಪಿಸಿ.
- ಶನಿ ಸಾಡೇಸಾತಿ, ಶನಿ ಧೈಯ್ಯ ಇರುವವರು ಉಪ್ಪು, ಸಾಸಿವೆ, ಎಳ್ಳನ್ನು ದಾನ ಮಾಡಿ. ಉದ್ದು ಹಾಗೂ ಸಕ್ಕರೆ ಮಿಶ್ರ ಮಾಡಿ ಇರುವೆಗಳಿಗೆ ಹಾಕಿ.
- ಈ ದಿನ ಎಳ್ಳು ಹಾಗೂ ಉದ್ದು ಮಿಶ್ರ ಮಾಡಿ ಮೀನುಗಳಿಗೆ ಹಾಕಿ
- ಬೆಳಗ್ಗೆ ಆಹಾರ ಸೇವಿಸುವ ಮುನ್ನ ಕರಿಮೆಣಸು ಅಗೆದು ಸೇವಿಸಿ.
- ಈ ದಿನ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.
- ಈ ದಿನದಿನ ನಿರ್ಗತಿಕರಿಗೆ ದಾನ ಮಾಡುವುದರಿಂದ ಕಷ್ಟಗಳು ಕಡಿಮೆಯಾಗುವುದು.
- ಶನಿ ಅಮವಾಸ್ಯೆಯಂದು ಕಪ್ಪು ಬಟ್ಟೆ ಧರಿಸಿ.
- ಬಡವರಿಗೆ ಕಪ್ಪು ರಗ್ ದಾನ ಮಾಡಿ.
ಪಿತೃದೋಷ ಪರಿಹಾರಕ್ಕೆ ಈ ದಿನ ಶ್ರೇಷ್ಠವಾಗಿದೆ
ಪಿತೃದೋಷವಿದ್ದರೆ ಅನೇಕ ಆರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ನಷ್ಟ, ಕುಟುಂಬದದಲ್ಲಿ ಸಮಸ್ಯೆ, ಸಂತಾನಹೀನತೆ ಮುಂತಾದ ಸಮಸ್ಯೆ ಕಂಡು ಬರುವುದು. ಪಿತೃದೋಷಕ್ಕೆ ಶನಿ ಅಮವಾಸ್ಯೆಯಂದು ಪರಿಹಾರ ಮಾಡಿ.
ಅಲ್ಲದೆ ಶನಿಯ ಹಿಮ್ಮುಖ ಚಲನೆ ಕೂಡ ಇರುವುದರಿಂದ ಇದು ಕೂಡ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಈ ಹಿಮ್ಮುಖ ಚಲನೆ ಕರ್ಕ, ಸಿಂಹ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಉಳಿದ ರಾಶಿಯವರ ಮೇಲೆ ಶನಿಯ ಹಿಮ್ಮುಖ ಚಲನೆಯ ಪರಿಣಾಮವು ಸಾಮಾನ್ಯವಾಗಿರುತ್ತದೆ. ಶನಿಯ ಹಿಮ್ಮುಖ ಚಲನೆಯಿಂದ ಕೆಟ್ಟ ಪ್ರಭಾವ ಎದುರಿಸುವ ರಾಶಿಯವರೂ ಈ ಪರಿಹಾರ ಮಾಡುವುದು ಒಳ್ಳೆಯದು.
ಶನಿ ಅಮವಾಸ್ಯೆಯ ದಿನ ಶನಿ ದೇವಾಲಯಕ್ಕೆ ಹೋಗಿ ಈ ಮಂತ್ರ ಪಠಿಸಿ
"ಓಂ ಹಿಲ್ಮ್ ಶಾಮ್ ಶನಾಯ ನಮ
" "ಓಂ ಪ್ರಾಮ್ ಪ್ರೀಮ್ ಪ್ರೌಮ್ ಸಹ ಶಾನೈಶ್ರಾಯ ನಮ"
"ಓಂ ಶಾಮ್ ಶನೇಶ್ಚಾರ ನಮಃ" "ಔಮ್ ಐಂಗ್ ಹರಿಂಗ್ ಶರಿಂಗ್ ಶಂಗ್ ಶನೈಶ್ಚರಾಯ ನಮ ಔಮ್"
ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ ತನ್ನೊ ಮಂಡಾ ಪ್ರಚೋದಾಯತ್
ಶನಿ ಧ್ಯಾನ ಮಂತ್ರ
ನೀಲಂಜನ ಸಮಾಭಮ್ ರವಿಪುತ್ರಂ ಯಮಗ್ರಾಜಂ ಚಯಾ ಮಾರ್ತಾಂದ ಸಂಭಾತ್ ತಮ್ ನಮಮಿ ಶೈಶ್ಚರಂ



Click it and Unblock the Notifications
