Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಆಸ್ತಿಗಿಂತ ಹೆಚ್ಚು ದಾನ ಮಾಡಿದ ಜೆಮ್ಸೆಟ್ಜಿ ಟಾಟಾ..! ಯಾರು ಗೊತ್ತಾ ಈ ಮಹಾದಾನಿ..!
ಭಾರತದ ಬೃಹತ್ ಉದ್ಯಮ ಟಾಟಾ ಗ್ರೂಪ್ ಬಗ್ಗೆ ನಿಮಗೆಲ್ಲಾ ಗೊತ್ತಿರುತ್ತದೆ. ವಿಶ್ವದ ಅಗ್ಗದ ಕಾರಿನಿಂದ ಹಿಡಿದು ಭಾರತದ ವಾಹನ ಕ್ಷೇತ್ರದಲ್ಲಿ ತನ್ನದೇ ಮಾರುಕಟ್ಟೆ ಹಿಡಿತ ಸಾಧಿಸಿರುವ ಕಂಪನಿಯಾಗಿದೆ. ಸದ್ಯಕ್ಕೀಗ ರತನ್ ಟಾಟಾ ಈ ಕಂಪನಿಯ ಮುನ್ನಡೆಸುತ್ತಿದ್ದಾರೆ. ಅವರ ಬಗ್ಗೆಯೂ ನೀವು ಕೇಳಿರುತ್ತೀರ. ಆದ್ರೆ ಈ ಕಂಪನಿ ಹುಟ್ಟಿದ್ದೆಲ್ಲಿ. ಜಮ್ಸೆಟ್ಜಿ ಟಾಟಾ ಬಗ್ಗೆ ಎಂದಾದ್ರು ಕೇಳಿದ್ದೀರಾ?
ಹೌದು ಜೆಮ್ಸೆಟ್ಜಿ ಟಾಟಾ ಈ ಕಂಪನಿಯ ಸಂಸ್ಥಾಪಕನ ಬಗ್ಗೆ ನೀವೆಂದು ಕೇಳಿರಲು ಸಾಧ್ಯವಿಲ್ಲ. ಅತ್ಯಧಿಕ ಆಸ್ತಿಯನ್ನು ದಾನವಾಗಿ, ಸಮಾಜ ಸೇವೆಗಾಗಿ ದೇಣಿಗೆ ನೀಡಿದರವ ಸಾಲಿನಲ್ಲಿ ಇವರ ಹೆಸರು ಈಗಲೂ ಮೊದಲ ಸ್ಥಾನದಲ್ಲಿದೆ ಎಂದರೆ ನಂಬುತ್ತೀರಾ? ಹೌದು ಈ ಪಟ್ಟಿಯಲ್ಲಿ ದಶಕಗಳಿಂದಲೂ ಜೆಮ್ಸೆಟ್ಜಿ ಟಾಟಾ ಹೆಸರು ಇದೆ. ಹಾಗಾದರೆ ಯಾರು ಈ ಜೆಮ್ಸೆಟ್ಜಿ ಟಾಟಾ?

ಜೆಮ್ಸೆಟ್ಜಿ ಟಾಟಾ ಟಾಟಾ ಗ್ರೂಪ್ ಅನ್ನು ಹುಟ್ಟಿಹಾಕಿದವರು. 1868ರಲ್ಲಿ ಟಾಟಾ ಗ್ರೂಪ್ ಅನ್ನು ಸ್ಥಾಪಿಸಿದ ನಂತರದ ಮೊದಲ ಮೂರು ದಶಕಗಳಲ್ಲಿ, ಜಮ್ಸೆಟ್ಜಿ ಈಗಾಗಲೇ ಅತ್ಯಂತ ಯಶಸ್ವಿ ಜವಳಿ ಗಿರಣಿಗಳನ್ನು ಸ್ಥಾಪಿಸಿದ್ದರು. ನಾಗ್ಪುರದಲ್ಲಿ ಎಂಪ್ರೆಸ್ ಮಿಲ್ಸ್, ಮುಂಬೈನಲ್ಲಿ ಸ್ವದೇಶಿ ಮಿಲ್ಸ್ ಮತ್ತು ಅಹಮದಾಬಾದ್ನಲ್ಲಿ ಅಡ್ವಾನ್ಸ್ ಮಿಲ್ಸ್ ಎಂಬ ಸಂಸ್ಥೆ ಕಟ್ಟಿದ್ದರು.
ಜಮ್ಶೆಡ್ಪುರದಲ್ಲಿ ಭಾರತದ ಮೊದಲ ಸಂಯೋಜಿತ ಉಕ್ಕಿನ ಕಾರ್ಖಾನೆಯನ್ನು ತೆರೆದರು. ಅದು ಟಾಟಾ ಸ್ಟೀಲ್ ಆಗಿ ಈಗ ದೈತ್ಯ ಕಂಪನಿಯಾಗಿದೆ. ಮುಂಬೈನಲ್ಲಿ ಅಸಾಧಾರಣ ತಾಜ್ ಮಹಲ್ ಹೋಟೆಲ್ ಅನ್ನು ಸ್ಥಾಪಿಸಲು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಬೆಂಗಳೂರಿನಲ್ಲಿ ಭಾರತದ ಮೊದಲ ಪೂರ್ಣ ಪ್ರಮಾಣದ ವಿಜ್ಞಾನ ಸಂಶೋಧನಾ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು ರಚಿಸಲು ಪ್ರಾರಂಭಿಸಿದರು ಮತ್ತು ಭಾರತೀಯರಿಗೆ ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ದೇಶದ ಮೊದಲ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದರು.
1890 ದಶಕದ ವಿನಾಶಕಾರಿ ಬುಬೊನಿಕ್ ಪ್ಲೇಗ್ ನಂತರ ಆಹಾರ ಪೂರೈಕೆಯನ್ನು ಹೆಚ್ಚಿಸಲು ಮತ್ತು ನಿರಂತರ ಕೊರತೆಯನ್ನು ತಡೆಗಟ್ಟಲು ಅವರು ಹಣ್ಣುಗಳು ಮತ್ತು ಮೀನುಗಳಿಗಾಗಿ ಶೀತಲ ಶೇಖರಣಾ ಘಟಕವನ್ನು ಸ್ಥಾಪಿಸಲು ಬಯಸಿದ್ದರು. ಆದ್ದರಿಂದ, 1900ರ ಸುಮಾರಿಗೆ, ಅವರು ಈಗ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ (ಹಿಂದೆ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಂದು ಕರೆಯಲಾಗುತ್ತಿತ್ತು) ಆಕ್ರಮಿಸಿಕೊಂಡಿರುವ ಭೂಮಿಯಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಲು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದರು.
ಇನ್ನು ಜೆಮ್ಸೆಟ್ಜಿ ಟಾಟಾ ಅಂದಿನ ಕಾಲದಲ್ಲೇ ದೇಣಿಗೆ ನೀಡುವುದು, ಸಮಾಜ ಮುಖಿ ಕಾರ್ಯದಲ್ಲಿ ನಿರತರಾಗಿದ್ದರು. ಅವರು ತಮ್ಮ ಒಟ್ಟು ಆಸ್ತಿಯಲ್ಲಿ ಇಂದಿನ ದಿನಕ್ಕೆ ಹೋಲಿಸಿದರೆ ಬರೋಬ್ಬರಿ 102 ಬಿಲಿಯನ್ ಡಾಲರ್ ದಾನವಾಗಿ ನೀಡಿದ್ದರಂತೆ. ಭಾರತೀಯ ರೂಪಾಯಿಯಲ್ಲಿ ಸುಮಾರು 200 ಕೋಟಿ ರೂಪಾಯಿಯಾಗುತ್ತದೆ. ಇವರ ನಂತರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ($74.6 ಬಿಲಿಯನ್), ವಾರೆನ್ ಬಫೆಟ್ ($37.4 ಶತಕೋಟಿ), ಜಾರ್ಜ್ ಸೊರೊಸ್ ($34.8 ಶತಕೋಟಿ), ಮತ್ತು ಜಾನ್ ಡಿ ರಾಕ್ಫೆಲ್ಲರ್ ($26.8 ಶತಕೋಟಿ) ಸ್ಥಾನ ಪಡೆದಿದ್ದಾರೆ.
ರತನ್ ಟಾಟಾಗೂ ಜೆಮ್ಸೆಟ್ಜಿ ಟಾಟಾಗೂ ಏನು ಸಂಬಂಧ
ನೀವು ಅಚ್ಚರಿ ಪಡುವಂತಹ ವಿಷಯವೇನೆಂದರೆ ಜೆಮ್ಸೆಟ್ಜಿ ಟಾಟಾ ಈಗಿನ ರತನ್ ಟಾಟಾ ಅವರ ಮುತ್ತಾತ ಆಗಿದ್ದಾರೆ. ಜೆಮ್ಸೆಟ್ ಟಾಟಾ ಅವರ ಪುತ್ರರು ರತನ್ಜಿ ಟಾಟಾ, ದೊರಬ್ಜಿ ಟಾಟಾ, ರತನ್ಜಿ ಟಾಟಾ ಪುತ್ರ ನಾವಲ್ ಟಾಟಾ, ನಾವಲ್ ಟಾಟಾ ಪುತ್ರ ರತನ್ ಟಾಟಾ, ನಿಯೋಲ್ ಟಾಟಾ, ಜಿಮ್ಮಿ ನಾವಲ್ ಟಾಟಾ ಆಗಿದ್ದಾರೆ. ಇದ್ರಲ್ಲಿ ವಾವಲ್ ಟಾಟಾ ಅವರ ಪುತ್ರ ಈಗಿನ ರತನ್ ಟಾಟಾ ಆಗಿದ್ದಾರೆ. ಮೂರು ತಲೆಮಾರುಗಳು ಕಳೆದರು ಟಾಟಾ ಗ್ರೂಪ್ ಈಗಲೂ ಸೇವೆ ನೀಡುತ್ತಲೇ ಬಂದಿದೆ. ಈಗಲೂ ರತನ್ ಟಾಟಾ ತಮ್ಮ ಒಟ್ಟು ಗಳಿಕೆಯ ಬಹುಪಾಲು ಆಸ್ತಿಯನ್ನು ಸಮಾಜ ಮುಖಿ ಕಾರ್ಯಕ್ಕೆ ಮೀಸಲಿಟ್ಟಿದ್ದಾರೆ.



Click it and Unblock the Notifications
