Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜುಲೈ 14ಕ್ಕೆ ಉಡಾವಣೆಯಾಗಲಿರುವ ಚಂದ್ರಯಾನ 3ವಿಕ್ರಮ್ ಕುರಿತ 6ಆಸಕ್ತಿಕರ ಸಂಗತಿಗಳು
ಇಡೀ ವಿಶ್ವವೇ ಭಾರತದ ಕಡೆ ಕುತೂಹಲ ಕಣ್ಣಿನಿಂದ ನೋಡುತ್ತಿದೆ, ಅದಕ್ಕೆ ಕಾರಣ ಚಂದ್ರಯಾನ 3 ಉಡಾವಣೆ. ಇಸ್ರೋದ ಮಹಾತ್ವಾಕಾಂಕ್ಷೆ ಯೋಜನೆಗೆ ಕ್ಷಣಗಣನೆ ಶುರುವಾಗಿದೆ. ಚಂದ್ರಯಾನ 3 ತ್ರಿವಿಕ್ರಮ ಜುಲೈ 14, 2:35ಕ್ಕೆ ಭೂಮಿಯನ್ನು ಬಿಟ್ಟು ಚಂದ್ರನ ಕಕ್ಷೆಯತ್ತ ಸಾಗಲಿದೆ. ಈ ಮೂಲಕ ಭಾರತ ಹೊಸ ಸಾಧನೆಯತ್ತ ಹೆಜ್ಜೆ ಹಾಕಲಿದೆ. ಚಂದ್ರಯಾನ 3 ತ್ರಿವಿಕ್ರಮದ ಕುರಿತ ಕೆಲ ಆಸಕ್ತಿಕರ ಸಂಗತಿಗಳ ಕುರಿತು ನೋಡೋಣ:
1. ಚಂದ್ರಯಾನ 3 ತ್ರಿವಿಕ್ರಮ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಜುಲೈ 14 ಮಧ್ಯಾಹ್ನ 2:30ಕ್ಕೆ ಶ್ರೀಹರಿ ಕೂಟದಿಂದ ಎಲ್ವಿಎಂ3 ರಾಕೆಟ್ ಉಡಾವಣೆಯಾಗಲಿದೆ.

2. ವಿಕ್ರಮ ಲ್ಯಾಂಡರ್ನ ಕಾರ್ಯವೇನು?
ಇಂದು ಉಡಾವಣೆಯಾದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಸುಮಾರು 43 ದಿನಗಳು ಬೇಕು. ಆದ್ದರಿಂದ ಜುಲೈ 14ರಂದು ಭೂಮಿಯಿಂದ ಹೊರಡ ವಿಕ್ರಮ್ ಲ್ಯಾಂಡರ್ ಆಗಸ್ಟ್ 22 ಅಥವಾ 23ರಂದು ಚಂದ್ರನ ಮೇಲ್ಮೈಗೆ ಇಳಿದು ಚಂದ್ರನ ಕಕ್ಷೆಯ ಸುತ್ತಲು ಸುತ್ತಲಿದೆ.
ಚಂದ್ರಯಾನ 2 ವೈಫಲ್ಯದಿಂದ ಪಾಠ ಕಲಿತ ಇಸ್ಟ್ರೋ ಹಲವು ಬದಲಾವಣೆಗಳ ಮೂಲಕ ಚಂದ್ರನತ್ತ ಹೆಜ್ಜೆ ಇರಿಸಿದೆ
- ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದ ಚಂದ್ರಯಾನ 2 ವೈಫಲ್ಯವಾಗಿತ್ತು. ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ, ಸಂಪರ್ಕ ಕಳೆದುಕೊಂಡು ತೀವ್ರ ನಿರಾಸೆ ಉಂಟು ಮಾಡಿತ್ತು. ವಿಜ್ಞಾನಿಗಳಷ್ಟೇ ಅಲ್ಲ ಇಡೀ ಭಾರತೀಯರು ಅಯ್ಯೋ ಹೀಗಾಯ್ತಲ್ಲ ಎಂದು ಬೇಸರ ಪಟ್ಟುಕೊಂಡಿದ್ದರು. ಆದರೆ ನಮ್ಮ ವಿಜ್ಞಾನಿಗಳು ಈ ಬಾರಿ ಎಲ್ಲಾ ರೀತಿಯಲ್ಲೂ ಪರೀಕ್ಷೆ ಮಾಡಿ, ಮತ್ತೊಂದು ಚಂದ್ರಯಾನಕ್ಕೆ ಸಿದ್ಧವಾಗಿದೆ.
3. ಚಂದ್ರಯಾನ 3 ಮಿಷನ್ಗೆ ವಿಜ್ಞಾನಿಗಳು ವಿಕ್ರಮ್ ಎಂದು ಹೆಸರಿಡಲಾಗಿದೆ.
4. GSLV Mk III ಅಥವಾ LVM3 ಹೆಸರಿನ ರಾಕೆಟ್ 3,900ಕೆಜಿ ತೂಕದ ಚಂದ್ರಯಾನ 3 ತೆಗೆದು ಚಂದ್ರನ ಕಕ್ಷೆಯತ್ತ ಸಾಗಲಿದೆ.
5. ವಿಕ್ರಮ್ ಕಾರ್ಯವೇನು?
* ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೆ ತಲುಪುತ್ತಿದ್ದಂತೆ ಪ್ರಗ್ಯಾನ್ ಎಂಬ ರೋಬೋ ಹೊರಬರಲಿದು, ಅದು ಅಲ್ಲಿರುವ ಖನಿಜಾಂಶಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿಯನ್ನು ಇಸ್ರೋಗೆ ರವಾನಿಸಲಿದೆ.
* ಚಂದ್ರನ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ಭವಿಷ್ಯದಲ್ಲಿ ಜನರನ್ನು ಚಂದ್ರನ ಕಡೆಗೆ ಕೊಂಡೊಯ್ಯುವ ಉದ್ದೇಶದಿಂದ ಈ ಯೋಜನೆ ಕೈಗೊಂಡಿದೆ.
6. ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದ ವಿಜ್ಞಾನಿಗಳು
ಚಂದ್ರಯಾನ 3 ವಿಕ್ರಮ ಉಡಾವಣೆಗೆ ಮುನ್ನ ವಿಜ್ಞಾನಿಗಳು ಅದರ ಮಾದರಿಯನ್ನು ತಂದು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಚಂದ್ರಯಾನ 3 ವಿಕ್ರಮ ಯೋಜನೆ ಯಶಸ್ವಿಯಾಗಲಿ ಎಂದು ಬೇಡಿಕೊಂಡಿದ್ದಾರೆ. ಯಾವುದೇ ಶುಭ ಕಾರ್ಯಕ್ಕೆ ದೇವರ ಕೃಪೆ ಇರಬೇಕೆಂದು ಭಾರತೀಯರು ಬಲವಾಗಿ ನಂಬುತ್ತೇವೆ. ಚಂದ್ರನಲ್ಲಿಗೆ ವಿಕ್ರಮ ಲ್ಯಾಂಡರ್ ತಲುಪಲು ನಮ್ಮ ಪ್ರಯತ್ನವಿದ್ದರಷ್ಟೇ ಸಾಲದು ದೇವರ ಆಶೀರ್ವಾದ ಕೂಡ ಮುಖ್ಯ ಎಂಬುವುದನ್ನು ನಮ್ಮ ವಿಜ್ಞಾನಿಗಳು ಕೂಡ ಬಲವಾಗಿ ನಂಬುತ್ತಾರೆ ಎಂಬುವುದಕ್ಕೆ ವಿಜ್ಞಾನಿಗಳು ನೆನ್ನೆ ತಿರುಪತಿಗೆ ಭೇಟಿ ನೀಡಿದ್ದೇ ಸಾಕ್ಷಿ.



Click it and Unblock the Notifications