Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಇಲ್ಲಿ ತಲೆಯಿಲ್ಲದ ಗಣಪನ ಪೂಜಿಸಲಾಗುವುದು!
ಪೌರಾಣಿಕ ಕತೆಯಲ್ಲಿ ಶಿವ ಗಣೇಶನ ತಲೆಕತ್ತರಿಸಿದ, ನಂತರ ಆನೆಯ ತಲೆಯನ್ನು ತಂದು ಜೋಡಿಸಿ ಗಣಪನಿಗೆ ಜೀವ ನೀಡಲಾಯಿತು ಎಂಬ ಕತೆಯಿದೆ. ಆದ್ದರಿಂದಲೇ ಆನೆಯ ತಲೆಯ ಗಣಪನ ಆರಾಧನೆ ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲಿ ಒಂದು ಕಡೆ ತಲೆಯೇ ಇಲ್ಲದೆ ಗಣೇಶನ ವಿಗ್ರಹವನ್ನು ಪೂಜಿಸಲಾಗುವುದು. ಅದು ಎಲ್ಲಿ ಎಂಬುವುದು ಗೊತ್ತೇ?

ಕೇದರ ಕಣಿವೆಯಲ್ಲಿರುವ ಮುಂಡಿಕಾಟೀಯ ದೇವಾಲಯದಲ್ಲಿ ತಲೆಯಿಲ್ಲದ ಗಣಪತಿಯನ್ನು ಆರಾಧನೆ ಮಾಡಲಾಗುವುದು. ಈ ಪ್ರದೇಶ ಉತ್ತರಕಾಂಡ ರಾಜ್ಯದ ಸೋನ್ಪ್ರಯಾಗ್ನಿಂದ 3 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ದೇವಭೂಮಿಯೆಂದು ಕರೆಯಲಾಗುವುದು.
ಶಿವ ಪುರಾಣದ ಪ್ರಕಾರ ಪಾರ್ವತಿ ತನ್ನ ಬೆವರಿನಿಂದ ಗಣಪತಿಯನ್ನು ತಯಾರಿಸುತ್ತಾಳೆ. ನಂತರ ತಾನು ಸ್ನಾನಕ್ಕೆ ಹೋಗುವಾಗ ಯಾರೇ ಬಂದರು ಒಳಗಡೆ ಬಿಡದಂತೆ ಮಗನಿಗೆ ಹೇಳಿ ಹೋಗುತ್ತಾಳೆ. ಆವಾಗ ಅಲ್ಲಿಗೆ ಬರುವ ಶಿವನನ್ನು ಗಣಪ ತಡೆಯುತ್ತಾನೆ, ಇದರಿಂದ ಕೋಪಗೊಂಡ ಶಿವ ಗಣಪನ ತಲೆಯನ್ನು ಕತ್ತರಿಸುತ್ತಾನೆ, ಆವಾಗ ಅಲ್ಲಿಗೆ ಬರುವ ಪಾರ್ವತಿ ಅದು ನಮ್ಮ ಮಗ ಎಂಬುವುದಾಗಿ ಹೇಳುತ್ತಾಳೆ. ನಂತರ ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಿ ಮರು ಜೀವ ನೀಡಲಾಗುವುದು ಎಂಬ ಕತೆಯಿದೆ.
ದೇವಭೂಮಿಯಲ್ಲಿಯೇ ಶಿವ ಗಣಪತಿಯ ತಲೆ ತೆಗೆದ, ಇಲ್ಲಿಯೇ ಜೋಡಿಸಿದ ಎಂದು ಕೂಡ ಹೇಳಲಾಗುವುದು, ಆದ್ದರಿಂದ ಇಲ್ಲಿಗೆ ಮುಂಡಿಕಾಟೀಯ ಎಂಬ ಹೆಸರು ಬಂತು ಎಂದು ಕೂಡ ಹೇಳಲಾಗುವುದು. ಮುಂಡ ಎಂದರೆ ತಲೆ, ಕಾಟೀಯ ಎಂದರೆ ಕತ್ತರಿಸಿದ ಎಂಬ ಅರ್ಥವಿದೆ.
ಕೇದರ್ನಾಥ ದೇವಾಲಯಕ್ಕೆ ನಡೆದುಕೊಂಡು ಹೋಗುವ ಹಳೆಯ ರಸ್ತೆಯಲ್ಲಿ ಹೋಗುವ ಭಕ್ತರು ಇಲ್ಲಿ ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಬಹುತೇಕರು ಹೊಸ ರಸ್ತೆ ಮೂಲಕ ಹೋಗುವುದರಿಂದ ಹೆಚ್ಚಿನವರಿಗೆ ಈ ರಸ್ತೆ ಬಗ್ಗೆ ಗೊತ್ತಿಲ್ಲ.
ಶಿವ ಪುರಾಣ:
ಶಿವ ಪುರಾಣದಲ್ಲಿ ಗಣೇಶನಿಗೆ ಆನೆಯ ತಲೆ ಹೇಗೆ ಬಂತು ಎಂಬ ಕತೆ ಇದೆ. ಪಾರ್ವತಿ ಸ್ನಾನಕ್ಕೆ ಹೋಗುವಾಗ ನಂದಿ ಬಳಿ ಯಾರನ್ನೂ ಒಳಗಡೆ ಬಿಡಬೇಡ ಎಂದು ಹೇಳಿ ಹೋಗುತ್ತಾಳೆ, ಆದರೆ ನಂದಿ ಶಿವ ಬಂದಾಗ ಶಿವನನ್ನು ತಡೆಯಲ್ಲ, ಶಿವ ಒಳಗಡೆ ಬರುತ್ತಾನೆ, ಇದರಿಂದ ಪಾರ್ವತಿಗೆ ಮುಜುಗರವಾಗುತ್ತದೆ.
ಪಾರ್ವತಿ ತಾನು ಮೈಗೆ ಹಚ್ಚಿದ ಅರಿಶಿಣದಿಂದ ಬಾಲಕನ ರೂಪ ಮಾಡುತ್ತಾಳೆ, ಅದರಲ್ಲಿ ಪಾರ್ವತಿ ಬೆವರು ಕೂಡ ಇರುತ್ತದೆ. ನಂತರ ಆ ಮೂರ್ತಿಗೆ ತನ್ನ ಶಕ್ತಿ ಧಾರೆ ಎರೆದು ಜೀವಕೊಡುತ್ತಾಳೆ, ನಂತರ ನಾನು ಸ್ನಾನಕ್ಕೆ ಹೋಗುವಾಗ ಯಾರನ್ನು ಬಿಡಬೇಡ ಎಂದು ಹೇಳುತ್ತಾಳೆ. ಅಮ್ಮನ ಮುದ್ದಿನ ಮಗ ತಾಯಿ ಹೇಳಿದ ಮಾತನ್ನು ತಪ್ಪದೆ ಪಾಲಿಸುತ್ತಾನೆ, ಶಿವ ಪಾರ್ವತಿಯನ್ನು ನೋಡಲು ಬಂದಾಗ ಕೂಡ ಒಳಗಡೆ ಬಿಡುವುದಿಲ್ಲ, ಇದರಿಂದ ಕೋಪಗೊಂಡ ಶಿವ ಗಣಪತಿಯ ತಲೆಯನ್ನು ಕತ್ತರಿಸುತ್ತಾನೆ.
ಶಿವನಿಗೆ ಈ ಮಗು ಪಾರ್ವತಿಯ ಅಂಶದಿಂದ ಉಂಟಾಗಿರುವ ಹುಡುಗ ಎಂಬುವುದು ತಿಳಿದಿರುವುದಿಲ್ಲ. ಪಾರ್ವತಿ ಬಂದು ನೋಡಿದಾಗ ಮಗನ ಮುಂಡ ರುಂಡದಿಂದ ಬೇರೆಯಾಗಿದೆ, ಇದರಿಂದ ಪಾರ್ವತಿಗೆ ತುಂಬಾನೇ ಕೋಪ ಬರುತ್ತದೆ. ಇಡೀ ಜಗತ್ತನ್ನೇ ನಾಶ ಮಾಡುತ್ತೇನೆ ಎಂದು ಶಾಪ ನೀಡುತ್ತಾಳೆ. ಶಿವನಿಗೆ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪ ಆಗುತ್ತದೆ. ಅಲ್ಲಿಗೆ ಬರುವ ಬ್ರಹ್ಮನ ಬಳಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದೇ ಪ್ರಾಣಿಯ ತಲೆಯನ್ನು ತರುವಂತೆ ಹೇಳುತ್ತಾನೆ. ಉತ್ತರ ಮುಖ ಮಾಡಿ ಮಲಗಿರುವ ಆನೆಯ ತಲೆಯನ್ನು ತಂದು ದೇಹಕ್ಕೆ ಜೋಡಿಸಲಾಗುವುದು, ನಂತರ ಮರುಜೀವ ಕೊಡಲಾಗುವುದು. ಹೀಗೆ ಗಣೇಶನಿಗೆ ಆನೆಯ ತಲೆ ಸಿಕ್ತುಜ, ಗಣೇಶ ಗಜಾನನ ಆದ. ಶಿವನಲ್ಲಿರುವ ಪ್ರಮುಖ ಶಕ್ತಿಯನ್ನು ಕೂಡ ಗಣೇಶನಿಗೆ ನೀಡಲಾಗುವುದು. ಅಲ್ಲದೆ ಯಾವುದೇ ಪೂಜೆಯ ಮುಂಚೆ ಗಣೇಶನ ಆರಾಧನೆ ಮಾಡಬೇಕು ಎಂದು ಶಿವ ಹೇಳುತ್ತಾನೆ. ಹೀಗಾಗಿ ಎಲ್ಲಾ ಪೂಜೆ ಮುಂಚೆ ಗಣೇಶನಿಗೆ ಪೂಜೆ ಮಾಡಲಾಗುವುದು.
ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥ ಏಕದಂತಾಯ ವಿದ್ಮಹೇ , ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್ ॥ ಓಂ ಶಾಂತಿ ಶಾಂತಿ ಶಾಂತಿಃ ॥



Click it and Unblock the Notifications
