Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಇಲ್ಲಿ ತಲೆಯಿಲ್ಲದ ಗಣಪನ ಪೂಜಿಸಲಾಗುವುದು!
ಪೌರಾಣಿಕ ಕತೆಯಲ್ಲಿ ಶಿವ ಗಣೇಶನ ತಲೆಕತ್ತರಿಸಿದ, ನಂತರ ಆನೆಯ ತಲೆಯನ್ನು ತಂದು ಜೋಡಿಸಿ ಗಣಪನಿಗೆ ಜೀವ ನೀಡಲಾಯಿತು ಎಂಬ ಕತೆಯಿದೆ. ಆದ್ದರಿಂದಲೇ ಆನೆಯ ತಲೆಯ ಗಣಪನ ಆರಾಧನೆ ಮಾಡುತ್ತೇವೆ. ಆದರೆ ನಮ್ಮ ದೇಶದಲ್ಲಿ ಒಂದು ಕಡೆ ತಲೆಯೇ ಇಲ್ಲದೆ ಗಣೇಶನ ವಿಗ್ರಹವನ್ನು ಪೂಜಿಸಲಾಗುವುದು. ಅದು ಎಲ್ಲಿ ಎಂಬುವುದು ಗೊತ್ತೇ?

ಕೇದರ ಕಣಿವೆಯಲ್ಲಿರುವ ಮುಂಡಿಕಾಟೀಯ ದೇವಾಲಯದಲ್ಲಿ ತಲೆಯಿಲ್ಲದ ಗಣಪತಿಯನ್ನು ಆರಾಧನೆ ಮಾಡಲಾಗುವುದು. ಈ ಪ್ರದೇಶ ಉತ್ತರಕಾಂಡ ರಾಜ್ಯದ ಸೋನ್ಪ್ರಯಾಗ್ನಿಂದ 3 ಕಿ.ಮೀ ದೂರದಲ್ಲಿದೆ. ಈ ಪ್ರದೇಶವನ್ನು ದೇವಭೂಮಿಯೆಂದು ಕರೆಯಲಾಗುವುದು.
ಶಿವ ಪುರಾಣದ ಪ್ರಕಾರ ಪಾರ್ವತಿ ತನ್ನ ಬೆವರಿನಿಂದ ಗಣಪತಿಯನ್ನು ತಯಾರಿಸುತ್ತಾಳೆ. ನಂತರ ತಾನು ಸ್ನಾನಕ್ಕೆ ಹೋಗುವಾಗ ಯಾರೇ ಬಂದರು ಒಳಗಡೆ ಬಿಡದಂತೆ ಮಗನಿಗೆ ಹೇಳಿ ಹೋಗುತ್ತಾಳೆ. ಆವಾಗ ಅಲ್ಲಿಗೆ ಬರುವ ಶಿವನನ್ನು ಗಣಪ ತಡೆಯುತ್ತಾನೆ, ಇದರಿಂದ ಕೋಪಗೊಂಡ ಶಿವ ಗಣಪನ ತಲೆಯನ್ನು ಕತ್ತರಿಸುತ್ತಾನೆ, ಆವಾಗ ಅಲ್ಲಿಗೆ ಬರುವ ಪಾರ್ವತಿ ಅದು ನಮ್ಮ ಮಗ ಎಂಬುವುದಾಗಿ ಹೇಳುತ್ತಾಳೆ. ನಂತರ ಆನೆಯ ತಲೆಯನ್ನು ತಂದು ಗಣಪನಿಗೆ ಜೋಡಿಸಿ ಮರು ಜೀವ ನೀಡಲಾಗುವುದು ಎಂಬ ಕತೆಯಿದೆ.
ದೇವಭೂಮಿಯಲ್ಲಿಯೇ ಶಿವ ಗಣಪತಿಯ ತಲೆ ತೆಗೆದ, ಇಲ್ಲಿಯೇ ಜೋಡಿಸಿದ ಎಂದು ಕೂಡ ಹೇಳಲಾಗುವುದು, ಆದ್ದರಿಂದ ಇಲ್ಲಿಗೆ ಮುಂಡಿಕಾಟೀಯ ಎಂಬ ಹೆಸರು ಬಂತು ಎಂದು ಕೂಡ ಹೇಳಲಾಗುವುದು. ಮುಂಡ ಎಂದರೆ ತಲೆ, ಕಾಟೀಯ ಎಂದರೆ ಕತ್ತರಿಸಿದ ಎಂಬ ಅರ್ಥವಿದೆ.
ಕೇದರ್ನಾಥ ದೇವಾಲಯಕ್ಕೆ ನಡೆದುಕೊಂಡು ಹೋಗುವ ಹಳೆಯ ರಸ್ತೆಯಲ್ಲಿ ಹೋಗುವ ಭಕ್ತರು ಇಲ್ಲಿ ಗಣಪನಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಬಹುತೇಕರು ಹೊಸ ರಸ್ತೆ ಮೂಲಕ ಹೋಗುವುದರಿಂದ ಹೆಚ್ಚಿನವರಿಗೆ ಈ ರಸ್ತೆ ಬಗ್ಗೆ ಗೊತ್ತಿಲ್ಲ.
ಶಿವ ಪುರಾಣ:
ಶಿವ ಪುರಾಣದಲ್ಲಿ ಗಣೇಶನಿಗೆ ಆನೆಯ ತಲೆ ಹೇಗೆ ಬಂತು ಎಂಬ ಕತೆ ಇದೆ. ಪಾರ್ವತಿ ಸ್ನಾನಕ್ಕೆ ಹೋಗುವಾಗ ನಂದಿ ಬಳಿ ಯಾರನ್ನೂ ಒಳಗಡೆ ಬಿಡಬೇಡ ಎಂದು ಹೇಳಿ ಹೋಗುತ್ತಾಳೆ, ಆದರೆ ನಂದಿ ಶಿವ ಬಂದಾಗ ಶಿವನನ್ನು ತಡೆಯಲ್ಲ, ಶಿವ ಒಳಗಡೆ ಬರುತ್ತಾನೆ, ಇದರಿಂದ ಪಾರ್ವತಿಗೆ ಮುಜುಗರವಾಗುತ್ತದೆ.
ಪಾರ್ವತಿ ತಾನು ಮೈಗೆ ಹಚ್ಚಿದ ಅರಿಶಿಣದಿಂದ ಬಾಲಕನ ರೂಪ ಮಾಡುತ್ತಾಳೆ, ಅದರಲ್ಲಿ ಪಾರ್ವತಿ ಬೆವರು ಕೂಡ ಇರುತ್ತದೆ. ನಂತರ ಆ ಮೂರ್ತಿಗೆ ತನ್ನ ಶಕ್ತಿ ಧಾರೆ ಎರೆದು ಜೀವಕೊಡುತ್ತಾಳೆ, ನಂತರ ನಾನು ಸ್ನಾನಕ್ಕೆ ಹೋಗುವಾಗ ಯಾರನ್ನು ಬಿಡಬೇಡ ಎಂದು ಹೇಳುತ್ತಾಳೆ. ಅಮ್ಮನ ಮುದ್ದಿನ ಮಗ ತಾಯಿ ಹೇಳಿದ ಮಾತನ್ನು ತಪ್ಪದೆ ಪಾಲಿಸುತ್ತಾನೆ, ಶಿವ ಪಾರ್ವತಿಯನ್ನು ನೋಡಲು ಬಂದಾಗ ಕೂಡ ಒಳಗಡೆ ಬಿಡುವುದಿಲ್ಲ, ಇದರಿಂದ ಕೋಪಗೊಂಡ ಶಿವ ಗಣಪತಿಯ ತಲೆಯನ್ನು ಕತ್ತರಿಸುತ್ತಾನೆ.
ಶಿವನಿಗೆ ಈ ಮಗು ಪಾರ್ವತಿಯ ಅಂಶದಿಂದ ಉಂಟಾಗಿರುವ ಹುಡುಗ ಎಂಬುವುದು ತಿಳಿದಿರುವುದಿಲ್ಲ. ಪಾರ್ವತಿ ಬಂದು ನೋಡಿದಾಗ ಮಗನ ಮುಂಡ ರುಂಡದಿಂದ ಬೇರೆಯಾಗಿದೆ, ಇದರಿಂದ ಪಾರ್ವತಿಗೆ ತುಂಬಾನೇ ಕೋಪ ಬರುತ್ತದೆ. ಇಡೀ ಜಗತ್ತನ್ನೇ ನಾಶ ಮಾಡುತ್ತೇನೆ ಎಂದು ಶಾಪ ನೀಡುತ್ತಾಳೆ. ಶಿವನಿಗೆ ತನ್ನ ತಪ್ಪಿನ ಬಗ್ಗೆ ಪಶ್ಚಾತಾಪ ಆಗುತ್ತದೆ. ಅಲ್ಲಿಗೆ ಬರುವ ಬ್ರಹ್ಮನ ಬಳಿ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದೇ ಪ್ರಾಣಿಯ ತಲೆಯನ್ನು ತರುವಂತೆ ಹೇಳುತ್ತಾನೆ. ಉತ್ತರ ಮುಖ ಮಾಡಿ ಮಲಗಿರುವ ಆನೆಯ ತಲೆಯನ್ನು ತಂದು ದೇಹಕ್ಕೆ ಜೋಡಿಸಲಾಗುವುದು, ನಂತರ ಮರುಜೀವ ಕೊಡಲಾಗುವುದು. ಹೀಗೆ ಗಣೇಶನಿಗೆ ಆನೆಯ ತಲೆ ಸಿಕ್ತುಜ, ಗಣೇಶ ಗಜಾನನ ಆದ. ಶಿವನಲ್ಲಿರುವ ಪ್ರಮುಖ ಶಕ್ತಿಯನ್ನು ಕೂಡ ಗಣೇಶನಿಗೆ ನೀಡಲಾಗುವುದು. ಅಲ್ಲದೆ ಯಾವುದೇ ಪೂಜೆಯ ಮುಂಚೆ ಗಣೇಶನ ಆರಾಧನೆ ಮಾಡಬೇಕು ಎಂದು ಶಿವ ಹೇಳುತ್ತಾನೆ. ಹೀಗಾಗಿ ಎಲ್ಲಾ ಪೂಜೆ ಮುಂಚೆ ಗಣೇಶನಿಗೆ ಪೂಜೆ ಮಾಡಲಾಗುವುದು.
ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥ ಏಕದಂತಾಯ ವಿದ್ಮಹೇ , ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್ ॥ ಓಂ ಶಾಂತಿ ಶಾಂತಿ ಶಾಂತಿಃ ॥



Click it and Unblock the Notifications