Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಶ್ರಾವಣ ಮಾಸ: ಶಿವನಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುವಾಗ ಈ ನಿಯಮಗಳು ತಿಳಿದಿರಲಿ
ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಾದ ಮಾಸ, ಶಿವನ ಆರಾಧನೆಯಲ್ಲಿ ಬಿಲ್ವಪತ್ರೆ ಎಲೆಗಳಿಗೆ ತುಂಬಾನೇ ಮಹತ್ವವಿದೆ, ಶಿವ ಪೂಜೆಯಲ್ಲಿ ಏನೇನೂ ಅರ್ಪಿಸದಿದ್ದರೂ ಸರಿ, ಬಿಲ್ವಪತ್ರೆ ಮಾತ್ರ ಅರ್ಪಿಸಲೇಬೇಕು, ಇಲ್ಲದಿದ್ದರೆ ಶಿವನು ನಮ್ಮ ಪೂಜೆಯಿಂದ ತೃಪ್ತನಾಗುವುದಿಲ್ಲ ಎಂದು ಹೇಳಲಾಗುವುದು.
ಆದರೆ ಶಿವ ಪೂಜೆಗೆ ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು ಎಂಬುವುದಕ್ಕೆ ಕೆಲವು ನಿಯಮಗಳಿವೆ, ಭಕ್ತರು ಆ ನಿಯಮ ಪ್ರಕಾರ ಮಾತ್ರ ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕು. ನೀವು ಶಿವನ ಆರಾಧನೆ ಮಾಡುವಾಗ ಬಿಲ್ವಪತ್ರೆ ಹೇಗೆ ಅರ್ಪಿಸಬೇಕು, ಶಿವಪೂಜೆಯಲ್ಲಿ ಬಿಲ್ವಪತ್ರೆಗೆ ಏಕಿಷ್ಟು ಮಹತ್ವ ಎಂದು ನೋಡೋಣ ಬನ್ನಿ:

ಬಿಲ್ವಪತ್ರೆ ಶಿವನಿಗೆ ಏಕಿಷ್ಟು ಪ್ರಿಯ?
ಪೌರಾಣಿಕ ಕತೆ ಪ್ರಕಾರ ಬಿಲ್ವ ಪತ್ರೆ ಮರವು ಪಾರ್ವತಿ ದೇವಿಯ ಬೆವರಿನಿಂದ ಹುಟ್ಟಿಕೊಂಡಿತು. ಬಿಲ್ವಪತ್ರೆಯಲ್ಲಿ ಪಾರ್ವತಿ ದೇವಿ ನೆಲೆಸಿರುತ್ತಾಳೆ, ಗಿರಿಜೆಯಾಗಿ ಈ ಮರದ ಬೇರುಗಳಲ್ಕಿ, ಮಹೇಶ್ವರಿಯಾಗಿ ಈ ಮರದ ಕಾಂಡದಲ್ಲಿ, ದಾಕ್ಷಾಯಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಇದರ ಎಲೆಗಳಲ್ಲಿ, ಕಾತ್ಯಾಯನಿಯಾಗಿ ಈ ಮರದ ಹಣ್ಣುಗಳಲ್ಲಿ, ಗೌರಿಯಾಗಿ ಬಿಲ್ವಪತ್ರೆ ಹೂಗಳಲ್ಲಿ ನೆಲೆಸಿರುತ್ತಾಲೆ. ಪಾರ್ವತಿಯ ಎಲ್ಲಾ ಸ್ವರೂಪಗಳು ಈ ಮರದ ರೂಪದಲ್ಲಿ ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಅಚ್ಚುಮೆಚ್ಚು ಎಂದು ಕರೆಯಲಾಗುವುದು. ಬಿಲ್ವಪತ್ರೆ ಮರ ಸ್ವರ್ಗದಲ್ಲಿರುವ ಕಲ್ಪ ವೃಕ್ಷಕ್ಕೆ ಸಮ ಎಂದು ಹೇಳಲಾಗುವುದು.
ಬಿಲ್ವ ಪತ್ರೆ ಎಲೆಗಳನ್ನು ಅರ್ಪಿಸುವಾಗ ಈ ನಿಯಮಗಳನ್ನು ಪಾಲಿಸಿ
* ಬಿಲ್ವಪತ್ರೆ ಎಲೆಯನ್ನು ಒಂದಾಗಿ ಅರ್ಪಿಸಬಾರದು, ಮೂರು ಎಲೆಗಳನ್ನು ಜೊತೆಯಾಗಿ ಶಿವನಿಗೆ ಅರ್ಪಿಸಬೇಕು.
* ಶಿವನಿಗೆ ಅರ್ಪಿಸುವ ಬಿಲ್ವಪತ್ರೆ ಎಲೆಗಳು ಹರಿದಿರಬಾರದು, ಹುಳು ಕಚ್ಚಿರಬಾರದು, ರಂಧ್ರಗಳಿರಬಾರದು.
* ಬಿಲ್ವ ಪತ್ರೆ ಎಲೆಗಳನ್ನು ಸೋಮವಾರ ಕೀಳಲೇಬಾರದು.ಸೋಮವಾರದ ಪೂಜೆಗೆ ಬಿಲ್ವಪತ್ರೆ ಅರ್ಪಿಸಲು ನೀವು ಭಾನುವಾರವೇ ಕೀಳಬೇಕು.
* ಬಿಲ್ವಪತ್ರೆ ಯಾವತ್ತಿಗೂ ಅಪವಿತ್ರವಾಗುವುದಿಲ್ಲ, ಒಮ್ಮೆ ಪೂಜೆಗೆ ಅರ್ಪಿಸಿದ ಎಲೆಗಳನ್ನು ಶಿವ ಪೂಜೆಯಲ್ಲಿ ಬಳಸುವುದಿಲ್ಲ, ಆದರೆ ಇತರ ಪೂಜೆಯಲ್ಲಿ ಬಳಸಬಹುದು.
* ಬಿಲ್ವಪತ್ರೆಯ ಮೃದು ಭಾಗ ಮೇಲಿರುವಂತೆ ಎಲೆಗಳನ್ನು ಅರ್ಪಿಸಬೇಕು, ಮಗುಚಿ ಅರ್ಪಿಸಬೇಡಿ.
* ಶಿವನಿಗೆ ಜಲಾಭಿಷೇಕ ಮಾಡುವಾಗ ಬಿಲ್ವಪತ್ರೆ ಅರ್ಪಿಸಿ.
* ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಉಂಗುರ ಬೆರಳು, ಮಧ್ಯ ಬೆರಳು, ಹೆಬ್ಬರಳು ಬಳಸಿ ಅರ್ಪಿಸಬೇಕು.
ಬಿಲ್ವ ಪತ್ರೆ ಎಲೆ ಕೀಳುವಾಗ ಈ ನಿಯಮಗಳನ್ನು ಅನುಸರಿಸಬೇಕು
ಎಲೆಗಳನ್ನು ಕೀಳುವಾಗ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಾ ಕೀಳಬೇಕು.
ಬಿಲ್ವಪತ್ರೆ ಎಲೆಗಳನ್ನು ಕೀಳುವಾಗ ಕೈಗಳು ಶುದ್ಧವಾಗಿರಬೇಕು. ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಬಿಲ್ವ ಪತ್ರೆ ಮರವನ್ನು ಪೂಜಿಸಿ ಅದರ ಅನುಮತಿ ಕೇಳಿ ನಂತರವಷ್ಟೇ ಎಲೆಗಳನ್ನು ಕೀಳಬೇಕು.
* ಬಿಲ್ವಪತ್ರೆ ಕಿತ್ತ ಬಳಿಕ ಅವುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
* ನಂತರ ಎಲೆಗಳ ಮೇಲೆ ಓಂ ಅಂತ ಚಂದನ ಪೇಸ್ಟ್ನಿಂದ ಬರೆದು ನಂತರ ಶಿವನಿಗೆ ಅರ್ಪಿಸಿ. ಬಿಲ್ವ ಪತ್ರೆ ಎಲೆಗಳನ್ನು ತೊಟ್ಟು ಸಹಿತ ಅರ್ಪಿಸಬೇಕು.
ಯಾವ ದಿನಗಳಲ್ಲಿ ಬಿಲ್ವಪತ್ರೆ ಕೀಳಬಾರದು?
ಸೋಮವಾರ, ಅಮವಾಸ್ಯೆ, ಮಕರ ಸಂಕ್ರಾಂತಿ, ಪೂರ್ಣಿಮಾ, ಅಷ್ಟಮಿ, ನವಮಿಯಂದು ಬಿಲ್ವಪತ್ರೆ ಎಲೆಗಳನ್ನು ಕೀಳಬಾರದು.



Click it and Unblock the Notifications