Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಹೇಗೆ ಅರ್ಪಿಸಬೇಕು?
ಗಣಪತಿ ಪೂಜೆಯನ್ನು ಮಾಡಲು ಕಠಿಣ ನಿಯಮಗಳಿಲ್ಲ, ಆದರೆ ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಆರಾಧನೆ ಮಾಡಿದರೆ ಸಾಕು ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಆದರೆ ಗಣಪತಿ ಪೂಜೆಯಲ್ಲಿ ಎಲ್ಲಾ ವಸ್ತುಗಳಿಗಿಂತ ಗರಿಕೆಗೆ ತುಂಬಾ ಶ್ರೇಷ್ಠವಾದ ಸ್ಥಾನವಿದೆ. ನೀವು ಪೂಜೆಗೆ ಇತರ ಯಾವುದೇ ವಸ್ತುಗಳನ್ನು ಅರ್ಪಿಸದಿದ್ದರೂ ಬರೀ ಗರಿಕೆಯನ್ನು ಅರ್ಪಿಸಿದರೂ ಸಾಕು ಗಣೇಶ ತೃಪ್ತನಾಗುತ್ತಾನೆ.
ಗಣಪತಿ ಪೂಜೆಯಲ್ಲಿ ಗರಿಕೆಯನ್ನು ಏಕೆ ಅರ್ಪಿಸಲಾಗುವುದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಎಂದು ನೋಡೋಣ ಬನ್ನಿ:

ದಂಥಕತೆ ಪ್ರಕಾರ
ದೇವಲೋಕದ ನರ್ತಕಿ ಗಣಪತಿಯನ್ನು ಮದುವೆಯಾಗ ಬಯಸುತ್ತಾಳೆ. ಗಣೇಶ ಧ್ಯಾನ ಮಾಡುತ್ತಿದ್ದಾಗ ಆಕೆ ಗಣಪತಿಯ ಧ್ಯಾನಕ್ಕೆ ಭಂಗ ಮಾಡಲು ಯತ್ನಿಸುತ್ತಾಳೆ, ನಂತರ ಗಣೇಶನ ಬಳಿ ತನ್ನ ಆಸೆಯನ್ನು ಹೇಳುತ್ತಾಳೆ, ಗಣಪತಿ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ, ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾರೆ. ಇದರಿಂದ ಗಣಪತಿಗೆ ಮೈಯೆಲ್ಲಾ ಉರಿಯ ಅನುಭವ ಉಂಟಾಗುವುದು ಆವಾಗ ಗರಿಕೆಯನ್ನು ಕಿತ್ತು ತಲೆ ಮೇಲೆ ಇಟ್ಟಾಗ ಉರಿ ಕಡಿಮೆಯಾಯಿತು, ಹೀಗಾಗಿ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಪ್ರಿಯ ಎಂದು ಹೇಳಲಾಗುವುದು.
ಅನಾಲಸುರ ಎಂಬ ರಾಕ್ಷಸ ತನ್ನ ಪೈಶಾಚಿಕ ಕೃತ್ಯ ಮೂಲಕ ದೇವ ಲೋಕದ ನೆಮ್ಮದಿ ಕೆಡಿಸಿದ್ದ , ದೇವತೆಗಳು ಶ್ರೀ ಗಣೇಶನ ಬಳಿ ಬಂದು ಕಾಪಾಡುವಂತೆ ಕೋರುತ್ತಾರೆ. ಆವಾಗ ಶ್ರೀ ಗಣೇಶ ಅನಾಲಸುರ ಎಂಬ ರಾಕ್ಷಸನನ್ನು ನುಂಗಿ ಭೂ ಲೋಕವನ್ನು ಕಾಪಾಡುತ್ತಾನೆ. ಆದರೆ ರಾಕ್ಷಸನ ನುಂಗಿದ ಬಳಿಕ ದೇಹದಲ್ಲಿ ತುಂಬಾ ಉರಿ ಉಂಟಾಗುವುದು, ಶ್ರೀ ವಿಷ್ಣು ಕಮಲವನ್ನು, ಇಂದ್ರ ಚಂದ್ರನನ್ನು ನೀಡುತ್ತಾನೆ, ಆದರೆ ಉರಿ ಕಡಿಮೆಯಾಗಲಿಲ್ಲ, ಆವಾಗ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿದಾಗ ಉರಿ ಕಡಿಮೆಯಾಗುತ್ತದೆ, ಹೀಗಾಗಿ ಶ್ರೀ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗುವುದು.
ಎಷ್ಟು ಗರಿಕೆಯನ್ನು ಅರ್ಪಿಸಬೇಕು?
ಗಣೇಶನಿಗೆ ಗರಿಕೆಯನ್ನು ಅರ್ಪಿಸುವಾಗ ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ಗರಿಕೆಯನ್ನು 3 ಅಥವಾ 5, 7, 21ರಂತೆ ಅರ್ಪಿಸಬೇಕು. ಸಾಮಾನ್ಯವಾಗಿ 21 ಗರಿಕೆಯನ್ನು ಅರ್ಪಿಸಲಾಗುವುದು.
ಗಣೇಶನಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ಶ್ರೀ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಗರಕೆಯನ್ನು ಬಳಸಿದರೆ 3 ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು.



Click it and Unblock the Notifications