Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಹೇಗೆ ಅರ್ಪಿಸಬೇಕು?
ಗಣಪತಿ ಪೂಜೆಯನ್ನು ಮಾಡಲು ಕಠಿಣ ನಿಯಮಗಳಿಲ್ಲ, ಆದರೆ ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಆರಾಧನೆ ಮಾಡಿದರೆ ಸಾಕು ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಆದರೆ ಗಣಪತಿ ಪೂಜೆಯಲ್ಲಿ ಎಲ್ಲಾ ವಸ್ತುಗಳಿಗಿಂತ ಗರಿಕೆಗೆ ತುಂಬಾ ಶ್ರೇಷ್ಠವಾದ ಸ್ಥಾನವಿದೆ. ನೀವು ಪೂಜೆಗೆ ಇತರ ಯಾವುದೇ ವಸ್ತುಗಳನ್ನು ಅರ್ಪಿಸದಿದ್ದರೂ ಬರೀ ಗರಿಕೆಯನ್ನು ಅರ್ಪಿಸಿದರೂ ಸಾಕು ಗಣೇಶ ತೃಪ್ತನಾಗುತ್ತಾನೆ.
ಗಣಪತಿ ಪೂಜೆಯಲ್ಲಿ ಗರಿಕೆಯನ್ನು ಏಕೆ ಅರ್ಪಿಸಲಾಗುವುದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಎಂದು ನೋಡೋಣ ಬನ್ನಿ:

ದಂಥಕತೆ ಪ್ರಕಾರ
ದೇವಲೋಕದ ನರ್ತಕಿ ಗಣಪತಿಯನ್ನು ಮದುವೆಯಾಗ ಬಯಸುತ್ತಾಳೆ. ಗಣೇಶ ಧ್ಯಾನ ಮಾಡುತ್ತಿದ್ದಾಗ ಆಕೆ ಗಣಪತಿಯ ಧ್ಯಾನಕ್ಕೆ ಭಂಗ ಮಾಡಲು ಯತ್ನಿಸುತ್ತಾಳೆ, ನಂತರ ಗಣೇಶನ ಬಳಿ ತನ್ನ ಆಸೆಯನ್ನು ಹೇಳುತ್ತಾಳೆ, ಗಣಪತಿ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ, ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾರೆ. ಇದರಿಂದ ಗಣಪತಿಗೆ ಮೈಯೆಲ್ಲಾ ಉರಿಯ ಅನುಭವ ಉಂಟಾಗುವುದು ಆವಾಗ ಗರಿಕೆಯನ್ನು ಕಿತ್ತು ತಲೆ ಮೇಲೆ ಇಟ್ಟಾಗ ಉರಿ ಕಡಿಮೆಯಾಯಿತು, ಹೀಗಾಗಿ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಪ್ರಿಯ ಎಂದು ಹೇಳಲಾಗುವುದು.
ಅನಾಲಸುರ ಎಂಬ ರಾಕ್ಷಸ ತನ್ನ ಪೈಶಾಚಿಕ ಕೃತ್ಯ ಮೂಲಕ ದೇವ ಲೋಕದ ನೆಮ್ಮದಿ ಕೆಡಿಸಿದ್ದ , ದೇವತೆಗಳು ಶ್ರೀ ಗಣೇಶನ ಬಳಿ ಬಂದು ಕಾಪಾಡುವಂತೆ ಕೋರುತ್ತಾರೆ. ಆವಾಗ ಶ್ರೀ ಗಣೇಶ ಅನಾಲಸುರ ಎಂಬ ರಾಕ್ಷಸನನ್ನು ನುಂಗಿ ಭೂ ಲೋಕವನ್ನು ಕಾಪಾಡುತ್ತಾನೆ. ಆದರೆ ರಾಕ್ಷಸನ ನುಂಗಿದ ಬಳಿಕ ದೇಹದಲ್ಲಿ ತುಂಬಾ ಉರಿ ಉಂಟಾಗುವುದು, ಶ್ರೀ ವಿಷ್ಣು ಕಮಲವನ್ನು, ಇಂದ್ರ ಚಂದ್ರನನ್ನು ನೀಡುತ್ತಾನೆ, ಆದರೆ ಉರಿ ಕಡಿಮೆಯಾಗಲಿಲ್ಲ, ಆವಾಗ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿದಾಗ ಉರಿ ಕಡಿಮೆಯಾಗುತ್ತದೆ, ಹೀಗಾಗಿ ಶ್ರೀ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗುವುದು.
ಎಷ್ಟು ಗರಿಕೆಯನ್ನು ಅರ್ಪಿಸಬೇಕು?
ಗಣೇಶನಿಗೆ ಗರಿಕೆಯನ್ನು ಅರ್ಪಿಸುವಾಗ ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ಗರಿಕೆಯನ್ನು 3 ಅಥವಾ 5, 7, 21ರಂತೆ ಅರ್ಪಿಸಬೇಕು. ಸಾಮಾನ್ಯವಾಗಿ 21 ಗರಿಕೆಯನ್ನು ಅರ್ಪಿಸಲಾಗುವುದು.
ಗಣೇಶನಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ಶ್ರೀ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಗರಕೆಯನ್ನು ಬಳಸಿದರೆ 3 ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು.



Click it and Unblock the Notifications