Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಹೇಗೆ ಅರ್ಪಿಸಬೇಕು?
ಗಣಪತಿ ಪೂಜೆಯನ್ನು ಮಾಡಲು ಕಠಿಣ ನಿಯಮಗಳಿಲ್ಲ, ಆದರೆ ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಆರಾಧನೆ ಮಾಡಿದರೆ ಸಾಕು ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಆದರೆ ಗಣಪತಿ ಪೂಜೆಯಲ್ಲಿ ಎಲ್ಲಾ ವಸ್ತುಗಳಿಗಿಂತ ಗರಿಕೆಗೆ ತುಂಬಾ ಶ್ರೇಷ್ಠವಾದ ಸ್ಥಾನವಿದೆ. ನೀವು ಪೂಜೆಗೆ ಇತರ ಯಾವುದೇ ವಸ್ತುಗಳನ್ನು ಅರ್ಪಿಸದಿದ್ದರೂ ಬರೀ ಗರಿಕೆಯನ್ನು ಅರ್ಪಿಸಿದರೂ ಸಾಕು ಗಣೇಶ ತೃಪ್ತನಾಗುತ್ತಾನೆ.
ಗಣಪತಿ ಪೂಜೆಯಲ್ಲಿ ಗರಿಕೆಯನ್ನು ಏಕೆ ಅರ್ಪಿಸಲಾಗುವುದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಎಂದು ನೋಡೋಣ ಬನ್ನಿ:

ದಂಥಕತೆ ಪ್ರಕಾರ
ದೇವಲೋಕದ ನರ್ತಕಿ ಗಣಪತಿಯನ್ನು ಮದುವೆಯಾಗ ಬಯಸುತ್ತಾಳೆ. ಗಣೇಶ ಧ್ಯಾನ ಮಾಡುತ್ತಿದ್ದಾಗ ಆಕೆ ಗಣಪತಿಯ ಧ್ಯಾನಕ್ಕೆ ಭಂಗ ಮಾಡಲು ಯತ್ನಿಸುತ್ತಾಳೆ, ನಂತರ ಗಣೇಶನ ಬಳಿ ತನ್ನ ಆಸೆಯನ್ನು ಹೇಳುತ್ತಾಳೆ, ಗಣಪತಿ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ, ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾರೆ. ಇದರಿಂದ ಗಣಪತಿಗೆ ಮೈಯೆಲ್ಲಾ ಉರಿಯ ಅನುಭವ ಉಂಟಾಗುವುದು ಆವಾಗ ಗರಿಕೆಯನ್ನು ಕಿತ್ತು ತಲೆ ಮೇಲೆ ಇಟ್ಟಾಗ ಉರಿ ಕಡಿಮೆಯಾಯಿತು, ಹೀಗಾಗಿ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಪ್ರಿಯ ಎಂದು ಹೇಳಲಾಗುವುದು.
ಅನಾಲಸುರ ಎಂಬ ರಾಕ್ಷಸ ತನ್ನ ಪೈಶಾಚಿಕ ಕೃತ್ಯ ಮೂಲಕ ದೇವ ಲೋಕದ ನೆಮ್ಮದಿ ಕೆಡಿಸಿದ್ದ , ದೇವತೆಗಳು ಶ್ರೀ ಗಣೇಶನ ಬಳಿ ಬಂದು ಕಾಪಾಡುವಂತೆ ಕೋರುತ್ತಾರೆ. ಆವಾಗ ಶ್ರೀ ಗಣೇಶ ಅನಾಲಸುರ ಎಂಬ ರಾಕ್ಷಸನನ್ನು ನುಂಗಿ ಭೂ ಲೋಕವನ್ನು ಕಾಪಾಡುತ್ತಾನೆ. ಆದರೆ ರಾಕ್ಷಸನ ನುಂಗಿದ ಬಳಿಕ ದೇಹದಲ್ಲಿ ತುಂಬಾ ಉರಿ ಉಂಟಾಗುವುದು, ಶ್ರೀ ವಿಷ್ಣು ಕಮಲವನ್ನು, ಇಂದ್ರ ಚಂದ್ರನನ್ನು ನೀಡುತ್ತಾನೆ, ಆದರೆ ಉರಿ ಕಡಿಮೆಯಾಗಲಿಲ್ಲ, ಆವಾಗ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿದಾಗ ಉರಿ ಕಡಿಮೆಯಾಗುತ್ತದೆ, ಹೀಗಾಗಿ ಶ್ರೀ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗುವುದು.
ಎಷ್ಟು ಗರಿಕೆಯನ್ನು ಅರ್ಪಿಸಬೇಕು?
ಗಣೇಶನಿಗೆ ಗರಿಕೆಯನ್ನು ಅರ್ಪಿಸುವಾಗ ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ಗರಿಕೆಯನ್ನು 3 ಅಥವಾ 5, 7, 21ರಂತೆ ಅರ್ಪಿಸಬೇಕು. ಸಾಮಾನ್ಯವಾಗಿ 21 ಗರಿಕೆಯನ್ನು ಅರ್ಪಿಸಲಾಗುವುದು.
ಗಣೇಶನಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ಶ್ರೀ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಗರಕೆಯನ್ನು ಬಳಸಿದರೆ 3 ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು.



Click it and Unblock the Notifications











