Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಹೇಗೆ ಅರ್ಪಿಸಬೇಕು?
ಗಣಪತಿ ಪೂಜೆಯನ್ನು ಮಾಡಲು ಕಠಿಣ ನಿಯಮಗಳಿಲ್ಲ, ಆದರೆ ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಆರಾಧನೆ ಮಾಡಿದರೆ ಸಾಕು ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಆದರೆ ಗಣಪತಿ ಪೂಜೆಯಲ್ಲಿ ಎಲ್ಲಾ ವಸ್ತುಗಳಿಗಿಂತ ಗರಿಕೆಗೆ ತುಂಬಾ ಶ್ರೇಷ್ಠವಾದ ಸ್ಥಾನವಿದೆ. ನೀವು ಪೂಜೆಗೆ ಇತರ ಯಾವುದೇ ವಸ್ತುಗಳನ್ನು ಅರ್ಪಿಸದಿದ್ದರೂ ಬರೀ ಗರಿಕೆಯನ್ನು ಅರ್ಪಿಸಿದರೂ ಸಾಕು ಗಣೇಶ ತೃಪ್ತನಾಗುತ್ತಾನೆ.
ಗಣಪತಿ ಪೂಜೆಯಲ್ಲಿ ಗರಿಕೆಯನ್ನು ಏಕೆ ಅರ್ಪಿಸಲಾಗುವುದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಎಂದು ನೋಡೋಣ ಬನ್ನಿ:

ದಂಥಕತೆ ಪ್ರಕಾರ
ದೇವಲೋಕದ ನರ್ತಕಿ ಗಣಪತಿಯನ್ನು ಮದುವೆಯಾಗ ಬಯಸುತ್ತಾಳೆ. ಗಣೇಶ ಧ್ಯಾನ ಮಾಡುತ್ತಿದ್ದಾಗ ಆಕೆ ಗಣಪತಿಯ ಧ್ಯಾನಕ್ಕೆ ಭಂಗ ಮಾಡಲು ಯತ್ನಿಸುತ್ತಾಳೆ, ನಂತರ ಗಣೇಶನ ಬಳಿ ತನ್ನ ಆಸೆಯನ್ನು ಹೇಳುತ್ತಾಳೆ, ಗಣಪತಿ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ, ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾರೆ. ಇದರಿಂದ ಗಣಪತಿಗೆ ಮೈಯೆಲ್ಲಾ ಉರಿಯ ಅನುಭವ ಉಂಟಾಗುವುದು ಆವಾಗ ಗರಿಕೆಯನ್ನು ಕಿತ್ತು ತಲೆ ಮೇಲೆ ಇಟ್ಟಾಗ ಉರಿ ಕಡಿಮೆಯಾಯಿತು, ಹೀಗಾಗಿ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಪ್ರಿಯ ಎಂದು ಹೇಳಲಾಗುವುದು.
ಅನಾಲಸುರ ಎಂಬ ರಾಕ್ಷಸ ತನ್ನ ಪೈಶಾಚಿಕ ಕೃತ್ಯ ಮೂಲಕ ದೇವ ಲೋಕದ ನೆಮ್ಮದಿ ಕೆಡಿಸಿದ್ದ , ದೇವತೆಗಳು ಶ್ರೀ ಗಣೇಶನ ಬಳಿ ಬಂದು ಕಾಪಾಡುವಂತೆ ಕೋರುತ್ತಾರೆ. ಆವಾಗ ಶ್ರೀ ಗಣೇಶ ಅನಾಲಸುರ ಎಂಬ ರಾಕ್ಷಸನನ್ನು ನುಂಗಿ ಭೂ ಲೋಕವನ್ನು ಕಾಪಾಡುತ್ತಾನೆ. ಆದರೆ ರಾಕ್ಷಸನ ನುಂಗಿದ ಬಳಿಕ ದೇಹದಲ್ಲಿ ತುಂಬಾ ಉರಿ ಉಂಟಾಗುವುದು, ಶ್ರೀ ವಿಷ್ಣು ಕಮಲವನ್ನು, ಇಂದ್ರ ಚಂದ್ರನನ್ನು ನೀಡುತ್ತಾನೆ, ಆದರೆ ಉರಿ ಕಡಿಮೆಯಾಗಲಿಲ್ಲ, ಆವಾಗ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿದಾಗ ಉರಿ ಕಡಿಮೆಯಾಗುತ್ತದೆ, ಹೀಗಾಗಿ ಶ್ರೀ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗುವುದು.
ಎಷ್ಟು ಗರಿಕೆಯನ್ನು ಅರ್ಪಿಸಬೇಕು?
ಗಣೇಶನಿಗೆ ಗರಿಕೆಯನ್ನು ಅರ್ಪಿಸುವಾಗ ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ಗರಿಕೆಯನ್ನು 3 ಅಥವಾ 5, 7, 21ರಂತೆ ಅರ್ಪಿಸಬೇಕು. ಸಾಮಾನ್ಯವಾಗಿ 21 ಗರಿಕೆಯನ್ನು ಅರ್ಪಿಸಲಾಗುವುದು.
ಗಣೇಶನಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ಶ್ರೀ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಗರಕೆಯನ್ನು ಬಳಸಿದರೆ 3 ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು.



Click it and Unblock the Notifications