Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ನಮ್ಮ ಇಷ್ಟಾರ್ಥ ನೆರವೇರಲು ಸಾಯಿ ಬಾಬಾರನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು?
ಶಿರಡಿ ಸಾಯಿಬಾಬಾನ ದರ್ಶನಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಭಕ್ತರು ಬರುತ್ತಾರೆ. ಶಿರಡಿ ಸಾಯಿಬಾಬಾನ ಆರಾಧಿಸುವುದರಿಂದ ಸಾಯಿಬಾಬಾ ನಮ್ಮನ್ನು ಎಲ್ಲಾ ಕಷ್ಟದ ಸಂದರ್ಭಗಳಲ್ಲಿ ಮಾಡುತ್ತಾನೆ ಎಂಬುವುದನ್ನು ಬಾಬಾನ ಆರಾಧಿಸುವ ಭಕ್ತರು ಬಲವಾಗಿ ನಂಬುತ್ತಾರೆ.
ಕೆಲವರು ವರ್ಷಕ್ಕೊಮ್ಮೆ ಅಥವಾ ತಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೋಗಿ ಬಾಬಾನ ದರ್ಶನ ಪಡೆದು ಬರುತ್ತಾರೆ. ಆದರೆ ಎಲ್ಲರಿಗೆ ಶಿರಡಿಗೆ ಆಗಾಗ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಬಾಬಾನ ಮೂರ್ತಿಯನ್ನು ಮನೆಯಲ್ಲಿ ಆರಾಧಿಸುತ್ತಾರೆ. ನೀವು ಶಿರಡಿ ಸಾಯಿ ಬಾಬಾನನ್ನು ಮನೆಯಲ್ಲಿ ಆರಾಧಿಸುವಾಗ ಕೆಲವೊಂದು ಪೂಜಾ ನಿಯಮಗಳಿವೆ, ಅದರಂತೆ ಪೂಜೆ ಮಾಡಿದರೆ ಶಿರಡಿ ಬಾಬಾನ ಕೃಪೆ ನಿಮ್ಮ ಮೇಲೆ ಇರಲಿದೆ.

ಸಾಯಿಬಾಬಾ ಮೂರ್ತಿಯನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಿ
ನೀವು ಸಾಯಿಬಾಬಾನ ಮಾರ್ಬಲ್ ಮೂರ್ತಿಯನ್ನು ನಿಮ್ಮ ಮನೆಯಲ್ಲಿಡಬೇಕು. ಮನೆಯಲ್ಲಿ ಸಾಯಿಬಾಬಾನ ಮೂರ್ತಿ ಇದ್ದರೆ ದೇವರೇ ನಿಮ್ಮ ಮನೆಯಲ್ಲಿ ಇರುವ ಭಾವನೆ ಮೂಡುವುದು. ಆ ಮೂರ್ತಿಯನ್ನು ನೋಡಿದಾಗ ಧನಾತ್ಮಕ ಭಾವನೆ ಮೂಡಿಸುತ್ತದೆ. ಪ್ರತಿದಿನ ಶಿರಡಿ ಸಾಯಿಬಾಬಾನ ಮೂರ್ತಿಗೆ ನಮಸ್ಕರಿಸಿ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ದೇವರ ಕೃಪೆ ನಮ್ಮ ಮೇಲಿದೆ ಎಂಭ ಭಾವನೆಯೊಂದೇ ಸಾಕು ಎಂಥ ಸವಾಲನ್ನು ಕೂಡ ಎದುರಿಸುವ ಶಕ್ತಿ ದೊರೆಯುವುದು.
ಸಾಯಿ ಬಾಬಾ ಮೂರ್ತಿಯನ್ನು ಸ್ವಚ್ಛಗೊಳಿಸಿ
ನಿಮ್ಮ ಮನೆಯಲ್ಲಿ ಸಾಯಿಬಾಬಾರ ಮಾರ್ಬಲ್ ಮೂರ್ತಿ ಇದ್ದರೆ ರೋಸ್ ವಾಟರ್ ಬಳಸಿ ಮೂರ್ತಿಯನ್ನು ಸ್ವಚ್ಛಗೊಳಿಸಿ. ಕೆಲವರು ಹಾಲು, ಮೊಸರು, ಗಂಗಾ ಜಲ ಬಳಸಿ ಸ್ವಚ್ಛಗೊಳಿಸುತ್ತಾರೆ. ನಂತರ ಬಾಬಾ ಮೂರ್ತಿಯನ್ನು ಸ್ವಚ್ಛ ಬಟ್ಟೆಯಿಂದ ವರ್ತಿಸಿ. ಸಾಯಿಬಾಬಾನ ಭಕ್ತರು ಪೂಜಿಸುವಾಗ ಯಾವುದೇ ಆಡಂಭರ ಅಗ್ಯತವಿಲ್ಲ, ಮನಸ್ಸಿನಲ್ಲಿ ಪವಿತ್ರವಾದ ಭಕ್ತಿಯೊಂದಿದ್ದರೆ ಸಾಕು.
ದೀಪ ಹಚ್ಚಿ
ನೀವು ದೇವರ ಮೂರ್ತಿಯನ್ನು ಸ್ವಚ್ಛಗೊಳಿಸಿ, ಹೂವಿನಿಂದ ಅಲಂಕರಿಸಿ ತುಪ್ಪದ ದೀಪವನ್ನು ಬೆಳಗಿ. ನೀವು ಸಾಯಿಬಾಬಾಗೆ ಮಲ್ಲಿಗೆ , ಚೆಂಡು ಹೂ, ಗುಲಾಬಿ ಹೂ ಹೀಗೆ ಹೂಗಳಿಂದ ಅಲಂಕರಿಸಿ.
ಸಾಯಿಬಾಬಾನಿಗೆ ಯಾವ ನೈವೇದ್ಯ ಅರ್ಪಿಸಬೇಕು?
ಸಾಯಿಬಾಬಾನಿಗೆ ಯಾವುದೇ ಸಾತ್ವಿಕ ಆಹಾರ ನೀವು ಸೆವಿಸುವ ಮುನ್ನ ರುಚಿ ನೋಡದೆ ನೈವೇದ್ಯವಾಗಿ ಅರ್ಪಿಸಬೇಕು. ಸಾಯಿಬಾಬಾಗೆ ಇಂಥದ್ದೇ ನೈವೇದ್ಯ ಅರ್ಪಿಸಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ನೀವು ಪ್ರತಿದಿನ ನೀವು ಮಾಡಿದ ಅಡುಗೆಯಲ್ಲಿ ದೇವರಿಗೆ ಸ್ವಲ್ಪ ನೈವೇದ್ಯವಾಗಿ ಅರ್ಪಿಸಿ ನಂತರ ಸೇವಿಸಬಹುದು.
ಆರತಿ ಬೆಳಗಿ
ಸಾಯಿಬಾಬಾಗೆ ಆರತಿ ಬೆಳಗಿ, ಭಕ್ತಿಗೀತೆ ಅಥವಾ ಮಂತ್ರಗಳನ್ನು ಹೇಳುವ ಮೂಲಕ ಆರಾಧಿಸಿ.
ಸಾಯಿ ಬಾಬಾ ಮಂತ್ರ ಪಠಿಸಿ
ಓಂ ಸಾಯಿನಾಥಾಯ ನಮಃ
ಓಂ ಲಕ್ಷ್ಮೀ ನಾರಾಯಣಾಯ ನಮಃ
ಓಂ ಶ್ರೀ ರಾಮಕೃಷ್ಣ ಮಾರುತ್ಯಾದಿ ರೂಪಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ಗೋದಾವರೀತಟ ಶಿರಡೀ ವಾಸಿನೇ ನಮಃ
ಓಂ ಭಕ್ತ ಹೃದಾಲಯಾಯ ನಮಃ
ಓಂ ಸರ್ವಹೃದ್ವಾಸಿನೇ ನಮಃ
ಓಂ ಭೂತಾವಾಸಾಯ ನಮಃ
ಓಂ ಭೂತ ಭವಿಷ್ಯದ್ಭಾವವರ್ಜತಾಯ ನಮಃ
ಓಂ ಕಾಲಾತೀ ತಾಯ ನಮಃ
ಗುರುವಾರ ವಿಶೇಷ ಪೂಜೆ ಸಲ್ಲಿಸಿ
ಶಿರಡಿ ಸಾಯಿಬಾಬಾರನ್ನು ನೀವು ಪ್ರತಿದಿನ ಪೂಜೆ ಸಲ್ಲಿಸಬಹುದು, ಅದರಲ್ಲೂ ಗುರುವಾರ ಸಾಯಿಬಾಬಾರಿಗೆ ಉಪವಾಸವಿದ್ದು ಪೂಜೆ ಸಲ್ಲಿಸಿದರೆ ಇನ್ನೂ ಒಳ್ಳೆಯದು.
ಶಿರಡಿ ಸಾಯಿಬಾಬಾ ಸದಾ ಅವನ ಭಕ್ತರನ್ನು ರಕ್ಷಿಸುತ್ತಾನೆ, ಸಾಯಿಬಾಬಾರ ಸ್ಮರಣೆಯೇ ಸಾಯಿಬಾಬಾರನ್ನು ಆರಾಧಿಸುತ್ತಿರುವ ಭಕ್ತರ ಶಕ್ತಿ... ಓಂ ಸಾಯಿನಾಥಾಯ ನಮಃ



Click it and Unblock the Notifications