Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನಮ್ಮ ಇಷ್ಟಾರ್ಥ ನೆರವೇರಲು ಸಾಯಿ ಬಾಬಾರನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು?
ಶಿರಡಿ ಸಾಯಿಬಾಬಾನ ದರ್ಶನಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಭಕ್ತರು ಬರುತ್ತಾರೆ. ಶಿರಡಿ ಸಾಯಿಬಾಬಾನ ಆರಾಧಿಸುವುದರಿಂದ ಸಾಯಿಬಾಬಾ ನಮ್ಮನ್ನು ಎಲ್ಲಾ ಕಷ್ಟದ ಸಂದರ್ಭಗಳಲ್ಲಿ ಮಾಡುತ್ತಾನೆ ಎಂಬುವುದನ್ನು ಬಾಬಾನ ಆರಾಧಿಸುವ ಭಕ್ತರು ಬಲವಾಗಿ ನಂಬುತ್ತಾರೆ.
ಕೆಲವರು ವರ್ಷಕ್ಕೊಮ್ಮೆ ಅಥವಾ ತಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೋಗಿ ಬಾಬಾನ ದರ್ಶನ ಪಡೆದು ಬರುತ್ತಾರೆ. ಆದರೆ ಎಲ್ಲರಿಗೆ ಶಿರಡಿಗೆ ಆಗಾಗ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಬಾಬಾನ ಮೂರ್ತಿಯನ್ನು ಮನೆಯಲ್ಲಿ ಆರಾಧಿಸುತ್ತಾರೆ. ನೀವು ಶಿರಡಿ ಸಾಯಿ ಬಾಬಾನನ್ನು ಮನೆಯಲ್ಲಿ ಆರಾಧಿಸುವಾಗ ಕೆಲವೊಂದು ಪೂಜಾ ನಿಯಮಗಳಿವೆ, ಅದರಂತೆ ಪೂಜೆ ಮಾಡಿದರೆ ಶಿರಡಿ ಬಾಬಾನ ಕೃಪೆ ನಿಮ್ಮ ಮೇಲೆ ಇರಲಿದೆ.

ಸಾಯಿಬಾಬಾ ಮೂರ್ತಿಯನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಿ
ನೀವು ಸಾಯಿಬಾಬಾನ ಮಾರ್ಬಲ್ ಮೂರ್ತಿಯನ್ನು ನಿಮ್ಮ ಮನೆಯಲ್ಲಿಡಬೇಕು. ಮನೆಯಲ್ಲಿ ಸಾಯಿಬಾಬಾನ ಮೂರ್ತಿ ಇದ್ದರೆ ದೇವರೇ ನಿಮ್ಮ ಮನೆಯಲ್ಲಿ ಇರುವ ಭಾವನೆ ಮೂಡುವುದು. ಆ ಮೂರ್ತಿಯನ್ನು ನೋಡಿದಾಗ ಧನಾತ್ಮಕ ಭಾವನೆ ಮೂಡಿಸುತ್ತದೆ. ಪ್ರತಿದಿನ ಶಿರಡಿ ಸಾಯಿಬಾಬಾನ ಮೂರ್ತಿಗೆ ನಮಸ್ಕರಿಸಿ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ದೇವರ ಕೃಪೆ ನಮ್ಮ ಮೇಲಿದೆ ಎಂಭ ಭಾವನೆಯೊಂದೇ ಸಾಕು ಎಂಥ ಸವಾಲನ್ನು ಕೂಡ ಎದುರಿಸುವ ಶಕ್ತಿ ದೊರೆಯುವುದು.
ಸಾಯಿ ಬಾಬಾ ಮೂರ್ತಿಯನ್ನು ಸ್ವಚ್ಛಗೊಳಿಸಿ
ನಿಮ್ಮ ಮನೆಯಲ್ಲಿ ಸಾಯಿಬಾಬಾರ ಮಾರ್ಬಲ್ ಮೂರ್ತಿ ಇದ್ದರೆ ರೋಸ್ ವಾಟರ್ ಬಳಸಿ ಮೂರ್ತಿಯನ್ನು ಸ್ವಚ್ಛಗೊಳಿಸಿ. ಕೆಲವರು ಹಾಲು, ಮೊಸರು, ಗಂಗಾ ಜಲ ಬಳಸಿ ಸ್ವಚ್ಛಗೊಳಿಸುತ್ತಾರೆ. ನಂತರ ಬಾಬಾ ಮೂರ್ತಿಯನ್ನು ಸ್ವಚ್ಛ ಬಟ್ಟೆಯಿಂದ ವರ್ತಿಸಿ. ಸಾಯಿಬಾಬಾನ ಭಕ್ತರು ಪೂಜಿಸುವಾಗ ಯಾವುದೇ ಆಡಂಭರ ಅಗ್ಯತವಿಲ್ಲ, ಮನಸ್ಸಿನಲ್ಲಿ ಪವಿತ್ರವಾದ ಭಕ್ತಿಯೊಂದಿದ್ದರೆ ಸಾಕು.
ದೀಪ ಹಚ್ಚಿ
ನೀವು ದೇವರ ಮೂರ್ತಿಯನ್ನು ಸ್ವಚ್ಛಗೊಳಿಸಿ, ಹೂವಿನಿಂದ ಅಲಂಕರಿಸಿ ತುಪ್ಪದ ದೀಪವನ್ನು ಬೆಳಗಿ. ನೀವು ಸಾಯಿಬಾಬಾಗೆ ಮಲ್ಲಿಗೆ , ಚೆಂಡು ಹೂ, ಗುಲಾಬಿ ಹೂ ಹೀಗೆ ಹೂಗಳಿಂದ ಅಲಂಕರಿಸಿ.
ಸಾಯಿಬಾಬಾನಿಗೆ ಯಾವ ನೈವೇದ್ಯ ಅರ್ಪಿಸಬೇಕು?
ಸಾಯಿಬಾಬಾನಿಗೆ ಯಾವುದೇ ಸಾತ್ವಿಕ ಆಹಾರ ನೀವು ಸೆವಿಸುವ ಮುನ್ನ ರುಚಿ ನೋಡದೆ ನೈವೇದ್ಯವಾಗಿ ಅರ್ಪಿಸಬೇಕು. ಸಾಯಿಬಾಬಾಗೆ ಇಂಥದ್ದೇ ನೈವೇದ್ಯ ಅರ್ಪಿಸಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ನೀವು ಪ್ರತಿದಿನ ನೀವು ಮಾಡಿದ ಅಡುಗೆಯಲ್ಲಿ ದೇವರಿಗೆ ಸ್ವಲ್ಪ ನೈವೇದ್ಯವಾಗಿ ಅರ್ಪಿಸಿ ನಂತರ ಸೇವಿಸಬಹುದು.
ಆರತಿ ಬೆಳಗಿ
ಸಾಯಿಬಾಬಾಗೆ ಆರತಿ ಬೆಳಗಿ, ಭಕ್ತಿಗೀತೆ ಅಥವಾ ಮಂತ್ರಗಳನ್ನು ಹೇಳುವ ಮೂಲಕ ಆರಾಧಿಸಿ.
ಸಾಯಿ ಬಾಬಾ ಮಂತ್ರ ಪಠಿಸಿ
ಓಂ ಸಾಯಿನಾಥಾಯ ನಮಃ
ಓಂ ಲಕ್ಷ್ಮೀ ನಾರಾಯಣಾಯ ನಮಃ
ಓಂ ಶ್ರೀ ರಾಮಕೃಷ್ಣ ಮಾರುತ್ಯಾದಿ ರೂಪಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ಗೋದಾವರೀತಟ ಶಿರಡೀ ವಾಸಿನೇ ನಮಃ
ಓಂ ಭಕ್ತ ಹೃದಾಲಯಾಯ ನಮಃ
ಓಂ ಸರ್ವಹೃದ್ವಾಸಿನೇ ನಮಃ
ಓಂ ಭೂತಾವಾಸಾಯ ನಮಃ
ಓಂ ಭೂತ ಭವಿಷ್ಯದ್ಭಾವವರ್ಜತಾಯ ನಮಃ
ಓಂ ಕಾಲಾತೀ ತಾಯ ನಮಃ
ಗುರುವಾರ ವಿಶೇಷ ಪೂಜೆ ಸಲ್ಲಿಸಿ
ಶಿರಡಿ ಸಾಯಿಬಾಬಾರನ್ನು ನೀವು ಪ್ರತಿದಿನ ಪೂಜೆ ಸಲ್ಲಿಸಬಹುದು, ಅದರಲ್ಲೂ ಗುರುವಾರ ಸಾಯಿಬಾಬಾರಿಗೆ ಉಪವಾಸವಿದ್ದು ಪೂಜೆ ಸಲ್ಲಿಸಿದರೆ ಇನ್ನೂ ಒಳ್ಳೆಯದು.
ಶಿರಡಿ ಸಾಯಿಬಾಬಾ ಸದಾ ಅವನ ಭಕ್ತರನ್ನು ರಕ್ಷಿಸುತ್ತಾನೆ, ಸಾಯಿಬಾಬಾರ ಸ್ಮರಣೆಯೇ ಸಾಯಿಬಾಬಾರನ್ನು ಆರಾಧಿಸುತ್ತಿರುವ ಭಕ್ತರ ಶಕ್ತಿ... ಓಂ ಸಾಯಿನಾಥಾಯ ನಮಃ



Click it and Unblock the Notifications