Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಶನಿದೋಷ ನಿವಾರಣೆ ಮಾಡುತ್ತೆ ಶನಿ ಸಿಂಗಾಪುರದ ಕುದುರೆ ಲಾಳ, ಎಲ್ಲಿ ಸಿಗುತ್ತೆ?
ಶನಿದೋಷ ಇರುವವರು ಶನಿ ಕುದುರೆ ಲಾಳ (ಶನಿ ಉಂಗುರ) ಬಳಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಶನಿ ಕುದುರೆ ಲಾಳ ಮಹಾರಾಷ್ಟ್ರದ ಶನಿ ಸಿಂಗಾಪುರದಲ್ಲಿ ದೊರೆಯುತ್ತದೆ. ಕೆಲವರು ಶನಿದೋಷ ನಿವಾರಣೆ ಕಬ್ಬಿಣದ ರಿಂಗ್ ಧರಿಸುತ್ತಾರೆ.
ಈ ಶನಿ ಕುದುರೆ ಲಾಳ ಹಾಗೇ ಧರಿಸುವಂತಿಲ್ಲ, ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಆವಾಗ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಈ ಶನಿ ಕುದುರೆ ಲಾಳ ಬಗ್ಗೆ ಹೆಚ್ಚಿನ ಮಾಹಿತಿ ನೋಡುವುದಾದರೆ:

ಶನಿದೋಷ ನಿವಾರಣೆಗೆ ಕುದುರೆಲಾಳ ಬಳಸಲಾಗುವುದು
ಇದು ನಿಮಗೆ ಶನಿ ಸಿಂಗಾಪುರದಲ್ಲಿ ದೊರೆಯುವುದು. ಶನಿ ಸಿಂಗಾಪುರದ ಮಹತ್ವದ ಬಗ್ಗೆ ನೋಡುವುದಾದರೆ:
ಶನಿ ಸಿಂಗಾಪುರ ಎಂಬುವುದು ಒಂದು ಗ್ರಾಮ. ಈ ಗ್ರಾಮ ಮಹಾರಾಷ್ಟ್ರದ ನಾಸಿಕ್ ಸಮೀಪದಲ್ಲಿದೆ. ಈ ಗ್ರಾಮದ ವಿಶೇಷತೆಯೆಂದರೆ ಇಲ್ಲಿಯ ಬ್ಯಾಂಕ್ಗಳಿಗೂ ಬೀಗ ಹಾಕುವುದಿಲ್ಲ.
ಶನಿದೇವ ಈ ಗ್ರಾಮವನ್ನು ರಕ್ಷಣೆ ಮಾಡುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಜನರ ನಂಬಿಕೆಗೆ ತಕ್ಕಂತೆ ಅನೇಕ ಪವಾಡಗಳು ನಡೆದಿರುವುದರಿಂದ ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾವೊಬ್ಬ ಕಳ್ಳನಿಗೆ ಇರಲ್ಲ. ಕಳ್ಳತನ ಇತಿಹಾಸವಿಲ್ಲದ ಗ್ರಾಮ ಇದಾಗಿದೆ. ಇಲ್ಲಿ ಶನಿದೇವನ ಮೂರ್ತಿಯಿಲ್ಲ, ಆದರೆ ಒಂದು ಕಲ್ಲು ಇದೆ, ಆ ಕಲ್ಲನ್ನು ಶನಿದೇವ ಎಂದು ಪೂಜಿಸಲಾಗುವುದು.
ಯಾವುದೇ ಪೂಜಾರಿಯಿಲ್ಲ
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಪೂಜೆ ಮಾಡಲು ಯಾವುದೇ ಪೂಜಾರಿಯಿಲ್ಲ ಜನರೇ ಪೂಜೆ ಮಾಡುತ್ತಾರೆ. ಈ ದೇವಾಲಯಕ್ಕೆ ಹೋಗುವ ಮುನ್ನ ಪುರುಷರು ತಲೆಗೆ ನೀರು ಹಾಕಿ ಕೇಸರಿ ಬಟ್ಟೆ ಧರಿಸಿ ಹೋಗುತ್ತಾರೆ. ಮಂತ್ರಗಳನ್ನು ಹೇಳುತ್ತಾ ಪ್ರದಕ್ಷಿಣೆ ಬರುವುದೇ ಇಲ್ಲಿಯ ಪೂಜಾ ವಿಧಾನವಾಗಿದೆ. ಜನರು ಎಳ್ಳೆಣ್ಣೆ ಅಭಿಷೇಕ, ನೀರಿನ ಅಭಿಷೇಕ ಮಾಡುತ್ತಾರೆ. ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಇಲ್ಲಿಯ ಮನೆಗಳಿಗೂ ಭೀಗ, ಭದ್ರತೆ ಎಂಬುವುದು ಇರುವುದಿಲ್ಲ. ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾರಿಗೂ ಇಲ್ಲ, ಹಾಗಾಗಿ ಕಳ್ಳನ ಭಯವಿಲ್ಲದೆ ಜನ ನೆಮ್ಮದಿಯಾಗಿ ಜೀವನ ಮಾಡುತ್ತಾರೆ. ಇಲ್ಲಿ ಸಿಗುವ ರಿಂಗ್ ಅನ್ನು ಶನಿದೋಷ ನಿವಾರಣೆಗೆ ಬಳಸಲಾಗುವುದು.
ಕುದುರೆ ಲಾಳದ ರಿಂಗ್ ಹೇಗೆ ಬಳಸಲಾಗುವುದು
ಇದನ್ನು ತಂದು ಮನೆಯ ಮುಂಬಾಗಿಲಿನಲ್ಲಿ ಕಟ್ಟಲಾಗುವುದು. ಇದರಿಂದ ಕೆಟ್ಟದೃಷ್ಟಿಯಿಂದ ರಕ್ಷಣೆ ಸಿಗುವುದು, ಕೆಲಸ, ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು ಎಂಬ ನಂಬಿಕೆ ಇದೆ.
ಕುದುರೆ ಲಾಳ ಮನೆಮುಂದೆ ನೇತು ಹಾಕುವುದರಿಂದ ದೊರೆಯುವ ಪ್ರಯೋಜನಗಳು
* ಇದು ಮನೆಯನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ
* ಮನೆಯೊಳಗಡೆ ಸೋಂಕಾಣುಗಳು ಬರುವುದನ್ನು ತಡೆಗಟ್ಟುತ್ತದೆ
* ಅದೃಷ್ಟದ ಸಂಕೇತವಾಗಿದೆ
* ಮಾಟ-ಮಂತ್ರದಿಂದ ರಕ್ಷಣೆ ನೀಡುವುದು
* ಶನಿಯ ಕೆಟ್ಟದೃಷ್ಟಿ ಕಡಿಮೆ ಮಾಡಿ, ಕಷ್ಟಗಳನ್ನು ನೀಗಿಸುವುದು.



Click it and Unblock the Notifications