Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಶನಿದೋಷ ನಿವಾರಣೆ ಮಾಡುತ್ತೆ ಶನಿ ಸಿಂಗಾಪುರದ ಕುದುರೆ ಲಾಳ, ಎಲ್ಲಿ ಸಿಗುತ್ತೆ?
ಶನಿದೋಷ ಇರುವವರು ಶನಿ ಕುದುರೆ ಲಾಳ (ಶನಿ ಉಂಗುರ) ಬಳಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಶನಿ ಕುದುರೆ ಲಾಳ ಮಹಾರಾಷ್ಟ್ರದ ಶನಿ ಸಿಂಗಾಪುರದಲ್ಲಿ ದೊರೆಯುತ್ತದೆ. ಕೆಲವರು ಶನಿದೋಷ ನಿವಾರಣೆ ಕಬ್ಬಿಣದ ರಿಂಗ್ ಧರಿಸುತ್ತಾರೆ.
ಈ ಶನಿ ಕುದುರೆ ಲಾಳ ಹಾಗೇ ಧರಿಸುವಂತಿಲ್ಲ, ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಆವಾಗ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಈ ಶನಿ ಕುದುರೆ ಲಾಳ ಬಗ್ಗೆ ಹೆಚ್ಚಿನ ಮಾಹಿತಿ ನೋಡುವುದಾದರೆ:

ಶನಿದೋಷ ನಿವಾರಣೆಗೆ ಕುದುರೆಲಾಳ ಬಳಸಲಾಗುವುದು
ಇದು ನಿಮಗೆ ಶನಿ ಸಿಂಗಾಪುರದಲ್ಲಿ ದೊರೆಯುವುದು. ಶನಿ ಸಿಂಗಾಪುರದ ಮಹತ್ವದ ಬಗ್ಗೆ ನೋಡುವುದಾದರೆ:
ಶನಿ ಸಿಂಗಾಪುರ ಎಂಬುವುದು ಒಂದು ಗ್ರಾಮ. ಈ ಗ್ರಾಮ ಮಹಾರಾಷ್ಟ್ರದ ನಾಸಿಕ್ ಸಮೀಪದಲ್ಲಿದೆ. ಈ ಗ್ರಾಮದ ವಿಶೇಷತೆಯೆಂದರೆ ಇಲ್ಲಿಯ ಬ್ಯಾಂಕ್ಗಳಿಗೂ ಬೀಗ ಹಾಕುವುದಿಲ್ಲ.
ಶನಿದೇವ ಈ ಗ್ರಾಮವನ್ನು ರಕ್ಷಣೆ ಮಾಡುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಜನರ ನಂಬಿಕೆಗೆ ತಕ್ಕಂತೆ ಅನೇಕ ಪವಾಡಗಳು ನಡೆದಿರುವುದರಿಂದ ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾವೊಬ್ಬ ಕಳ್ಳನಿಗೆ ಇರಲ್ಲ. ಕಳ್ಳತನ ಇತಿಹಾಸವಿಲ್ಲದ ಗ್ರಾಮ ಇದಾಗಿದೆ. ಇಲ್ಲಿ ಶನಿದೇವನ ಮೂರ್ತಿಯಿಲ್ಲ, ಆದರೆ ಒಂದು ಕಲ್ಲು ಇದೆ, ಆ ಕಲ್ಲನ್ನು ಶನಿದೇವ ಎಂದು ಪೂಜಿಸಲಾಗುವುದು.
ಯಾವುದೇ ಪೂಜಾರಿಯಿಲ್ಲ
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಪೂಜೆ ಮಾಡಲು ಯಾವುದೇ ಪೂಜಾರಿಯಿಲ್ಲ ಜನರೇ ಪೂಜೆ ಮಾಡುತ್ತಾರೆ. ಈ ದೇವಾಲಯಕ್ಕೆ ಹೋಗುವ ಮುನ್ನ ಪುರುಷರು ತಲೆಗೆ ನೀರು ಹಾಕಿ ಕೇಸರಿ ಬಟ್ಟೆ ಧರಿಸಿ ಹೋಗುತ್ತಾರೆ. ಮಂತ್ರಗಳನ್ನು ಹೇಳುತ್ತಾ ಪ್ರದಕ್ಷಿಣೆ ಬರುವುದೇ ಇಲ್ಲಿಯ ಪೂಜಾ ವಿಧಾನವಾಗಿದೆ. ಜನರು ಎಳ್ಳೆಣ್ಣೆ ಅಭಿಷೇಕ, ನೀರಿನ ಅಭಿಷೇಕ ಮಾಡುತ್ತಾರೆ. ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಇಲ್ಲಿಯ ಮನೆಗಳಿಗೂ ಭೀಗ, ಭದ್ರತೆ ಎಂಬುವುದು ಇರುವುದಿಲ್ಲ. ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾರಿಗೂ ಇಲ್ಲ, ಹಾಗಾಗಿ ಕಳ್ಳನ ಭಯವಿಲ್ಲದೆ ಜನ ನೆಮ್ಮದಿಯಾಗಿ ಜೀವನ ಮಾಡುತ್ತಾರೆ. ಇಲ್ಲಿ ಸಿಗುವ ರಿಂಗ್ ಅನ್ನು ಶನಿದೋಷ ನಿವಾರಣೆಗೆ ಬಳಸಲಾಗುವುದು.
ಕುದುರೆ ಲಾಳದ ರಿಂಗ್ ಹೇಗೆ ಬಳಸಲಾಗುವುದು
ಇದನ್ನು ತಂದು ಮನೆಯ ಮುಂಬಾಗಿಲಿನಲ್ಲಿ ಕಟ್ಟಲಾಗುವುದು. ಇದರಿಂದ ಕೆಟ್ಟದೃಷ್ಟಿಯಿಂದ ರಕ್ಷಣೆ ಸಿಗುವುದು, ಕೆಲಸ, ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು ಎಂಬ ನಂಬಿಕೆ ಇದೆ.
ಕುದುರೆ ಲಾಳ ಮನೆಮುಂದೆ ನೇತು ಹಾಕುವುದರಿಂದ ದೊರೆಯುವ ಪ್ರಯೋಜನಗಳು
* ಇದು ಮನೆಯನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ
* ಮನೆಯೊಳಗಡೆ ಸೋಂಕಾಣುಗಳು ಬರುವುದನ್ನು ತಡೆಗಟ್ಟುತ್ತದೆ
* ಅದೃಷ್ಟದ ಸಂಕೇತವಾಗಿದೆ
* ಮಾಟ-ಮಂತ್ರದಿಂದ ರಕ್ಷಣೆ ನೀಡುವುದು
* ಶನಿಯ ಕೆಟ್ಟದೃಷ್ಟಿ ಕಡಿಮೆ ಮಾಡಿ, ಕಷ್ಟಗಳನ್ನು ನೀಗಿಸುವುದು.



Click it and Unblock the Notifications