Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂತಾನೋತ್ಪತ್ತಿ ಭಾಗ್ಯ ಕರುಣಿಸುವ ದೇವತೆಗಳು
ಸಂತಾನೋತ್ಪತ್ತಿಗಾಗಿ ದೇವರನ್ನು ಪ್ರಾರ್ಥಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಅನೇಕರಲ್ಲಿದೆ. ವೈದ್ಯಕೀಯದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಾಗಲು ತೊಂದರೆ ಇರುವವರೆಗೆ ಮಕ್ಕಳಾಗುವಂತೆ ಮಾಡಲು ಅನೇಕ ಆಧುನಿಕ ಸೌಲಭ್ಯಗಳಿವೆ. ಕೆಲವೊಮ್ಮೆ ಸಂತಾನೋತ್ಪತ್ತಿಗೆ ತೆಗೆದುಕೊಳ್ಳುವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆಗ ದೇವರ ಮೊರೆ ಹೋಗುತ್ತೇವೆ.
ಪವಾಡವೆಂಬಂತೆ ಮಕ್ಕಳಾಗದ ಅನೇಕರಿಗೆ ಕೆಲವೊಂದು ದೇವಾಸ್ಥಾನಕ್ಕೆ ಹೋಗಿ ಹರಕೆ ಮಾಡಿ ಬಂದ ಮೇಲೆ ಮಕ್ಕಳಾದ ನಿದರ್ಶನಗಳಿವೆ. ಮಕ್ಕಳಾಗದವರು ಈ ಕೆಳಗಿನ ದೇವತೆಗಳನ್ನು ಪೂಜೆ ಮಾಡಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೇವರನ್ನು ನಂಬಿದರೆ ಮಕ್ಕಳಾಗುತ್ತದೆ, ಆಗಲ್ಲ ಅನ್ನುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು.

ಅಧಿತಿ
ಅಧಿತಿ ದೇವರನ್ನು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತಳು ಎನ್ನುತ್ತಾರೆ. ಅಧಿತಿ ದೇವತೆಯನ್ನು ಪ್ರತಿನಿತ್ಯ ಪೂಜೆ ಮಾಡಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಚಂದ್ರಾ
ಸೋಮವಾರ ತಲೆ ಸ್ನಾನ ಮಾಡಿ ಚಂದ್ರಾ ಅಂದರೆ ಸೋಮ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎನ್ನಲಾಗುತ್ತದೆ.
ಮಾನಸ
ತಾಯಿ ಮಾನಸ ಸಂತಾನೋತ್ಪತ್ತಿ ಹಾಗೂ ಹಾವುಗಳ ಅದಿ ದೇವತೆ. ಹಾವು ಕಚ್ಚಿದರೆ ಗುಣಮುಖವಾಗಲು ಹಾಗೂ ಮಕ್ಕಳಾಗಲು ಈ ದೇವತೆಯನ್ನು ಪೂಜಿಸುತ್ತಾರೆ. ಅದರಲ್ಲೂ ಬೆಂಗಾಳಿಯರು ಮಾನಸ ಪೂಜೆ ಸಮಯದಲ್ಲಿ ಬಟ್ಟಲು ತುಂಬಾ ಹಾಲನ್ನು ಹಾವಿನ ಹುತ್ತಕ್ಕೆ ಎರೆಯುತ್ತಾರೆ.
ಪಾರ್ವತಿ
ಶಕ್ತಿ ದೇವತೆಯಾದ ಪಾರ್ವತಿಯನ್ನು ಪೂಜಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.
ಸಂತೋಷಿ
ಸಂತೋಷಿ ಮಾತೆ ಸಂತೃಪ್ತಿಯ ದೇವತೆ. ಈ ದೇವತೆಯನ್ನು ಬೇಡಿದರೆ ಮಕ್ಕಳ ಭಾಗ್ಯ ಕರುಣಿಸಿ ಬಾಳಿಗೆ ಸಂತೃಪ್ತಿ ತುಂಬುತ್ತಾಳೆ ಎಂಬ ನಂಬಿಕೆ ಇದೆ. ಈ ದೇವತೆಯನ್ನು ಪೂಜಿಸುವವರು ಪ್ರತೀ ಶುಕ್ರವಾರ ಉಪವಾಸ ಮಾಡುತ್ತಾರೆ. ಆ ದಿನ ಯಾವುದೇ ಹುಳಿ ಪದಾರ್ಥವನ್ನು ಮುಟ್ಟಬಾರದು. ಭಕ್ತಿಯಿಂದ ಪೂಜಿಸಿದರೆ ಮಾತೆ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಅವಳ ಭಕ್ತರಲ್ಲಿದೆ.



Click it and Unblock the Notifications
