Latest Updates
-
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ!
ಸಂತಾನೋತ್ಪತ್ತಿ ಭಾಗ್ಯ ಕರುಣಿಸುವ ದೇವತೆಗಳು
ಸಂತಾನೋತ್ಪತ್ತಿಗಾಗಿ ದೇವರನ್ನು ಪ್ರಾರ್ಥಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಅನೇಕರಲ್ಲಿದೆ. ವೈದ್ಯಕೀಯದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಾಗಲು ತೊಂದರೆ ಇರುವವರೆಗೆ ಮಕ್ಕಳಾಗುವಂತೆ ಮಾಡಲು ಅನೇಕ ಆಧುನಿಕ ಸೌಲಭ್ಯಗಳಿವೆ. ಕೆಲವೊಮ್ಮೆ ಸಂತಾನೋತ್ಪತ್ತಿಗೆ ತೆಗೆದುಕೊಳ್ಳುವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆಗ ದೇವರ ಮೊರೆ ಹೋಗುತ್ತೇವೆ.
ಪವಾಡವೆಂಬಂತೆ ಮಕ್ಕಳಾಗದ ಅನೇಕರಿಗೆ ಕೆಲವೊಂದು ದೇವಾಸ್ಥಾನಕ್ಕೆ ಹೋಗಿ ಹರಕೆ ಮಾಡಿ ಬಂದ ಮೇಲೆ ಮಕ್ಕಳಾದ ನಿದರ್ಶನಗಳಿವೆ. ಮಕ್ಕಳಾಗದವರು ಈ ಕೆಳಗಿನ ದೇವತೆಗಳನ್ನು ಪೂಜೆ ಮಾಡಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೇವರನ್ನು ನಂಬಿದರೆ ಮಕ್ಕಳಾಗುತ್ತದೆ, ಆಗಲ್ಲ ಅನ್ನುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು.

ಅಧಿತಿ
ಅಧಿತಿ ದೇವರನ್ನು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತಳು ಎನ್ನುತ್ತಾರೆ. ಅಧಿತಿ ದೇವತೆಯನ್ನು ಪ್ರತಿನಿತ್ಯ ಪೂಜೆ ಮಾಡಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಚಂದ್ರಾ
ಸೋಮವಾರ ತಲೆ ಸ್ನಾನ ಮಾಡಿ ಚಂದ್ರಾ ಅಂದರೆ ಸೋಮ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎನ್ನಲಾಗುತ್ತದೆ.
ಮಾನಸ
ತಾಯಿ ಮಾನಸ ಸಂತಾನೋತ್ಪತ್ತಿ ಹಾಗೂ ಹಾವುಗಳ ಅದಿ ದೇವತೆ. ಹಾವು ಕಚ್ಚಿದರೆ ಗುಣಮುಖವಾಗಲು ಹಾಗೂ ಮಕ್ಕಳಾಗಲು ಈ ದೇವತೆಯನ್ನು ಪೂಜಿಸುತ್ತಾರೆ. ಅದರಲ್ಲೂ ಬೆಂಗಾಳಿಯರು ಮಾನಸ ಪೂಜೆ ಸಮಯದಲ್ಲಿ ಬಟ್ಟಲು ತುಂಬಾ ಹಾಲನ್ನು ಹಾವಿನ ಹುತ್ತಕ್ಕೆ ಎರೆಯುತ್ತಾರೆ.
ಪಾರ್ವತಿ
ಶಕ್ತಿ ದೇವತೆಯಾದ ಪಾರ್ವತಿಯನ್ನು ಪೂಜಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.
ಸಂತೋಷಿ
ಸಂತೋಷಿ ಮಾತೆ ಸಂತೃಪ್ತಿಯ ದೇವತೆ. ಈ ದೇವತೆಯನ್ನು ಬೇಡಿದರೆ ಮಕ್ಕಳ ಭಾಗ್ಯ ಕರುಣಿಸಿ ಬಾಳಿಗೆ ಸಂತೃಪ್ತಿ ತುಂಬುತ್ತಾಳೆ ಎಂಬ ನಂಬಿಕೆ ಇದೆ. ಈ ದೇವತೆಯನ್ನು ಪೂಜಿಸುವವರು ಪ್ರತೀ ಶುಕ್ರವಾರ ಉಪವಾಸ ಮಾಡುತ್ತಾರೆ. ಆ ದಿನ ಯಾವುದೇ ಹುಳಿ ಪದಾರ್ಥವನ್ನು ಮುಟ್ಟಬಾರದು. ಭಕ್ತಿಯಿಂದ ಪೂಜಿಸಿದರೆ ಮಾತೆ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಅವಳ ಭಕ್ತರಲ್ಲಿದೆ.



Click it and Unblock the Notifications