Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಂತಾನೋತ್ಪತ್ತಿ ಭಾಗ್ಯ ಕರುಣಿಸುವ ದೇವತೆಗಳು
ಸಂತಾನೋತ್ಪತ್ತಿಗಾಗಿ ದೇವರನ್ನು ಪ್ರಾರ್ಥಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಅನೇಕರಲ್ಲಿದೆ. ವೈದ್ಯಕೀಯದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಾಗಲು ತೊಂದರೆ ಇರುವವರೆಗೆ ಮಕ್ಕಳಾಗುವಂತೆ ಮಾಡಲು ಅನೇಕ ಆಧುನಿಕ ಸೌಲಭ್ಯಗಳಿವೆ. ಕೆಲವೊಮ್ಮೆ ಸಂತಾನೋತ್ಪತ್ತಿಗೆ ತೆಗೆದುಕೊಳ್ಳುವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆಗ ದೇವರ ಮೊರೆ ಹೋಗುತ್ತೇವೆ.
ಪವಾಡವೆಂಬಂತೆ ಮಕ್ಕಳಾಗದ ಅನೇಕರಿಗೆ ಕೆಲವೊಂದು ದೇವಾಸ್ಥಾನಕ್ಕೆ ಹೋಗಿ ಹರಕೆ ಮಾಡಿ ಬಂದ ಮೇಲೆ ಮಕ್ಕಳಾದ ನಿದರ್ಶನಗಳಿವೆ. ಮಕ್ಕಳಾಗದವರು ಈ ಕೆಳಗಿನ ದೇವತೆಗಳನ್ನು ಪೂಜೆ ಮಾಡಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೇವರನ್ನು ನಂಬಿದರೆ ಮಕ್ಕಳಾಗುತ್ತದೆ, ಆಗಲ್ಲ ಅನ್ನುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು.

ಅಧಿತಿ
ಅಧಿತಿ ದೇವರನ್ನು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತಳು ಎನ್ನುತ್ತಾರೆ. ಅಧಿತಿ ದೇವತೆಯನ್ನು ಪ್ರತಿನಿತ್ಯ ಪೂಜೆ ಮಾಡಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಚಂದ್ರಾ
ಸೋಮವಾರ ತಲೆ ಸ್ನಾನ ಮಾಡಿ ಚಂದ್ರಾ ಅಂದರೆ ಸೋಮ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎನ್ನಲಾಗುತ್ತದೆ.
ಮಾನಸ
ತಾಯಿ ಮಾನಸ ಸಂತಾನೋತ್ಪತ್ತಿ ಹಾಗೂ ಹಾವುಗಳ ಅದಿ ದೇವತೆ. ಹಾವು ಕಚ್ಚಿದರೆ ಗುಣಮುಖವಾಗಲು ಹಾಗೂ ಮಕ್ಕಳಾಗಲು ಈ ದೇವತೆಯನ್ನು ಪೂಜಿಸುತ್ತಾರೆ. ಅದರಲ್ಲೂ ಬೆಂಗಾಳಿಯರು ಮಾನಸ ಪೂಜೆ ಸಮಯದಲ್ಲಿ ಬಟ್ಟಲು ತುಂಬಾ ಹಾಲನ್ನು ಹಾವಿನ ಹುತ್ತಕ್ಕೆ ಎರೆಯುತ್ತಾರೆ.
ಪಾರ್ವತಿ
ಶಕ್ತಿ ದೇವತೆಯಾದ ಪಾರ್ವತಿಯನ್ನು ಪೂಜಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.
ಸಂತೋಷಿ
ಸಂತೋಷಿ ಮಾತೆ ಸಂತೃಪ್ತಿಯ ದೇವತೆ. ಈ ದೇವತೆಯನ್ನು ಬೇಡಿದರೆ ಮಕ್ಕಳ ಭಾಗ್ಯ ಕರುಣಿಸಿ ಬಾಳಿಗೆ ಸಂತೃಪ್ತಿ ತುಂಬುತ್ತಾಳೆ ಎಂಬ ನಂಬಿಕೆ ಇದೆ. ಈ ದೇವತೆಯನ್ನು ಪೂಜಿಸುವವರು ಪ್ರತೀ ಶುಕ್ರವಾರ ಉಪವಾಸ ಮಾಡುತ್ತಾರೆ. ಆ ದಿನ ಯಾವುದೇ ಹುಳಿ ಪದಾರ್ಥವನ್ನು ಮುಟ್ಟಬಾರದು. ಭಕ್ತಿಯಿಂದ ಪೂಜಿಸಿದರೆ ಮಾತೆ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಅವಳ ಭಕ್ತರಲ್ಲಿದೆ.



Click it and Unblock the Notifications