Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗಣೇಶ ಚತುರ್ಥಿ 2023: ನಿಮ್ಮ ರಾಶಿ ಪ್ರಕಾರ ಗಣೇಶನಿಗೆ ಈ ನೈವೇದ್ಯ ಅರ್ಪಿಸಿ
ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 18, 19ರಂದು ಆಚರಿಸಲಾಗುವುದು. ಗಣೇಶನನ್ನು ಸೆಪ್ಟೆಂಬರ್ 19ರಂದು ಪ್ರತಿಷ್ಠಾಪನೆ ಮಾಡಲಾಗುವುದು. ನೀವು ಗಣೇಶನನ್ನು ನಿಮ್ಮ ರಾಶಿಗೆ ಪ್ರಕಾರ ಹೇಗೆ ಪ್ರತಿಷ್ಠಾಪನೆ ಮಾಡಬೇಕು ಎಂಬುವುದನ್ನು ಈ ಹಿಂದಿನ ಲೇಖನದಲ್ಲಿ ಹೇಳಿದ್ದೆವು. ಈ ಲೇಖನದಲ್ಲಿ ನಿಮ್ಮ ರಾಶಿ ಪ್ರಕಾರ ಗಣೇಶನಿಗೆ ಯಾವ ನೈವೇದ್ಯ ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ವೃಷಭ ರಾಶಿ: ವೃಷಭ ರಾಶಿಯವರು ಅಕ್ಕಿ ಪಾಯಸ ಅಥವಾ ಲಡ್ಡುವನ್ನು ಪ್ರಸಾದವನ್ನಾಗಿ ಅರ್ಪಿಸಿ
ಮಿಥುನ ರಾಶಿ: ನೀವು ಗಣೇಶನಿಗೆ ಫ್ರೂಟ್ ಸಲಾಡ್, ಸೌತೆ ರಾಯತ, ಮೊಳಕೆ ಬರಿಸಿದ ಕಾಳುಗಳನ್ನು ಅರ್ಪಿಸಿ
ಕರ್ಕ ರಾಶಿ: ಕರ್ಕ ರಾಶಿಯವರು ಗಣೇಶನಿಗೆ ಕಿಚಡಿ, ಕಡ್ಲೆ ಕಾಳು ಇವುಗಳನ್ನು ಪ್ರಸಾದವನ್ನಾಗಿ ಅರ್ಪಿಸಿ
ಸಿಂಹ ರಾಶಿ: ಸಿಂಹ ರಾಶಿಯವರು ಗಣೇಶನಿಗೆ ಪಾಯಸ, ಬೂಂದಿ, ಲಡ್ಡುಗಳನ್ನು ಅರ್ಪಿಸಿ
ಕನ್ಯಾ ರಾಶಿ: ನೀವು ಬೂಂದಿಯನ್ನು ಗಣೇಶನಿಗೆ ಅರ್ಪಿಸಿ.
ತುಲಾ ರಾಶಿ: ನೀವು ಗಣೇಶನಿಗೆ ತೆಂಗಿನಕಾಯಿಂದ ಮಾಡಿದ ಸಿಹಿತಿಂಡಿಯನ್ನು ಅರ್ಪಿಸಿ. ಕರ್ಜಿಕಾಯಿಯನ್ನು ಮಾಡಿ ಅರ್ಪಿಸಿ.
ವೃಶ್ಚಿಕ ರಾಶಿ: ನೀವು ಗಣೇಶನಿಗೆ ಬಗೆ ಬಗೆಯ ಮೋದಕಗಳನ್ನು ಅರ್ಪಿಸಿ
ಧನು ರಾಶಿ: ನೀವು ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ'
ಮಕರ ರಾಶಿ: ನೀವು ಗಣೇಶನಿಗೆ ಜಿಲೇಬಿ, ಸಿಹಿ ಕಡಬು ಅರ್ಪಿಸಿ
ಕುಂಭ ರಾಶಿ: ಕುಂಭ ರಾಶಿಯವರು ಗಣೇಶನಿಗೆ ಹತ್ತಿ ಹಣ್ಣು, ಲಡ್ಡು ಇವುಗಳನ್ನು ಅರ್ಪಿಸಿದರೆ ಒಳ್ಳೆಯದು
ಮೀನ ರಾಶಿ: ಮೀನ ರಾಶಿಯವರು ಗಣೇಶನಿಗೆ ಬೂಂದಿ, ಮೋದಕ, ಲಡ್ಡುಗಳನ್ನು ಅರ್ಪಿಸಿ.
ಗಣೇಶನಿಗೆ ಪ್ರಸಾದವನ್ನು ಅರ್ಪಿಸುವಾಗಈ ಮಂತ್ರ ಪಠಿಸಿ
ಓಂ ಗಂ ಗಣಪತೆಯೇ ನಮಃ: ಈ ಮಂತ್ರವನ್ನು ಪಠಿಸುವುದರಿಂದ ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ.
ವಕ್ರತುಂಡ ಮಹಾಕಾಯ : ಈ ಮಂತ್ರವನ್ನು ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.
ಗಣೇಶ ಗಾಯತ್ರಿ ಮಂತ್ರ
"ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ಧಿಧ್ ಪ್ರಚೋದಯಾತ್"
ಈ ಗಾಯತ್ರಿ ಮಂತ್ರ ಪಠಣೆ ಮಾಡುವುದರಿಂದ ಶ್ರೀಗಣೇಶನ ರಕ್ಷೆ ಸದಾ ನಿಮ್ಮ ಮೇಲಿರುತ್ತದೆ.
ಓಂ ಶ್ರೀ ಗಣೇಶಾಯ ನಮಃ: ಈ ಮಂತ್ರವನ್ನು ನೀವು ಯಾವಾಗ ಬೇಕಾದರೂ ಪಠಿಸಬಹುದು. ಈ ರೀತಿ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಗಣೇಶ ಮೂಲ ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥
ಏಕದನ್ತಾಯ ವಿದ್ಮಹೇ ।
ವಕ್ರತುಂಡಾಯ ಧೀಮಹಿ ।
ತನ್ನೋ ದನ್ತಿ ಪ್ರಚೋದಯಾತ್ ॥
ॐ ಶಾಂತಿಃ ಶಾಂತಿಃ ಶಾಂತಿಃ ॥
ಈ ಜಗತ್ತಿಗೆ, ಜನರಿಗೆ ಒಳಿತಾಗಲು, ಎಲ್ಲರೂ ಒಳ್ಳೆಯ ಜೀವನ ನಡೆಸುವಂತೆ ಅನುಗ್ರಹಿಸು ದೇವರೇ ಎಂದು ಈ ಮಂತ್ರದ ಮೂಲಕ ಪಠಣೆ ಮಾಡಲಾಗುವುದು.



Click it and Unblock the Notifications
