Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಗುರುವಿನ ಕೃಪೆಗಾಗಿ ಗುರುವಾರ ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬೇಕು, ಏನು ಮಾಡಲೇಬಾರದು?
ಗುರುವಾರ ಬೃಹಸ್ಪತಿ ಗುರುವನ್ನು ಆರಾಧಿಸಲಾಗುವುದು. ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿರದಿದ್ದರೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುವುದು. ಈ ದಿನ ಉಪವಾಸವಿದ್ದು ಬೃಹಸ್ಪತಿ ಗುರುವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುವುದು. ಜೀವನದಲ್ಲಿ ಇರುವ ಸವಾಲುಗಳು ದೂರಾಗುವುದು.

ಗುರುವಾರ ಈ ಕಾರ್ಯಗಳನ್ನು ಮಾಡುವುದು ಒಳ್ಳೆಯದು
* ಗುರುವಾರ ಉಪವಾಸವಿದ್ದು ಗುರುವಿನ ಮಂತ್ರ ಪಠಿಸಬೇಕು.
* ಕೆಲವರಿಗೆ ಉಪವಾಸವಿರಲು ಸಾಧ್ಯವಾಗುವುದಿಲ್ಲ ಅಂಥವರು ಹಣ್ಣುಗಳು ಹಾಗೂ ಲಘು ಆಹಾರ ಸೇವಿಸುತ್ತಾರೆ. ಈ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು.
* ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು.
* ಮುಟ್ಟಿನ ಸಮಯದಲ್ಲಿ ಮಹಿಳೆಯರು ಉಪವಾಸ ಮಾಡುವಂತಿಲ್ಲ, ಅವರು ಮುಂದಿನ ಗುರುವಾರ ವ್ರತ ನಿಯಮವನ್ನು ಪಾಲಿಸಬಹುದು.
ಗುರುವಾರ ಬೃಹಸ್ಪತಿ ಗುರುವಿನ ಕೃಪೆ ಪಡೆಯಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಧಾರ್ಮಿಕ ನಂಬಿಕೆಗಳಿವೆ, ಅವುಗಳ ಬಗ್ಗೆ ನೋಡುವುದಾದರೆ
ಏನು ಮಾಡಬೇಕು?
* ಬೃಹಸ್ಪತಿ ಪೂಜೆಯನ್ನು ಮಾಡುವಾಗ ಹಳದಿ ಬಣ್ಣದ ವಸ್ತ್ರ ಧರಿಸಬೇಕು.
* ಈ ದಿನ ಬೃಹಸ್ಪತಿಗೆ ಸಂಬಂಧಿಸಿದ ಕತೆಯನ್ನು ಓದಬೇಕು
* ಪೂಜೆಗೆ ಬಾಳೆಗಿಡವನ್ನು ಬಳಸಬೇಕು.
* ಕಡ್ಲೆಬೇಳೆ , ಬೆಲ್ಲ ಬಳಸಿ ಮಾಡಿದ ಪಾಯಸವನ್ನು ಪ್ರಸಾದವನ್ನಾಗಿ ಬಳಸಿ.
* ಕೆಲವರು ಉಪವಾಸವಿರುವಾಗ ಬಾಳೆಹಣ್ಣು ಸೇವಿಸುತ್ತಾರೆ. ಆದರೆ ಬೃಹಸ್ಪತಿ ಪೂಜೆ ಮಾಡುವವರು ಗುರುವಾರ ಬಾಳೆಹಣ್ಣು ತಿನ್ನಬಾರದು.
* ಬೃಹಸ್ಪತಿಗೆ ಉಪವಾಸವಿರುವವರು ಗುರುವಾರ ಸಂಜೆ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ.
* ವಿವಾಹಿತ ಮಹಿಳೆಯರು ಬೃಹಸ್ಪತಿ ಪೂಜೆ ಮಾಡುವವರು ತಲೆ ತೊಳೆಯಬಾರದು. ಅವಾಹಿತ ಮಹಿಳೆಯರು ತಲೆ ತೊಳೆಯಬಹುದು
* ಈ ದಿನ ಕಡ್ಲೆಹಿಟ್ಟಿನಿಂದ ಮಾಡಿದ ಸಿಹಿಯನ್ನು ಸವಿಯಬಹುದು
* ಈ ದಿನ ಉಪ್ಪು ಹಾಕಿದ ಪದಾರ್ಥ ಸೇವಿಸಬಾರದು.
ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬಾರದು?
* ಗುರುವಾರ ಸೋಪ್ ಬಳಸಬಾರದು
* ಗುರುವಾರ ಬಟ್ಟೆ ತೊಳೆಯಬಾರದು
* ಈ ದಿನ ಪೂಜೆ ಮಾಡುವವರು ತಲೆಗೆ ಎಣ್ಣೆ ಹಚ್ಚಬಾರದು
* ಈ ಪೂಜೆ ಮಾಡುವವರು ಈ ದಿನ ಮನೆ ಒರೆಸುವುದಿಲ್ಲ, ಬುಧವಾರವೇ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಾರೆ.
* ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವಿಸಬಾರದು
* ಈ ದಿನ ದಂಪತಿ ಲೈಂಗಿಕ ಕ್ರಿಯೆ ನಡೆಸಬಾರದು
* ಈ ದಿನ ಶೇವಿಂಗ್ ಮಾಡುವುದು, ಕೂದಲು ಕತ್ತರಿಸುವುದು ಮಾಡಬಾರದು.
* ಈ ದಿನ ಮನೆಯ ಕಸ ಹೊರಗಡೆ ಬಿಸಾಡಬಾರದು.
ತುಪ್ಪದ ದೀಪದ ಮಹತ್ವ
* ಗುರುವಾರದಂದು ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಬಾರದು. ಈ ದಿನ ದೇಸಿ ತುಪ್ಪದ ದೀಪವನ್ನು ಮಾತ್ರ ಬಳಸಿ ದೀಪ ಬೆಳಗಬೇಕು. ಹೀಗೆ ಮಾಡುವುದರಿಂದ ಬೃಹಸ್ಪತಿ ಗುರುವಿನ ಕೃಪೆ ದೊರೆಯುವುದು.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.



Click it and Unblock the Notifications