Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಗುರುವಿನ ಕೃಪೆಗಾಗಿ ಗುರುವಾರ ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬೇಕು, ಏನು ಮಾಡಲೇಬಾರದು?
ಗುರುವಾರ ಬೃಹಸ್ಪತಿ ಗುರುವನ್ನು ಆರಾಧಿಸಲಾಗುವುದು. ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿರದಿದ್ದರೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುವುದು. ಈ ದಿನ ಉಪವಾಸವಿದ್ದು ಬೃಹಸ್ಪತಿ ಗುರುವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುವುದು. ಜೀವನದಲ್ಲಿ ಇರುವ ಸವಾಲುಗಳು ದೂರಾಗುವುದು.

ಗುರುವಾರ ಈ ಕಾರ್ಯಗಳನ್ನು ಮಾಡುವುದು ಒಳ್ಳೆಯದು
* ಗುರುವಾರ ಉಪವಾಸವಿದ್ದು ಗುರುವಿನ ಮಂತ್ರ ಪಠಿಸಬೇಕು.
* ಕೆಲವರಿಗೆ ಉಪವಾಸವಿರಲು ಸಾಧ್ಯವಾಗುವುದಿಲ್ಲ ಅಂಥವರು ಹಣ್ಣುಗಳು ಹಾಗೂ ಲಘು ಆಹಾರ ಸೇವಿಸುತ್ತಾರೆ. ಈ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು.
* ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು.
* ಮುಟ್ಟಿನ ಸಮಯದಲ್ಲಿ ಮಹಿಳೆಯರು ಉಪವಾಸ ಮಾಡುವಂತಿಲ್ಲ, ಅವರು ಮುಂದಿನ ಗುರುವಾರ ವ್ರತ ನಿಯಮವನ್ನು ಪಾಲಿಸಬಹುದು.
ಗುರುವಾರ ಬೃಹಸ್ಪತಿ ಗುರುವಿನ ಕೃಪೆ ಪಡೆಯಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಧಾರ್ಮಿಕ ನಂಬಿಕೆಗಳಿವೆ, ಅವುಗಳ ಬಗ್ಗೆ ನೋಡುವುದಾದರೆ
ಏನು ಮಾಡಬೇಕು?
* ಬೃಹಸ್ಪತಿ ಪೂಜೆಯನ್ನು ಮಾಡುವಾಗ ಹಳದಿ ಬಣ್ಣದ ವಸ್ತ್ರ ಧರಿಸಬೇಕು.
* ಈ ದಿನ ಬೃಹಸ್ಪತಿಗೆ ಸಂಬಂಧಿಸಿದ ಕತೆಯನ್ನು ಓದಬೇಕು
* ಪೂಜೆಗೆ ಬಾಳೆಗಿಡವನ್ನು ಬಳಸಬೇಕು.
* ಕಡ್ಲೆಬೇಳೆ , ಬೆಲ್ಲ ಬಳಸಿ ಮಾಡಿದ ಪಾಯಸವನ್ನು ಪ್ರಸಾದವನ್ನಾಗಿ ಬಳಸಿ.
* ಕೆಲವರು ಉಪವಾಸವಿರುವಾಗ ಬಾಳೆಹಣ್ಣು ಸೇವಿಸುತ್ತಾರೆ. ಆದರೆ ಬೃಹಸ್ಪತಿ ಪೂಜೆ ಮಾಡುವವರು ಗುರುವಾರ ಬಾಳೆಹಣ್ಣು ತಿನ್ನಬಾರದು.
* ಬೃಹಸ್ಪತಿಗೆ ಉಪವಾಸವಿರುವವರು ಗುರುವಾರ ಸಂಜೆ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ.
* ವಿವಾಹಿತ ಮಹಿಳೆಯರು ಬೃಹಸ್ಪತಿ ಪೂಜೆ ಮಾಡುವವರು ತಲೆ ತೊಳೆಯಬಾರದು. ಅವಾಹಿತ ಮಹಿಳೆಯರು ತಲೆ ತೊಳೆಯಬಹುದು
* ಈ ದಿನ ಕಡ್ಲೆಹಿಟ್ಟಿನಿಂದ ಮಾಡಿದ ಸಿಹಿಯನ್ನು ಸವಿಯಬಹುದು
* ಈ ದಿನ ಉಪ್ಪು ಹಾಕಿದ ಪದಾರ್ಥ ಸೇವಿಸಬಾರದು.
ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬಾರದು?
* ಗುರುವಾರ ಸೋಪ್ ಬಳಸಬಾರದು
* ಗುರುವಾರ ಬಟ್ಟೆ ತೊಳೆಯಬಾರದು
* ಈ ದಿನ ಪೂಜೆ ಮಾಡುವವರು ತಲೆಗೆ ಎಣ್ಣೆ ಹಚ್ಚಬಾರದು
* ಈ ಪೂಜೆ ಮಾಡುವವರು ಈ ದಿನ ಮನೆ ಒರೆಸುವುದಿಲ್ಲ, ಬುಧವಾರವೇ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಾರೆ.
* ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವಿಸಬಾರದು
* ಈ ದಿನ ದಂಪತಿ ಲೈಂಗಿಕ ಕ್ರಿಯೆ ನಡೆಸಬಾರದು
* ಈ ದಿನ ಶೇವಿಂಗ್ ಮಾಡುವುದು, ಕೂದಲು ಕತ್ತರಿಸುವುದು ಮಾಡಬಾರದು.
* ಈ ದಿನ ಮನೆಯ ಕಸ ಹೊರಗಡೆ ಬಿಸಾಡಬಾರದು.
ತುಪ್ಪದ ದೀಪದ ಮಹತ್ವ
* ಗುರುವಾರದಂದು ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಬಾರದು. ಈ ದಿನ ದೇಸಿ ತುಪ್ಪದ ದೀಪವನ್ನು ಮಾತ್ರ ಬಳಸಿ ದೀಪ ಬೆಳಗಬೇಕು. ಹೀಗೆ ಮಾಡುವುದರಿಂದ ಬೃಹಸ್ಪತಿ ಗುರುವಿನ ಕೃಪೆ ದೊರೆಯುವುದು.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.



Click it and Unblock the Notifications