Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಗುರುವಿನ ಕೃಪೆಗಾಗಿ ಗುರುವಾರ ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬೇಕು, ಏನು ಮಾಡಲೇಬಾರದು?
ಗುರುವಾರ ಬೃಹಸ್ಪತಿ ಗುರುವನ್ನು ಆರಾಧಿಸಲಾಗುವುದು. ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿರದಿದ್ದರೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುವುದು. ಈ ದಿನ ಉಪವಾಸವಿದ್ದು ಬೃಹಸ್ಪತಿ ಗುರುವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುವುದು. ಜೀವನದಲ್ಲಿ ಇರುವ ಸವಾಲುಗಳು ದೂರಾಗುವುದು.

ಗುರುವಾರ ಈ ಕಾರ್ಯಗಳನ್ನು ಮಾಡುವುದು ಒಳ್ಳೆಯದು
* ಗುರುವಾರ ಉಪವಾಸವಿದ್ದು ಗುರುವಿನ ಮಂತ್ರ ಪಠಿಸಬೇಕು.
* ಕೆಲವರಿಗೆ ಉಪವಾಸವಿರಲು ಸಾಧ್ಯವಾಗುವುದಿಲ್ಲ ಅಂಥವರು ಹಣ್ಣುಗಳು ಹಾಗೂ ಲಘು ಆಹಾರ ಸೇವಿಸುತ್ತಾರೆ. ಈ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು.
* ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು.
* ಮುಟ್ಟಿನ ಸಮಯದಲ್ಲಿ ಮಹಿಳೆಯರು ಉಪವಾಸ ಮಾಡುವಂತಿಲ್ಲ, ಅವರು ಮುಂದಿನ ಗುರುವಾರ ವ್ರತ ನಿಯಮವನ್ನು ಪಾಲಿಸಬಹುದು.
ಗುರುವಾರ ಬೃಹಸ್ಪತಿ ಗುರುವಿನ ಕೃಪೆ ಪಡೆಯಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಧಾರ್ಮಿಕ ನಂಬಿಕೆಗಳಿವೆ, ಅವುಗಳ ಬಗ್ಗೆ ನೋಡುವುದಾದರೆ
ಏನು ಮಾಡಬೇಕು?
* ಬೃಹಸ್ಪತಿ ಪೂಜೆಯನ್ನು ಮಾಡುವಾಗ ಹಳದಿ ಬಣ್ಣದ ವಸ್ತ್ರ ಧರಿಸಬೇಕು.
* ಈ ದಿನ ಬೃಹಸ್ಪತಿಗೆ ಸಂಬಂಧಿಸಿದ ಕತೆಯನ್ನು ಓದಬೇಕು
* ಪೂಜೆಗೆ ಬಾಳೆಗಿಡವನ್ನು ಬಳಸಬೇಕು.
* ಕಡ್ಲೆಬೇಳೆ , ಬೆಲ್ಲ ಬಳಸಿ ಮಾಡಿದ ಪಾಯಸವನ್ನು ಪ್ರಸಾದವನ್ನಾಗಿ ಬಳಸಿ.
* ಕೆಲವರು ಉಪವಾಸವಿರುವಾಗ ಬಾಳೆಹಣ್ಣು ಸೇವಿಸುತ್ತಾರೆ. ಆದರೆ ಬೃಹಸ್ಪತಿ ಪೂಜೆ ಮಾಡುವವರು ಗುರುವಾರ ಬಾಳೆಹಣ್ಣು ತಿನ್ನಬಾರದು.
* ಬೃಹಸ್ಪತಿಗೆ ಉಪವಾಸವಿರುವವರು ಗುರುವಾರ ಸಂಜೆ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ.
* ವಿವಾಹಿತ ಮಹಿಳೆಯರು ಬೃಹಸ್ಪತಿ ಪೂಜೆ ಮಾಡುವವರು ತಲೆ ತೊಳೆಯಬಾರದು. ಅವಾಹಿತ ಮಹಿಳೆಯರು ತಲೆ ತೊಳೆಯಬಹುದು
* ಈ ದಿನ ಕಡ್ಲೆಹಿಟ್ಟಿನಿಂದ ಮಾಡಿದ ಸಿಹಿಯನ್ನು ಸವಿಯಬಹುದು
* ಈ ದಿನ ಉಪ್ಪು ಹಾಕಿದ ಪದಾರ್ಥ ಸೇವಿಸಬಾರದು.
ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬಾರದು?
* ಗುರುವಾರ ಸೋಪ್ ಬಳಸಬಾರದು
* ಗುರುವಾರ ಬಟ್ಟೆ ತೊಳೆಯಬಾರದು
* ಈ ದಿನ ಪೂಜೆ ಮಾಡುವವರು ತಲೆಗೆ ಎಣ್ಣೆ ಹಚ್ಚಬಾರದು
* ಈ ಪೂಜೆ ಮಾಡುವವರು ಈ ದಿನ ಮನೆ ಒರೆಸುವುದಿಲ್ಲ, ಬುಧವಾರವೇ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಾರೆ.
* ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವಿಸಬಾರದು
* ಈ ದಿನ ದಂಪತಿ ಲೈಂಗಿಕ ಕ್ರಿಯೆ ನಡೆಸಬಾರದು
* ಈ ದಿನ ಶೇವಿಂಗ್ ಮಾಡುವುದು, ಕೂದಲು ಕತ್ತರಿಸುವುದು ಮಾಡಬಾರದು.
* ಈ ದಿನ ಮನೆಯ ಕಸ ಹೊರಗಡೆ ಬಿಸಾಡಬಾರದು.
ತುಪ್ಪದ ದೀಪದ ಮಹತ್ವ
* ಗುರುವಾರದಂದು ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಬಾರದು. ಈ ದಿನ ದೇಸಿ ತುಪ್ಪದ ದೀಪವನ್ನು ಮಾತ್ರ ಬಳಸಿ ದೀಪ ಬೆಳಗಬೇಕು. ಹೀಗೆ ಮಾಡುವುದರಿಂದ ಬೃಹಸ್ಪತಿ ಗುರುವಿನ ಕೃಪೆ ದೊರೆಯುವುದು.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.



Click it and Unblock the Notifications