Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
Chandrayaan 3: ರಾಕೆಟ್ ಉಡಾವಣೆ ಮಧ್ಯಾಹ್ನ 2:35ಕ್ಕೆ ಮಾಡಿದ್ದರ ಹಿಂದಿದೆ ಈ ಧಾರ್ಮಿಕ ನಂಬಿಕೆ!
ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ 3 ವಿಕ್ರಮ್ ಹೊತ್ತುಕೊಂಡ GSLV Mk III ಅಥವಾ LVM3 ಹೆಸರಿನ ರಾಕೆಟ್ ಶ್ರೀಹರಿಕೂಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ಮಧ್ಯಾಹ್ನ 2:35ಕ್ಕೆ ಚಂದ್ರನ ಕಕ್ಷೆಯತ್ತ ಧಾವಿಸಿದೆ.
ಚಂದ್ರಯಾನ 2 ವೈಫಲ್ಯದ ಬಳಿಕ ಮತ್ತಷ್ಟು ಶ್ರಮ ಹಾಕಿ ಈ ಹಿಂದೆ ನಡೆದ ತಪ್ಪುಗಳು ಈ ಬಾರಿ ಸಂಭವಿಸಬಾರದು ಎಂದು ತುಂಬಾನೇ ಜಾಗ್ರತೆವಹಿಸಿ, ಪ್ರತಿಯೊಂದು ತಾಂತ್ರಿಕ ವಿಷಯಗಳನ್ನು ಪರಿಶೀಲಿಸಿ ಚಂದ್ರಯಾನ 3 ವಿಕ್ರಮ್ ಅನ್ನು ಚಂದ್ರನ ಕಕ್ಷೆಗೆ ಕಳುಹಿಸಲಾಗಿದೆ. ಚಂದ್ರಯಾನ 3 ವಿಕ್ರಮ್ ಯೋಜನೆಯಲ್ಲಿ ನಮ್ಮ ವಿಜ್ಞಾನಿಗಳು ಬರೀ ತಮ್ಮ ಜ್ಞಾನ, ಪರಿಶ್ರಮದ ಮೇಲಷ್ಟೇ ಅಲ್ಲ ದೇವರು ಎಂಬ ಶಕ್ತಿಯ ಮೇಲೆ ಬಲವಾದ ನಂಬಿಕೆ ಇಟ್ಟಿದ್ದಾರೆ ಎಂಬುವುದಕ್ಕೆ ಚಂದ್ರಯಾನ 3 ವಿಕ್ರಮ್ ತೆಗೆದುಕೊಂಡ ರಾಕೆಟ್ ಉಡಾವಣೆಯಾಗಲು ಅವರು ನಿರ್ಧರಿಸಿದ ಸಮಯ ಒಂದು ಪ್ರಮುಖ ಸಾಕ್ಷಿಯಾಗಿದೆ.

ವಿಜ್ಞಾನವೂ ಧಾರ್ಮಿಕ ನಂಬಿಕೆಗಳನ್ನು ಬೆಂಬಲಿಸಿದೆ
ದೈವ ಎಂಬ ಒಂದು ಶಕ್ತಿ ಇದೆ ಎಂಬುವುದನ್ನು ಎಲ್ಲಾ ಧರ್ಮಗಳು, ಎಲ್ಲಾ ದೇಶದವರು ನಂಬಿಯೇ ನಂಬುತ್ತಾರೆ. ಎಂಥ ಆಸ್ತಿಕನಾದರೂ ಅವನಲ್ಲಿ ಕೆಲವು ತತ್ತ್ವಗಳಿರುತ್ತದೆ, ಆ ತತ್ತ್ವಗಳೇ ಅವನ ನಂಬಿಕೆಯಾಗಿರುತ್ತದೆ, ಅದುವೇ ಅವನ ಶಕ್ತಿಯೂ ಆಗಿರುತ್ತದೆ. ವಿಜ್ಞಾನಿಗಳಾದ ಮಾತ್ರಕ್ಕೆ ದೈವ ಎಂಬ ಪರಿಕಲ್ಪನೆಯೇ ಇಲ್ಲ ಎಂಬಂತೆ ಅವರು ವರ್ತಿಸುವುದಿಲ್ಲ, ನಮ್ಮ ಭಾರತೀಯ ವಿಜ್ಞಾನಿಗಳು ಹಲವು ಸಂದರ್ಭಗಳಲ್ಲಿ ಅದರಂತೆ ನಡೆದುಕೊಂಡಿದ್ದಾರೆ. ಮೊನ್ನೆಯೇ ನೋಡಿ ಚಂದ್ರಯಾನ 3 ವಿಕ್ರಮ್ ಉಡಾವಣೆಗೆ ಮುನ್ನ ವಿಜ್ಞಾನಿಗಳು ಆಂಧ್ರದ ತಿರುಪತಿಗೆ ಬಂದು ನಮ್ಮ ಕಾರ್ಯಕ್ಕೆ ಯಾವ ವಿಘ್ನವೂ ಉಂಟಾಗದಂತೆ ಆಶೀರ್ವದಿಸು ತಿಮ್ಮಪ್ಪ ಎಂದು ಬೇಡಿಕೊಂಡಿದ್ದರು.
ವಿಜ್ಞಾನಿಗಳು ರಾಕೆಟ್ ಉಡಾವಣೆಗೆ ನಿರ್ಧರಿಸಿದ ಸಮಯಕ್ಕೂ ಧಾರ್ಮಿಕ ನಂಬಿಕೆಗೂ ಸಂಬಂಧವಿದೆ
ನಮಗೆಲ್ಲಾ ಗೊತ್ತು ವಿಜ್ಞಾನಿಗಳು ಜುಲೈ 14ರಂದು 2:35ಕ್ಕೆ ರಾಕೆಟ್ ಉಡಾವಣೆ ಮಾಡಿದ್ದಾರೆ. ಆದರೆ ಅವರು ಇಟ್ಟಿರುವ ಸಮಯದ ಹಿಂದಿದೆ ದಾರ್ಮಿಕ ನಂಬಿಕೆ. ನಾವು ಯಾವುದೇ ಕಾರ್ಯ ಮಾಡುವಾಗ ಶುಭ ಸಮಯ ನೋಡುತ್ತೇವೆ. ಶುಭ ಸಮಯದಲ್ಲಿ ಮಾಡಿದಾಗ ಆ ಕಾರ್ಯಗಳು ಶುಭ ಫಲ ನೀಡುತ್ತದೆ ಎಂಬ ನಂಬಿಕೆ. ಅದರಂತೆ ಜುಲೈ 14ರಂದು ಶುಭ ಮುಹೂರ್ತದಲ್ಲಿ ರಾಕೆಟ್ ಉಡಾವಣೆಯಾಗಿದೆ.
ವಿಜಯ ಮುಹೂರ್ತ
ಶುಭಕಾರ್ಯಗಳಿಗೆ ವಿಜಯ ಮುಹೂರ್ತ ಶುಭವಾಗಿದೆ. ಜುಲೈ 14ರಂದು ಮಧ್ಯಾಹ್ನ 02:38ರಿಂದ 03:31ರವರೆಗೆ ವಿಜಯ ಮುಹೂರ್ತ. ಉಡಾವಣೆ ವಿಜಯವನ್ನು ಸಾಧಿಸಲಿ ಎಂದು ಈ ಸಮಯ ನಿಗದಿ ಪಡಿಸಿರಬಹುದು. ಚಂದ್ರಯಾನ 3 ವಿಕ್ರಮ್ ಯೋಜನೆ ಜಯಶೀಲವಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಆಶಯ.....



Click it and Unblock the Notifications