Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
Chandrayaan 3: ರಾಕೆಟ್ ಉಡಾವಣೆ ಮಧ್ಯಾಹ್ನ 2:35ಕ್ಕೆ ಮಾಡಿದ್ದರ ಹಿಂದಿದೆ ಈ ಧಾರ್ಮಿಕ ನಂಬಿಕೆ!
ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ 3 ವಿಕ್ರಮ್ ಹೊತ್ತುಕೊಂಡ GSLV Mk III ಅಥವಾ LVM3 ಹೆಸರಿನ ರಾಕೆಟ್ ಶ್ರೀಹರಿಕೂಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ಮಧ್ಯಾಹ್ನ 2:35ಕ್ಕೆ ಚಂದ್ರನ ಕಕ್ಷೆಯತ್ತ ಧಾವಿಸಿದೆ.
ಚಂದ್ರಯಾನ 2 ವೈಫಲ್ಯದ ಬಳಿಕ ಮತ್ತಷ್ಟು ಶ್ರಮ ಹಾಕಿ ಈ ಹಿಂದೆ ನಡೆದ ತಪ್ಪುಗಳು ಈ ಬಾರಿ ಸಂಭವಿಸಬಾರದು ಎಂದು ತುಂಬಾನೇ ಜಾಗ್ರತೆವಹಿಸಿ, ಪ್ರತಿಯೊಂದು ತಾಂತ್ರಿಕ ವಿಷಯಗಳನ್ನು ಪರಿಶೀಲಿಸಿ ಚಂದ್ರಯಾನ 3 ವಿಕ್ರಮ್ ಅನ್ನು ಚಂದ್ರನ ಕಕ್ಷೆಗೆ ಕಳುಹಿಸಲಾಗಿದೆ. ಚಂದ್ರಯಾನ 3 ವಿಕ್ರಮ್ ಯೋಜನೆಯಲ್ಲಿ ನಮ್ಮ ವಿಜ್ಞಾನಿಗಳು ಬರೀ ತಮ್ಮ ಜ್ಞಾನ, ಪರಿಶ್ರಮದ ಮೇಲಷ್ಟೇ ಅಲ್ಲ ದೇವರು ಎಂಬ ಶಕ್ತಿಯ ಮೇಲೆ ಬಲವಾದ ನಂಬಿಕೆ ಇಟ್ಟಿದ್ದಾರೆ ಎಂಬುವುದಕ್ಕೆ ಚಂದ್ರಯಾನ 3 ವಿಕ್ರಮ್ ತೆಗೆದುಕೊಂಡ ರಾಕೆಟ್ ಉಡಾವಣೆಯಾಗಲು ಅವರು ನಿರ್ಧರಿಸಿದ ಸಮಯ ಒಂದು ಪ್ರಮುಖ ಸಾಕ್ಷಿಯಾಗಿದೆ.

ವಿಜ್ಞಾನವೂ ಧಾರ್ಮಿಕ ನಂಬಿಕೆಗಳನ್ನು ಬೆಂಬಲಿಸಿದೆ
ದೈವ ಎಂಬ ಒಂದು ಶಕ್ತಿ ಇದೆ ಎಂಬುವುದನ್ನು ಎಲ್ಲಾ ಧರ್ಮಗಳು, ಎಲ್ಲಾ ದೇಶದವರು ನಂಬಿಯೇ ನಂಬುತ್ತಾರೆ. ಎಂಥ ಆಸ್ತಿಕನಾದರೂ ಅವನಲ್ಲಿ ಕೆಲವು ತತ್ತ್ವಗಳಿರುತ್ತದೆ, ಆ ತತ್ತ್ವಗಳೇ ಅವನ ನಂಬಿಕೆಯಾಗಿರುತ್ತದೆ, ಅದುವೇ ಅವನ ಶಕ್ತಿಯೂ ಆಗಿರುತ್ತದೆ. ವಿಜ್ಞಾನಿಗಳಾದ ಮಾತ್ರಕ್ಕೆ ದೈವ ಎಂಬ ಪರಿಕಲ್ಪನೆಯೇ ಇಲ್ಲ ಎಂಬಂತೆ ಅವರು ವರ್ತಿಸುವುದಿಲ್ಲ, ನಮ್ಮ ಭಾರತೀಯ ವಿಜ್ಞಾನಿಗಳು ಹಲವು ಸಂದರ್ಭಗಳಲ್ಲಿ ಅದರಂತೆ ನಡೆದುಕೊಂಡಿದ್ದಾರೆ. ಮೊನ್ನೆಯೇ ನೋಡಿ ಚಂದ್ರಯಾನ 3 ವಿಕ್ರಮ್ ಉಡಾವಣೆಗೆ ಮುನ್ನ ವಿಜ್ಞಾನಿಗಳು ಆಂಧ್ರದ ತಿರುಪತಿಗೆ ಬಂದು ನಮ್ಮ ಕಾರ್ಯಕ್ಕೆ ಯಾವ ವಿಘ್ನವೂ ಉಂಟಾಗದಂತೆ ಆಶೀರ್ವದಿಸು ತಿಮ್ಮಪ್ಪ ಎಂದು ಬೇಡಿಕೊಂಡಿದ್ದರು.
ವಿಜ್ಞಾನಿಗಳು ರಾಕೆಟ್ ಉಡಾವಣೆಗೆ ನಿರ್ಧರಿಸಿದ ಸಮಯಕ್ಕೂ ಧಾರ್ಮಿಕ ನಂಬಿಕೆಗೂ ಸಂಬಂಧವಿದೆ
ನಮಗೆಲ್ಲಾ ಗೊತ್ತು ವಿಜ್ಞಾನಿಗಳು ಜುಲೈ 14ರಂದು 2:35ಕ್ಕೆ ರಾಕೆಟ್ ಉಡಾವಣೆ ಮಾಡಿದ್ದಾರೆ. ಆದರೆ ಅವರು ಇಟ್ಟಿರುವ ಸಮಯದ ಹಿಂದಿದೆ ದಾರ್ಮಿಕ ನಂಬಿಕೆ. ನಾವು ಯಾವುದೇ ಕಾರ್ಯ ಮಾಡುವಾಗ ಶುಭ ಸಮಯ ನೋಡುತ್ತೇವೆ. ಶುಭ ಸಮಯದಲ್ಲಿ ಮಾಡಿದಾಗ ಆ ಕಾರ್ಯಗಳು ಶುಭ ಫಲ ನೀಡುತ್ತದೆ ಎಂಬ ನಂಬಿಕೆ. ಅದರಂತೆ ಜುಲೈ 14ರಂದು ಶುಭ ಮುಹೂರ್ತದಲ್ಲಿ ರಾಕೆಟ್ ಉಡಾವಣೆಯಾಗಿದೆ.
ವಿಜಯ ಮುಹೂರ್ತ
ಶುಭಕಾರ್ಯಗಳಿಗೆ ವಿಜಯ ಮುಹೂರ್ತ ಶುಭವಾಗಿದೆ. ಜುಲೈ 14ರಂದು ಮಧ್ಯಾಹ್ನ 02:38ರಿಂದ 03:31ರವರೆಗೆ ವಿಜಯ ಮುಹೂರ್ತ. ಉಡಾವಣೆ ವಿಜಯವನ್ನು ಸಾಧಿಸಲಿ ಎಂದು ಈ ಸಮಯ ನಿಗದಿ ಪಡಿಸಿರಬಹುದು. ಚಂದ್ರಯಾನ 3 ವಿಕ್ರಮ್ ಯೋಜನೆ ಜಯಶೀಲವಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಆಶಯ.....



Click it and Unblock the Notifications