Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಬಲರಾಮ ಜಯಂತಿ 2023 : ದಿನಾಂಕ, ಶುಭ ಮುಹೂರ್ತ, ಪೂಜಾವಿಧಿಯೇನು?
ಸನಾತನ ಪಂಚಾಂಗದ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠಿಯಂದು ಬಲರಾಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 5 ರ ಮಂಗಳವಾರ ಬಲರಾಮ್ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಬಲರಾಮನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಆರನೆಯ ದಿನದಂದು ಜನಿಸಿದನೆಂದು ಸನಾತನ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಈ ದಿನ ಬಲರಾಮ ಜಯಂತಿಯನ್ನು ಆಚರಿಸಲಾಗುತ್ತದೆ.

ವಿಶ್ವ ರಕ್ಷಕನಾದ ಶ್ರೀಕೃಷ್ಣನ ಅಣ್ಣನಾದ ಬಲರಾಮನ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನ ಕೃಷ್ಣನ ಜೊತೆಗೆ ಬಲರಾಮನನ್ನು ಪೂಜಿಸುವುದರಿಂದ ಸಾಧಕನು ಬಯಸಿದ ಫಲವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತೆ ಎನ್ನುವ ನಂಬಿಕೆ ಕೂಡಯಿದೆ. ಅಷ್ಟಕ್ಕೂ ಬಲರಾಮ ಜಯಂತಿಯ ಶುಭ ಸಮಯ ಯಾವುದು? ಪೂಜಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.
ಶುಭ ಮುಹೂರ್ತ ಯಾವುದು?
ಜ್ಯೋತಿಷಿಗಳ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠಿಯಂದು ಸೆಪ್ಟೆಂಬರ್ 04ರ ಸೋಮವಾರದಂದು ಸಂಜೆ 04.41 ಕ್ಕೆ ಪ್ರಾರಂಭವಾಗಿ ಮರುದಿನ ಸೆಪ್ಟೆಂಬರ್ 05 ರಂದು ಮಧ್ಯಾಹ್ನ 03.46 ಕ್ಕೆ ಕೊನೆಗೊಳ್ಳುತ್ತದೆ. ಸನಾತನ ಧರ್ಮದಲ್ಲಿ ಉದಯ ತಿಥಿಯನ್ನು ಪರಿಗಣಿಸಲಾಗಿದೆ. ಹೀಗಾಗಿ ಸೆ.5ರಂದು ಬಲರಾಮ್ ಜಯಂತಿ ಆಚರಿಸಲಾಗುವುದು. ಈ ದಿನ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಾನ ಹೇಗಿರಬೇಕು?
ಬಲರಾಮ ಜಯಂತಿಯ ದಿನದಂದು ಬೆಳಗ್ಗೆ ಎದ್ದು ಲೋಕರಕ್ಷಕನಾದ ವಿಷ್ಣುವಿನ ಸಮೇತ ಶೇಷನಾಗನ ದರ್ಶನ ಮಾಡಿ. ದ್ವಾಪರ ಯುಗದಲ್ಲಿ ಶೇಷನಾಗನು ಬಲರಾಮನಾಗಿ ಅವತರಿಸಿದನೆಂದು ಗ್ರಂಥಗಳಲ್ಲಿ ಸೂಚಿಸಲಾಗಿದೆ. ದೈನಂದಿನ ಚಟುವಟಿಕೆಗಳನ್ನು ಮಾಡಿದ ನಂತರ ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಮತ್ತು ನಂತರ ಬಂದು ಧ್ಯಾನ ಮಾಡಿ. ಅದರ ನಂತರ ಹೊಸ ಬಟ್ಟೆಗಳನ್ನು ಧರಿಸಿ. ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
ಇದಾದ ಬಳಿಕ ಶ್ರೀಕೃಷ್ಣನೊಂದಿಗೆ ಬಲರಾಮನ ಪೂಜೆಯನ್ನು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅದನ್ನು ಮಾಡಿ. ಪೂಜೆಯ ಕೊನೆಯಲ್ಲಿ ಆರತಿಯನ್ನು ಅರ್ಪಿಸಿ ಮತ್ತು ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ. ವಿಶೇಷ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಸಂಜೆ ಆರತಿ ಮಾಡಿ ಹಣ್ಣು ತಿನ್ನಿರಿ. ಮರುದಿನ ಪೂಜೆಯನ್ನು ಮಾಡುವ ಮೂಲಕ ಉಪವಾಸವನ್ನು ಮುರಿಯಿರಿ.
ಈ ರೀತಿ ಬಲರಾಮ ಜಯಂತಿಯ ದಿನ ಪೂಜಾ ವಿಧಿಯನ್ನು ನೆರವೇರಿಸಿದ್ರೆ ನಿಮ್ಮೆಲ್ಲಾ ಕಷ್ಟಗಳು ನೆರವೇರಿ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿದೆ.



Click it and Unblock the Notifications