Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಅಯೋಧ್ಯೆ ಶ್ರೀರಾಮನಿಗೆ ಬರುತ್ತಿರುವ ಕಾಣಿಕೆಗಳಲ್ಲಿ ಗಮನ ಸೆಳೆಯುತ್ತಿರುವ ವಸ್ತುಗಳಿವು
ಜನವರಿ 22ರ ಸಂಭ್ರಮಕ್ಕೆ ಇಡೀ ದೇಶವೇ ಸಜ್ಜಾಗಿದೆ. ಶ್ರೀರಾಮನಿಗೆ ಭಕ್ತರಿಂದ ಅನೇಕ ಕಾಣಿಕೆಗಳ ರಾಶಿಯೇ ಹರಿದು ಬರುತ್ತಿದೆ, ರಾಮ ಭಕ್ತರು ತಮ್ಮ ಶಕ್ತಿಗೆ ಅನುಸಾರ ರಾಮ ಪಾದಗಳಿಗೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಕೆಲವೊಂದು ಕಾಣಿಕೆಗಳು ಇಡೀ ದೇಶದ ಗಮನ ಸೆಳೆದಿದೆ.
ಶ್ರೀರಾಮ ಮಂದಿರಕ್ಕೆ 2100ಕೆಜಿ ತೂಕದ ಘಂಟೆಯನ್ನು ನೀಡಲಾಗಿದೆ, ಚಿನ್ನದ ಪಾದುಕೆಗಳು, 10 ಅಡಿ ಉದ್ದದ ಊದುಕಡ್ಡಿ, ವಜ್ರದ ಹಾರ ಸೇರಿ ಹಲವಾರು ದುಬಾರಿ ಕಾಣಿಕೆಗಳನ್ನು ಶ್ರೀರಾಮನಿಗೆ ಅರ್ಪಿಸಲಾಗಿದೆ. ಜನವರಿ 22 ಹಿಂದೂಗಳಿಗೆ ಸುವರ್ಣದಿನ ಏಕೆಂದರೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಶ್ರೀರಾಮನಿಗೆ ಎಲ್ಲಿಂದ ಯಾವೆಲ್ಲಾ ಕಾಣಿಕೆ ಬಂದಿದೆ ನೋಡುವುದಾದರೆ.....

ನೇಪಾಳದಿಂದ 3000 ಕೊಡುಗೆ ಬಂದಿದೆ
ಸೀತೆಯ ಜನ್ಮಸ್ಥಳವಾದ ನೇಪಾಳದ ಜನಕಾಪುರದಿಂದ 3000 ಕೊಡುಗೆ ಬಂದಿದೆ. ಬೆಳ್ಳಿಯ ಶೂ, ಆಭರಣಗಳು, ಬಟ್ಟೆ ಹೀಗೆ 3000ಕ್ಕೂ ಅಧಿಕ ಕಾಣಿಗೆಗಳು ಬಂದಿದೆ. ಸುಮಾರು 30 ಗಾಡಿಗಳಲ್ಲಿ ಈ ಕಾಣಿಕೆಗಳು ಬರುತ್ತಿದ್ದು ಈ ವಾರದಲ್ಲಿಯೇ ತಲುಪಲಿದೆ.
ಶ್ರೀಲಂಕಾದಿಂದಲೂ ಬಂದಿದೆ ಕಾಣಿಲೆ
ಶ್ರೀಲಂಕದಿಂದ ಶ್ರೀರಾಮನಿಗೆ ಅಶೋಕ ವಾಟಿಕಾ ಬರುತ್ತಿದೆ. ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಬಚ್ಚಿಟ್ಟಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.
ವಡೋದರಾದಿಂದ 108 ಅಡಿ ಉದ್ದದ ಊದುಬತ್ತಿ ಬರುತ್ತಿದೆ
ವಡೋದರಾದಿಂದ 108 ಅಡಿ ಉದ್ದದ ಊದುಬತ್ತಿ ಬರುತ್ತಿದೆ, ಇದರ ತೂಕ 3, 610ಕೆಜಿ ಇದೆ, 3.5 ಅಡಿ ಅಗಲವಿದೆ. ಇದನ್ನು ಗುಜರಾತ್ನ ವಡೋದರಾದಲ್ಲಿ ತಯಾರಿಸಲಾಗಿದೆ. ಈ ಊದುಬತ್ತಿಯ ಹೊಗೆಯಿಂದ ಪರಿಸರಕ್ಕೆ, ಮನುಷ್ಯರಿಗೆ ಯಾವುದೇ ಹಾನಿಯಾಗುವುದಿಲ್ಲ, ಇದನ್ನು ಹಚ್ಚಿದರೆ ಒಂದವರೆ ತಿಂಗಳು ಉರಿಯಲಿದೆ ಇಂದು ಹೇಳಲಾಗುವುದು.
ದನದ ಸೆಗಣಿ, ಗಿಡ ಮೂಲಿಕೆಗಳು, ತುಪ್ಪ ಇವುಗಳನ್ನು ಬಳಸಿ ತಯಾರಿಸಲಾಗಿದ್ದು ಕುತಾಬ್ ಮಿನಾರ್ನ ಅರ್ಧದಷ್ಟು ಉದ್ದವಿದೆ. ಈ ಊದುಬತ್ತಿ ಅಯೋಧ್ಯೆಗೆ ಜನವರಿ 18ಕ್ಕೆ ತಲುಪಲಿದೆ.
ಗುಜರಾತ್ನಿಂದ ದೇವಾಲಯಕ್ಕೆ ಡ್ರಮ್ ಕಳುಹಿಸಲಾಗಿದೆ, ಇದರ ಹೊರ ಕವಚಕ್ಕೆ ಚಿನ್ನದ ಲೇಪನವಿದೆ, ಇದನ್ನು ದೇವಾಲಯದ ಆವಾರಣದಲ್ಲಿ ಇಡಲಾಗುವುದು.
ವಿಶ್ವದ ಅತಿ ದೊಡ್ಡ ಬೀಗ
ಉತ್ತರ ಪ್ರದೇಶದ ಸತ್ಯ ಪ್ರಕಾಶ ಶರ್ಮಾ ಅವರು 400 ಕೆಜಿ ತೂಕ, 10 ಅಡಿ ಎತ್ತರದ, 4.6 ಅಡಿ ಅಗಲದ, 9.5 ದಪ್ಪದ ಬೀಗ ತಯಾರಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಬೀಗವಾಗಿದೆ.
ಅತಿ ದೊಡ್ಡ ಗಾತ್ರದ ಘಂಟೆ
ಈ ಘಂಟೆ 2, 100ಕೆಜಿ ತೂಕವಿದೆ, ಇದನ್ನು ಉತ್ತರಪ್ರದೇಶದಲ್ಲಿ ಮಾಡಿ ಕಳುಹಿಸಲಾಗಿದೆ,
ಲಕ್ನೋದ ತರಕಾರಿ ವ್ಯಾಪಾರಿಯಿಂದ ವಿಶೇಷ ಕೊಡುಗೆ
ಲಕ್ನೋದ ತರಕಾರಿ ವ್ಯಾಪಾರಿ 8 ರಾಷ್ಟ್ರಗಳ ಸಮಯ ತೋರಿಸುವ ಗಡಿಯಾರ ನೀಡಿದ್ದಾರೆ. ಈ ಗಡಿಯಾರವನ್ನು 2028ರಲ್ಲಿ ತಯಾರಿಸಲಾಗಿದೆ. ಈ ಗಡಿಯಾರ ಭಾರತ, ಟೋಕಿಯೋ, ಮೋಸ್ಕೋ, ದುಬೈ, ಬೀಜಿಂಗ್, ಸಿಂಗಾಪುರ್, ಮೆಕ್ಸಿಕೋ, ವಾಷಿಂಗ್ಟನ್, ನೂಯಾರ್ಕ್ನ ಸಮಯ ತೋರಿಸುತ್ತದೆ.
ಶ್ರೀಕೃಷ್ಣ ಜನ್ಮ ಸ್ಥಾನವಾದ ಮಥುರಾದಿಂದ ಯಜ್ಞದಲ್ಲಿ ಬಳಸಲು 200ಕೆಜಿ ಲಡ್ಡು ಕಳುಹಿಸಿಕೊಡಲಾಗಿದೆ.
ಗುಜರಾತಿನಿಂದ ವಿಶೇಷ ಸೀರೆ ಕೂಡ ಬಂದಿದೆ
ಈ ಸೀರೆಯನ್ನು ರಾಮನ ಮಡದಿ ಸೀತೆಗೆ ಕಳುಹಿಸಿಕೊಡಲಾಗುತ್ತದೆ. ಈ ಸೀರೆಯನ್ನು ಸೂರತ್ನಿಂದ ನೀಡಲಾಗಿದೆ.
ಸೂರತ್ನ ಮತ್ತೊಬ್ಬ ವಜ್ರ ವ್ಯಾಪಾರಿ ರಾಮ ಮಂದಿರ ಹೋಲುವ ವಜ್ರದ ಹಾರವನ್ನು ಮಾಡಿ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. ಹೈದರಾಬಾದ್ ಉದ್ಯಮಿಯೊಬ್ಬರು ಶ್ರೀರಾಮನಿಗೆ ಚಿನ್ನದ ಪಾದುಕೆ ನೀಡಲು ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುತ್ತಿದ್ದಾರೆ. ಹೀಗೆ ಅನೇಕ ಕಾಣಿಗೆಗಳು ತಮ್ಮ ಶ್ರೀರಾಮನಿ ಗಾಗಿ ಹರಿದು ಬರುತ್ತಲೇ ಇದೆ.



Click it and Unblock the Notifications
