Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ಯಾವ ಪ್ರಸಾದ ನೀಡಲಾಗುವುದು?
ದೇಶದ ಎಲ್ಲಾ ಕಡೆ ಸಂಭ್ರಮ ಹೆಚ್ಚಾಗಿದೆ, ಇಡೀ ದೇವಾಲಯಗಳು ಶ್ರೀರಾಮನ ಪ್ರತಿಷ್ಠಾಪನೆ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಶ್ರೀರಾಮ ಶಕ್ತಿ ದೇಶ ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆ ಭವ್ಯ ಮಂದಿರದಲ್ಲಿ ಶ್ರೀರಾಮನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಈಗಾಗಲೇ ಅನೇಕರು ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸಾಧು ಸಂತರು ಕೂಡ ಅಯೋಧ್ಯೆಯ ಪೂಜೆ ಭಾಗವಹಿಸಲು ಸಾಗುತ್ತಿದ್ದಾರೆ.
ಅಯೋಧ್ಯೆಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಬರಬಹುದು ಎಂದು ಅಂದಾಜಿಸಲಾಗಿದೆ, ಅದರಲ್ಲೂ ಲೋಕಾರ್ಪಣೆಯಾದ ಕೆಲವು ದಿನಗಳವರೆಗೆ ಭಕ್ತರ ಸಂಖ್ಯೆ ತುಂಬಾನೇ ಅಧಿಕವಿರಲಿದೆ. ನಾವು ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರಸಾದ ಸಿಕ್ಕರೆ ತುಂಬಾನೇ ತೃಪ್ತಿ. ಒಂದು ಚಮಚವಾದರೂ ಅಥವಾ ಒಂದು ಚಿಕ್ಕ ಕಲ್ಲು ಸಕ್ಕರೆಯಾದರೂ ಸರಿ, ದೇವರ ಪ್ರಸಾದ ರೂಪದಲ್ಲಿ ಏನಾದರೂ ಸಿಗಲೇಬೇಕು.

ಒಂದೊಂದು ದೇವಾಲಯಕ್ಕೆ ಹೋದಾಗ ಒಂದೊಂದು ಬಗೆಯ ಪ್ರಸಾದ ಸಿಗುತ್ತದೆ, ತಿರುಪತಿಗೆ ಹೋದಾಗ ಲಡ್ಡು, ಧರ್ಮಸ್ಥಳ ಹೋದಾಗ ಕಲ್ಲುಸಕ್ಕರೆ ಹಾಗೂ ಪ್ರಸಾದದ ಪುಡಿ ಹೀಗೆ ಒಂದೊಂದು ಕಡೆ ಒಂದೊಂದು ಬಗೆಯ ಪ್ರಸಾದ ಸಿಗುತ್ತದೆ. ಅಯೋಧ್ಯೆಯಲ್ಲಿ ಯಾವ ಪ್ರಸಾದ ಸಿಗಲಿದೆ?
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ದೇವರ ಭಕ್ತರಿಗೆ ಪ್ರಸಾದ ಯಾವ ರೀತಿಯದ್ದು ದೊರಕಬಹುದು ಎಂಬ ಕುತೂಹಲವಿದೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದಿನನಿತ್ಯ ಬರುವ ಭಕ್ತರಿಗೆ ಕಲ್ಲುಸಕ್ಕರೆಯ ಪ್ರಸಾದ ನೀಡಲು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತೀರ್ಮಾನ ತೆಗೆದುಕೊಂಡಿದೆ.
ಕಲ್ಲುಸಕ್ಕರೆಯ ಪ್ರಸಾದ
ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ. ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು. ತಿರುಪತಿಯಿಂದ ಲಡ್ಡ ತಂದು ಹಂಚುವಂತೆ ಕಲ್ಲುಸಕ್ಕರೆ ತಂದು ಹಂಚಿ ಸಂಭ್ರಮ ಪಡುವ ದಿನ ಆದಷ್ಟು ಬೇಗ ನಮಗೆ ಬರಲಿ ಎಂಬುವುದೇ ಎಲ್ಲಾ ರಾಮ ಭಕ್ತರ ಬಯಕೆಯಾಗಿದೆ.
ಶ್ರೀರಾಮ ಮಂದಿರದಲ್ಲಿ ವಿಶೇಷ ಸೇವೆ ಇದೆಯೇ?
ಕೆಲವೊಂದು ದೇವಾಲುಗಳಲ್ಲಿ ಕುಂಕುಮಾರ್ಚನೆ, ತುಲಾಭಾರ, ಮುಡಿಕೊಡುವುದು ಅಂಥ ಸೇವೆಗಳಿರುತ್ತದೆ, ಆದರೆ ಇಲ್ಲಿ ಅಂಥ ಯಾವುದೇ ಸೇವೆಗಳಿರಲ್ಲ. ಆದರೆ, ಶ್ರೀರಾಮನಿಗೆ ಕಲಾಶಾಭಿಷೇಕ ಸೇವೆಗೆ ವ್ಯವಸ್ಥೆ ಇರುತ್ತದೆ.
ರಾಮ ಮಂದಿರದ ಮೂಲಕ ನಿರ್ಮಾಣವಾಗಲಿದೆ ಬಡವರಿಗೆ ಸೂರು
ದೇವರಿಗೆ ಮಾಡುವ ಪ್ರತೀ ಕಲಶಾಭಿಷೇಶಕಕ್ಕೆ 1 ಲಕ್ಷ ರು. ಮೊತ್ತ ನೀಡಬೇಕು. ಹೀಗೆ ಕಲಾಷಾಭಿಷೇಕದ ಮೂಲಕ ಸಂದಾಯವಾಗುವ ಮೊತ್ತದಲ್ಲಿ ನಿರ್ಗತಿಕರಿಗೆ 10 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಉದ್ದೇಶವನ್ನು ಶ್ರೀರಾಮ ಟ್ರಸ್ಟ್ ಹೊಂದಿದೆ. ಅಂತೆಯೇ ಗೋಶಾಲೆ, ಬಡ ಮಕ್ಕಳ ಶಿಕ್ಷಣ, ವೈದ್ಯಕೀಯ ಸೇವಾಯೋಜನೆಗಳನ್ನು ಜಾರಿಗೊಳಿಸಲು ಶ್ರೀರಾಮಮಂದಿರಕ್ಕೆ ಭಕ್ತರು ನೀಡುವ ದೇಣಿಗೆಯನ್ನು ಬಳಸಿಕೊಳ್ಳಲಾಗುವುದು. ಇಲ್ಲಿಗೆ ಬರುವ ಹರಿಕೆಯ ಹಣ ಸಮಾಜ ಕಲ್ಯಾಣಕ್ಕೆ ಬಳಸಲಾಗುವುದು.
ಪ್ರತಿಷ್ಠಾಪನೆ ದಿನ ತಿರುಪತಿಯೊಂದ 1 ಲಕ್ಷ ಲಡ್ಡು
ತಿರುಪತಿಗೆ ಹೋದರೆ ಲಡ್ಡು ತಂದು ಹಂಚುತ್ತೇವೆ, ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದವೇ ಪ್ರಮುಖವಾಗಿದೆ. ಈ ಲಡ್ಡು ಪ್ರಸಾದವನ್ನೇ ಶ್ರೀರಾಮನಿಗೆ ತಿರುಪತಿಯ ಕೊಡುಗೆಯಾಗಿ ನೀಡಲಾಗುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಟಾಪನೆಗೆ ಹೋಗುವ ಭಕ್ತರಿಗೆ ನೀಡಲೆಂದೇ 1 ಲಕ್ಷ ಲಡ್ಡುಗಳನ್ನು ತಿರುಪತಿ ದೇವಾಲಯದಿಂದ ಕಳುಹಿಸಿಕೊಡಲಾಗುವುದು.
25 ಗ್ರಾಂ ತೂಕವಿರುವ ಲಡ್ಡುಗಳು ಪ್ರಾಣಪ್ರತಿಷ್ಠಾಪನೆಗೆ ಒಂದು ದಿನ ಮುಂಚೆ ತಲುಪಲಿದೆ. ಅಂದು 7 ಸಾವಿರ ಗಣ್ಯ ಅತಿಥಿಗಳು ಬರಲಿದ್ದು, ಅವರೊಂದಿಗೆ ನಿರೀಕ್ಷಿತ 1 ಲಕ್ಷ ಭಕ್ತಾಧಿಗಳಿಗೂ ಲಡ್ಡು ವಿತರಿಸಲಾಗುವುದು. ಈ ದಿನವಷ್ಟೇ ತಿರುಪತಿ ಲಡ್ಡು ಸಿಗಲಿದೆ, ನಂತರ ಹೋದವರಿಗೆ ಅಲ್ಲಿಯ ಪ್ರಸಾದ ಕಲ್ಲುಸಕ್ಕರೆ ದೊರೆಯಲಿದೆ.



Click it and Unblock the Notifications