Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಪ್ರಾಣಪ್ರತಿಷ್ಠಾಪನೆ: ಅಲಂಕೃತಗೊಂಡ ಅಯೋಧ್ಯೆ ರಾಮ ಮಂದಿರದ ಸುಂದರ ಫೋಟೋಗಳು
ಇಡೀ ದೇಶವೇ ಸಂಭ್ರಮಿಸುತ್ತಿದೆ, ದೇಶದ ಹಳ್ಳಿಗಳ ಮೂಲೆ-ಮೂಲೆಯಲ್ಲೂ ಈ ಸಂಭ್ರಮ ಮನೆ ಮಾಡಿದೆ. ಎಲ್ಲಾ ದೇವಾಲಯಗಳು ಹೂಗಳಿಂದ ಅಲಂಕೃತಗೊಂಡಿದೆ, ಈ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ವೇಳೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುವುದು.ಕರ್ನಾಟಕದಲ್ಲಿರುವ ಅಷ್ಟೂ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಏರ್ಪಡಿಸಲಿದ್ದು ಮಧ್ಯಾಹ್ನ 12:29ರಿಂದ 1:32ರವರೆಗೆ ವಿಶೇಷ ಪೂಜೆ ನಡೆಯಲಿದೆ.
ಈ ದಿನ ಅಯೋಧ್ಯೆ ಎಷ್ಟು ಸುಂದರವಾಗಿದೆ ಕಾಣುತ್ತಿದೆ ಎಂದರೆ ಅದರ ಅಂದ ನೋಡಲು ಎರಡು ಕಣ್ಣು ಸಾಲದು, ಅಷ್ಟೊಂದು ಆಕರ್ಷಕವಾಗಿ ಅಲಂಕೃತಗೊಂಡಿದೆ. ಹೂಗಳಿಂದ ಅಲಂಕೃತಗೊಂಡಿರುವ ಅಯೋಧ್ಯೆ ರಾಮ ಮಂದಿರದ ಸೊಬಗು ನೋಡಿ ಹೀಗಿದೆ:

ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.
ಅಭಿಜಿತ್ ಮುಹೂರ್ತ ಕೂಡ ಇದೆ ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿಯೇ ಅಭಿಜಿತ್ ಮುಹೂರ್ತ ಕೂಡ ಬಂದಿರುವುದರಿಂದ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಪ್ರಗತಿ ಉಂಟಾಗುವುದು.
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನೀವು ಲೈವ್ನಲ್ಲಿ ನೋಡಬಹುದು
ಮಂದಿರದೊಳಗೆ ಹೋಗಿ ಪ್ರಾಣಪ್ರತಿಷ್ಠಾಪನೆ ನೋಡಲು ಸಾಧ್ಯವಾಗದೇ ಇರಬಹುದು, ಆದರೆ ಬೇಸರ ಪಡುವಂತಿಲ್ಲ ನೀವು ಲೈವ್ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಸಮಯ ಜನವರಿ 22 ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನೀವು ಲೈವ್ ವೀಕ್ಷಿಸಬಹುದು.
ಲೈವ್ ಟೆಲಿಕಾಸ್ಟ್ (ನೇರ ಪ್ರಸಾರ)ಕ್ಕೆ ಎಲ್ಲವೂ ವ್ಯವಸ್ಥೆ ಮಾಡಲಾಗುವುದು. ಪ್ರಾಣ ಪ್ರತಿಷ್ಠಾಪನೆ ಪೂಜೆಯನ್ನು ನೀವು DD ನ್ಯಾಷನಲ್ ಚಾನಲ್ನಲ್ಲಿ ವೀಕ್ಷಿಸಬಹುದು. ಅಲ್ಲದೆ ಇತರ ನ್ಯೂಸ್ ಏಜೆನ್ಸಿಗಳಿಗೂ ಫೀಡ್ ನೀಡಲಿದೆ, ಅಲ್ಲದೆ ದೂರದರ್ಶನ ಯೂಟ್ಯೂಬ್ ಲಿಂಕ್ನಲ್ಲಿಯೂ ವೀಕ್ಷಿಸಬಹುದು. ಅಯೋಧ್ಯೆಯ ಬೇರೆ-ಬೇರೆ ಭಾಗಗಳಲ್ಲಿ 40 ಕ್ಯಾಮರಾ ಅಳವಡಿಸಲಾಗಿದೆ.
ರಾಮ ಮಂದಿರದ ಆವರಣದಿಂದ ಹಿಡಿದು ಗರ್ಭಗುಡಿಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಎಲ್ಲವೂ ಲೈವ್ನಲ್ಲಿದೆ. ಈ ಬ್ರಾಡ್ಕಾಸ್ಟ್ಗೆ 4K ತಂತ್ರಜ್ಞಾನ ಬಳಸಲಾಗುವುದು ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸರಾಯು ಸಮೀಪದಲ್ಲಿರುವ ರಾಮ್ ಕಿ ಪೈಡಿ, ಜಟಾಯು ವಿಗ್ರಹ ಹೀಗೆ ವಿವಿಧ ಭಾಗಗಳಿಂದ ಲೈವ್ ಕವರೇಜ್ ನೀಡಲಾಗುವುದು.
ಅಯೋಧ್ಯೆ ರಾಮ ಮಂದಿರಲ್ಲಿ ನೀಡಲಾಗುವ ಪ್ರಸಾದ
ತಿರುಪತಿಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲಾಗಿದೆ, ಅದನ್ನು ಇಂದು ಅಯೋಧ್ಯೆಯಲ್ಲ ನೆರೆದಿರುವ ಭಕ್ತರಿಗೆ ಲಡ್ಡುಪ್ರಸಾದ ನೀಡಲಾಗುವುದು. ಅಯೋಧ್ಯೆಗೆ ಪ್ರಸಾದವಾಗಿ ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ , ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು.



Click it and Unblock the Notifications






