Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ದೀಪ ಹಚ್ಚುವಾಗ ಕೈ ಸುಟ್ಟು ಹೋದರೆ ಏನರ್ಥ! ಇದು ಅಪಶಕುನನಾ?
ಹಿಂದೂ ಧರ್ಮದಲ್ಲಿ ದೇವರನ್ನು ಭಕ್ತಿಯಿಂದ ಪೂಜಿಸಿ, ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಕ್ರಮವಿದೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಮನೆಯ ಯಾರಾದರೂ ಒಬ್ಬ ಸದಸ್ಯ ಬೆಳಗ್ಗೆ ಎದ್ದು ಸ್ನಾನ ಮಾಡಿ ಭಕ್ತಿಯಿಂದ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುತ್ತಾರೆ. ನಾವು ಭಕ್ತಿಯಿಂದ ಪೂಜೆ ಸಲ್ಲಿಸಿದ್ರೆ ಆ ಪೂಜೆ ದೇವರಿಗೆ ಸಲ್ಲುತ್ತೆ ಎನ್ನುವ ನಂಬಿಕಯಿದೆ.

ಆದರೆ ಕೆಲವೊಂದು ಸಾರಿ ದೇವರ ಪೂಜೆ ಮಾಡುವಾಗ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ಅಚಾತುರ್ಯಗಳು ನಡೆದು ಹೋಗುತ್ವೆ. ಈ ಸಂದರ್ಭದಲ್ಲಿ ಇದೇನಾದ್ರೂ ಅಪಶಕುನದ ಮುನ್ಸೂಚನೆಯ ಎನ್ನುವ ಭಯ ಶುರುವಾಗುತ್ತೆ. ಅಷ್ಟಕ್ಕೂ ಪೂಜಾ ಸಮಯದಲ್ಲಿ ಆಗುವ ತಪ್ಪುಗಳು ಏನನ್ನು ಸೂಚಿಸುತ್ತೆ ಅನ್ನೋದನ್ನು ಒಂದೊಂದಾಗಿ ತಿಳಿಯೋಣ.
ಪೂಜೆಯ ಸಮಯದಲ್ಲಿ ಕಣ್ಣಲ್ಲಿ ನೀರು ಬಂದತಾಗುವುದು!
ಪೂಜೆಯ ಸಮಯದಲ್ಲಿ ವ್ಯಕ್ತಿಯ ಕಣ್ಣಿನಿಂದ ನೀರು ಬಂದರೆ ನಿಮ್ಮ ಮನಸ್ಸಿನಲ್ಲಿರುವ ದುಃಖವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದರ್ಥ. ಅಷ್ಟೇ ಅಲ್ಲದೇ ನಿಮ್ಮೆಲ್ಲಾ ಕಷ್ಟಗಳು ಬೇಗನೆ ಕೊನೆಯಾಗುತ್ತೆ ಅನ್ನೋದನ್ನು ಇದು ಸೂಚಿಸುತ್ತದೆ. ಇನ್ನೂ ನಿಮ್ಮ ಶತ್ರುಗಳ ವಿರುದ್ಧ ನೀವು ಜಯ ಸಾಧಿಸುತ್ತೀರಿ ಎನ್ನುವ ಸೂಚನೆ ಇದಾಗಿದೆ.
ಪೂಜೆಯ ಸಮಯದಲ್ಲಿ ಕೈ ಸುಟ್ಟು ಹೋಗುವುದು!
ಪೂಜಾ ಸಂದರ್ಭದಲ್ಲಿ ನಮ್ಮಲ್ಲಿ ದೇವರಿಗೆ ದೀಪ ಹಚ್ಚುವ ಸಂಪ್ರದಾಯವಿದೆ. ಕೆಲವೊಂದು ಸಲ ದೀಪ ಹಚ್ಚುವಾಗ ಕೈ ಸುಟ್ಟಂತಹ ಅನುಭವವಾಗುತ್ತದೆ. ಒಂದು ರೀತಿ ಆದರೆ ನೀವೇನಾದರೂ ತಪ್ಪು ಮಾಡಿದ್ದೀರಿ ಎಂದರ್ಥ. ಒಂದು ದೀಪ ಹಚ್ಚುವಾಗ ನಿಮ್ಮ ಕೈ ಏನಾದರೂ ಸುಟ್ಟು ಹೋದರೆ ಮತ್ತೊಮ್ಮೆ ದೇವರನ್ನು ಭಕ್ತಿಯಿಂದ ಬೇಡಿಕೊಂಡು ನೀವು ಮಾಡಿದ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿ.
ಪೂಜೆಯ ಸಮಯದಲ್ಲಿ ಆಕಳಿಕೆ ಬರುವುದು!
ಪೂಜೆಯ ಸಮಯದಲ್ಲಿ ನೀವು ಪದೇ ಪದೇ ಆಕಳಿಸಿದರೆ ಧರ್ಮಗ್ರಂಥಗಳ ಪ್ರಕಾರ ನಿಮ್ಮೊಳಗೆ ನಕಾರಾತ್ಮಕತೆ ಹೆಚ್ಚಾಗಿದೆ ಎಂಬುದರ ಸಂಕೇತವಾಗಿದೆ. ಅಲ್ಲದೆ ಕೆಲವೊಮ್ಮೆ ಕೆಟ್ಟ ಆಲೋಚನೆಗಳಿಂದಾಗಿ ನಿಮಗೆ ಪೂಜೆಯ ಸಮಯದಲ್ಲಿ ಆಕಳಿಕೆ ಬಂದತಾಗುತ್ತದೆ. ಈ ರೀತಿ ಆದರೆ ಆದಷ್ಟು ಬೇಗ ನಿಮ್ಮ ಮನದೊಳಗಿನ ಕೆಟ್ಟ ಅಥವಾ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕೋದಕ್ಕೆ ನಿರ್ಧರಿಸಿ.
ಪೂಜೆ ಯಶಸ್ವಿಯಾಗಿದೆ ಎಂದು ಸೂಚಿಸುತ್ತದೆ!
ಪೂಜೆಯ ಸಮಯದಲ್ಲಿ ಬೆಳಗಿದ ದೀಪದ ಜ್ವಾಲೆಯು ಮೇಲಕ್ಕೆ ಏರಲು ಪ್ರಾರಂಭಿಸಿದರೆ ನಿಮ್ಮ ಪೂಜೆಯಿಂದ ದೇವರು ಸಂತುಷ್ಟನಾಗಿದ್ದಾನೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಮತ್ತೊಂದೆಡೆ, ಪೂಜೆಯ ಸಮಯದಲ್ಲಿ ನಿಮ್ಮ ಮನೆಗೆ ಅತಿಥಿಗಳು ಬಂದರೆ ದೇವರು ನಿಮ್ಮ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾನೆ ಎಂದರ್ಥ.



Click it and Unblock the Notifications