Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆದಿತ್ಯ L1 ಮಿಷನ್: ಸೂರ್ಯನ ಬಳಿಗೆ ಹೋಗಲು ಇಸ್ರೋ ಕ್ಷಣಗಣನೆ
ಇದೀಗ ವಿಶ್ವದ ದೃಷ್ಟಿ ನಮ್ಮ ಭಾರತದ ಕಡೆಗೆ ಮತ್ತೊಮ್ಮೆ ತಿರುಗಿದೆ, ಇದಕ್ಕೆ ಕಾರಣ ನಮ್ಮ ಇಸ್ರೋ ವಿಜ್ಞಾನಿಗಳು ಸೂರ್ಯನಲ್ಲಿ ಅಧ್ಯಯನ ಮಾಡಲು ಹೊರಟಿದ್ದಾರೆ. ಈ ಮೂಲಕ ಯಾರೂ ಮಾಡಿರದ ಪ್ರಮುಖ ಕಾರ್ಯವನ್ನು ಭಾರತ ಮಾಡಲು ಹೊರಟಿದೆ.
ಬಾಹ್ಯಾಕಾಶ ಜ್ಞಾನದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿರುವ ಭಾರತ
ಭೂಮಿಯಿಂದ ಆಕಾಶ ನೋಡುವಾಗ ಆ ಲೋಕದ ಸಾಕಷ್ಟು ಕುತೂಹಲ ಕಾಡುವುದು. ಚಂದ್ರ ಲೋಕ ಎಂಬುವುದು ಹೇಗಿರುತ್ತದೆ, ಕೆಂಪಗೆ ಉರಿಯುವ ಸೂರ್ಯನ ಬಳಿ ಹೋಗಲು ಸಾಧ್ಯವೇ, ಶುಕ್ರ, ಮಂಗಳದ ವಾತಾವರಣ ಹೇಗಿರಬಹುದು, ಭೂಮಿಯಲ್ಲಿ ಇರುವಂತೆ ಬಾಹ್ಯಾಕಾಶದಲ್ಲೂ ಏನಾದರೂ ಜೀವಿಗಳು ಇರಲು ಸಾಧ್ಯವೇ ಹೀಗೆ ಅನೇಕ ಕೌತುಕಗಳು ಕಾಡುವುದು.

ಈ ರೀತಿಯ ಕೌತುಕಗಳನ್ನು ಬೆನ್ನೆಟ್ಟುವ ಕೆಲಸವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ. ಇದುವರೆಗೆ ಬಾಹ್ಯಾಕಾಶದ ಏನಾದರೂ ತಿಳಿಯಲು ನಾವು ನಾಸಾದತ್ತ ನೋಡುತ್ತಿದ್ದೇವೆ. ಆದರೆ ಈಗ ನಮ್ಮ ಹೆಮ್ಮೆಯ ಇಸ್ರೋ ಬಾಹ್ಯಾಕಾಶದ ಕುರಿತು ಮತ್ತಷ್ಟು ತಿಳಿಸಲು ಹೊರಟಿರುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಷಯ.
ಜಗತ್ತಿನಲ್ಲಿ ಯಾರೂ ಮಾಡಿರದ ಕಾರ್ಯವನ್ನು ನಮ್ಮ ಇಸ್ರೋ ಮಾಡುತ್ತಿದೆ. ಚಂದ್ರಲೋಕಕ್ಕೆ ಈ ಹಿಂದೆ ಅಮೆರಿಕ, ರಷ್ಯಾದಂಥ ದೊಡ್ಡ ರಾಷ್ಟ್ರಗಳು ಹೋಗಿದ್ದರು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದು. ಚಂದ್ರಯಾನ ತ್ರಿವಿಕ್ರಮ ಯಶಸ್ವಿನ ನಂತರ ಈಗ ಸೌರಯಾನಕ್ಕೆ ಮುಂದಾಗಿದೆ ಇಸ್ರೋ... ಸೌರಾಯಾನವನ್ನು ಸೆಪ್ಟೆಂಬರ್ 2ರಂದು ಮಾಡುತ್ತಿದ್ದು, ಆದಿತ್ಯ L1 ಮಿಷನ್ ಪ್ರಾರಂಭಕ್ಕೆ ಕ್ಷಣಕಣನೆ ಶುರುವಾಗಿದೆ.
ಸೂರ್ಯಯಾನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದ ಇಸ್ರೋ
ನಾವು ಯಾವುದೇ ಕಾರ್ಯಕ್ಕೆ ಹೋಗುವ ಮುನ್ನ ದೇವರ ಪ್ರಾರ್ಥನೆ ಮಾಡುವುದು ಭಾರತೀಯರ ನಂಬಿಕೆ, ಆ ನಂಬಿಕೆ ವಿಜ್ಞಾನಿಗಳಲ್ಲಿಯೂ ಇದೆ. ಚಂದ್ರಯಾನಕ್ಕೆ ಮುನ್ನ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು ವಿಜ್ಞಾನಿಗಳು, ಇದೀಗ ಸೂರ್ಯಯಾನಕ್ಕೂ ಮುನ್ನ ಕೂಡ ಎಸ್ ಸೋಮನಾಥನ್ ಚೆಂಗಲಮ್ಮ ಪರಮೇಶ್ವರಿ ದೇವಾಲಯಕ್ಕೆ ಭೇಟಿ ಮಾಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದಿತ್ಯ L1 ಮಿಷನ್ ಯಶಸ್ವಿಯಾಗಲಿ ಎಂದು ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.
ಆದಿತ್ಯ L1 ಮಿಷನ್ನ ಉದ್ದೇಶ
ಬೆಂಕಿ ಚೆಂಡಿನ ಸೂರ್ಯನ ಬಳಿ ಯಾರಿಗೂ ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಹೈಡ್ರೋಜನ್ ಹಾಗೂ ಹೀಲಿಯಂನ ಬೆಂಕಿ ಚೆಂಡು ಸೂರ್ಯನ ಸಮೀಪ ಹೋಗುವುದು ಎಂದರೆ ಅದು ಸುಲಭದ ವಿಷಯವಲ್ಲ, ಯಾವುದೇ ವಸ್ತುಗಳು ಅದರ ಸಮೀಪ ಹೋದರೆ ಉಷ್ಣಾಂಶಕಕ್ಕೆ ಕರಗಿ ಹೋಗಿ ಬಿಡುತ್ತದೆ, ಆದರೆ ಈ ಸೂರ್ಯನ ಹೊರವಲಯವನ್ನು ಅಧ್ಯಯನ ಮಾಡಲು ನಮ್ಮಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಹೊಂದಿದೆ ನಮ್ಮ ಇಸ್ರೋ. ಸೂರ್ಯನ ಹೊರವಲಯದ ವಾತಾವರಣದ ಕುರಿತು ಅಧ್ಯಯನ ಮಾಡುವುದು ಆದಿತ್ಯ L1 ಮಿಷನ್ನ ಉದ್ದೇಶವಾಗಿದೆ.
ಇಂದು ಉಡಾವಣೆ ಆಗುವ ರಾಕೆಟ್ ಸೂರ್ಯನ ಸಮೀಪ ತಲುಪುವುದು ಯಾವಾಗ?
ಆದಿತ್ಯ ಎಲ್ 1 ಯಶಸ್ವಿಯಾದರೆ ಜನವರಿ ತಿಂಗಳಿನಲ್ಲಿ ಇದು ಸೂರ್ಯನ ಸಮೀಪ ತಲುಪಲಿದೆ, ಫೆಬ್ರವರಿಯಿಂದ ಸೂರ್ಯನ ಕುರಿತು ಮಾಹಿತಿ ನೀಡಲಿದೆ. ಈ ಯೋಜನೆ ಯಶಸ್ವಿಯಾದರೆ ಸೌರಮಂಡಲದ ಕುರಿತು ಮತ್ತಷ್ಟು ತಿಳಿಯಲು ಸಾಧ್ಯವಾಗುವುದು. ಈ ಯೋಜನೆ ಯಶಸ್ವಿಯಾಗಲಿ, ನಮ್ಮ ಇಸ್ರೋ ಸಾಧನೆ ನಾಸಾಗಿಂತಲೂ ಅಧಿಕವಾಗಲಿ ಎಂಬುವುದೇ ಭಾರತೀಯರ ಆರೈಕೆ.



Click it and Unblock the Notifications
