Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಶ್ರಾವಣ ಮಾಸದಲ್ಲಿ ಈ 5 ದೈವಿಕ ವಸ್ತುಗಳನ್ನು ಮನೆಗೆ ತಂದರೆ ಎಲ್ಲಾ ಕಷ್ಟಗಳು ದೂರಾಗುವುದು
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶಿವಭಕ್ತರು ಈ ತಿಂಗಳ ವ್ರತ ನಿಯಮಗಳನ್ನು ಪಾಲಿಸುತ್ತಾ ಶಿವನನ್ನು ಆರಾಧನೆ ಮಾಡಲಾಗುವುದು. ಈ ತಿಂಗಳಿನಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ವಸ್ತುಗಳನ್ನು ಶ್ರಾವಣದಲ್ಲಿ ಮನೆಗೆ ತಂದರೆ ಮನೆಗೆ ಅದೃಷ್ಟ ಬರಲಿದೆ ಎಂದು ನಂಬಲಾಗಿದೆ. ಈ ಶ್ರಾವಣದಲ್ಲಿ ಯಾವೆಲ್ಲಾ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ನಾಗ- ನಾಗಿಣಿಯ ಮೂರ್ತಿ
ನಾಗ-ನಾಗಣಿಯ ಮೂರ್ತಿಯನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ಸರ್ಪ ಶಿವನ ಆಭರಣ. ಈ ಮೂರ್ತಿಗಳನ್ನು ಮನೆಗೆ ತಂದು ಹಾಲು, ಹೂ, ಹಣ್ಣುಗಳನ್ನು ಅರ್ಪಿಸಿ ದೀಪ ಹಚ್ಚಿದರೆ ಶುಭ ಉಂಟಾಗುವುದು. ಈ ಮೂರ್ತಿಯನ್ನು ನಾಗ ಪಂಚಮಿಯಂದು ಆರಾಧಿಸಿ.
ತ್ರಿಶೂಲ
ಶ್ರಾವಣ ತಿಂಗಳಿನಲ್ಲಿ ಮನೆಗೆ ಬೆಳ್ಳಿಯ ತ್ರಿಶೂಲ ತಂದರೆ ಒಳ್ಳೆಯದು, ಅದರಲ್ಲೂ ಬೆಳ್ಳಿಯ ತ್ರಿಶೂಲವನ್ನು ಸೋಮವಾರ ತರುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಗಂಗಾಜಲ
ಹಿಂದೂಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿರಲಿ ಗಂಗಾಜಲ ಬಳಸುತ್ತೇವೆ. ಗಂಗಾಜಲ ಮನೆಯಲ್ಲಿ ಚಿಮುಕಿಸಿದರೆ ನೆಗೆಟಿವ್ ಎನರ್ಜಿ ದೂರಾಗುವುದು ಎಂದು ನಂಬಲಾಗಿದೆ. ಶ್ರಾವಣ ತಿಂಗಳಿನಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿದರೆ ನಿಮ್ಮ ಇಷ್ಟಾರ್ಥ ನೆರವೇರುವುದು.
ರುದ್ರಾಕ್ಷಿ
ರುದ್ರಾಕ್ಷಿ ತುಂಬಾ ಶಕ್ತಿಶಾಲಿಯಾದ ವಸ್ತುವಾಗಿದೆ. ಇದನ್ನು ಬಳಸುವುದಕ್ಕೂ ಒಂದು ಕ್ರಮವಿದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮನೆಗೆ ತಂದರೆ ಶುಭ ಎಂದು ಹೇಳಲಾಗುವುದು. ಶಿವನಿಗೆ ಪೂಜೆ ಮಾಡಿ ನಂತರ ರುದ್ರಾಕ್ಷಿ ಧರಿಸಬೇಕು.
ಭಸ್ಮ
ಶಿವನ ಪೂಜೆಗೆ ಕುಂಕುಮ ಬದಲಿಗೆ ಭಸ್ಮವನ್ನು ಬಳಸಲಾಗುವುದು. ನಂಬಿಕೆ ಪ್ರಕಾರ ಶಿವನು ಮೈ ತುಂಬಾ ಭಸ್ಮ ಲೇಪಿಸಿಕೊಂಡಿರುತ್ತಾನೆ ಎಂದು ಹೇಳಲಾಗುವುದು. ಭಸ್ಮವನ್ನು ತಂದು ಆ ಭಸ್ಮದಿಂದ ನಾಮ ಹಾಕಿದರೆ ಒಳ್ಳೆಯದು.



Click it and Unblock the Notifications