Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಶ್ರಾವಣ ಮಾಸದಲ್ಲಿ ಈ 5 ದೈವಿಕ ವಸ್ತುಗಳನ್ನು ಮನೆಗೆ ತಂದರೆ ಎಲ್ಲಾ ಕಷ್ಟಗಳು ದೂರಾಗುವುದು
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶಿವಭಕ್ತರು ಈ ತಿಂಗಳ ವ್ರತ ನಿಯಮಗಳನ್ನು ಪಾಲಿಸುತ್ತಾ ಶಿವನನ್ನು ಆರಾಧನೆ ಮಾಡಲಾಗುವುದು. ಈ ತಿಂಗಳಿನಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ವಸ್ತುಗಳನ್ನು ಶ್ರಾವಣದಲ್ಲಿ ಮನೆಗೆ ತಂದರೆ ಮನೆಗೆ ಅದೃಷ್ಟ ಬರಲಿದೆ ಎಂದು ನಂಬಲಾಗಿದೆ. ಈ ಶ್ರಾವಣದಲ್ಲಿ ಯಾವೆಲ್ಲಾ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ನಾಗ- ನಾಗಿಣಿಯ ಮೂರ್ತಿ
ನಾಗ-ನಾಗಣಿಯ ಮೂರ್ತಿಯನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ಸರ್ಪ ಶಿವನ ಆಭರಣ. ಈ ಮೂರ್ತಿಗಳನ್ನು ಮನೆಗೆ ತಂದು ಹಾಲು, ಹೂ, ಹಣ್ಣುಗಳನ್ನು ಅರ್ಪಿಸಿ ದೀಪ ಹಚ್ಚಿದರೆ ಶುಭ ಉಂಟಾಗುವುದು. ಈ ಮೂರ್ತಿಯನ್ನು ನಾಗ ಪಂಚಮಿಯಂದು ಆರಾಧಿಸಿ.
ತ್ರಿಶೂಲ
ಶ್ರಾವಣ ತಿಂಗಳಿನಲ್ಲಿ ಮನೆಗೆ ಬೆಳ್ಳಿಯ ತ್ರಿಶೂಲ ತಂದರೆ ಒಳ್ಳೆಯದು, ಅದರಲ್ಲೂ ಬೆಳ್ಳಿಯ ತ್ರಿಶೂಲವನ್ನು ಸೋಮವಾರ ತರುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಗಂಗಾಜಲ
ಹಿಂದೂಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿರಲಿ ಗಂಗಾಜಲ ಬಳಸುತ್ತೇವೆ. ಗಂಗಾಜಲ ಮನೆಯಲ್ಲಿ ಚಿಮುಕಿಸಿದರೆ ನೆಗೆಟಿವ್ ಎನರ್ಜಿ ದೂರಾಗುವುದು ಎಂದು ನಂಬಲಾಗಿದೆ. ಶ್ರಾವಣ ತಿಂಗಳಿನಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿದರೆ ನಿಮ್ಮ ಇಷ್ಟಾರ್ಥ ನೆರವೇರುವುದು.
ರುದ್ರಾಕ್ಷಿ
ರುದ್ರಾಕ್ಷಿ ತುಂಬಾ ಶಕ್ತಿಶಾಲಿಯಾದ ವಸ್ತುವಾಗಿದೆ. ಇದನ್ನು ಬಳಸುವುದಕ್ಕೂ ಒಂದು ಕ್ರಮವಿದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮನೆಗೆ ತಂದರೆ ಶುಭ ಎಂದು ಹೇಳಲಾಗುವುದು. ಶಿವನಿಗೆ ಪೂಜೆ ಮಾಡಿ ನಂತರ ರುದ್ರಾಕ್ಷಿ ಧರಿಸಬೇಕು.
ಭಸ್ಮ
ಶಿವನ ಪೂಜೆಗೆ ಕುಂಕುಮ ಬದಲಿಗೆ ಭಸ್ಮವನ್ನು ಬಳಸಲಾಗುವುದು. ನಂಬಿಕೆ ಪ್ರಕಾರ ಶಿವನು ಮೈ ತುಂಬಾ ಭಸ್ಮ ಲೇಪಿಸಿಕೊಂಡಿರುತ್ತಾನೆ ಎಂದು ಹೇಳಲಾಗುವುದು. ಭಸ್ಮವನ್ನು ತಂದು ಆ ಭಸ್ಮದಿಂದ ನಾಮ ಹಾಕಿದರೆ ಒಳ್ಳೆಯದು.



Click it and Unblock the Notifications