Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಶ್ರಾವಣ ಮಾಸದಲ್ಲಿ ಈ 5 ದೈವಿಕ ವಸ್ತುಗಳನ್ನು ಮನೆಗೆ ತಂದರೆ ಎಲ್ಲಾ ಕಷ್ಟಗಳು ದೂರಾಗುವುದು
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶಿವಭಕ್ತರು ಈ ತಿಂಗಳ ವ್ರತ ನಿಯಮಗಳನ್ನು ಪಾಲಿಸುತ್ತಾ ಶಿವನನ್ನು ಆರಾಧನೆ ಮಾಡಲಾಗುವುದು. ಈ ತಿಂಗಳಿನಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ವಸ್ತುಗಳನ್ನು ಶ್ರಾವಣದಲ್ಲಿ ಮನೆಗೆ ತಂದರೆ ಮನೆಗೆ ಅದೃಷ್ಟ ಬರಲಿದೆ ಎಂದು ನಂಬಲಾಗಿದೆ. ಈ ಶ್ರಾವಣದಲ್ಲಿ ಯಾವೆಲ್ಲಾ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ನಾಗ- ನಾಗಿಣಿಯ ಮೂರ್ತಿ
ನಾಗ-ನಾಗಣಿಯ ಮೂರ್ತಿಯನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ಸರ್ಪ ಶಿವನ ಆಭರಣ. ಈ ಮೂರ್ತಿಗಳನ್ನು ಮನೆಗೆ ತಂದು ಹಾಲು, ಹೂ, ಹಣ್ಣುಗಳನ್ನು ಅರ್ಪಿಸಿ ದೀಪ ಹಚ್ಚಿದರೆ ಶುಭ ಉಂಟಾಗುವುದು. ಈ ಮೂರ್ತಿಯನ್ನು ನಾಗ ಪಂಚಮಿಯಂದು ಆರಾಧಿಸಿ.
ತ್ರಿಶೂಲ
ಶ್ರಾವಣ ತಿಂಗಳಿನಲ್ಲಿ ಮನೆಗೆ ಬೆಳ್ಳಿಯ ತ್ರಿಶೂಲ ತಂದರೆ ಒಳ್ಳೆಯದು, ಅದರಲ್ಲೂ ಬೆಳ್ಳಿಯ ತ್ರಿಶೂಲವನ್ನು ಸೋಮವಾರ ತರುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಗಂಗಾಜಲ
ಹಿಂದೂಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿರಲಿ ಗಂಗಾಜಲ ಬಳಸುತ್ತೇವೆ. ಗಂಗಾಜಲ ಮನೆಯಲ್ಲಿ ಚಿಮುಕಿಸಿದರೆ ನೆಗೆಟಿವ್ ಎನರ್ಜಿ ದೂರಾಗುವುದು ಎಂದು ನಂಬಲಾಗಿದೆ. ಶ್ರಾವಣ ತಿಂಗಳಿನಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿದರೆ ನಿಮ್ಮ ಇಷ್ಟಾರ್ಥ ನೆರವೇರುವುದು.
ರುದ್ರಾಕ್ಷಿ
ರುದ್ರಾಕ್ಷಿ ತುಂಬಾ ಶಕ್ತಿಶಾಲಿಯಾದ ವಸ್ತುವಾಗಿದೆ. ಇದನ್ನು ಬಳಸುವುದಕ್ಕೂ ಒಂದು ಕ್ರಮವಿದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮನೆಗೆ ತಂದರೆ ಶುಭ ಎಂದು ಹೇಳಲಾಗುವುದು. ಶಿವನಿಗೆ ಪೂಜೆ ಮಾಡಿ ನಂತರ ರುದ್ರಾಕ್ಷಿ ಧರಿಸಬೇಕು.
ಭಸ್ಮ
ಶಿವನ ಪೂಜೆಗೆ ಕುಂಕುಮ ಬದಲಿಗೆ ಭಸ್ಮವನ್ನು ಬಳಸಲಾಗುವುದು. ನಂಬಿಕೆ ಪ್ರಕಾರ ಶಿವನು ಮೈ ತುಂಬಾ ಭಸ್ಮ ಲೇಪಿಸಿಕೊಂಡಿರುತ್ತಾನೆ ಎಂದು ಹೇಳಲಾಗುವುದು. ಭಸ್ಮವನ್ನು ತಂದು ಆ ಭಸ್ಮದಿಂದ ನಾಮ ಹಾಕಿದರೆ ಒಳ್ಳೆಯದು.



Click it and Unblock the Notifications