Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
2023ರಲ್ಲಿ ಮಂಗಳ ಗೌರಿ ವ್ರತ 9 ವಾರಗಳಿವೆ, ಯಾವಾಗ ಶುರುವಾಗಿ ಯಾವಾಗ ಮುಕ್ತಾಯ?
ಶ್ರಾವಣ ಮಾಸದಲ್ಲಿ ಮುತ್ತೈದೆಯರು ಮಂಗಳ ಗೌರಿ ವ್ರತ ಆರಂಭಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಈ ಭಾಗಗಳಲ್ಲಿ ಮಂಗಳ ಗೌರಿ ವ್ರತ ಆಚರಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಮಂಗಳ ಗೌರಿ ವ್ರತ ಆಚರಿಸಲಾಗುವುದು. ಪತಿಯ ಆಯುಸ್ಸು, ಆರೋಗ್ಯ ವೃದ್ಧಿಗಾಗಿ ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಲಿ ಎಂಬ ಉದ್ದೇಶದಿಂದ ಈ ವ್ರತವನ್ನು ಮಾಡುತ್ತಾರೆ.
ಕರ್ನಾಟಕದಲ್ಲಿ ಮಂಗಳ ಗೌರಿ ವ್ರತವನ್ನು ಯಾವಾಗ ಆಚರಿಸಲಾಗುವುದು? ಈ ವ್ರತದ ಮಹತ್ವವೇನು? ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಈ ವರ್ಷ ನಿಮಗೆ ಮಂಗಳ ಗೌರಿ ವ್ರತ ಆಚರಣೆಗೆ 9 ಮಂಗಳವಾರ ಸಿಗಲಿದೆ
ಜುಲೈ 18ರಂದು ಮಂಗಳ ಗೌರಿ ವ್ರತ ಪ್ರಾರಂಭ
ಆಗಸ್ಟ್ 8
ಆಗಸ್ಟ್ 15
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12ಕ್ಕೆ ಮಂಗಳ ಗೌರಿ ವ್ರತ ಮುಕ್ತಾಯ.
ಈ ವರ್ಷ ಶ್ರಾವಣ ಅಧಿಕ ಮಾಸ ಇರುವುದರಿಂದ 9 ವಾರ ಮಂಗಳ ಗೌರಿ ವ್ರತ ಮಾಡಬಹುದು.

ಪಾರ್ವತಿ ದೇವಿಯ ಕೃಪೆಗಾಗಿ ಮಂಗಳ ಗೌರಿ ವ್ರತ
ಮಂಗಳ ಗೌರಿ ವ್ರತದಲ್ಲಿ ದೇವಿ ಪಾರ್ವತಿಯ ಆರಾಧನೆ ಮಾಡಲಾಗುವುದು. ಇದನ್ನು ಪ್ರತಿ ಮಂಗಳವಾರ ಆಚರಣೆ ಮಾಡಲಾಗುವುದು. ಮುತ್ತೈದೆಯರು ವೈವಾಹಿಕ ಜೀವನ ಚೆನ್ನಾಗಿರಲಿ, ನನ್ನನ್ನು ಮುತ್ತೈದೆಯನ್ನಾಗಿ ಇಡು ತಾಯಿಯೇ ಎಂದು ಪ್ರಾರ್ಥಿಸುತ್ತಾ ಈ ವ್ರತವನ್ನು ಮಾಡಲಾಗುವುದು. ಈ ವ್ರತವನ್ನು ಹೊಸದಾಗಿ ಮದುವೆಯಾದವರು, ಮದುವೆಯಾಗಿ ಇನ್ನೂ ಐದು ವರ್ಷ ಪೂರ್ಣವಾಗಿರದವರು ಮಾಡಲಾಗುವುದು, ಮದುವೆಯಾಗದ ಹೆಣ್ಣು ಮಕ್ಕಳು ಕಂಕಣ ಭಾಗ್ಯ ಕೂಡಿ ಬರಲು ಈ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತದ ಪೂಜಾ ವಿಧಿಗಳೇನು?
- ಸೂರ್ಯೋದಯಕ್ಕೆ ಮೊದಲೇ ಎದ್ದೇಳಬೇಕು, ನಂತರ ಸ್ನಾನ ಮಾಡಿ ಒಳ್ಳೆಯ ಸಾಂಪ್ರದಾಯಕ ಬಟ್ಟೆ ಧರಿಸಿ ಲಕ್ಷಣವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ.
- ಈಗ ಮರದ ಮಣೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ಕೆಂಪು ಬಟ್ಟೆ ಹರಡಿ, ಅರಿಶಿನದಿಂದ ಮಾಡಿದ ಗೌರಿಯ ಮೂರ್ತಿಯನ್ನು ಇಡುತ್ತಾರೆ.
- ಒಂದು ತಟ್ಟೆಗೆ ಅಕ್ಕಿ ಹಾಕಿ ಅದರಲ್ಲಿ ಮಾವಿನ ಎಲೆ, ವೀಳ್ಯೆದೆಲೆಯಿಂದ ಅಲಂಕರಿಸಿದ ಕಳಸ ಇಡಬೇಕು.
- ನಂತರ ಹಿಟ್ಟಿನಿಂದ ಮಾಡಿದ ದೀಪವನ್ನು ಹಚ್ಚಬೇಕು.
- ನಂತರ ದೇವಿಯ ಮುಂದೆ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ಪೂಜೆಗೆ ಹಣ್ಣುಗಳು, ಹೂಗಳು, ನೈವೇದ್ಯ ಬಳಸಿ. ಪೂಜೆ ಮುಗಿದ ಬಳಿಕ ಆರತಿ ಎತ್ತಿ
- ಶಿವ ಮತ್ತು ಪಾರ್ವತಿಯ ಅಷ್ಠೋತ್ತರ ಪಠಿಸಿ
- ಈ ದಿನ ಉಪವಾಸವಿದ್ದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು
- ನಂತರ ಪೂಜೆಗೆ ಬಂದ ಮುತ್ತೈದೆಯರಿಗೆ ತಾಂಬೂಲ ನೀಡಿ.
ಮಂಗಳ ಗೌರಿ ವ್ರತದ ಮಹತ್ವ
- ಯಾರು ಈ ವ್ರತವನ್ನು ಮಾಡುತ್ತಾರೋ ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆ ಬಗೆಹರಿಯಲಿದೆ.
- ಶಿವ-ಪಾರ್ವತಿಯಂತೆ ದಾಂಪತ್ಯ ಜೀವನ ತುಂಬಾನೇ ಸುಂದರವಾಗಿ ಇರಲಿದೆ.
- ಸಂತಾನ ಭಾಗ್ಯ ದೊರೆಯಲಿದೆ
- ಗಂಡನಿಗೆ ಒಳಿತಾಗಲಿದೆ.
ಯಾರಿಗೆ ಮಂಗಳವಾರ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಶುಕ್ರವಾರ ಮಾಡುತ್ತಾರೆ.



Click it and Unblock the Notifications