Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಮನೆ ದ್ವಾರದ ಮೇಲೆ ಈ ಸಂಖ್ಯೆ ಬರೆದು ನೋಡಿ..! ಅದೃಷ್ಟ ಹುಡುಕಿ ಬರಲಿದೆ!!
ಎಲ್ಲರ ಮನೆಯೂ ವಾಸ್ತು ಪ್ರಕಾರವಾಗಿ ಕಟ್ಟಲು ಮುಂದಾಗುತ್ತಾರೆ. ಅದ್ರಲ್ಲೂ ಹಿಂದೂ ಸಂಪ್ರದಾಯದಲ್ಲಿ ವಾಸ್ತು ಪ್ರಕಾರವಾಗಿ ಮನೆಯನ್ನ ಕಟ್ಟುವುದು ಆಚರಣೆಯಾಗಿ ಬಂದಿದೆ. ಆದರೆ ಮನೆಯ ಪ್ರತಿಯೊಂದು ಮೂಲೆಯಲ್ಲೂ ವಾಸ್ತು ಹುಡುಕಿ ಅದರ ದೋಷವಿದ್ದರೆ ನಿವಾರಣೆ ಮಾಡುವುದು, ವಾಸ್ತು ಸಂಕಲ್ಪ, ಯಂತ್ರ, ಹೀಗೆ ಹಲವು ರೀತಿ ವಾಸ್ತು ಪರಿಹಾರ ಮಾಡುವುದನ್ನು ನಾವು ನೋಡಿರುತ್ತೇವೆ.
ಇನ್ನು ಮನೆಯ ಒಂದೊಂದು ಭಾಗಕ್ಕೂ ಒಂದೊಂದು ವಾಸ್ತುವಿದೆ. ಯಾವ ಮೂಲೆಯಲ್ಲಿ ಏನಿಡಬೇಕು, ಏನಿಡಬಾರದು ಎಂಬುದು ಸಹ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿದೆ. ಇದಕ್ಕಾಗಿ ಮನೆಯಲ್ಲಿ ಯಾವೆಲ್ಲಾ ಬದಲಾವಣೆ ಮಾಡಬೇಕು, ವಾಸ್ತು ದೋಷ ಕಂಡುಬಂದರೆ ಏನು ಮಾಡಬೇಕು ಎಂಬುದನ್ನು ಸಹ ಹೇಳಲಾಗಿದೆ.

ಈಗ ನಾವು ಮನೆಯ ದ್ವಾರ ಬಾಗಿಲಿನ ಕೆಲವು ವಾಸ್ತು ನಿಯಮಗಳು ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಅದರಲ್ಲೂ ಮನೆಯಲ್ಲಿ ಆರ್ಥಕ ನಷ್ಟ, ಸಂಬಂಧದಲ್ಲಿ ಬಿರುಕು, ಅದೃಷ್ಟ ಇಲ್ಲದಿರುವುದು, ಸಾಲ ಸೇರಿದಂತೆ ಅಶಾಂತಿ ಇದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲ, ಅಶಾಂತಿ, ಯಾವ ಕೆಲಸವು ಪ್ರಗತಿಯಾಗದೆ ಇದ್ದರೆ ಈ ರೀತಿ ಮಾಡಿ ನೋಡಿ. ಜೊತೆಗೆ ಮನೆಯ ದ್ವಾರ ಬಾಗಿಲ ವಾಸ್ತು ಕಡೆಗೆ ನಾವು ಗಮನ ಹರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದ್ವಾರ ಬಾಗಿಲು ಈ ರೀತಿ ಇರಬೇಕಂತೆ,
ತೋರಣ ಮತ್ತು ಮನೆ ದೇವರ ಫೋಟೋ
ಕೆಲವರ ಮನೆಯಲ್ಲಿ ತೋರಣ ಕಟ್ಟು ಅಭ್ಯಾಸ ಇರುವುದಿಲ್ಲ, ಮತ್ತೆ ಕೆಲವರು ಪ್ಲಾಸ್ಟಿಕ್ ತೋರಣ ಕಟ್ಟುತ್ತಾರೆ. ಆದ್ರೆ ಇದೆರಡು ಉತ್ತಮವಲ್ಲ, ಮನೆಯ ದ್ವಾರ ಬಾಗಿಲಿಗೆ ಮಾವಿನ ತೋರಣ ಕಟ್ಟಬೇಕು. ಅದು ಒಣಗಿದರು ತೊಂದರೆ ಇಲ್ಲ. 11 ಅಥವಾ 13 ಎಲಗಳ ಬಳಸಿ ತೋರಣ ಕಟ್ಟಿದರೆ ಬಹಳ ಉತ್ತಮ. ಮನೆಗೆ ಧನಾತ್ಮಕ ಶಕ್ತಿ ಬರಲು ಈ ತೋರಣ ಕಾರಣವಾಗುತ್ತೆ. ಇದರ ಜೊತೆಗೆ ನಿಮ್ಮ ಮನೆದೇವರ ಚಿಕ್ಕದಾದ ಒಂದು ಫೋಟೋವನ್ನು ದ್ವಾರ ಬಾಗಿಲ ಮಧ್ಯದಲ್ಲಿ ಇಡಬೇಕು. ಮೇಲ್ಭಾಗದಲ್ಲಿ ಮೊಳೆ ಹೊಡೆದು ಅದಕ್ಕೆ ನೇತುಹಾಕಬೇಕು.
ಮನೆ ಹಿರಿಯರೊಬ್ಬರ ಜನ್ಮ ದಿನಾಂಕ ಬರೆಯುವುದು
ಮನೆಯ ದ್ವಾರದ ಮೇಲ್ಭಾಗದಲ್ಲಿ ಆ ಮನೆಯ ಹಿರಿಯರ ಹುಟ್ಟಿದ ದಿನಾಂಕ , ಅದ್ರಲ್ಲೂ ದಿನಾಂಕ, ತಿಂಗಳು, ವರ್ಷವನ್ನು ಕೂಡಿದಾಗ ಬರುವಂತಹ ಸಂಖ್ಯೆಯನ್ನು ಅಲ್ಲಿ ಬರೆಯಬೇಕು, ನಂತರ ನೀವು ಓಡಾಡುವಾಗ ಆ ಸಂಖ್ಯೆ ನೋಡುವುದು, ಅಥವಾ ನಮಸ್ಕರಿಸುವ ಕಾರ್ಯ ಮಾಡಬೇಕು. ಇದನ್ನು ಭಾಗ್ಯಾಂಕ ಎಂದು ಕರೆಯಲಾಗುತ್ತದೆ.
ಮನೆ ಬಾಗಿಲ ಮುಂದೆ ಚಪ್ಪಲಿ ಬಿಡುವುದು
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮನೆ ಬಾಗಿಲ ಮುಂದೆಯೇ ಚಪ್ಪಲಿ ಬಿಡುವ ಕಾರ್ಯ ಮಾಡುತ್ತಾರೆ. ಆದರೆ ಈ ರೀತಿ ದ್ವಾರ ಬಾಗಿಲ ಬಳಿ ಅಥವಾ ನೇರವಾಗಿ ಚಪ್ಪಲಿಗಳ ಬಿಡಬಾರದಂತೆ. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಶುಭ-ಲಾಭ ಪಟ
ಮನೆಯ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಪಟವನ್ನು ಬಾಗಿಲ ಮೇಲೆ ಅಳವಡಿಸಿ. ಇದರಿಂದ ಮನೆಯಲ್ಲಿ ಅನಾರೋಗ್ಯ ನುಸುಳಲು ಅಸಾಧ್ಯವಾಗುತ್ತದೆ. ನೀರಿನಿಂದ ತುಂಬಿದ ಗಾಜಿನ ಅಥವಾ ಮಣ್ಣಿನ ಮಡಿಕೆಯಲ್ಲಿ ಹೂವು ಅಥವಾ ಹೂವಿನ ದಳಗಳನ್ನು ಹಾಕಿ ಮನೆಯ ಪ್ರವೇಶ ದ್ವಾರದ ಬಳಿ ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗೆ ಈ ನೀರಿನಲ್ಲಿ ಆಮೆಯನ್ನು ಸಹ ಹಾಕಿಡುತ್ತಾರೆ. ಕೂರ್ಮಾವತಾರವಾದ ವಿಷ್ಣುವನ್ನು ನಿತ್ಯ ಪೂಜಿಸಲು ಹೀಗೆ ಮಾಡುತ್ತಾರೆ. ಆಮೆ ಗಾಜಿನಿಂದ ಅಥವಾ ತಾಮ್ರದ್ದಾಗಿದ್ದರೆ ಒಳಿತು.



Click it and Unblock the Notifications