Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಿರಳೆ ಇನ್ನೆಂದು ಮನೆ ಕಡೆ ಸುಳಿಯೋದಿಲ್ಲ..! ಇಲ್ಲಿದೆ ಪರಿಣಾಮಕಾರಿ ಮನೆಮದ್ದು!
ಜಿರಳೆಗಳು ಮಾನವರು ಇರುವ ಕಡೆಗೆ ನೆಲೆಸುವ ಕೀಟಗಳು. ಮನೆಯಲ್ಲಿ ಅದ್ರಲ್ಲೂ ಅಡುಗೆ ಮನೆಯಲ್ಲಿ ಅಳಿದುಳಿದ ಆಹಾರಗಳ ಸೇವಿಸಿ ಬದುಕುಳಿಯುವ ಈ ಜಿರಳೆಗಳು ನಿಮ್ಮ ಮನೆಯಲ್ಲಿ ಓಡಾಡುವುದು ನೋಡಬಹುದು. ಜಿರಳೆಗಳು ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಬಹುದು, ಮನೆಯಲ್ಲಿ ಮಕ್ಕಳಿದ್ದರೆ ಜಿರಳೆಗಳಿಂದ ಹಾನಿ ಕಟ್ಟಿಟ್ಟ ಬುತ್ತಿ.
ಜಿರಳೆಗಳೆಂದರೆ ಎಲ್ಲರಿಗೂ ಭಯ ಕಾಡುತ್ತದೆ. ರಾತ್ರಿ ಸಮಯದಲ್ಲಿ ಅವು ಎಲ್ಲಿಯಾದರು ಕಂಡರೆ ಕಿರುಚಿಕೊಂಡು ದೂರ ಓಡುವುದು ನೋಡಬಹುದು. ಜಿರಳೆಗಳು ಮನೆಯಲ್ಲಿ ಸೇರಿದರೆ ಮರಿಗಳ ಮಾಡುತ್ತವೆ. ಹಾಗೆ ಬಟ್ಟೆಗಳ ಹಾಳು ಮಾಡುವ ಭೀತಿ ಹೆಚ್ಚಾಗುತ್ತದೆ. ಅವು ಆಹಾರಗಳ ಒಳಗೆ ಬೀಳುವುದು ಕೂಡ ಅಪಾಯಕ್ಕೆ ದಾರಿಯಾಗುತ್ತದೆ.

ಅದರಲ್ಲೂ ಮಕ್ಕಳು ಜಿರಳೆ ಬಿದ್ದ ಆಹಾರ ಸೇವಿಸಿದರೆ ಅನರೋಗ್ಯಕ್ಕೆ ಬೀಳುತ್ತಾರೆ. ಹಾಗೆ ಜಿರಳೆಗಳು ತಿಂಡಿ, ತಿನಿಸುಗನ್ನು ತಿಂದು ಹಾಳು ಮಾಡುವುದು ಕೂಡ ನೋಡಬಹುದು. ಇನ್ನು ಜಿರಳೆಗಳ ಮನೆಯಿಂದ ಹೊರಹಾಕುವುದು ಕಷ್ಟದ ಕೆಲಸವಾಗಿರಲಿದೆ. ಜಿರಳೆಗಳ ಓಡಿಸಲು ಹಲವು ರೀತಿಯ ಔಷಧಿಗಳು, ಸ್ಪ್ರೇಗಳು ಸಿಗುತ್ತವೆ. ಆದ್ರೆ ಒಂದೆರಡು ದಿನದಲ್ಲಿ ಮತ್ತೆ ಜಿರಳೆಗಳು ಕಾಣಿಸಿಕೊಳ್ಳುತ್ತವೆ.
ಆದ್ರೆ ನಾವಿಂದು ಜಿರಳೆಗಳಿಗೆ ಮನೆಯಲ್ಲಿ ಯಾವ ರೀತಿ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ. ಅದ್ರಲ್ಲೂ ಈ ರೀತಿಯಾಗಿ ಜಿರಳೆಗೆ ಔಷಧಿ ರೆಡಿ ಮಾಡಿದರೆ ಜಿರಳೆಗಳು ಇನ್ನೆಂದು ಮನೆಯಲ್ಲಿ ಸುಳಿದಾಡುವುದಿಲ್ಲ. ಹಾಗಾದ್ರೆ ಏನಿದು ಹೊಸ ಪ್ರಯೋಗ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಒಂದು ಬೌಲ್ಗೆ 5ರಿಂದ 6 ಕರ್ಪೂರಗಳು ಹಾಗೆ 5 ಊದುಬತ್ತಿಯನ್ನು ಬಿಡಿಸಿ ಪುಡಿ ಮಾಡಿಕೊಂಡು ಬೌಲ್ಗೆ ಹಾಕಿಕೊಳ್ಳಿ. ನಂತರ ಈ ಎರಡು ವಸ್ತುಗಳನ್ನು ಕುಟ್ಟಿ ಸಣ್ಣದಾಗಿ ಪುಡಿ ಮಾಡಿಕೊಳ್ಳಿ. ಈಗ ಸಲ್ಪ ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ನಂತರ ಈ ಎರಡು ಅಂಶಗಳು ಚೆನ್ನಾಗಿ ಮಿಕ್ಸ್ ಆಗಲು ಒಂದು ತಟ್ಟೆಯನ್ನು ಮುಚ್ಚಿ 1 ಗಂಟೆ ಬಿಡಿ.
1 ಗಂಟೆಯ ಬಳಿಕ ಇದು ಕರಗಿ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಆಗಿರಲಿದೆ. ಬಳಿಕ ಇದನ್ನು ಒಂದು ಜರಡಿಯಲ್ಲಿ ಸೋಸಿಕೊಂಡು ಬರೀ ನೀರನ್ನು ಬೇರೆ ಮಾಡಿಕೊಳ್ಳಿ. ಈ ನೀರನ್ನು ತೆಗೆದು ಒಂದು ಗ್ಲಾಸ್ಗೆ ಹಾಕಿಟ್ಟುಕೊಳ್ಳಿ. ಈಗ ಹತ್ತಿಯನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಅನಂತರ ಸಣ್ಣ ಉಂಡೆಗಳನ್ನು ಈ ನೀರಿನಲ್ಲಿ ಅದ್ದಿಕೊಂಡು ನಂತರ ಹತ್ತಿಯನ್ನು ಜಿರಳೆಗಳು ಬರುವಂತಹ ಜಾಗದಲ್ಲಿ ಇಡಬೇಕು.
ಅದ್ರಲ್ಲೂ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಬಳಿ, ಸಿಂಕ್ ಬಳಿ, ಬಾತ್ ರೂಮ್ನ ಮೂಲೆಗಳಲ್ಲಿ, ಫ್ರಿಡ್ಜ್ ಅಡಿಯಲ್ಲಿ, ವಾಷಿಂಗ ಮಷಿನ್ ಒಳಗೆ, ಬಾಗಿಲುಗಳ ಸಂದಿಯಲ್ಲಿ ಈ ಹತ್ತಿ ಉಂಡೆಗಳ ಇಡಬೇಕು. ಹೀಗೆ ಇಡುವುದರಿಂದ ಜಿರಳೆಗಳು ಸುವಾಸನೆ ತಡೆಯಲಾಗದೆ ಜಾಗದಿಂದ ತೆರಳುತ್ತವೆ. ಹಾಗೆ ವಾರದಲ್ಲಿ ಎಲ್ಲಾ ದಿನವೂ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಜಿರಳೆ ಮುಕ್ತ ಮನೆ ನೋಡಬಹುದು.
ಸ್ಪ್ರೇ ಬಾಟಲಿ ನೀವೆ ತಯಾರಿಸಿ
ಈ ಕರ್ಪೂರದ ನೀರನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿಕೊಂಡು ಮನೆಯಲ್ಲಿ ಮೂಲೆ ಮೂಲೆಯಲ್ಲಿ ಸ್ಪ್ರೇ ಮಾಡುವುದರಿಂದ ಕೂಡ ಜಿರಳೆಗಳಿಂದ ಮುಕ್ತಿ ಪಡೆಯಬಹುದು. ಹಳೆಯ ಖಾಲಿ ಬಾಟಲಿಗಳನ್ನು ತೆಗೆದುಕೊಂಡು ಸ್ಪ್ರೇ ಬಾಟಲಿಯನ್ನಾಗಿ ಮಾಡಿ ಮೂಲೆ ಮೂಲೆಯಲ್ಲಿ ಆಗಾಗ ಸ್ಪ್ರೇ ಮಾಡಿದರೂ ಜಿರಳೆಗಳು ಇನ್ಮುಂದೆ ಮನೆ ಬಳಿ ಸುಳಿಯುವುದಿಲ್ಲ. ನೀವು ಕೂಡ ಒಮ್ಮೆ ಈ ರೀತಿಯಾಗಿ ಹೊಸ ಜಿರಳೆ ಔಷಧಿ ಮನೆಯಲ್ಲೇ ಮಾಡಿ ನೋಡಿ. ಜಿರಳೆಗಳಿಂದ ಸುಲಭವಾಗಿ ಪರಿಹಾರ ಪಡೆದು ನೋಡಿ.



Click it and Unblock the Notifications









