Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು!
ರಾಹು ದೋಷದಿಂದ ಪರಿಹಾರ ಪಡೆಯಲು ಇಲ್ಲಿವೆ ಸರಳ ಉಪಾಯಗಳು!
ವೈದಿಕ ಶಾಸ್ತ್ರದಲ್ಲಿ ರಾಹುವನ್ನು ಬಹಳ ಮುಖ್ಯ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ನೆರಳಿನ ಗ್ರಹ, ಅಪಾಯ, ಕೆಡುಕು ತರುವ ಗ್ರಹವೆಂದು ಕರೆಯಲಾಗುತ್ತದೆ. ರಾಹು ಯಾವ ರಾಶಿಯಲ್ಲಿ ಚಲಿಸುತ್ತಾನೆಯೋ ಅವರಿಗೆ ಸಮಸ್ಯೆಗಳು ಕಾಡುವುದು ಕಟ್ಟಿಟ್ಟ ಬುತ್ತಿ. ಅಶುಭ ತರುವಂತಹ ಗ್ರಹವು ಹಲವು ರಾಶಿಗಳ ಮೇಲೆ ನಿರ್ದಿಷ್ಟ ಸಮಯದಲ್ಲಿ ಸಮಸ್ಯೆ ಉಂಟು ಮಾಡುವುದು ನೋಡಬಹುದು.
ವ್ಯಕ್ತಿಯೊಬ್ಬರ ಜೀವನದಲ್ಲಿ ಅಥವಾ ಜಾತಕದಲ್ಲಿ ರಾಹುವಿನ ಸ್ಥಾನವು ಸರಿಯಾಗಿಲ್ಲದಿದ್ದರೆ, ವ್ಯಕ್ತಿಯು ಮಾನಸಿಕ ಒತ್ತಡ, ಕೋಪ, ಭಯ, ಆರ್ಥಿಕ ಬಿಕ್ಕಟ್ಟು ಮತ್ತು ಜೀವನದಲ್ಲಿ ಅಸ್ಥಿರತೆಯನ್ನು ಎದುರಿಸಬೇಕಾಗಬಹುದು. ಇದು ಆತನಲ್ಲಿ ಹಲವು ರೀತಿಯ ಸಮಸ್ಯೆಗಳ ತರಲು ಕಾರಣವಾಗುತ್ತದೆ. ತನ್ನ ಪ್ರಭಾವದಿಂದಾಗಿ ಹಲವರಲ್ಲಿ ರಾಹು ಅಶುಭವಾಗಿ ಕಾಡುತ್ತಿರುತ್ತದೆ.

ಆದ್ರೆ ರಾಹುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೂಡ ವೈದಿಕ ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರ ಮಾರ್ಗಗಳಿವೆ. ಅದ್ರಲ್ಲೂ ನಾವಿಂದು ರಾಹುವಿನಿಂದ ಯಾವ ರೀತಿ ಸಮಸ್ಯೆಗಳಿಂದ ಪಾರಾಗಬಹುದು? ರಾಹುವಿನ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿಯೋಣ.
ಜ್ಯೋತಿಷ್ಯದಲ್ಲಿ ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಅನೇಕ ಪರಿಹಾರಗಳ ಮಾಡಬಹುದು. ರಾಹು ದೋಷವನ್ನು ಕಡಿಮೆ ಮಾಡಲು, ಒಬ್ಬರು ವೈವಾಹಿಕ ಜೀವನ ಮತ್ತು ಅತ್ತೆ-ಮಾವಂದಿರೊಂದಿಗೆ ಉತ್ತಮ ಬಾಂದವ್ಯ ಹೊಂದಿರಬೇಕು. ರಾಹು ಶಾಂತವಾಗಿರಬೇಕು ಅಂದರೆ ಯಾವಾಗಲು ಹಣೆಗೆ ತಿಲಕ ಇಡಬೇಕಂತೆ.
ಗುರುವಾರದಂದು ಹಳದಿ ಬಟ್ಟೆ, ಕಡಲೆ ಬೇಳೆ, ಅರಿಶಿನ ಅಥವಾ ಯಾವುದಾದರು ಆಹಾರವನ್ನು ನಿರ್ಗತಿಕರಿಗೆ ದಾನ ಮಾಡುವುದು ಪ್ರಯೋಜನಕಾರಿ. ನಕಾರಾತ್ಮಕ ಆಲೋಚನೆಗಳು ರಾಹುವಿನ ಪರಿಣಾಮ ಹೆಚ್ಚಿಸಲಿದೆ. ಹಾಗೆ ದುರ್ಜನರ ಸಂಘದಿಂದಲೂ ರಾಹುವಿನ ದುಷ್ಪರಿಣಾಮ ನೋಡಬಹುದು. ಹಾಗೆ ಹಸು, ಶನಿ ದೇವರ ಪೂಜೆಯಿಂದ ರಾಹುವಿನ ಪರಿಣಾಮ ಕಡಿಮೆ ಮಾಡಬಹುದು.
ರಾಹುವಿನ ದುಷ್ಪರಿಣಾಮಗಳಿಂದ ಪರಿಹಾರ ಪಡೆಯಲು ಪ್ರತಿದಿನ 108 ಬಾರಿ 'ಓಂ ಭ್ರಮ್ ಭ್ರಮ್ ಭ್ರಮ್ ಸಹ್ ರಾಹುವೇ ನಮಃ' ಎಂಬ ಮಂತ್ರವನ್ನು ಪಠಿಸುವುದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಶನಿವಾರ ಅಥವಾ ರಾಹುಕಾಲದ ಸಮಯದಲ್ಲಿ ರಾಹುವಿನ ಶಾಂತಿಗಾಗಿ ಪೂಜೆ ಮಾಡುವುದು ಕೂಡ ಶುಭ ಫಲಿತಾಂಶಗಳ ತರಲಿದೆ. ಹಾಗೆ ಕಾಲಭೈರವ, ಶಿವ ಮತ್ತು ದುರ್ಗಾದೇವಿಯನ್ನು ಪೂಜಿಸುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ.
ಯಾರು ಈ ರಾಹು?
ರಾಹು ಗ್ರಹದ ಕುರಿತು ಒಂದು ವಿಶೇಷ ಕಥೆ ಇದೆ. ಈತನಿಗೆ ದೇಹವಿಲ್ಲದಿದ್ದರೂ ಆತನ ಪ್ರಭಾವ ಏಕೆ ಕೆಟ್ಟದಾಗಿರಲಿದೆ ಎಂಬುದಕ್ಕೂ ಕಾರಣವಿದೆ. ಸಮುದ್ರ ಮಂಥನ ಕಾಲದಲ್ಲಿ ವಿಷ ಹಾಗೂ ಅಮೃತ ಸೇವಿಸುವಾಗ ದೇವತೆಗಳ ಸಾಲಿನಲ್ಲಿ ರಾಕ್ಷಸನೊಬ್ಬ ಕುರಿತಿದ್ದನಂತೆ. ಎಲ್ಲರು ಸೇವಿಸಿದಾಗ ಆತ ಕೂಡ ಅಮೃತ ಸೇವಿಸಿದನಂತೆ, ಆದರೆ ವಿಷ್ಣುವಿಗೆ ಆತ ದೇವನಲ್ಲ ರಾಕ್ಷಸ ಎಂದು ತಿಳಿದಾಗ ತನ್ನ ಸುದರ್ಶನ ಚಕ್ರದಿಂದ ಆತನ ಕತ್ತರಿಸಿದನಂತೆ. ಈ ಸಮಯದಲ್ಲಿ ತಲೆಯ ಭಾಗವು ರಾಹುವಾಗಿ, ದೇಹವು ಕೇತುವಾಗಿ ಸೃಷ್ಟಿಯಲ್ಲಿ ಸೇರಿತು ಎನ್ನಲಾಗಿದೆ. ಅಮೃತ ಸೇವಿಸಿದ್ದ ಕಾರಣ ರಾಕ್ಷಸ ಸಾವನಪ್ಪದೆ ಬದುಕುಳಿದು ನೆರಳಿನ ಗ್ರಹಗಳಾಗಿ ಬದಲಾದ ಎಂದು ಹೇಳಲಾಗಿದೆ.
ಈಗ ಪ್ರತಿಯೊಂದು ಗ್ರಹಗಳ ಚಲನೆಯೊಂದಿಗೆ ಹಾಗೆ ಕೆಲವು ರಾಶಿಗಳಲ್ಲಿ ರಾಹು ಕೇತು ಸಂಚಾರ ನೋಡಬಹುದು. ಯಾರ ರಾಶಿಯಲ್ಲಿ, ಜಾತಕದಲ್ಲಿ ರಾಹು ಹಾಗೂ ಕೇತುವಿನ ಸಂಚಾರವಿರಲಿದ್ಯೋ ಅವರಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications