Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಭೂಮಿ ಪೂಜೆ ಮಾಡುವುದು ಹೇಗೆ? ಇದರ ಶುಭಫಲವೇನು?
ಯಾವುದೇ ಕಟ್ಟಡ ಕಟ್ಟುವ ಮುನ್ನ ಭೂಮಿ ತಾಯಿಗೆ ಸಲ್ಲಿಸುವ ಪೂಜೆಯೇ ಭೂಮಿ ಪೂಜೆ. ಕಟ್ಟುವಾಗ ಯಾವುದೇ ದೋಷ ಉಂಟಾಗದಿರಲಿ, ಭೂತಾಯಿ ಕೆಲಸ ಸರಾಗವಾಗಿ ನಡೆಯುವಂತೆ ಆಶೀರ್ವದಿಸಲಿ ಎಂದು ಕೋರಿ ಭೂ ಮಾತೆಗೆ ಪೂಜೆ ಸಲ್ಲಿಸಲಾಗುವುದು.

ಭೂಮಿಯಲ್ಲಿ ಶಲ್ಯದೋಷವಿದ್ದರೆ ಅದರ ನಿವಾರಣೆಗೆ ಭೂ ಪೂಜೆ ಮಾಡಲಾಗುವುದು. ಭೂ ಮಾತೆಯಲ್ಲಿ ಅಂದರ ಭೂಮಿಯಲ್ಲಿ ವಿಲೀನವಾಗದ ಹದಿನಾರು ಬಗೆಯ ವಸ್ತುಗಳು ಉದಾಹರಣೆಗೆ ಮೂಳೆ, ಪ್ಲಾಸ್ಟಿಕ್, ಉಗುರು,ಕೂದಲು, ಬೂದಿ, ಗಾಜು ಇವುಗಳು ಭೂಮಿಯಲ್ಲಿದ್ದರೆ ಶಲ್ಯ ದೋಷ ಉಂಟಾಗುವುದು. ಈ ದೋಷ ಉಂಟಾಗದಿರಲು ಭೂಮಿ ಪೂಜೆ ಮಾಡಲಾಗುವುದು.

ಭೂಮಿ ಪೂಜೆಯನ್ನು ಎಲ್ಲಿ ಮಾಡಲಾಗುವುದು?
ಭೂಮಿ ಪೂಜೆಯನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಲಾಗುವುದು. ಭೂಮಿ ಪೂಜೆಯ ದಿನ ನಿವೇಶನವನ್ನು ಗೋಮೂತ್ರ, ಪರ್ವಶುದ್ಧಿ ಮತ್ತು ಅರಿಶಿಣದ ನೀರಿನಿಂದ ಶುದ್ಧ ಮಾಡಬೇಕು. ಭೂಮಿಗೆ ಪೂಜೆ ಮತ್ತು ನಿವೇಶನದ ಬ್ರಹ್ಮಸ್ಥಾನದಲ್ಲಿ ಶಂಕುಸ್ಥಾಪನೆ ಒಂದೇ ಮುಹೂರ್ತದಲ್ಲಿ ನೆರವೇರಬೇಕು.
ಭೂಮಿ ಪೂಜೆಯಲ್ಲಿ ಯಾವೆಲ್ಲಾ ದೇವರಿಗೆ ಪೂಜೆ ಸ ಭೂಮಿ ಪೂಜೆಯನ್ನು ವಾಸ್ತು ಪುರುಷ, ಭೂಮಾತೆ, ಪಂಚ ಭೂತಗಳಿಗೆ ಸಲ್ಲಿಸಲಾಗುವುದು. ಈ ಪೂಜೆ ಮಾಡುವುದರಿಂದ ಇರುವ ಸಕಲ ಅಡ್ಡಿ ಆತಂಕಗಳು ದೂರವಾಗಿ ಕಟ್ಟಡ ಕೆಲಸ ಸರಾಗವಾಗಿ ಸಾಗುವುದು ಎಂಬ ನಂಬಿಕೆ ಇದೆ.ಲ್ಲಿಸಲಾಗುವುದು

ಭೂಮಿ ತೆಗೆದುಕೊಂಡ ಬಳಿಕ ಮೊದಲು ಏನು ಮಾಡಬೇಕು?
ಮೊದಲಿಗೆ ಕಾಂಪೌಂಡ್ ಕಟ್ಟಿ
ಜಾಗ ತೆಗೆದುಕೊಂಡ ಬಳಿಕ ಮನೆ ಕಟ್ಟುವ ಮುನ್ನ ಕಾಪೌಂಡ್ ಕಟ್ಟಬೇಕು. ಅದರಲ್ಲೂ ದಕ್ಷಿಣ ಭಾಗದ ಕಾಂಪೌಂಡ್ ಇತರ ಭಾಗಗಳಿಗಿಂತ ಎತ್ತರವಾಗಿರಬೇಕು. ಪಶ್ಚಿಮ, ದಕ್ಷಿಣ ಭಾಗದ ಗೋಡೆಗಳು ಉತ್ತರ, ಪೂರ್ವ ಭಾಗದ ಗೋಡೆಗಳಿಗಿಂತ ತಗ್ಗಿರಬೇಕು.
ನಂತರ ಕಟ್ಟಡ ಕಟ್ಟುವ ಜಾಗದಲ್ಲಿ ಗಿಡವನ್ನು ನೆಡಿ.
ಜಾಗದಲ್ಲಿ ಕರು ಮತ್ತು ಇದ್ದರೆ ಆ ಜಾಗಕ್ಕೆ ಅದೃಷ್ಟ ಎನ್ನಲಾಗುವುದು.
ಭೂಮಿ ಪೂಜೆ: ವ್ಯಕ್ತಿಯ ಬದುಕಿನಲ್ಲಿ ಸಂತೋಷ, ಸಮೃದ್ಧಿಗಾಗಿ ಭೂಮಿ ಪೂಜೆ ಮಾಡಲಾಗುವುದು.

ಭೂಮಿ ಪೂಜೆ ಯಾರು ಮಾಡಬೇಕು?
ಭೂಮಿ ಪೂಜೆಯನ್ನು ಮನೆಯ ಯಜಮಾನ ಧರ್ಮಪತ್ನಿ ಜೊತೆಯಾಗಿ ಮಾಡುತ್ತಾನೆ, ಎಲ್ಲಾ ಋಣಾತ್ಮಕ ಶಕ್ತಿ ದೂರವಾಗಲಿ, ಕೆಲಸಗಳು ಯಾವುದೇ ವಿಘ್ನವಿಲ್ಲದೆ ನೆರವೇರಲಿ ಎಂಬ ಉದ್ದೇಶದಿಂದ ಮಾಡಲಾಗುವುದು. ಜಾಗ ಕೃಷಿಗೆ ಸಂಬಂಧಿಸಿದ್ದಾರೆ ಭೂಮಿ ಚೆನ್ನಾಗಿ ಫಲ ನೀಡಲಿ ಎಂದು ಪ್ರಾರ್ಥಿಸಿ ಭೂಮಿ ಪೂಜೆ ಮಾಡಲಾಗುವುದು.

ಯಾವಾಗ ಭೂಮಿ ಪೂಜೆಗೆ ಸೂಕ್ತ ಸಮಯ
ಶ್ರಾವಣ, ಮಾರ್ಗಶಿರ, ಪುಷ್ಯಾ, ಕಾರ್ತಿಕ ಮಾಸ ಭೂಮಿ ಪೂಜೆಗ ಸೂಕ್ತವಾಗಿದೆ. ಸೋಮವಾರ, ಬುಧವಾರ, ಗುರುವಾರ ಭೂಮಿ ಮಾಡಲು ಸೂಕ್ತ ದಿನಗಳಾಗಿವೆ. ಭಾನುವಾರ, ಶನಿವಾರ, ಮಂಗಳವಾರ ಭೂಮಿ ಪೂಜೆ ಮಾಡಲೇಬಾರದು.
ಮನೆಯಲ್ಲಿ ಯಾರಾದರೂ ಗರ್ಭಿಣಿಯಿದ್ದರೆ ಕಟ್ಟಡ ಕಟ್ಟುವ ಕೆಲಸಕ್ಕೆ ಕೈ ಹಾಕಬಾರದು.

ಭೂಮಿ ಪೂಜೆ ಮಾಡುವಾಗ ಪಾಲಿಸುವ ವಿಧಾನಗಳು'
- ಜಾಗವನ್ನು ಸ್ವಚ್ಛಮಾಡಬೇಕು.
- ನಂತರ ಈಶಾನ್ಯ ದಿಕ್ಕಿಗೆ ಭೂಮಿಯನ್ನು ಅಗೆಯಬೇಕು.
- ಮನೆಯ ಯಜಮಾನ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಬೇಕು.
- ಪೂಜೆಯಲ್ಲಿ ಗಣೇಶ, ಲಕ್ಷ್ಮಿ ಮೂರ್ತಿಯನ್ನು ಇಟ್ಟು ಪೂಜಿಸಲಾಗುವುದು
- ಪೂಜೆ ಬಳಿಕ ಜಾಗದ ನಾಲ್ಕು ದಿಕ್ಕಿನಲ್ಲಿ ಹಾಗೂ ಮಧ್ಯ ಭಾಗದಲ್ಲಿ ನಿಂಬೆಹಣ್ಣು ಇಟ್ಟು ದೃಷ್ಟಿ ನಿವಾಳಿಸಬೇಕು.
- ಪೂಜೆಯಲ್ಲಿ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಲಾಗುವುದು, ನಂತರ ದೇವಿ ಪೂಜೆ ಮಾಡಿ ಸಂಕಲ್ಪ ಕೈಗೊಳ್ಳಬೇಕು, ನಂತರ ಸತ್ಕರ್ಮ, ಪ್ರಾಣ ಪ್ರತಿಷ್ಠಾಪನೆ ಮಾಡಿ ಮಂಗಳಕರ ದ್ರವ್ಯ ಸಿಂಪಡಿಸಲಾಗುವುದು.

ಭೂಮಿ ಪೂಜೆಗೆ ಬೇಕಾಗುವ ಸಾಮಗ್ರಿಗಳು
ಅರಿಶಿಣ ಪುಡಿ
ಕುಂಕುಮ
ಚಂದನ'
ಗಂಧದ ಕಡ್ಡಿ
ಕರ್ಪೂರ
ಹೂಗಳು
ತೆಂಗಿನಕಾಯಿ
ಕಳಸ ವಸ್ತ್ರಂ
ಅಕ್ಕಿ
ನಾಣ್ಯಗಳು
ತುಪ್ಪ
ಕಲ್ಲು ಸಕ್ಕರೆ
ನವಧಾನ್ಯಗಳು
ನೈವೇದ್ಯ



Click it and Unblock the Notifications