Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೊಸ ಟ್ರಿಕ್ಸ್- ಮನೆಯ ಸ್ವಚ್ಛತೆಗೆ ಕಡಲೆಕಾಯಿ ಬೆಣ್ಣೆ!
ಇದುವರೆಗೆ ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿದ್ದ ಶೇಂಗಾ-ಬೆಣ್ಣೆಯ ಮಿಶ್ರಣವಾದ ಪೀನಟ್ ಬಟರ್ ಈಗ ಭಾರತದಲ್ಲಿಯೂ ಲಭ್ಯವಾಗತೊಡಗಿದೆ. ಬೆಳಗ್ಗಿನ ಉಪಾಹಾರಕ್ಕೆ ಹೆಚ್ಚಿನ ಸಮಯವಿಲ್ಲದವರಿಗೆ ಹೇಳಿ ಮಾಡಿಸಿದ ಆಹಾರವಾದ ಇದು ಆರೋಗ್ಯಕರವೂ ಪೌಷ್ಠಿಕವೂ ಆಗಿದೆ. ಸಿದ್ಧ ರೂಪದಲ್ಲಿ ಬ್ರೆಡ್, ಚಪಾತಿ, ರೊಟ್ಟಿಗಳೊಡನೆ ಸೇವಿಸಲು ಸಾಧ್ಯವಿರುವ ಈ ಖಾದ್ಯ ಮಕ್ಕಳಿಂದ ಹಿರಿಯರಿಗೆ ಇಷ್ಟವಾಗುತ್ತದೆ. ಆದರೆ ಇದರ ಉಪಯೋಗ ತಿನ್ನುವುದರ ಹೊರತಾಗಿ ಇನ್ನೂ ಹಲವು ವಿಧಗಳಲ್ಲಿ ಇದರ ಪ್ರಯೋಜನಗಳನ್ನು ನಾವು ಪಡೆಯಬಹುದು.
ಆದರೆ ಇದು, ಬರಿಯ ಬೆಳಗ್ಗಿನ ಉಪಹಾರಕ್ಕೆ ಮಾತ್ರವೇ ಕಡಲೆ ಕಾಯಿ ಬೆಣ್ಣೆ ಸಹಕಾರಿಯಾಗಿರದೇ ಹಲವಾರು ಮನೆಗೆಲಸದಲ್ಲೂ ಇದು ನಿಮಗೆ ಸಹಾಯ ಮಾಡಲಿದೆ ಎಂಬುದನ್ನು ನೀವು ನಂಬಲೇಬೇಕು. ಅಡುಗೆ ಮನೆಯ ಹಲವಾರು ಸಮಸ್ಯೆಗಳನ್ನು ನಿಯಂತ್ರಿಸುವ ಶಕ್ತಿಯನ್ನು ಕಡಲೆಕಾಯಿ ಬೆಣ್ಣೆ ಹೊಂದಿದ್ದು ಹೋಗಲಾಡಿಸಲೂ ಸಾಧ್ಯವಾಗದೇ ಇರುವ ವಾಸನೆಗಳನ್ನು ಇದು ನಿವಾರಿಸುತ್ತದೆ. ಬನ್ನಿ ಅಂತಹ ಕಮಾಲಗಳನ್ನು ಕಡಲೆ ಕಾಯಿ ಬೆಣ್ಣೆ ಹೇಗೆ ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ...

ಅಸಹ್ಯ ವಾಸನೆಯನ್ನು ಹೋಗಲಾಡಿಸಲು
ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವವರಿಗೆ ಇದು ವರದಾಯಕ ಎಂದೆನಿಸಿದೆ. ಪಾತ್ರೆ ಮತ್ತು ಕೈಗಳಿಂದ ಮೀನಿನ ವಾಸನೆಯನ್ನು ನಿವಾರಿಸಲು ಕಡಲೆ ಕಾಯಿ ಬೆಣ್ಣೆ ಉತ್ತಮವಾದುದು. ನಿಮ್ಮ ಕೈಗಳಿಗೆ ಕಡಲೆ ಕಾಯಿ ಬೆಣ್ಣೆಯನ್ನು ಸವರಿಕೊಳ್ಳಿ ನಂತರ ಕೈಗಳನ್ನು ತೊಳೆಯಿರಿ. ಅಂತೆಯೇ ಪಾತ್ರೆಗಳಿಗೂ ಈ ಬೆಣ್ಣೆಯನ್ನು ಸವರಿ ವಾಸನೆಯನ್ನು ಹೋಗಲಾಡಿಸಬಹುದು.
ಚರ್ಮವನ್ನು ಸ್ವಚ್ಛಮಾಡಲು
ಚರ್ಮವನ್ನು ಸ್ವಚ್ಛಮಾಡುವುದು ಹೆಚ್ಚು ಕಷ್ಟಕರ ಕೆಲಸ ಎಂದೆನಿಸಿದೆ. ಅದನ್ನು ನಿರ್ವಹಣೆ ಮಾಡುವುದೂ ಅಷ್ಟೇ ತಲೆನೋವನ್ನು ಉಂಟುಮಾಡುತ್ತದೆ. ಆದರೆ ಈ ಸಮಸ್ಯೆಯನ್ನು ಹೋಗಲಾಡಿಸಲು ಕಡಲೆ ಕಾಯಿ ಬೆಣ್ಣೆಯ ಮೊರೆ ಹೋಗಬಹುದು. ವೃತ್ತಾಕಾರವಾಗಿ ಬೆಣ್ಣೆಯನ್ನು ಸವರಿ ನಂತರ ಹತ್ತಿ ಬಟ್ಟೆಯಿಂದ ಅದನ್ನು ಒರೆಸಿ. ಬೆಣ್ಣೆಯ ವಾಸನೆಯನ್ನು ನಿವಾರಿಸಲು ಸುಗಂಧದದ ಎಣ್ಣೆಯನ್ನು ಹಚ್ಚಿರಿ.
ಸ್ಕ್ರಾಚ್ ಆಗಿರುವ ಸಿಡಿಗಳ ರಿಪೇರಿ
ಪೆನ್ ಡ್ರೈವ್ ಮತ್ತು ಹಾರ್ಡ್ ಡ್ರೈವ್ಗಳು ಹಳೆಯ ಉತ್ಪನ್ನಗಳನ್ನು ಭಾಗಶಃ ಮೂಲೆಗುಂಪಾಗಿಸಿದೆ. ನಿಮ್ಮ ಹಳೆಯ ಸಿಡಿಗಳನ್ನು ನೀವು ಕಂಡಲ್ಲಿ ಅದು ಸ್ಕ್ರಾಚ್ ಮತ್ತು ಹಾನಿಗೊಳಗಾಗಿದ್ದಲ್ಲಿ, ಕಡಲೆಕಾಯಿ ಬೆಣ್ಣೆ ಬಳಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಸಿಡಿಗಳ ಮೇಲೆ ಬೆಣ್ಣೆಯನ್ನು ಚೆನ್ನಾಗಿ ಉಜ್ಜಿಕೊಳ್ಳಿ ಮತ್ತು ಒಣಬಟ್ಟೆಯಿಂದ ಸಿಡಿಯನ್ನು ಒರೆಸಿ. ಮ್ಯಾಜಿಕ್ ನೀವೇ ನೋಡಿ.
ಪೀಠೋಪಕರಣಗಳ ಸ್ವಚ್ಛತೆಗೆ
ನಮ್ಮ ಮನೆಯ ಪೀಠೋಪಕರಣಗಳಿಗೆ ಸ್ಕ್ರಾಚ್ ಮತ್ತು ಹಾನಿ ಉಂಟಾಗುತ್ತಲೇ ಇರುತ್ತದೆ. ಪ್ರತೀ ಸ್ಕ್ರಾಚ್ನ ನಂತರ ಪಾಲಿಶ್ ಮಾಡಿಸುವುದು ನಿಮಗೆ ಬೇಡವೆಂದಾದಲ್ಲಿ ಈ ಭಾಗಕ್ಕೆ ಕಡಲೆಕಾಯಿ ಬೆಣ್ಣೆಯನ್ನು ಹಚ್ಚಿರಿ ನಂತರ ಒಣ ಬಟ್ಟೆಯಿಂದ ಅದನ್ನು ಒರೆಸಿ. ಗೀರು ಮಾಯವಾಗಿರುವುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.



Click it and Unblock the Notifications


