Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಮಳೆಗಾಲದಲ್ಲಿ ಆಹಾರಪದಾರ್ಥಗಳನ್ನು ಶೇಖರಿಸಿಡುವ ವಿಧಾನಗಳು
ಮಳೆಗಾಲದಲ್ಲಿ ಆಹಾರಗಳು ಬೇಗ ಹಾಳಾಗುತ್ತವೆ. ಆಹಾರಗಳನ್ನು ತಾಜಾವಾಗಿ ಇರಿಸಿಕೊಳ್ಳುವುದೇ ಕಷ್ಟದ ಕೆಲಸ. ಆಹಾರ ಪದಾರ್ಥಗಳ ತಾಜಾತನವನ್ನು ಕಾಪಾಡಿಕೊಳ್ಳಲು ಈ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ ನೋಡಿ. ಸರಿಯಾದ ರೀತಿಯಲ್ಲಿ ಆಹಾರವನ್ನು ಕಾಪಾಡಿಕೊಳ್ಳದಿದ್ದರೆ,ಮಳೆಗಾಲದಲ್ಲಿ ಸಾಮಾನ್ಯವೆನಿಸುವ ಅನೇಕ ರೋಗಗಳು ಕಾಣಿಸಿಕೊಳ್ಳಬಹಹುದು.
ಬೇಕಾದಷ್ಟು ಮಾತ್ರ ಅಡುಗೆ ಮಾಡಿ
ಮಳೆಗಾಲ ಬಂತೆಂದರೆ ಆಹಾರ ಪದಾರ್ಥಗಳು ಬೇಗ ಬೂಸ್ಟ್ ಹಿಡಿದುಬಿಡುತ್ತವೆ.ಆಹಾರವನ್ನು ಕಾಪಾಡಿಕೊಳ್ಳುವುದೇ ಕಷ್ಟದ ಕೆಲಸ.ಅದಲ್ಲದೇ ನಗರದ ಹವಾಮಾನ ಕೂಡ ಆಹಾರಗಳು ಹಾಳಾಗುವಂತೆ ಮಾಡಿಬಿಡುತ್ತವೆ.ಆದ್ದರಿಂದ ಉತ್ತಮ ವಿಧಾನ ಎಂದರೆ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರವನ್ನು ತಯಾರಿಸಿ.ಒಂದುವೇಳೆ ಅಧಿಕವಾಗಿ ತಯಾರಿಸಿದ ಆಹಾರವಿದ್ದರೆ ಅಗತ್ಯವಿರುವವರಿಗೆ ದಾನ ನೀಡಿ.

ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು
ಫ್ರಿಡ್ಜ್ ನಲ್ಲಿ ಶೇಖರಿಸಿಡಿ
ರವೆ,ಹಿಟ್ಟು ಇವುಗಳನ್ನು ಕೂಡ ಫ್ರಿಡ್ಜ್ ನಲ್ಲಿ ಇಡಬಹುದು.ರವೆಯನ್ನು ಸ್ವಲ್ಪ ಹುರಿದು ನಿಮ್ಮ ಫ್ರಿಡ್ಜ್ ನಲ್ಲಿ ಇಟ್ಟುಬಿಟ್ಟರೆ ಬೇಕಾದಾಗ ತಕ್ಷಣಕ್ಕೆ ಉಪಯೋಗಿಸಿಕೊಳ್ಳಬಹುದು.ಕಡಲೆ ಹಿಟ್ಟನ್ನು ಚೆನ್ನಾಗಿ ಸೋಸಿ,ಏರ್ ಟೈಟ್ ಕಂಟೈನರ್ ನಲ್ಲಿ ಇಡುವುದರಿಂದ ಫಂಗಸ್ ಬರುವುದನ್ನು ತಡೆಯಬಹುದು.
ವೇಗವರ್ಧಕಗಳನ್ನು ಬಳಸಿ
ಮಳೆಗಾಲದಲ್ಲಿ ಬೇಳೆಕಾಳುಗಳನ್ನು ಕೀಟಗಳಿಂದ ರಕ್ಷಿಸಲು ಸಾಸಿವೆ ಎಣ್ಣೆಯನ್ನು ಅದರ ಮೇಲೆ ಸಿಂಪಡಿಸಿ ಶೇಖರಿಸಿಡಿ.ಬೇಳೆಗಳನ್ನು ತಾಜಾವಾಗಿಡಲು ಕ್ಯಾಸ್ಟರ್ ಎಣ್ಣೆಯನ್ನು ಸಿಂಪಡಿಸಿ.ಬೇಳೆಗಳು ಹೊಳೆಯುವಂತೆ ಕಾಣುವಷ್ಟು ಮಾತ್ರ ಕ್ಯಾಸ್ಟರ್ ಎಣ್ಣೆ ಸಿಂಪಡಿಸಬೇಕು.ನಟ್ಸ್ಗಳು ಮೆತ್ತಗಾಗಿದ್ದರೆ ಅವುಗಳನ್ನು ಮೈಕ್ರೋವೇವ್ ನಲ್ಲಿ ಸ್ವಲ್ಪ ಬಿಸಿ ಮಾಡಿ ಇಡಿ.ಇದರಿಂದ ಅವು ಮತ್ತೆ ಗರಿಗರಿಯಾಗುತ್ತವೆ.
ಅಡುಗೆ ಮಾಡಿಟ್ಟ ಪದಾರ್ಥಗಳ ಆರೈಕೆ
ಮಾಡಿಟ್ಟ ಅಡುಗೆಯಾದರೆ ಎರಡು ಗಂಟೆಗಳಿಗೊಮ್ಮೆ ಬಿಸಿ ಮಾಡುತ್ತಿದ್ದರೆ ಬ್ಯಾಕ್ಟಿರಿಯ ಸೇರುವುದಿಲ್ಲ. ಮಾಡಿಟ್ಟ ಚಪಾತಿಗಳಿದ್ದರೆ ಪೇಪರ್ ಅಥವಾ ಸಿಲ್ವರ್ ಫಾಯಿಲ್ ಬಳಸಿ ಸುತ್ತಿಡಿ,ಇದರಿಂದ ತಾಜಾವಾಗಿರುತ್ತದೆ.ಮಾಡಿಟ್ಟ ಅಡುಗೆಯನ್ನು ಯಾವಾಗಲೂ ಮುಚ್ಚಿಡಿ.ಹಪ್ಪಳಗಳನ್ನು ಕರಿದರೆ ತಕ್ಷಣ ಅದನ್ನು ಜಿಪ್ ಲಾಕ್ ಇರುವ ಪ್ಯಾಕೆಟ್ ಗೆ ಹಾಕಿಡಿ ಇದರಿಂದ ಗರಿಗರಿಯಾಗಿರುತ್ತದೆ.
ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!
ಯಾವಾಗಲು ಮುಚ್ಚಿ ಇಡಿ
ಅಡುಗೆ ಮಾಡುವ ಮೊದಲು ಮತ್ತು ಮಾಡಿದ ನಂತರ ಯಾವಾಗಲೂ ಆಹಾರಪದಾರ್ಥಗಳಿಗೆ ಮುಚ್ಚಿಡಿ,ಇದರಿಂದ ಆರೋಗ್ಯಹಾನಿಯನ್ನು ತಪ್ಪಿಸಬಹುದು.
ತೊಳೆದು ಒಣಸಿಡಿ
ಹಣ್ಣು ಮತ್ತು ತರಕಾರಿಗಳನ್ನು ಫ್ರಿಡ್ಜ್ ನಲ್ಲಿ ಇಡುವ ಮೊದಲು ತೊಳೆದು ಒಣಗಿಸಿ ಇಡಿ.ಹಾಗೆಯೇ ಬಳಸುವ ಮೊದಲು ತೊಳೆಯಬೇಕು.



Click it and Unblock the Notifications











