Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಸಿಟ್ರಸ್ ಹಣ್ಣುಗಳಲ್ಲಿರುವ ಪ್ರಯೋಜನಕಾರಿ ಅಂಶಗಳು
ಸಾಮಾನ್ಯವಾಗಿ ಮನೆಯಲ್ಲಿ ಕಿತ್ತಳೆ ಹಣ್ಣುಗಳನ್ನು ಸೇವಿಸಿದಾಗ ಸಿಪ್ಪೆಯನ್ನು ಹಾಗೇ ತಿಪ್ಪೆಗೆಸೆಯುತ್ತೇವೆ. ಆದರೆ ಲಿಂಬೆಹಣ್ಣಿನ ಜಾತಿಗೆ ಸೇರಿದ ಕಿತ್ತಳೆ, ಮೂಸಂಬಿ, ಮೊದಲಾದ ಹಣ್ಣುಗಳ ಸಿಪ್ಪೆಯಲ್ಲಿ ಅದ್ಭುತ ಗುಣಗಳಿವೆ.
ಈ ಸಿಪ್ಪೆಗಳಿಂದ ಹಾಗೂ ಅಡುಗೆ ಮನೆಯಲ್ಲಿರುವ ಕಲೆಯನ್ನು, ಗ್ಯಾಸ್ ಸ್ಟವ್ನ ಕಲೆಗಳನ್ನು, ಅಥವಾ ತಾಮ್ರದ ಪಾತ್ರೆಯ ಹೊಳಪನ್ನು ಹೆಚ್ಚಿಸಲು ಕೂಡ ನೆರವಾಗುತ್ತದೆ ಎಂಬುದನ್ನು ಮರೆಯಬೇಡಿ. ಇವುಗಳನ್ನು ಬಿಸಾಡದೇ ಉಪಯೋಗಿಸುವ ಮೂಲಕ ಅಡುಗೆಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು. ಬನ್ನಿ ಇವುಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ..

ಸ್ನಾನದ ನೀರಿನಲ್ಲಿ ಮಿಶ್ರಣ ಮಾಡುವುದು
ನೀವು ಸ್ನಾನ ಮಾಡುವ ಟಬ್ ನಲ್ಲಿ ಅಥವಾ ಬಕೆಟ್ನ ಬಿಸಿನೀರಿನಲ್ಲಿ ನಾಲ್ಕಾರು ಎಸಳು ಕಿತ್ತಳೆ ಸಿಪ್ಪೆಯನ್ನು ಸೇರಿಸಿ ಕೊಂಚ ಕಾಲ ಕಳೆದ ಬಳಿಕ ಸ್ನಾನ ಮಾಡುವುದರಿಂದ ಚರ್ಮ ಹೆಚ್ಚಿನ ಕಾಂತಿಯನ್ನು ಪಡೆಯುತ್ತದೆ ಹಾಗೂ ಸ್ನಾನ ಆಹ್ಲಾದಕರವಾಗಿರುತ್ತದೆ. ನೀರು ಖಾಲಿಯಾದ ಬಳಿಕ ಟಬ್ ನ ಒಳಭಾಗವೂ ಸ್ವಚ್ಛವಾಗಿ ಫಳಫಳನೆ ಹೊಳೆಯುತ್ತದೆ.

ಸಕ್ಕರೆ ಡಬ್ಬಿಯಲ್ಲಿ ಗಂಟುಗಳಾಗದಂತೆ ತಡೆಯುತ್ತದೆ
ಎಷ್ಟೇ ಗಟ್ಟಿಯಾದ ಮುಚ್ಚಳವಿದ್ದರೂ ಕೆಲವೊಮ್ಮೆ ಸಕ್ಕರೆ ಗಂಟುಗಂಟಾಗಿರುತ್ತದೆ. ಗಾಳಿಯಲ್ಲಿರುವ ತೇವಾಂಶವೇ ಇದಕ್ಕೆ ಕಾರಣ. ಸಕ್ಕರೆ ಡಬ್ಬಿಯಲ್ಲಿ ಕಿತ್ತಳೆ ಸಿಪ್ಪೆಯ ಒಂದೆರಡು ತುಂಡುಗಳನ್ನು ಹಾಕಿಡುವುದರಿಂದ ತೇವಾಂಶವನ್ನು ಅದು ಹೀರಿಕೊಂಡು ಸಕ್ಕರೆ ಗಂಟುಗಳಾಗದಂತೆ ತಡೆಯುತ್ತದೆ. ಕೆಲವರು ಕಂದು ಸಕ್ಕರೆಯ ಬದಲಿಗೆ ಒಣ ಕಿತ್ತಳೆ ಸಿಪ್ಪೆಯ ತುಂಡುಗಳನ್ನು ಉಪಯೋಗಿಸುತ್ತಾರೆ.

ಉತ್ತಮ ಮಾರ್ಜಕವಾಗಿ ಉಪಯೋಗಿಸಿರಿ
ನಿಮ್ಮ ಗಾಜಿನ ಹಾಗೂ ಸ್ಟೀಲ್ ಪಾತ್ರೆಗಳನ್ನು ಕಿತ್ತಳೆ ಸಿಪ್ಪೆಯಿಂದ ಉಜ್ಜಿ ಫಳಫಳನೆ ಹೊಳೆಯುವಂತೆ ಮಾಡಬಹುದು. ಯಾವುದೇ ಗೀರುಗಳಾಗುವ ಅಪಾಯವಿಲ್ಲ, ಸೋಪಿನಂತೆ ಕೈಜಾರಿ ಬಿದ್ದು ಒಡೆಯುವ ಅಥವಾ ನೆಗ್ಗು ಬರುವ ಸಾಧ್ಯತೆ ಇಲ್ಲ.

ಕೀಟಗಳು ಹತ್ತಿರ ಬರದಂತೆ ತಡೆಯುತ್ತದೆ
ಕೀಟಗಳೂ ತಮ್ಮದೇ ವಾಸನಾಪ್ರಪಂಚದಲ್ಲಿರುವ ಕಾರಣ ಕಿತ್ತಳೆ ಸಿಪ್ಪೆಯ ವಾಸನೆ ಇರುವೆಡೆ ಬರುವುದಿಲ್ಲ. ಸಾಧಾರಣವಾಗಿ ಕೀಟಬಾಧಿಸುವ ಹೂಕುಂಡ, ಅಡುಗೆಮನೆ, ತರಕಾರಿ ಇಡುವ ಉಗ್ರಾಣ ಮೊದಲಾದೆಡೆ ಕಿತ್ತಳೆ ಸಿಪ್ಪೆಗಳನ್ನು ಹರಡಿಸಿಟ್ಟರೆ ಕೀಟಗಳು ದೂರಾಗುತ್ತವೆ.

ಹೂ ಕುಂಡಗಳಿಗೆ ಉತ್ತಮ ಗೊಬ್ಬರವಾಗಿದೆ
ಹೂಗಿಡಗಳಿಗೆ ಅತಿ ತೀಕ್ಷ್ಣವೂ ಅಲ್ಲದ ಅತಿ ಮೃದುವೂ ಅಲ್ಲದ ಗೊಬ್ಬರದ ಅಗತ್ಯವಿದೆ. ರಾಸಾಯನಿಕ ಗೊಬ್ಬರ ಅಥವಾ ಹಸುವಿನ ಗೊಬ್ಬರ ಹೆಚ್ಚಾದರೆ ಹೂಗಿಡ ಕೊಳೆಯುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆ ಹಾಗೂ ಉಪಯೋಗಿಸಿ ಬಿಸುಟ ಟೀ ಪುಡಿ ಮಣ್ಣಿನೊಂದಿಗೆ ಬೆರೆತಾಗ ಹೂಗಿಡಗಳಿಗೆ ಅತ್ಯುತ್ತಮವಾದ ಗೊಬ್ಬರ ದೊರಕಿದಂತಾಗುತ್ತದೆ.

ಒಲೆಯ ಮೇಲ್ಭಾಗದ ಗೋಡೆಯ ಎಣ್ಣೆಕಲೆಗಳನ್ನು ತೆಗೆಯುತ್ತದೆ
ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ, ಹುರಿದ ಬಳಿಕ ಒಲೆಯ ಮೇಲ್ಭಾಗದ ಗೋಡೆಯಲ್ಲಿ, ಕಿಟಕಿಯಲ್ಲಿ, ಸ್ಟವ್ ನ ಭಾಗಗಳಲ್ಲಿ ಎಣ್ಣೆಯ ಜಿಡ್ಡು ಕುಳಿತುಕೊಳ್ಳುತ್ತದೆ. ಸೋಪಿಗೂ ಬಗ್ಗ ಈ ಕಲೆಗಳು ಕಿತ್ತಳೆ, ಲಿಂಬೆ ಸಿಪ್ಪೆಗಳ ಒತ್ತಡಕ್ಕೆ ಮಣಿಯುತ್ತವೆ.

ಕತ್ತರಿಸುವ ಫಲಕ (cutting board) ವನ್ನು ಸ್ವಚ್ಛಗೊಳಿಸುತ್ತದೆ
ಪ್ರತಿಬಾರಿ ಕಟಿಂಗ್ ಬೋರ್ಡ್ ನಲ್ಲಿ ಏನಾದರೂ ಕತ್ತರಿಸಿದಾದ ಒಂದು ಗೀರು ಬೀಳುತ್ತದೆ. ಈ ಗೀರಿನಲ್ಲಿ ಹಲವು ವಿಧಧ ಬಣ್ಣ, ಎಣ್ಣೆ ಮೊದಲಾದವು ಸೇರಿಕೊಂಡು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ. ಸುಲಭವಾಗಿ ಇದು ಸೋಪಿಗೆ ಬಗ್ಗುವುದಿಲ್ಲ. ಬದಲಿಗೆ ರಸತೆಗೆದ ಲಿಂಬೆಯ ಅರ್ಧವನ್ನು ಬ್ರಶ್ ನಂತೆ ಈ ಗೀರುಗಳ ಮೇಲೆ ಗಸಗಸ ಉಜ್ಜುವುದರಿಂದ ಈ ಗೀರುಗಳೊಳಗೆ ಕುಳಿತ ಎಲ್ಲಾ ಕಲೆಗಳು ಹೊರಬಂದು ಫಲ ಶುಭ್ರವಾಗುತ್ತದೆ.



Click it and Unblock the Notifications











