Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಮನೆಗೆ ಮಾರ್ಬಲ್ ಕಲ್ಲು ಬಳಸುತ್ತಿದ್ದೀರಾ?
ಮನೆಯ ಒಳಾಂಗಣಕ್ಕೆ ಸಂಗಮರಿ ಕಲ್ಲಿನ ಬಳಕೆ ಮನೆಗೆ ಹೊಸ ಮೆರುಗನ್ನು ನೀಡುತ್ತದೆ. ನಿಮ್ಮ ಮನೆಯ ಒಳಹಾಸಿಗೆ ಮತ್ತು ಕೋಣೆಯ ರೂಮುಗಳಿಗೆ ದುಬಾರಿ ಬೆಲೆಯ ಸಂಗಮರಿ ಕಲ್ಲುಗಳನ್ನು ಬಳಸಿದ್ದರೆ ಅವುಗಳ ಬಗ್ಗೆ ಒಂದಷ್ಟು ಕಾಳಜಿ ಅತ್ಯಗತ್ಯ.
ಮಾರ್ಬಲ್ ಬಳಕೆಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಇಲ್ಲಿವೆ:

* ಆ್ಯಸಿಡ್ ಅಂಶವುಳ್ಳ ದ್ರವ ಅಥವಾ ಆಹಾರ ಪದಾರ್ಥಗಳು ಸಂಗಮರಿ ಕಲ್ಲಿನ ನೆಲದ ಮೇಲೆ ಬಿದ್ದರೆ ಕಲೆ ಉಳಿಯುತ್ತದೆ ಅಥವಾ ಹೊಳಪು ಮಾಸಿಹೋಗುತ್ತದೆ. ಮಾಸಿಹೋದ ಕಲೆ ನಾಣ್ಯದ ಗಾತ್ರದಷ್ಟೇ ಇರಬಹುದು ಅಥವಾ ಉಳಿದ ಟೈಲ್ಸ್ ಗಳಿಗೂ ಹರಡಬಹುದು. ಹೀಗಾಗಿ, ಯಾವುದೇ ದ್ರವ ಪದಾರ್ಥಗಳಿರಲಿ, ಹಣ್ಣಿನ ರಸಗಳು, ಕಾರ್ಬೋನೇಟ್ ಪಾನೀಯಗಳು, ವೈನ್ ಅಥವಾ ಚಹ ಚೆಲ್ಲಿದರೂ ಕೂಡ ಸ್ವಚ್ಚವಾದ ಬಟ್ಟೆಯನ್ನು ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಕೆಲವು ಹನಿ ಅಮೋನಿಯಾ ಸೇರಿಸಿದ ಬಟ್ಟೆಯಿಂದ ಉಜ್ಜಿ ತೆಗೆಯಿರಿ.
* ಗುರುತು ಅಥವಾ ಕಲೆ ಉಳಿದುಹೋಗುವ ಮತ್ತೊಂದು ರೀತಿಯೆಂದರೆ ಆ್ಯಸಿಡ್ ಹೊಂದಿರುವ ಸೋಪಿನ ಪುಡಿಗಳ ಬಳಕೆ. ಸಂಗಮರಿ ನೆಲಹಾಸನ್ನು ಸ್ವಚ್ಚಗೊಳಿಸಲು ವಿನೆಗರ್ ಅಥವಾ ಇನ್ನುಳಿದ ಆ್ಯಸಿಡಿಕ್ ಉತ್ಪನ್ನಗಳನ್ನು ಎಂದಿಗೂ ಬಳಸಬೇಡಿ. ಮಾರ್ಬಲ್ ಗಳು ಸೂಕ್ಮ್ಮವಾಗಿದ್ದು ಸಹಜ ಪಿಎಚ್ ಯುಕ್ತ ದ್ರವಗಳಿಂದಲೇ ಸ್ವಚ್ಚಗೊಳಿಸಬೇಕು. ಸ್ಥಳೀಯವಾಗಿ ಸಿಗುವ ಕಳಪೆ ಗುಣಮಟ್ಟದ ಕ್ಲೀನರ್ ಗಳನ್ನು ಬಳಸಿದರೆ ಶಾಶತ್ವತವಾಗಿ ಹೊಳಪು ಮಾಯವಾಗುತ್ತದೆ.
* ಸಂಗಮವರಿ ಕಲ್ಲಿನಲ್ಲಿ ಅತಿ ಸೂಕ್ಷ್ಮ ರಂದ್ರಗಳಿರುತ್ತವೆ. ಆಹಾರ ಪದಾರ್ಥಗಳಿಂದ, ಪಾಟ್ ಗಳಿಂದ, ಕಬ್ಬಿಣದ ಪೀಠೋಪಕರಣಗಳ ಕಾಲುಗಳಿಂದ, ಎಣ್ಣೆ, ಶಾಯಿ ಇತ್ಯಾದಿಗಳಿಂದ ಸುಲಭವಾಗಿ ಹಾನಿಗೊಳ್ಳುತ್ತವೆ. ಅಡುಗೆ ಎಣ್ಣೆ ಅಥವಾ ಇನ್ಯಾವುದೇ ತರದ ಎಣ್ಣೆಯಂಶವುಳ್ಳ ಪದಾರ್ಥಗಳು ಕಲೆ ಉಳಿಸುತ್ತವೆ. ಹೀಗಾಗಿ, ತಕ್ಷಣ ನೆಲವನ್ನು ಸ್ವಚ್ಚಗೊಳಿಸಬೇಕು.
* ನಿರಂತರವಾಗಿ ನೆಲವನ್ನು ಸ್ವಚ್ಚಗೊಳಿಸುತ್ತ ಧೂಳು ತೊಳೆಯುತ್ತಿದ್ದರೆ ಅದರ ಸಹಜ ಹೊಳಪನ್ನು ಹಾಗಯೇ ಉಳಿಸಿಕೊಳ್ಳಬಹುದು. ಮ್ರದುವಾದ ಬಟ್ಟೆಯಿಂದ ಧೂಳನ್ನು ಒರೆಸಬೇಕು. ಬಿಸಿಯಾದ ನೀರು ಬಳಸುವ ಬದಲು ಉಗುರು ಬೆಚ್ಚಗಿನ ನೀರು ಬಳಸಿ. ಗಟ್ಟಿಯಾದ ಪದಾರ್ಥ ಬೀಳದ ಹೊರತು ಗಟ್ಟಿಯಾಗಿ ಉಜ್ಜಬೇಕಾದ ಅವಶ್ಯಕತೆಯಿಲ್ಲ.



Click it and Unblock the Notifications











