Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ರಾತ್ರಿ ಮಲಗಿದಾಗ ಕೆಮ್ಮು-ಮೂಗು ಕಟ್ಟುವ ಸಮಸ್ಯೆ ಇದ್ಯಾ.? ಚಿಟಿಕೆಯಲ್ಲಿ ಸರಿ ಮಾಡಬಹುದು!
ಚಳಿಗಾಲ ಆರಂಭವಾಗುತ್ತಿದೆ. ಈ ಸಮಯದಲ್ಲಿ ವಾತಾವರಣ ಬಹುಬೇಗ ಬದಲಾಗುತ್ತಿರುತ್ತದೆ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲು ಇದ್ದರೆ ಸಂಜೆ ಆಗುತ್ತಿದ್ದಂತೆ ತಣ್ಣನೆಯ ಗಾಳಿ ಬೀಸಲು ಆರಂಭಿಸುತ್ತದೆ. ಹಾಗೆ ಕೆಲ ಹೊತ್ತಿನಲ್ಲಿ ಶೀತ ಗಾಳಿ ಬೀಸುತ್ತದೆ. ಬೆಳಗಿನ ಜಾವದಲ್ಲಿ ಮಂಜು ಬೀಳುವುದು ನಮ್ಮ ಆರೋಗ್ಯದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.
ಹೌದು ರಾತ್ರಿ ಮಲಗಿದ ಬಳಿಕ ನಿಮಗೆ ಕೆಮ್ಮು, ಮೂಗಿನಿಂದ ನೀರು ಬರುವುದು, ಗಂಟಲು ನೋವು, ಮೂಗು ಕಟ್ಟುವಿಕೆ ಸಾಮಾನ್ಯವಾಗಿ ಕಂಡುಬರುತ್ತದೆ. ಚಳಿಗಾಲದ ಆರಂಭದಲ್ಲಿ ಈ ರೀತಿ ಸಮಸ್ಯೆಗೆ ಒಳಗಾಗುವುದು ನಾವು ನೋಡಬಹುದು. ಆದ್ರೆ ಇದಕ್ಕೆ ಆಸ್ಪತ್ರೆ ಇಲ್ಲವೆ ಮೆಡಿಕಲ್ನಿಂದ ಯಾವುದೇ ಮಾತ್ರೆ ತಂದು ಸೇವಿಸುವುದು ಸೂಕ್ತ ಮಾರ್ಗವಲ್ಲ. ಹಾಗಾದ್ರೆ ಮನೆಯಲ್ಲಿಯೇ ಇದಕ್ಕೆ ಪರಿಹಾರ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕಾಲೋಚಿತವಾಗಿ ಕಾಡುವಂತಹ ಈ ಸಮಸ್ಯೆಗಳು ಚಿಕಿತ್ಸೆಗೂ ಬಗ್ಗುವುದಿಲ್ಲ ಏಕೆಂದರೆ ಹವಾಮಾನ ಬದಲಾವಣೆಯಿಂದ ಉಂಟಾಗುವ ಈ ಸಮಸ್ಯೆ ನಿಮಗೆ ಬಹಳ ಕಾಟ ಕೊಡಲಿದೆ. ರಾತ್ರಿ ಮಲಗಿದ ಕೂಡಲೇ ಕೆಮ್ಮಲು ಆರಂಭಿಸಿದರೆ ನಿದ್ರೆಯೇ ಬರುವುದಿಲ್ಲ ಎಂಬುದನ್ನು ನಾವು ಕೇಳಿದ್ದೇವೆ. ಬೆಳಗ್ಗೆವರೆಗೂ ಕೆಮ್ಮುತ್ತಿರುತ್ತಾರೆ. ಆದ್ರೆ ಮಧ್ಯಾಹ್ನದ ವೇಳೆ ಕೆಮ್ಮು ಸರಿಯಾಗುತ್ತದೆ. ಹಾಗೆ ಮತ್ತೆ ರಾತ್ರಿಯಾದಾಗ ಕೆಮ್ಮು, ಶೀತ, ಮೂಗು ಕಟ್ಟುವಿಕೆ ಆರಂಭವಾಗುತ್ತದೆ.
ಹೀಗಾಗಿ ರಾತ್ರಿ ಕೆಮ್ಮು, ಮೂಗು ಕಟ್ಟುವಿಕೆಗೆ ಪರಿಹಾರವಾಗಿ ಮನೆಯಲ್ಲೇ ಈ ರೀತಿ ಔಷಧಿ ಮಾಡಿದರೆ ಥಟ್ ಅಂತ ನಿರ್ಮೂಲನೆ ಆಗುತ್ತೆ. ಹಾಗಾದ್ರೆ ಯಾವ ಔಷಧಿ ಮಾಡಬೇಕು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲು ಒಂದು ಜೇಷ್ಠ ಮಧು ಅಥವಾ ಎಷ್ಟಿ ಮಧು ಎಂದು ಕರೆಯುವ ಒಂದು ಬೇರು ಬೇಕಾಗುತ್ತದೆ. ಇದು ಬಹುತೇಕ ಪೂಜಾ ಸಾಮಾಗ್ರಿ ಸಿಗುವಂತಹ ಅಂಗಡಿ, ಇಲ್ಲವೆ ಗಿಡಮೂಲಿಕೆ ನೀಡುವ ಅಂಗಡಿಗಳಲ್ಲಿ ಸಿಗುತ್ತದೆ.
ಅರ್ಧ ಬೆರಳಿನ ಗಾತ್ರದ ಜೇಷ್ಠಮಧುವನ್ನು ಜಜ್ಜಿಕೊಳ್ಳಬೇಕಾಗುತ್ತದೆ. ಬಳಿಕ ಇದನ್ನು ಸಣ್ಣ ಪಾತ್ರೆಗೆ ಹಾಕಿ ಒಲೆ ನೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಅನಂತರ ಸ್ವಲ್ಪ ಲವಂಗ ತೆಗೆದುಕೊಂಡು ಇದರ ಜೊತೆಗೆ ಹಿಪ್ಪಲಿ ಅಥವಾ ವೀಳ್ಯದೆಲೆ ಕರೆ ಎಂದು ಕರೆಯುವ ಉದ್ದ ಮೆಣಸು ತೆಗೆದುಕೊಳ್ಳಬೇಕು. ಇದು ಕೂಡ ಒಣಗಿದ ರೀತಿಯಲ್ಲಿ ಅಂಗಡಿಯಲ್ಲಿ ಸಿಗುತ್ತದೆ.
ಇವೆಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಬೇಕು. ನಂತರ ಎಲ್ಲವನ್ನು ಕುಟ್ಟಾಣಿಯಲ್ಲಿ ಅಥವಾ ಮಿಕ್ಸಿಗೆ ಹಾಕಿ ಕುಟ್ಟಿಕೊಳ್ಳಬೇಕು. ಚೆನ್ನಾಗಿ ಪುಡಿ ಪುಡಿಯಾಗಿ ಕುಟ್ಟಿಕೊಳ್ಳಿ. ಹಾಗೆ ಎಲ್ಲವನ್ನು ಸ್ವಲ್ಪ ಜರಡಿ ಹಿಡಿದು ನುಣ್ಣಗೆ ಇರುವ ಪುಡಿಯನ್ನು ತೆಗೆದುಕೊಳ್ಳಿ. ನಂತರ ಎಲ್ಲಾ ವಸ್ತುವನ್ನು ಒಂದೇ ಅಳತೆಯಲ್ಲಿ ತೆಗದುಕೊಳ್ಳಬೇಕು. ಒಂದೊಂದು ಚಮಚದಲ್ಲಿ ಈ ಮೂರು ಪುಡಿಗಳ ತೆಗೆದುಕೊಂಡು ಒಂದು ಬೌಲ್ಗೆ ಹಾಕಿ. ಹಾಗೆ ಇದಕ್ಕೆ ಒಣ ಶುಂಠಿ ಪುಡಿಯನ್ನು ಕೂಡ ಹಾಕಿಕೊಳ್ಳಿ.
ನಂತರ ಈ ಒಂದು ಸ್ಪೂನ್ನಲ್ಲಿ ಈ ಪುಡಿ ತೆಗೆದುಕೊಂಡು ಮತ್ತೊಂದು ಬೌಲ್ಗೆ ಹಾಕಿ, ಅದಕ್ಕೆ ಶುದ್ಧ ಜೇನುತುಪ್ಪ ಒಂದು ಸ್ಪೂನ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೈ ಬೆರಳಿನಿಂದ ಬಾಯಿಗೆ ಹಾಕಿಕೊಂಡು ಮಲಗುವ ಮುನ್ನ ಸವಿಯಬೇಕು. ನಿತ್ಯ ಹೀಗೆ ಮಾಡಿದ್ರೆ ಒಂದು ವಾರದಲ್ಲಿ ನಿಮ್ಮ ಕೆಮ್ಮು, ಶೀತ, ಮೂಗು ಕಟ್ಟುವುದು ನಿವಾರಣೆಯಾಗುತ್ತದೆ. ಈ ಮೂಲಿಕೆಗಳು ಎಲ್ಲವೂ ಆನ್ಲೈನ್ನಲ್ಲಿ ಸಿಗುತ್ತದೆ. ಇಲ್ಲವೆ ರೆಡಿಮೇಡ್ ಪುಡಿಗಳು ಕೂಡ ಈಗ ಲಭ್ಯವಿರುತ್ತದೆ. ನೀವು ಮನೆಯಲ್ಲೇ ಇವುಗಳನ್ನು ಮಾಡಿ ಸವಿಯುವುದು ಉತ್ತಮ. ಅದರಲ್ಲೂ ಮಕ್ಕಳಿಗೆ ಮಾತ್ರೆ, ಔಷಧಿಗಿಂತ ಇದು ಬಹಳ ಉಪಯೋಗಕಾರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)



Click it and Unblock the Notifications