Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಸಾಲದಿಂದ ಮುಕ್ತಿ ಪಡೆಯಬೇಕಾ? ಒಂದು ಲವಂಗ ಒಂದು ಏಲಕ್ಕಿಯಿಂದ ಪರಿಹಾರ!
ವ್ಯಕ್ತಿಯೊಬ್ಬರಿಗೆ ಹಣ ಎಷ್ಟು ಮುಖ್ಯ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಹಣ ಸಂಪಾದನೆ ಮಾಡಬೇಕು ಎಂಬುದೇ ಮಾನವ ಜನ್ಮದ ಉದ್ದೇಶವಾಗಿರುತ್ತದೆ. ಹಣವನ್ನ ಎಲ್ಲರೂ ಬಯಸುತ್ತಾರೆ. ಆದ್ರೆ ಕೆಲವರು ಸಾಲ ಮಾಡಿಯಾದರು ಜೀವನ ನಿರ್ವಹಣೆ ಮಾಡಲು ಮುಂದಾಗುತ್ತಾರೆ. ಆದ್ರೆ ಕಷ್ಟಪಟ್ಟು ದುಡಿದರು ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ.
ಆದ್ರೆ ಒಮ್ಮೆ ಸಾಲ ಮಾಡಿದರೆ ಅದನ್ನು ತೀರಿಸಲು ಪರದಾಡುತ್ತಾರೆ. ಕೆಲವರು ಸಾಲ ತೀರಿಸಲು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೆ ಗೊತ್ತು. ಮತ್ತೆ ಕೆಲವರು ಸಾಲು ತೀರಿಸಲು ಆಗದೆ ಸಾವಿನ ಕದ ತಟ್ಟುವುದನ್ನು ಸಹ ನೋಡಿದ್ದೇವೆ. ಆದ್ರೆ ಕೆಲವೊಮ್ಮೆ ನೀವು ಎಷ್ಟೇ ದುಡಿದರು ಈ ಸಾಲ ತೀರಿಸಲು ಆಗುವುದೇ ಇಲ್ಲ. ಸಾಲದ ಮೇಲೆ ಸಾಲ ಬೆಳೆಯುತ್ತಲೇ ಹೋಗುತ್ತದೆ. ಹಾಗಾದ್ರೆ ಈ ಸಾಲ ತೀರಿಸೋದು ಹೇಗೆ?

ಹೌದು ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೂರಿದೆ ಅಂದರೆ ಅದಕ್ಕೆ ಮನೆಯಲ್ಲೇ ಪರಿಹಾರವಿದೆ. ಹೌದು ವಾಸ್ತು ಪ್ರಕಾರವಾಗಿ ಈ ಹಣಕಾಸಿನ ಸಮಸ್ಯೆಗೆ ಪರಿಹಾರ ಮನೆಯಲ್ಲೇ ಇದೆ. ಹಾಗಾದ್ರೆ ಹಣಕಾಸಿನ ಸಮಸ್ಯೆಗೆ ಏನು ಮಾಡಬೇಕು? ವಾಸ್ತುವಿನಲ್ಲಿ ಹೇಳಲಾಗಿರುವ ಪರಿಹಾರವೇನು ಎಂಬುದನ್ನು ನಾವಿಂದು ಹೇಳುತ್ತೇವೆ.
ಏಲಕ್ಕಿ-ಲವಂಗ ಪರಿಹಾರ
ನೀವು ಅಡುಗೆಗೆ ಏಲಕ್ಕಿ ಲವಂಗ ಬಳಸಿರುತ್ತೀರಿ. ಆದರೆ ಮನೆಯಲ್ಲಿ ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಅಂದ್ರೆ ಅದು ಏಲಕ್ಕಿ ಹಾಗೂ ಲವಂಗ, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳು ಎಂದು ಈ ಎರಡನ್ನು ಪರಿಗಣಿಸಲಾಗಿದೆ. ಸಂಪತ್ತಿನ ಅಧಿದೇವತೆಯಾಗಿ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ಕುದಿಯಲು ಬಿಡಿ, ಎರಡು ಮೂರು ಗ್ಲಾಸ್ ನೀರು ಇದ್ದರೆ ಸಾಕು. ಬಳಿಕ ಈ ನೀರಿಗೆ ಒಂದು ಏಲಕ್ಕಿ ಒಂದು ಲವಂಗ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಈ ನೀರನ್ನು ನೀವು ಸ್ನಾನ ಮಾಡುವ ನೀರಿಗೆ ಸೇರಿಸಿ ಸ್ನಾನ ಮಾಡಿ. ಈ ರೀತಿ ಶುಕ್ರವಾರ ಮಾಡುವುದರಿಂದ ಫಲಿತಾಂಶ ಸಿಗಲಿದೆ.
ಎರಡು ಹಸಿ ಅವಲಕ್ಕಿಯನ್ನು ನಿಮ್ಮ ಹತ್ತಿರದಲ್ಲಿರುವ ಯಾವುದಾದರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಅರ್ಪಿಸಿ ಬಳಿಕ ತುಪ್ಪದ ದೀಪ ಹಚ್ಚಬೇಕಂತೆ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ಅವಿವಾಹಿತರಾಗಿದ್ದರೆ ಶೀಘ್ರ ವಿವಾಹ ಪ್ರಾಪ್ತಿ ಯೋಗ ಲಭಿಸಲಿದೆಯಂತೆ.
ಉಪ್ಪು
ನಾವು ಮನೆಯಲ್ಲಿ ಉಪ್ಪು ಹೇಗಂದರೆ ಹಾಗೆ ಎಲ್ಲೆಂದರಲ್ಲಿ ಇಡುತ್ತೇವೆ. ಉಪ್ಪು ಗುರು ಹಾಗೂ ಚಂದ್ರನ ಪ್ರತೀಕ ಎಂದು ಹೇಳಲಾಗಿದೆ. ಉಪ್ಪನ್ನ ಪ್ಲಾಸ್ಟಿಕ್ ಡಬ್ಬದಲ್ಲಿ, ಹಾಕಿ ಇಡಬಾರದು. ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಡಬೇಕು ಅದಕ್ಕ 4 ಲವಂಗ ಸಹ ಹಾಕಿಡಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಮನೆ ಎಂದಿಗೂ ಸಂತೃಪ್ತಿಯಾಗಿರುತ್ತದೆ. ಹಣದ ಅಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
ಇನ್ನು ಒಂದು ಗ್ಲಾಸ್ನಲ್ಲಿ ಉಪ್ಪು ಹಾಕಿ ಅದನ್ನು ಬಚ್ಚಲು ಮನೆಯಲ್ಲಿ ಇಡಬೇಕಂತೆ. ಏಕೆಂದರೆ ರಾಹು ಪ್ರಭಾವವನ್ನು ಸ್ನಾಗ ಗೃಹದಿಂದ ಮಟ್ಟ ಹಾಕಬಹುದಂತೆ. ಇನ್ನು ಬಾತ್ ರೂಮ್ನಲ್ಲಿ ಕೀಟಾಣುಗಳು ಬೆಳವಣಿಗೆ ಹೊಂದದಂತೆ ಉಪ್ಪು ಕಾಪಾಡಲಿದೆಯಂತೆ. ಇನ್ನು ತಿಂಗಳಿಗೊಮ್ಮೆ ಈ ಉಪ್ಪು ಬದಲಾಯಿಸಬೇಕಂತೆ.
ಮನೆಯನ್ನು ಒರೆಸುವ ವೇಳೆ ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಮನೆ ಒರೆಸಬೇಕಂತೆ. ಇದರಿಂದ ಸಾಲಗಳು ಕಡಿಮೆಯಾಗಲಿದೆಯಂತೆ. ಮನೆಯಲ್ಲಿ ಯಾವಾಗಲು ಉಪ್ಪು ಚೆಲ್ಲುವುದು, ಬೀಳಿಸುವುದು ಶುಭ ಸೂಚಕವಲ್ಲ, ಹೀಗಾಗಿ ಮನೆಯಲ್ಲಿ ಎಂದಿಗೂ ಚೆಲ್ಲಬಾರದು. ಅಲ್ಲದೆ ಉಪ್ಪನ್ನು ಮನೆಯಲ್ಲಿ ಒಣಗಲು ಬಿಡಬಾರದು, ಅಂದರೆ ನಿಮ್ಮ ಕೈಯಿಂದ ಉಪ್ಪನ್ನು ಹೊರಗೆ ಎಸೆಯಬಾರದಂತೆ.



Click it and Unblock the Notifications

