Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ಸಾಲದಿಂದ ಮುಕ್ತಿ ಪಡೆಯಬೇಕಾ? ಒಂದು ಲವಂಗ ಒಂದು ಏಲಕ್ಕಿಯಿಂದ ಪರಿಹಾರ!
ವ್ಯಕ್ತಿಯೊಬ್ಬರಿಗೆ ಹಣ ಎಷ್ಟು ಮುಖ್ಯ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಹಣ ಸಂಪಾದನೆ ಮಾಡಬೇಕು ಎಂಬುದೇ ಮಾನವ ಜನ್ಮದ ಉದ್ದೇಶವಾಗಿರುತ್ತದೆ. ಹಣವನ್ನ ಎಲ್ಲರೂ ಬಯಸುತ್ತಾರೆ. ಆದ್ರೆ ಕೆಲವರು ಸಾಲ ಮಾಡಿಯಾದರು ಜೀವನ ನಿರ್ವಹಣೆ ಮಾಡಲು ಮುಂದಾಗುತ್ತಾರೆ. ಆದ್ರೆ ಕಷ್ಟಪಟ್ಟು ದುಡಿದರು ಹಣ ಮಾತ್ರ ಕೈಯಲ್ಲಿ ನಿಲ್ಲುವುದಿಲ್ಲ.
ಆದ್ರೆ ಒಮ್ಮೆ ಸಾಲ ಮಾಡಿದರೆ ಅದನ್ನು ತೀರಿಸಲು ಪರದಾಡುತ್ತಾರೆ. ಕೆಲವರು ಸಾಲ ತೀರಿಸಲು ಎಷ್ಟೆಲ್ಲಾ ಕಸರತ್ತು ಮಾಡುತ್ತಾರೆ ಎಂಬುದು ನಿಮಗೆ ಗೊತ್ತು. ಮತ್ತೆ ಕೆಲವರು ಸಾಲು ತೀರಿಸಲು ಆಗದೆ ಸಾವಿನ ಕದ ತಟ್ಟುವುದನ್ನು ಸಹ ನೋಡಿದ್ದೇವೆ. ಆದ್ರೆ ಕೆಲವೊಮ್ಮೆ ನೀವು ಎಷ್ಟೇ ದುಡಿದರು ಈ ಸಾಲ ತೀರಿಸಲು ಆಗುವುದೇ ಇಲ್ಲ. ಸಾಲದ ಮೇಲೆ ಸಾಲ ಬೆಳೆಯುತ್ತಲೇ ಹೋಗುತ್ತದೆ. ಹಾಗಾದ್ರೆ ಈ ಸಾಲ ತೀರಿಸೋದು ಹೇಗೆ?

ಹೌದು ನಿಮಗೆ ಆರ್ಥಿಕ ಸಮಸ್ಯೆಗಳು ತಲೆದೂರಿದೆ ಅಂದರೆ ಅದಕ್ಕೆ ಮನೆಯಲ್ಲೇ ಪರಿಹಾರವಿದೆ. ಹೌದು ವಾಸ್ತು ಪ್ರಕಾರವಾಗಿ ಈ ಹಣಕಾಸಿನ ಸಮಸ್ಯೆಗೆ ಪರಿಹಾರ ಮನೆಯಲ್ಲೇ ಇದೆ. ಹಾಗಾದ್ರೆ ಹಣಕಾಸಿನ ಸಮಸ್ಯೆಗೆ ಏನು ಮಾಡಬೇಕು? ವಾಸ್ತುವಿನಲ್ಲಿ ಹೇಳಲಾಗಿರುವ ಪರಿಹಾರವೇನು ಎಂಬುದನ್ನು ನಾವಿಂದು ಹೇಳುತ್ತೇವೆ.
ಏಲಕ್ಕಿ-ಲವಂಗ ಪರಿಹಾರ
ನೀವು ಅಡುಗೆಗೆ ಏಲಕ್ಕಿ ಲವಂಗ ಬಳಸಿರುತ್ತೀರಿ. ಆದರೆ ಮನೆಯಲ್ಲಿ ನಿಮ್ಮ ಹಣಕಾಸು ಸಮಸ್ಯೆಗೆ ಪರಿಹಾರ ಅಂದ್ರೆ ಅದು ಏಲಕ್ಕಿ ಹಾಗೂ ಲವಂಗ, ಲಕ್ಷ್ಮಿ ದೇವಿಗೆ ಪ್ರಿಯವಾದ ವಸ್ತುಗಳು ಎಂದು ಈ ಎರಡನ್ನು ಪರಿಗಣಿಸಲಾಗಿದೆ. ಸಂಪತ್ತಿನ ಅಧಿದೇವತೆಯಾಗಿ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಒಲೆ ಮೇಲೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ಕುದಿಯಲು ಬಿಡಿ, ಎರಡು ಮೂರು ಗ್ಲಾಸ್ ನೀರು ಇದ್ದರೆ ಸಾಕು. ಬಳಿಕ ಈ ನೀರಿಗೆ ಒಂದು ಏಲಕ್ಕಿ ಒಂದು ಲವಂಗ ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಈ ನೀರನ್ನು ನೀವು ಸ್ನಾನ ಮಾಡುವ ನೀರಿಗೆ ಸೇರಿಸಿ ಸ್ನಾನ ಮಾಡಿ. ಈ ರೀತಿ ಶುಕ್ರವಾರ ಮಾಡುವುದರಿಂದ ಫಲಿತಾಂಶ ಸಿಗಲಿದೆ.
ಎರಡು ಹಸಿ ಅವಲಕ್ಕಿಯನ್ನು ನಿಮ್ಮ ಹತ್ತಿರದಲ್ಲಿರುವ ಯಾವುದಾದರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಅರ್ಪಿಸಿ ಬಳಿಕ ತುಪ್ಪದ ದೀಪ ಹಚ್ಚಬೇಕಂತೆ. ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ಅವಿವಾಹಿತರಾಗಿದ್ದರೆ ಶೀಘ್ರ ವಿವಾಹ ಪ್ರಾಪ್ತಿ ಯೋಗ ಲಭಿಸಲಿದೆಯಂತೆ.
ಉಪ್ಪು
ನಾವು ಮನೆಯಲ್ಲಿ ಉಪ್ಪು ಹೇಗಂದರೆ ಹಾಗೆ ಎಲ್ಲೆಂದರಲ್ಲಿ ಇಡುತ್ತೇವೆ. ಉಪ್ಪು ಗುರು ಹಾಗೂ ಚಂದ್ರನ ಪ್ರತೀಕ ಎಂದು ಹೇಳಲಾಗಿದೆ. ಉಪ್ಪನ್ನ ಪ್ಲಾಸ್ಟಿಕ್ ಡಬ್ಬದಲ್ಲಿ, ಹಾಕಿ ಇಡಬಾರದು. ಉಪ್ಪನ್ನು ಗಾಜಿನ ಡಬ್ಬದಲ್ಲಿ ಇಡಬೇಕು ಅದಕ್ಕ 4 ಲವಂಗ ಸಹ ಹಾಕಿಡಬೇಕು ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಮನೆ ಎಂದಿಗೂ ಸಂತೃಪ್ತಿಯಾಗಿರುತ್ತದೆ. ಹಣದ ಅಭಾವ ಉಂಟಾಗುವುದಿಲ್ಲ ಎಂದು ನಂಬಲಾಗಿದೆ.
ಇನ್ನು ಒಂದು ಗ್ಲಾಸ್ನಲ್ಲಿ ಉಪ್ಪು ಹಾಕಿ ಅದನ್ನು ಬಚ್ಚಲು ಮನೆಯಲ್ಲಿ ಇಡಬೇಕಂತೆ. ಏಕೆಂದರೆ ರಾಹು ಪ್ರಭಾವವನ್ನು ಸ್ನಾಗ ಗೃಹದಿಂದ ಮಟ್ಟ ಹಾಕಬಹುದಂತೆ. ಇನ್ನು ಬಾತ್ ರೂಮ್ನಲ್ಲಿ ಕೀಟಾಣುಗಳು ಬೆಳವಣಿಗೆ ಹೊಂದದಂತೆ ಉಪ್ಪು ಕಾಪಾಡಲಿದೆಯಂತೆ. ಇನ್ನು ತಿಂಗಳಿಗೊಮ್ಮೆ ಈ ಉಪ್ಪು ಬದಲಾಯಿಸಬೇಕಂತೆ.
ಮನೆಯನ್ನು ಒರೆಸುವ ವೇಳೆ ಆ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿ ಮನೆ ಒರೆಸಬೇಕಂತೆ. ಇದರಿಂದ ಸಾಲಗಳು ಕಡಿಮೆಯಾಗಲಿದೆಯಂತೆ. ಮನೆಯಲ್ಲಿ ಯಾವಾಗಲು ಉಪ್ಪು ಚೆಲ್ಲುವುದು, ಬೀಳಿಸುವುದು ಶುಭ ಸೂಚಕವಲ್ಲ, ಹೀಗಾಗಿ ಮನೆಯಲ್ಲಿ ಎಂದಿಗೂ ಚೆಲ್ಲಬಾರದು. ಅಲ್ಲದೆ ಉಪ್ಪನ್ನು ಮನೆಯಲ್ಲಿ ಒಣಗಲು ಬಿಡಬಾರದು, ಅಂದರೆ ನಿಮ್ಮ ಕೈಯಿಂದ ಉಪ್ಪನ್ನು ಹೊರಗೆ ಎಸೆಯಬಾರದಂತೆ.



Click it and Unblock the Notifications
