Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗಣೇಶನ ಪೂಜೆಗೆ ಏನೆಲ್ಲಾ ಬಳಸಬೇಕು? ಅದರ ಹಿಂದಿನ ಅರ್ಥವೇನು?
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಬರುವ ಪ್ರಮುಖ ಹಬ್ಬಗಳ ಪೈಕಿ ಗಣೇಶನ ಹಬ್ಬ ಕೂಡ ಒಂದಾಗಿದೆ. ಭಾರತದ ಎಲ್ಲಾ ಮೂಲೆಯಲ್ಲೂ ಗೌರಿ ಗಣೇಶನ ಹಬ್ಬ ಸಂಭ್ರಮದಿಂದ ಮಾಡುತ್ತಾರೆ. ಹಾಗೆ ಮನೆಯಲ್ಲೂ ಗೌರಿ ಪೂಜೆ ಹಾಗೂ ಗಣೇಶನ ಪೂಜೆ ಮಾಡುವುದು ನೋಡಬಹುದು. ಗಣೇಶನನ್ನು ವಿಘ್ನ ನಿವಾರಕ ಎಂಬುದಾಗಿ ಪೂಜಿಸಲಾಗುತ್ತದೆ. ಇನ್ನು ಗಣೇಶನಿಗೆ ಈ ದಿನ ಬಹಳ ವಿಶೇಷ ಪೂಜೆಗಳು ನೆರವೇರುವುದು ನೋಡಬಹುದು.
ಗೌರಿ ಹಬ್ಬವು ಆಗಸ್ಟ್ 26ರಂದು ನೆರವೇರಿದರೆ ಆಗಸ್ಟ್ 27ರಂದು ಗಣೇಶನ ಹಬ್ಬ ನೆರವೇರಲಿದೆ. ಗಣೇಶನ ಹಬ್ಬವು ಸಾರ್ವಜನಿಕ ಹಬ್ಬವೂ ಹೌದು. ಹಲವು ಕಡೆ ವಾರಗಳ ಕಾಲ, ತಿಂಗಳ ಕಾಲ ಈ ಹಬ್ಬ ವಿಜೃಂಭಣೆಯಿಂದ ನೆರವೇರಲಿದೆ. ಹಾಗೆ ಗಣೇಶನನ್ನು ಸಹ ಮನೆಯಲ್ಲು ಇಟ್ಟು ಪೂಜಿಸಲಾಗುತ್ತದೆ. ಕೆಲವರು ಒಂದು ದಿನ ಇಟ್ಟು ಪೂಜಿಸುತ್ತಾರೆ. ಮತ್ತೆ ಕೆಲವರು ಮೂರು ಅಥವಾ ಅದಕ್ಕಿಂಲತಲೂ ಹೆಚ್ಚು ದಿನಗಳ ಕಾಲವು ಇಡುವುದು ನೋಡಬಹುದು.

ಹಾಗೆ ಗಣೇಶ ಪೂಜೆಯನ್ನ ಹಲವು ರೀತಿಯಾಗಿ ಮಾಡುವುದು ಸಹ ನಾವು ನೋಡಿದ್ದೇವೆ, ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯನ್ನು ಯಾವ ರೀತಿ ಮಾಡಬೇಕು ಹಾಗೆ ಗಣೇಶನ ಪೂಜೆಯಲ್ಲಿ ಯಾವೆಲ್ಲಾ ವಸ್ತು ಬಳಸಬಹುದು. ಪೂಜೆ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗಣೇಶ ಪೂಜೆಗೆ ಯಾವೆಲ್ಲಾ ವಸ್ತು ಬಳಸಬೇಕು?
ಗರಿಕೆ
ಗಣೇಶನಿಗೆ ಪೂಜೆ ಮಾಡುವಾಗ ವಿಶೇವಾಗಿ ಗರಿಕೆ ಹುಲ್ಲನ್ನು ಬಳಸಲಾಗುತ್ತದೆ. ಏಕೆಂದರೆ ಅನಲಾಸುರ ಎಂಬ ರಾಕ್ಷಸನಿಂದ ಎಲ್ಲಾ ದೇವರು ಸಮಸ್ಯೆಗೆ ಸಿಲುಕಿದ್ದರು, ಈ ರಾಕ್ಷಸ ಬೆಂಕಿಯನ್ನೇ ಉಗುಳುತ್ತಿದ್ದ ಎಂದು ಹೇಳಲಾಗಿದೆ. ಈ ನಡುವೆ ಗಣೇಶ ಮತ್ತು ಅನಲಾಸುರನ ನಡುವೆ ಯುದ್ಧ ನಡೆದು ಗಣೇಶನ ಆತನನ್ನು ಇಡಿಯಾಗಿ ನುಂಗಿದ್ದ ಎನ್ನಲಾಗಿದೆ. ಆದರೆ ರಾಕ್ಷಸ ಗಣಪನ ಹೊಟ್ಟೆ ಸೇರುತ್ತಿದ್ದಂತೆ ಬೆಂಕಿ ಉಗುಳಲು ಆರಂಭಿಸಿದ. ಅನಂತರ ಗಣೇಶನಿಗೆ ಹೊಟ್ಟೆಯಲ್ಲಿ ಉರಿ ಆರಂಭಗೊಂಡಿತ್ತು. ಇದನ್ನು ಕಂಡ ಋಷಿ ಮುನಿಗಳು ಗರಿಕೆ ಹಲ್ಲಿನ ಕಟ್ಟನ್ನು ಗಣಪನಿಗೆ ಅರ್ಪಿಸಿದ್ದರು ಎನ್ನಲಾಗುತ್ತದೆ. ಈ ಹುಲ್ಲಿನಿಂದ ಹೊಟ್ಟೆ ತಣ್ಣಗಾಯಿತು ಎಂದು ಹೇಳಲಾಗುತ್ತದೆ.
ಎಕ್ಕದ ಹೂವು
ಬಿಳಿ ಎಕ್ಕದ ಹೂವನ್ನು ಅರ್ಪಿಸುವುದು ಗಣೇಶನಿಗೆ ಪ್ರಿಯ. ಈ ಎಕ್ಕದ ಹೂವಿನ ಹಾರ ಮಾಡಿ ಹಾಕುವುದು ನಿಮ್ಮೆಲ್ಲಾ ಅನಾರೋಗ್ಯ ಸಮಸ್ಯೆ ನಿವಾರಣೆಗೆ ಕಾರಣವಾಗುತ್ತದೆ. ಅದ್ರಲ್ಲು ಚರ್ಮ ಸಂಬಂಧಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ. ಹೀಗಾಗಿ ಎಕ್ಕದ ಗಿಡಗಳನ್ನು ಮನೆಯಲ್ಲಿ ನೆಡುವುದು ನೋಡಬಹುದು.
ಫಲಗಳು
ಗಣೇಶನ ಪೂಜೆಯಲ್ಲಿ ಹಣ್ಣುಗಳನ್ನು ಇಡುವುದು ಸಂಪ್ರದಾಯವಾಗಿದೆ. ಗಣೇಶನಿಗೆ ಬಾಳೆಹಣ್ಣುಗಳಿಂದಲೇ ಹಾರ ಮಾಡುವುದು ಪ್ರಸಾದ ಮಾಡುವುದು ನೋಡಬಹುದು.
ಮೋದಕ, ಕಡುಬು
ಗಣೇಶನಿಗೆ ಇಷ್ಟದ ಖಾದ್ಯದಲ್ಲಿ ಈ ಮೋದಕ ಹಾಗೆ ಕಡುಬು ಬಹಳ ಮುಖ್ಯ. ಮೊದಕ ಅರ್ಪಿಸಿ ಪೂಜಿಸಿದರೆ ಗಣಪ ನಿಮ್ಮ ಮನೆ ಕಾವಲು ಕಾಯುತ್ತಾನೆ ಎಂದು ನಂಬಲಾಗಿದೆ. ಹಾಗೆ ಪಂಚಕಜ್ಜಾಯ ಹಾಗೂ ಲಡ್ಡು ಕೂಡ ಬಹಳ ಇಷ್ಟದ ತಿಂಡಿ.
ಕೆಂಪು ಹೂವುಗಳು
ನೀವು ಗಣೇಶನ ಪೂಜೆಯಲ್ಲಿ ಗರಿಕೆಯ ಜೊತೆಗೆ ತುಳಸಿ ಬಳಸಿರುತ್ತೀರಿ. ಹಾಗೆ ಕೆಂಪು ಬಣ್ಣದ ಹೂವುಗಳು ಆತನಿಗೆ ಪ್ರಿಯ ಅದರಲ್ಲೂ ದಾಸವಾಳ, ಗುಲಾಬಿಗಳು ಬಹಳ ಶ್ರೇಷ್ಠ.
ಬೆಲ್ಲ. ಗೋವಿನ ತುಪ್ಪ
ಗಣೇಶನ ಪೂಜೆಯಲ್ಲಿ ಬೆಲ್ಲ ಹಾಗೂ ಗೋವಿನ ತುಪ್ಪ ಬಳಸಬೇಕು. ದೀಪಕ್ಕೆ ಕೂಡ ಇದನ್ನು ಬಳಸಬಹುದು. ನಿಮ್ಮಲ್ಲಿ ಸಂತೋಷ, ಅಪಮೃತ್ಯ ನಿವಾರಣೆಗೆ ತುಪ್ಪದ ದೀಪ ಹಚ್ಚಬೇಕು ಎಂದು ಹೇಳಲಾಗಿದೆ.



Click it and Unblock the Notifications











