Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ದರಿದ್ರವಂತೆ
ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ ಏಕೆಂದರೆ ಇಂಥ ವಸ್ತುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯ ಹರಿವು ಉಂಟಾಗುತ್ತದೆ, ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು. ಹಾಗಾಗಿ ವಾಸ್ತು ಪ್ರಕಾರ ಮನೆಯಲ್ಲಿ ಕಷ್ಟ ಉಂಟಾಗದಿರಲು ಈ ವಾಸ್ತು ಸಲಹೆ ಪಾಲಿಸಿದರೆ ಒಳ್ಳೆಯದು.
ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುವುದು. ಹಾಗಾಗಿ ಮನೆಯನ್ನು ಐಶ್ವರ್ಯವಾಗಿ ಇಟ್ಟುಕೊಳ್ಳಬೇಕು, ಹಾಗಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಲೇಬಾರದು. ವಾಸ್ತು ಶಾಸ್ತ್ರದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ಹಾಗಾಗಿ ಈ ವಸ್ತುಗಳನ್ನು ಮನೆಯಲ್ಲಿದ್ದರೆ ಅವುಗಳನ್ನು ಬಿಸಾಡಿ:

ತುಕ್ಕು ಹಿಡಿದ ಕಬ್ಬಿಣ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಡಲೇಬೇಡಿ. ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಟ್ಟರೆ ಮನೆಗೆ ಶ್ರೇಯಸ್ಸು ಅಲ್ಲ, ತುಕ್ಕು ಹಿಡಿದ ಇಡಿದ ಕಬ್ಬಿಣ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇಂಥ ವಸ್ತುಗಳು ಮನೆಯಲ್ಲಿ ಇದ್ದರೆ ಮನೆಯಲ್ಲಿ ನೆಮ್ಮದಿ ಇರಲ್ಲ, ಆರ್ಥಿಕ ತೊಂದರೆಗಳು ಉಂಟಾಗುವುದು, ಹಣ ನಷ್ಟ ಉಂಟಾಗುವುದು.
ವೈಜ್ಞಾನಿಕ ದೃಷ್ಟಿಯಿಂದಲೂ ನೋಡುವುದಾದರೆ ಇಂಥ ವಸ್ತಗಳು ಮನೆಯಲ್ಲಿ ಇರಬಾರದು. ಏಕೆಂದರೆ ತುಕ್ಕು ಹಿಡಿದ ವಸ್ತುಗಳು ನಮ್ಮ ಕೈ ಕಾಲಿಗೆ ತಾಗಿದರೆ ಅದರಿಂದ ಆದ ಗಾಯ ಕೂಡ ಬೇಗ ಒಣಗುವುದಿಲ್ಲ, ಅದರಲ್ಲಿಯೂ ಮಧುಮೇಹಿಗಳಿಗೆ ತಾಗಿದರೆ ತುಂಬಾನೇ ಕಷ್ಟ.
ಖಾಲಿ ಪರ್ಸ್
ವಾಸ್ತು ಶಾಸ್ತ್ರದ ಪ್ರಕಾರ ಖಾಲಿ ಪರ್ಸ್ ಅಶುಭವೆಂದು ಪರಿಗಣಿಸಲಾಗಿದೆ. ಪರ್ಸ್ನಲ್ಲಿ ಹಣವಿರಬೇಕು, ಖಾಲಿ ಪರ್ಸ್ ಇದ್ದರೆ ಅದು ದರಿದ್ರ ಎಂದು ಹೇಳಲಾಗುವುದು . ಖಾಲಿ ಪರ್ಸ್ ಇದ್ದರೆ ಲಕ್ಷ್ಮಿ ಅವರಲ್ಲಿ ನೆಲೆಸಲ್ಲ ಎಂದು ಹೇಳಲಾಗುವುದು. ಹೊಸ ಪರ್ಸ್ ಖರೀದಿಸಿದಾಗ ಕೂಡ ಆ ಪರ್ಸ್ ಹಾಗೆಯೇ ಇಡಬೇಡಿ, ಸ್ವಲ್ಪ ಹಣ ನೀವು ಪರ್ಸ್ನಲ್ಲಿ ಇಡಲೇಬೇಕು. ನಾವು ಹೊಸ ಪರ್ಸ್ ಗಿಫ್ಟ್ ನೀಡುವಾಗಲೂ ಅದರಲ್ಲಿ ಹಣ ಹಾಕಿ ನೀಡುವುದು ಒಳ್ಳೆಯದು.
ಬಳಸದೆ ಇರುವ ಶೂಗಳು
ಹಳೆಯದ ಅಥವಾ ಬಳಸದೆ ಇರುವ ಶೂಗಳು ಮನೆಯಲ್ಲಿದ್ದರೆ ಅದನ್ನು ಬಿಸಾಡಿ. ಇಂಥ ಶೂಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ, ಬಳಕೆಯಾಗದ ಬೂಟುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಸವಾಲು ಎದುರಾಗುವುದು.
ದೇವರ ಕೋಣೆಯಲ್ಲಿ ಒಡೆದ ಫೋಟೋಗಳಿದ್ದರೆ
ದೇವರ ಕೋಣೆಯಲ್ಲಿ ಒಡೆದ ಫೋಟೋಗಳು ಮನೆಯಲ್ಲಿ ಇದ್ದರೆ ಅದನ್ನು ಹೊರಗಡೆ ಹಾಕಬೇಕು, ಇಂಥ ಫೋಟೋಗಳನ್ನು ಮನೆಯಲ್ಲಿ ಇಡುವುದು ಮನೆಗೆ ಶ್ರೇಯಸ್ಸು ಅಲ್ಲ.
ಮುರಿದ ವಸ್ತುಗಳು
ಮುರಿದ ಚೇರ್ಗಳು, ಇತರ ಬಳಕೆಯ ವಸ್ತುಗಳು, ಒಡೆದ ಪಾತ್ರೆಗಳು ಇವುಗಳನ್ನು ಮನೆಯಲ್ಲಿ ಇಡಬಾರದು, ಇಂಥ ವಸ್ತುಗಳು ಮನೆಯಲ್ಲಿದ್ದರೆ ಅವುಗಳನ್ನು ಹೊರಹಾಕಿ.
ಚಲಿಸದೆ ಇರುವ ಗಡಿಯಾರದ ಮುಳ್ಳುಗಳು
ಮನೆಯಲ್ಲಿ ಚಲಿಸದೆ ಇರುವ ಗಡಿಯಾರದ ಮುಳ್ಳು ಇದ್ದರೆ ಅದನ್ನು ಮನೆಯಲ್ಲಿ ಇಡಬೇಡಿ, ಬ್ಯಾಟರಿ ಹಾಕಿದರೆ ಸರಿಯಾಗುವುದಾದರೆ ಬ್ಯಾಟರಿ ಹಾಕಿ, ಇಲ್ಲದಿದ್ದರೆ ಅದನ್ನು ಬಿಸಾಡಿ.
ಈ ವಾಸ್ತು ಸಲಹೆ ಪಾಲಿಸುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಇದರಿಂದ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಮನೆಯಲ್ಲಿ ನೆಮ್ಮದಿ ಇರಲಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.



Click it and Unblock the Notifications