Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳಿದ್ದರೆ ದರಿದ್ರವಂತೆ
ವಾಸ್ತು ಶಾಸ್ತ್ರವು ನಮ್ಮ ಜೀವನ ಸಂತೋಷವಾಗಿಡಲು, ಮನೆಯಲ್ಲಿ ಸಮೃದ್ಧಿ ಹೆಚ್ಚಿಸಲು ವಾಸ್ತು ಶಾಸ್ತ್ರವೂ ಸಲಹೆ ನೀಡುತ್ತದೆ. ಈ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗಿದೆ ಏಕೆಂದರೆ ಇಂಥ ವಸ್ತುಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯ ಹರಿವು ಉಂಟಾಗುತ್ತದೆ, ಇದು ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು. ಹಾಗಾಗಿ ವಾಸ್ತು ಪ್ರಕಾರ ಮನೆಯಲ್ಲಿ ಕಷ್ಟ ಉಂಟಾಗದಿರಲು ಈ ವಾಸ್ತು ಸಲಹೆ ಪಾಲಿಸಿದರೆ ಒಳ್ಳೆಯದು.
ನಾವು ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುವುದರ ಮೇಲೆ ಲಕ್ಷ್ಮಿ ಒಲಿಯುತ್ತಾಳೆ ಎಂದು ಹೇಳಲಾಗುವುದು. ಹಾಗಾಗಿ ಮನೆಯನ್ನು ಐಶ್ವರ್ಯವಾಗಿ ಇಟ್ಟುಕೊಳ್ಳಬೇಕು, ಹಾಗಾಗಿ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಡಲೇಬಾರದು. ವಾಸ್ತು ಶಾಸ್ತ್ರದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ಹಾಗಾಗಿ ಈ ವಸ್ತುಗಳನ್ನು ಮನೆಯಲ್ಲಿದ್ದರೆ ಅವುಗಳನ್ನು ಬಿಸಾಡಿ:

ತುಕ್ಕು ಹಿಡಿದ ಕಬ್ಬಿಣ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಡಲೇಬೇಡಿ. ತುಕ್ಕು ಹಿಡಿದ ಕಬ್ಬಿಣವನ್ನು ಮನೆಯಲ್ಲಿ ಇಟ್ಟರೆ ಮನೆಗೆ ಶ್ರೇಯಸ್ಸು ಅಲ್ಲ, ತುಕ್ಕು ಹಿಡಿದ ಇಡಿದ ಕಬ್ಬಿಣ ನಕರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇಂಥ ವಸ್ತುಗಳು ಮನೆಯಲ್ಲಿ ಇದ್ದರೆ ಮನೆಯಲ್ಲಿ ನೆಮ್ಮದಿ ಇರಲ್ಲ, ಆರ್ಥಿಕ ತೊಂದರೆಗಳು ಉಂಟಾಗುವುದು, ಹಣ ನಷ್ಟ ಉಂಟಾಗುವುದು.
ವೈಜ್ಞಾನಿಕ ದೃಷ್ಟಿಯಿಂದಲೂ ನೋಡುವುದಾದರೆ ಇಂಥ ವಸ್ತಗಳು ಮನೆಯಲ್ಲಿ ಇರಬಾರದು. ಏಕೆಂದರೆ ತುಕ್ಕು ಹಿಡಿದ ವಸ್ತುಗಳು ನಮ್ಮ ಕೈ ಕಾಲಿಗೆ ತಾಗಿದರೆ ಅದರಿಂದ ಆದ ಗಾಯ ಕೂಡ ಬೇಗ ಒಣಗುವುದಿಲ್ಲ, ಅದರಲ್ಲಿಯೂ ಮಧುಮೇಹಿಗಳಿಗೆ ತಾಗಿದರೆ ತುಂಬಾನೇ ಕಷ್ಟ.
ಖಾಲಿ ಪರ್ಸ್
ವಾಸ್ತು ಶಾಸ್ತ್ರದ ಪ್ರಕಾರ ಖಾಲಿ ಪರ್ಸ್ ಅಶುಭವೆಂದು ಪರಿಗಣಿಸಲಾಗಿದೆ. ಪರ್ಸ್ನಲ್ಲಿ ಹಣವಿರಬೇಕು, ಖಾಲಿ ಪರ್ಸ್ ಇದ್ದರೆ ಅದು ದರಿದ್ರ ಎಂದು ಹೇಳಲಾಗುವುದು . ಖಾಲಿ ಪರ್ಸ್ ಇದ್ದರೆ ಲಕ್ಷ್ಮಿ ಅವರಲ್ಲಿ ನೆಲೆಸಲ್ಲ ಎಂದು ಹೇಳಲಾಗುವುದು. ಹೊಸ ಪರ್ಸ್ ಖರೀದಿಸಿದಾಗ ಕೂಡ ಆ ಪರ್ಸ್ ಹಾಗೆಯೇ ಇಡಬೇಡಿ, ಸ್ವಲ್ಪ ಹಣ ನೀವು ಪರ್ಸ್ನಲ್ಲಿ ಇಡಲೇಬೇಕು. ನಾವು ಹೊಸ ಪರ್ಸ್ ಗಿಫ್ಟ್ ನೀಡುವಾಗಲೂ ಅದರಲ್ಲಿ ಹಣ ಹಾಕಿ ನೀಡುವುದು ಒಳ್ಳೆಯದು.
ಬಳಸದೆ ಇರುವ ಶೂಗಳು
ಹಳೆಯದ ಅಥವಾ ಬಳಸದೆ ಇರುವ ಶೂಗಳು ಮನೆಯಲ್ಲಿದ್ದರೆ ಅದನ್ನು ಬಿಸಾಡಿ. ಇಂಥ ಶೂಗಳು ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ, ಬಳಕೆಯಾಗದ ಬೂಟುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಬದುಕಿನಲ್ಲಿ ಒಂದರ ಹಿಂದೆ ಮತ್ತೊಂದು ಸವಾಲು ಎದುರಾಗುವುದು.
ದೇವರ ಕೋಣೆಯಲ್ಲಿ ಒಡೆದ ಫೋಟೋಗಳಿದ್ದರೆ
ದೇವರ ಕೋಣೆಯಲ್ಲಿ ಒಡೆದ ಫೋಟೋಗಳು ಮನೆಯಲ್ಲಿ ಇದ್ದರೆ ಅದನ್ನು ಹೊರಗಡೆ ಹಾಕಬೇಕು, ಇಂಥ ಫೋಟೋಗಳನ್ನು ಮನೆಯಲ್ಲಿ ಇಡುವುದು ಮನೆಗೆ ಶ್ರೇಯಸ್ಸು ಅಲ್ಲ.
ಮುರಿದ ವಸ್ತುಗಳು
ಮುರಿದ ಚೇರ್ಗಳು, ಇತರ ಬಳಕೆಯ ವಸ್ತುಗಳು, ಒಡೆದ ಪಾತ್ರೆಗಳು ಇವುಗಳನ್ನು ಮನೆಯಲ್ಲಿ ಇಡಬಾರದು, ಇಂಥ ವಸ್ತುಗಳು ಮನೆಯಲ್ಲಿದ್ದರೆ ಅವುಗಳನ್ನು ಹೊರಹಾಕಿ.
ಚಲಿಸದೆ ಇರುವ ಗಡಿಯಾರದ ಮುಳ್ಳುಗಳು
ಮನೆಯಲ್ಲಿ ಚಲಿಸದೆ ಇರುವ ಗಡಿಯಾರದ ಮುಳ್ಳು ಇದ್ದರೆ ಅದನ್ನು ಮನೆಯಲ್ಲಿ ಇಡಬೇಡಿ, ಬ್ಯಾಟರಿ ಹಾಕಿದರೆ ಸರಿಯಾಗುವುದಾದರೆ ಬ್ಯಾಟರಿ ಹಾಕಿ, ಇಲ್ಲದಿದ್ದರೆ ಅದನ್ನು ಬಿಸಾಡಿ.
ಈ ವಾಸ್ತು ಸಲಹೆ ಪಾಲಿಸುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗುವುದು, ಇದರಿಂದ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಮನೆಯಲ್ಲಿ ನೆಮ್ಮದಿ ಇರಲಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.



Click it and Unblock the Notifications
