Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವಾಸ್ತು ಟಿಪ್ಸ್: ಈ 7 ಅಂಶ ಗಮನಿಸಿದರೆ ಆ ಮನೆಯಲ್ಲಿ ನೆಮ್ಮದಿ ಇರಲಿದೆ
ಏನೇ ಇರಲಿ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ ಅಲ್ವಾ? ಗುಡಿಸಲೇ ಆಗಿರಲಿ, ಅರಮನೆಯೇ ಆಗಿರಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಖುಷಿಯಾಗಿರಲು ಕಾರಣ. ಈ ಮಾನಸಿಕ ನೆಮ್ಮದಿ ಸಿಗುವುದಾದರು ಹೇಗೆ ಎಂದು ನೀವು ಮನಶಾಸ್ತ್ರಜ್ಞರ ಬಳಿ ಕೇಳಿದರೆ ಅವರು ನಿಮಗೆ ಕೆಲವೊಂದು ಸಲಹೆ ಸೂಚನೆ ನೀಡಬಹುದು, ವಾಸ್ತುಶಾಸ್ತ್ರ ಕೂಡ ಮನೆಯಲ್ಲಿ ಮಾನಸಿಕ ನೆಮ್ಮದಿಗೆ ಏನು ಮಾಡಬೇಕು ಎಂದು ಹೇಳಿದೆ ನೋಡಿ:

1. ಮನೆಯನ್ನು ಸ್ವಚ್ಛವಾಗಿಡಿ: ಹೌದು ವಸ್ತುಗಳನ್ನು ಚೆಲ್ಲಾಪಿಲ್ಲಿ ಹರಡಿದರೆ ಅಲ್ಲಿ ಕೂತರೆ ನಿಮ್ಮ ಮನಸ್ಸು ಕೂಡ ವಿಚಲಿತವಾಗುವುದು, ಮನೆಯೆಂದರೆ ಒಪ್ಪವಾಗಿರಬೇಕು, ಆವಾಗ ಕಣ್ಣಿಗೆ ಅಕರ್ಷಕವಾಗಿ ಕಾಣುವುದು, ಮನಸ್ಸಿಗೆ ಖುಷಿ ಸಿಗುವುದು. ಆದ್ದರಿಮದ ಮನೆಯನ್ನು ಸ್ವಚ್ಛವಾಗಿಡಬೇಕು ಎಮದು ಹೇಳಲಾಗುವುದು, ನಾವು ಮಲಗುವ ಕೋಣೆ, ಅದರ ಗೋಡೆಯ ಬಣ್ಣ ಎಲ್ಲವೂ ಮನಸ್ಸಿಗೆ ಖುಷಿ ನೀಡುವಂತೆ ಇರಬೇಕು.
2. ಮನೆ ಶುದ್ಧಿ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ: ಮನೆ ಶುದ್ಧ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ ಒರೆಸಿದರೆ ಮನೆಗೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಉಪ್ಪು ಮನೆಯೊಳಗಿನ ನಕರಾತ್ಮಕ ಶಕ್ತಿ ಹೊರಹಾಕುತ್ತದೆ ಎಂಬ ನಂಬಿಕೆ. ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಕಲ್ಲುಪ್ಪು ಇಡುವುದು ಒಳ್ಳೆಯದು.
3. ಮನೆಯ ಯಜಮಾನ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು
ಮನೆಯ ಯಜಮಾನ ನೈಋತ್ಯ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂದು ಹೇಳಲಾಗುವುದು, ಇದರಿಂದ ಒಳ್ಳೆಯ ನಿದ್ದೆ ಸಿಗುವುದು, ಮನೆಗೆ ಒಳಿತಾಗುವುದು ಎಂದು ಹೇಳಲಾಗುವುದು.
4. ದುಃಖ ತರುವ ವಸ್ತುಗಳು, ಫೋಟೊಗಳನ್ನು ಇಡಬೇಡಿ
ಕೆಲವೊಂದು ವಸ್ತುಗಳು ಅಥವಾ ಫೋಟೋಗಳು ನಿಮಗೆ ನೋವು ನೀಡುತ್ತಿದ್ದರೆ ಬಚ್ಚಿಡಿ, ಇಲ್ಲದಿದ್ದರೆ ಅದನ್ನು ನೋಡುವಾಗ ನಿಮ್ಮ ಮನಸ್ಸಿನಲ್ಲಿ ದುಃಖ ಆವರಿಸುವುದು, ಖುಷಿಯಾಗಿರಲು ಸಾಧ್ಯವಾಗಲ್ಲ. ಹಾಗಾಗಿ ನಿಮಗೆ ದುಃಖ ತರುವ, ಕಹಿ ನೆನಪು ತರುವ ಯಾವ ವಸ್ತುಗಳನ್ನು ಕಣ್ಣಿಗೆ ಬೀಳುವಂತೆ ಇಡಬೆಡಿ.
5. ಮನೆಯಲ್ಲಿ ಬೆಳಗ್ಗೆ ಸಂಜೆ ಮಂತ್ರ ಮೊಳಗಬೇಕು
ಹೌದು ಘಂಟೆ ಶಬ್ದ, ಮಂತ್ರಗಳು ಇವೆಲ್ಲಾ ನಮ್ಮಲ್ಲಿನ ಮಾನಸಿಕ ಒತ್ತಡ ಹೊರಹಾಕಿ ನಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
6. ಕರ್ಪೂರ ಹಚ್ಚಬೇಕು, ಕರ್ಪೂರ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಹಾಗಾಗಿ ಪ್ರತಿದಿನ ದಿನ ಸಂಜೆ ದೇವರಿಗೆ ದಿಪ ಹಚ್ಚುವಾಗ ಕರ್ಪೂರ ಹಚ್ಚುವುದು ಒಳ್ಳೆಯದು. ಎರಡು ಕರ್ಪೂರ ಹಚ್ಚಿ, ಇದರಿಂದ ಮನೆಗೆ ಒಳಿತಾಗುವುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
7. ಮನೆಯಲ್ಲಿ ಫ್ಯಾಮಿಲಿ ಪೋಟೊ ಯಾವ ದಿಕ್ಕಿನಲ್ಲಿಡಬೇಕು?
ಮನೆಯಲ್ಲಿ ಫ್ಯಾಮಿಲಿ ಫೋಟೋ ನೈರುತ್ಯ ದಿಕ್ಕಿನಲ್ಲಿಡಬೇಕು. ದಂಪತಿ ಫೋಟೋ ಪೂರ್ವ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುವುದು. ಹೀಗೆ ಫೋಟೋ ಇಡುವುದರಿಂದ ಆ ಮನೆಯಲ್ಲಿ ಸಂತೋಷವಿರುತ್ತದೆ, ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಇರಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸತ್ತವರ ಫೋಟೋವನ್ನು ಈ ದಿಕ್ಕಿನಲ್ಲಿ ಇಡಲೇಬಾರದು.
ನೆಮ್ಮದಿ ಎಂಬುವುದು ಮನುಷ್ಯನಿಗೆ ತುಂಬಾನೇ ಮುಖ್ಯ, ನಮ್ಮ ಮನಸ್ಸಿಗೆ ಖುಷಿ ನೀಡುವ ಅಭ್ಯಾಸ ಕೂಡ ಒಳ್ಳೆಯದು. ಕೆಲವೊಂದು ಹವ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಉದಾಹರಣೆಗೆ ಹಾಡುವುದು, ಅಡುಗೆ ಮಾಡುವುದು, ಬರೆಯುವುದು ಹೀಗೆ ನಿಮಗೆ ಇಷ್ಟವಾಗುವ ಕಾರ್ಯ ಮಾಡಿ. ಮನೆಯ ಸದಸ್ಯರು ಮನೆಯಲ್ಲಿ ನಗು ನಗುತ್ತಾ ಇರಬೇಕು, ಆಗ ಮಾತ್ರ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ.



Click it and Unblock the Notifications
