Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಾಸ್ತು ಟಿಪ್ಸ್: ಈ 7 ಅಂಶ ಗಮನಿಸಿದರೆ ಆ ಮನೆಯಲ್ಲಿ ನೆಮ್ಮದಿ ಇರಲಿದೆ
ಏನೇ ಇರಲಿ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ ಅಲ್ವಾ? ಗುಡಿಸಲೇ ಆಗಿರಲಿ, ಅರಮನೆಯೇ ಆಗಿರಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಖುಷಿಯಾಗಿರಲು ಕಾರಣ. ಈ ಮಾನಸಿಕ ನೆಮ್ಮದಿ ಸಿಗುವುದಾದರು ಹೇಗೆ ಎಂದು ನೀವು ಮನಶಾಸ್ತ್ರಜ್ಞರ ಬಳಿ ಕೇಳಿದರೆ ಅವರು ನಿಮಗೆ ಕೆಲವೊಂದು ಸಲಹೆ ಸೂಚನೆ ನೀಡಬಹುದು, ವಾಸ್ತುಶಾಸ್ತ್ರ ಕೂಡ ಮನೆಯಲ್ಲಿ ಮಾನಸಿಕ ನೆಮ್ಮದಿಗೆ ಏನು ಮಾಡಬೇಕು ಎಂದು ಹೇಳಿದೆ ನೋಡಿ:

1. ಮನೆಯನ್ನು ಸ್ವಚ್ಛವಾಗಿಡಿ: ಹೌದು ವಸ್ತುಗಳನ್ನು ಚೆಲ್ಲಾಪಿಲ್ಲಿ ಹರಡಿದರೆ ಅಲ್ಲಿ ಕೂತರೆ ನಿಮ್ಮ ಮನಸ್ಸು ಕೂಡ ವಿಚಲಿತವಾಗುವುದು, ಮನೆಯೆಂದರೆ ಒಪ್ಪವಾಗಿರಬೇಕು, ಆವಾಗ ಕಣ್ಣಿಗೆ ಅಕರ್ಷಕವಾಗಿ ಕಾಣುವುದು, ಮನಸ್ಸಿಗೆ ಖುಷಿ ಸಿಗುವುದು. ಆದ್ದರಿಮದ ಮನೆಯನ್ನು ಸ್ವಚ್ಛವಾಗಿಡಬೇಕು ಎಮದು ಹೇಳಲಾಗುವುದು, ನಾವು ಮಲಗುವ ಕೋಣೆ, ಅದರ ಗೋಡೆಯ ಬಣ್ಣ ಎಲ್ಲವೂ ಮನಸ್ಸಿಗೆ ಖುಷಿ ನೀಡುವಂತೆ ಇರಬೇಕು.
2. ಮನೆ ಶುದ್ಧಿ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ: ಮನೆ ಶುದ್ಧ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ ಒರೆಸಿದರೆ ಮನೆಗೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಉಪ್ಪು ಮನೆಯೊಳಗಿನ ನಕರಾತ್ಮಕ ಶಕ್ತಿ ಹೊರಹಾಕುತ್ತದೆ ಎಂಬ ನಂಬಿಕೆ. ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಕಲ್ಲುಪ್ಪು ಇಡುವುದು ಒಳ್ಳೆಯದು.
3. ಮನೆಯ ಯಜಮಾನ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು
ಮನೆಯ ಯಜಮಾನ ನೈಋತ್ಯ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂದು ಹೇಳಲಾಗುವುದು, ಇದರಿಂದ ಒಳ್ಳೆಯ ನಿದ್ದೆ ಸಿಗುವುದು, ಮನೆಗೆ ಒಳಿತಾಗುವುದು ಎಂದು ಹೇಳಲಾಗುವುದು.
4. ದುಃಖ ತರುವ ವಸ್ತುಗಳು, ಫೋಟೊಗಳನ್ನು ಇಡಬೇಡಿ
ಕೆಲವೊಂದು ವಸ್ತುಗಳು ಅಥವಾ ಫೋಟೋಗಳು ನಿಮಗೆ ನೋವು ನೀಡುತ್ತಿದ್ದರೆ ಬಚ್ಚಿಡಿ, ಇಲ್ಲದಿದ್ದರೆ ಅದನ್ನು ನೋಡುವಾಗ ನಿಮ್ಮ ಮನಸ್ಸಿನಲ್ಲಿ ದುಃಖ ಆವರಿಸುವುದು, ಖುಷಿಯಾಗಿರಲು ಸಾಧ್ಯವಾಗಲ್ಲ. ಹಾಗಾಗಿ ನಿಮಗೆ ದುಃಖ ತರುವ, ಕಹಿ ನೆನಪು ತರುವ ಯಾವ ವಸ್ತುಗಳನ್ನು ಕಣ್ಣಿಗೆ ಬೀಳುವಂತೆ ಇಡಬೆಡಿ.
5. ಮನೆಯಲ್ಲಿ ಬೆಳಗ್ಗೆ ಸಂಜೆ ಮಂತ್ರ ಮೊಳಗಬೇಕು
ಹೌದು ಘಂಟೆ ಶಬ್ದ, ಮಂತ್ರಗಳು ಇವೆಲ್ಲಾ ನಮ್ಮಲ್ಲಿನ ಮಾನಸಿಕ ಒತ್ತಡ ಹೊರಹಾಕಿ ನಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
6. ಕರ್ಪೂರ ಹಚ್ಚಬೇಕು, ಕರ್ಪೂರ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಹಾಗಾಗಿ ಪ್ರತಿದಿನ ದಿನ ಸಂಜೆ ದೇವರಿಗೆ ದಿಪ ಹಚ್ಚುವಾಗ ಕರ್ಪೂರ ಹಚ್ಚುವುದು ಒಳ್ಳೆಯದು. ಎರಡು ಕರ್ಪೂರ ಹಚ್ಚಿ, ಇದರಿಂದ ಮನೆಗೆ ಒಳಿತಾಗುವುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
7. ಮನೆಯಲ್ಲಿ ಫ್ಯಾಮಿಲಿ ಪೋಟೊ ಯಾವ ದಿಕ್ಕಿನಲ್ಲಿಡಬೇಕು?
ಮನೆಯಲ್ಲಿ ಫ್ಯಾಮಿಲಿ ಫೋಟೋ ನೈರುತ್ಯ ದಿಕ್ಕಿನಲ್ಲಿಡಬೇಕು. ದಂಪತಿ ಫೋಟೋ ಪೂರ್ವ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುವುದು. ಹೀಗೆ ಫೋಟೋ ಇಡುವುದರಿಂದ ಆ ಮನೆಯಲ್ಲಿ ಸಂತೋಷವಿರುತ್ತದೆ, ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಇರಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸತ್ತವರ ಫೋಟೋವನ್ನು ಈ ದಿಕ್ಕಿನಲ್ಲಿ ಇಡಲೇಬಾರದು.
ನೆಮ್ಮದಿ ಎಂಬುವುದು ಮನುಷ್ಯನಿಗೆ ತುಂಬಾನೇ ಮುಖ್ಯ, ನಮ್ಮ ಮನಸ್ಸಿಗೆ ಖುಷಿ ನೀಡುವ ಅಭ್ಯಾಸ ಕೂಡ ಒಳ್ಳೆಯದು. ಕೆಲವೊಂದು ಹವ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಉದಾಹರಣೆಗೆ ಹಾಡುವುದು, ಅಡುಗೆ ಮಾಡುವುದು, ಬರೆಯುವುದು ಹೀಗೆ ನಿಮಗೆ ಇಷ್ಟವಾಗುವ ಕಾರ್ಯ ಮಾಡಿ. ಮನೆಯ ಸದಸ್ಯರು ಮನೆಯಲ್ಲಿ ನಗು ನಗುತ್ತಾ ಇರಬೇಕು, ಆಗ ಮಾತ್ರ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ.



Click it and Unblock the Notifications