Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ವಾಸ್ತು ಟಿಪ್ಸ್: ಈ 7 ಅಂಶ ಗಮನಿಸಿದರೆ ಆ ಮನೆಯಲ್ಲಿ ನೆಮ್ಮದಿ ಇರಲಿದೆ
ಏನೇ ಇರಲಿ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ ಅಲ್ವಾ? ಗುಡಿಸಲೇ ಆಗಿರಲಿ, ಅರಮನೆಯೇ ಆಗಿರಲಿ ಮಾನಸಿಕ ನೆಮ್ಮದಿ ಇದ್ದರೆ ಮಾತ್ರ ಖುಷಿಯಾಗಿರಲು ಕಾರಣ. ಈ ಮಾನಸಿಕ ನೆಮ್ಮದಿ ಸಿಗುವುದಾದರು ಹೇಗೆ ಎಂದು ನೀವು ಮನಶಾಸ್ತ್ರಜ್ಞರ ಬಳಿ ಕೇಳಿದರೆ ಅವರು ನಿಮಗೆ ಕೆಲವೊಂದು ಸಲಹೆ ಸೂಚನೆ ನೀಡಬಹುದು, ವಾಸ್ತುಶಾಸ್ತ್ರ ಕೂಡ ಮನೆಯಲ್ಲಿ ಮಾನಸಿಕ ನೆಮ್ಮದಿಗೆ ಏನು ಮಾಡಬೇಕು ಎಂದು ಹೇಳಿದೆ ನೋಡಿ:

1. ಮನೆಯನ್ನು ಸ್ವಚ್ಛವಾಗಿಡಿ: ಹೌದು ವಸ್ತುಗಳನ್ನು ಚೆಲ್ಲಾಪಿಲ್ಲಿ ಹರಡಿದರೆ ಅಲ್ಲಿ ಕೂತರೆ ನಿಮ್ಮ ಮನಸ್ಸು ಕೂಡ ವಿಚಲಿತವಾಗುವುದು, ಮನೆಯೆಂದರೆ ಒಪ್ಪವಾಗಿರಬೇಕು, ಆವಾಗ ಕಣ್ಣಿಗೆ ಅಕರ್ಷಕವಾಗಿ ಕಾಣುವುದು, ಮನಸ್ಸಿಗೆ ಖುಷಿ ಸಿಗುವುದು. ಆದ್ದರಿಮದ ಮನೆಯನ್ನು ಸ್ವಚ್ಛವಾಗಿಡಬೇಕು ಎಮದು ಹೇಳಲಾಗುವುದು, ನಾವು ಮಲಗುವ ಕೋಣೆ, ಅದರ ಗೋಡೆಯ ಬಣ್ಣ ಎಲ್ಲವೂ ಮನಸ್ಸಿಗೆ ಖುಷಿ ನೀಡುವಂತೆ ಇರಬೇಕು.
2. ಮನೆ ಶುದ್ಧಿ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ: ಮನೆ ಶುದ್ಧ ಮಾಡುವಾಗ ಚಿಟಿಕೆಯಷ್ಟು ಉಪ್ಪು ಹಾಕಿ ಒರೆಸಿದರೆ ಮನೆಗೆ ಒಳ್ಳೆಯದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಉಪ್ಪು ಮನೆಯೊಳಗಿನ ನಕರಾತ್ಮಕ ಶಕ್ತಿ ಹೊರಹಾಕುತ್ತದೆ ಎಂಬ ನಂಬಿಕೆ. ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಸ್ವಲ್ಪ ಕಲ್ಲುಪ್ಪು ಇಡುವುದು ಒಳ್ಳೆಯದು.
3. ಮನೆಯ ಯಜಮಾನ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು
ಮನೆಯ ಯಜಮಾನ ನೈಋತ್ಯ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂದು ಹೇಳಲಾಗುವುದು, ಇದರಿಂದ ಒಳ್ಳೆಯ ನಿದ್ದೆ ಸಿಗುವುದು, ಮನೆಗೆ ಒಳಿತಾಗುವುದು ಎಂದು ಹೇಳಲಾಗುವುದು.
4. ದುಃಖ ತರುವ ವಸ್ತುಗಳು, ಫೋಟೊಗಳನ್ನು ಇಡಬೇಡಿ
ಕೆಲವೊಂದು ವಸ್ತುಗಳು ಅಥವಾ ಫೋಟೋಗಳು ನಿಮಗೆ ನೋವು ನೀಡುತ್ತಿದ್ದರೆ ಬಚ್ಚಿಡಿ, ಇಲ್ಲದಿದ್ದರೆ ಅದನ್ನು ನೋಡುವಾಗ ನಿಮ್ಮ ಮನಸ್ಸಿನಲ್ಲಿ ದುಃಖ ಆವರಿಸುವುದು, ಖುಷಿಯಾಗಿರಲು ಸಾಧ್ಯವಾಗಲ್ಲ. ಹಾಗಾಗಿ ನಿಮಗೆ ದುಃಖ ತರುವ, ಕಹಿ ನೆನಪು ತರುವ ಯಾವ ವಸ್ತುಗಳನ್ನು ಕಣ್ಣಿಗೆ ಬೀಳುವಂತೆ ಇಡಬೆಡಿ.
5. ಮನೆಯಲ್ಲಿ ಬೆಳಗ್ಗೆ ಸಂಜೆ ಮಂತ್ರ ಮೊಳಗಬೇಕು
ಹೌದು ಘಂಟೆ ಶಬ್ದ, ಮಂತ್ರಗಳು ಇವೆಲ್ಲಾ ನಮ್ಮಲ್ಲಿನ ಮಾನಸಿಕ ಒತ್ತಡ ಹೊರಹಾಕಿ ನಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ.
6. ಕರ್ಪೂರ ಹಚ್ಚಬೇಕು, ಕರ್ಪೂರ ಹಚ್ಚುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು ಎಂದು ಹೇಳಲಾಗುವುದು. ಹಾಗಾಗಿ ಪ್ರತಿದಿನ ದಿನ ಸಂಜೆ ದೇವರಿಗೆ ದಿಪ ಹಚ್ಚುವಾಗ ಕರ್ಪೂರ ಹಚ್ಚುವುದು ಒಳ್ಳೆಯದು. ಎರಡು ಕರ್ಪೂರ ಹಚ್ಚಿ, ಇದರಿಂದ ಮನೆಗೆ ಒಳಿತಾಗುವುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
7. ಮನೆಯಲ್ಲಿ ಫ್ಯಾಮಿಲಿ ಪೋಟೊ ಯಾವ ದಿಕ್ಕಿನಲ್ಲಿಡಬೇಕು?
ಮನೆಯಲ್ಲಿ ಫ್ಯಾಮಿಲಿ ಫೋಟೋ ನೈರುತ್ಯ ದಿಕ್ಕಿನಲ್ಲಿಡಬೇಕು. ದಂಪತಿ ಫೋಟೋ ಪೂರ್ವ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುವುದು. ಹೀಗೆ ಫೋಟೋ ಇಡುವುದರಿಂದ ಆ ಮನೆಯಲ್ಲಿ ಸಂತೋಷವಿರುತ್ತದೆ, ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಇರಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಸತ್ತವರ ಫೋಟೋವನ್ನು ಈ ದಿಕ್ಕಿನಲ್ಲಿ ಇಡಲೇಬಾರದು.
ನೆಮ್ಮದಿ ಎಂಬುವುದು ಮನುಷ್ಯನಿಗೆ ತುಂಬಾನೇ ಮುಖ್ಯ, ನಮ್ಮ ಮನಸ್ಸಿಗೆ ಖುಷಿ ನೀಡುವ ಅಭ್ಯಾಸ ಕೂಡ ಒಳ್ಳೆಯದು. ಕೆಲವೊಂದು ಹವ್ಯಾಸಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ, ಉದಾಹರಣೆಗೆ ಹಾಡುವುದು, ಅಡುಗೆ ಮಾಡುವುದು, ಬರೆಯುವುದು ಹೀಗೆ ನಿಮಗೆ ಇಷ್ಟವಾಗುವ ಕಾರ್ಯ ಮಾಡಿ. ಮನೆಯ ಸದಸ್ಯರು ಮನೆಯಲ್ಲಿ ನಗು ನಗುತ್ತಾ ಇರಬೇಕು, ಆಗ ಮಾತ್ರ ಆ ಮನೆಯಲ್ಲಿ ನೆಮ್ಮದಿ ಇರುತ್ತದೆ.



Click it and Unblock the Notifications